ETV Bharat / state

ಸರಸದ ನಂತರ ಬೆತ್ತಲಾಗಿದ್ದ ಪ್ರಿಯಕರನನ್ನು ಕೊಂದು ಪ್ರೇಯಸಿ ಎಸ್ಕೇಪ್​ : ಸಿಸಿಟಿವಿಯಲ್ಲಿ ದೃಶ್ಯ ಸೆರೆ - ಬೆತ್ತಲಾಗಿದ್ದ ಪ್ರಿಯಕರನನ್ನು ದೊಣ್ಣೆಯಿಂದ ಹೊಡಿದು ಕೊಲೆ

ಲೈಂಗಿಕ ಸಂಪರ್ಕದ ಬಳಿಕ ಬೆತ್ತಲಾಗಿದ್ದ ಪ್ರಿಯಕರನನ್ನು ದೊಣ್ಣೆಯಿಂದ ಹೊಡಿದು ಕೊಲೆ ಮಾಡಿದ ಪ್ರೇಯಸಿಯೊಬ್ಬಳು,  ತಾನೂ ಕೂಡ ಅರೆಬೆತ್ತಲಾಗಿಯೇ ಸ್ಥಳದಿಂದ ಓಡಿ ಹೋಗಿರುವ ಘಟನೆ ನಡೆದಿದೆ. ಹೊಳೆನರಸೀಪುರ ಪಟ್ಟಣದಲ್ಲಿ ಈ ಪ್ರಕರಣ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಬೆಚ್ಚಿ ಬೀಳಿಸುವ ಸಿಸಿಟಿವಿ ದೃಶ್ಯ
ಬೆಚ್ಚಿ ಬೀಳಿಸುವ ಸಿಸಿಟಿವಿ ದೃಶ್ಯ
author img

By

Published : Dec 5, 2019, 5:19 AM IST

ಹಾಸನ: ಕುಡಿದ ಮತ್ತಿನಲ್ಲಿಯೇ ಸರಸ ನಡೆಸಿ ಬಳಿಕ ಬೆತ್ತಲಾಗಿದ್ದ ಪ್ರಿಯಕರನನ್ನು ದೊಣ್ಣೆಯಿಂದ ಹೊಡಿದು ಕೊಲೆ ಮಾಡಿದ ಪ್ರೇಯಸಿಯೊಬ್ಬಳು, ತಾನೂ ಕೂಡ ಅರೆ ಬೆತ್ತಲಾಗಿಯೇ ಸ್ಥಳದಿಂದ ಓಡಿ ಹೋಗಿರುವ ಘಟನೆ ಹೊಳೆನರಸೀಪುರ ಪಟ್ಟಣದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಅರಕಲಗೂಡು ತಾಲೂಕಿನ ಬಸವಪಟ್ಟಣ ನಿವಾಸಿ ಮಂಜು (43) ಕೊಲೆಯಾದ ದುರ್ದೈವಿಯಾಗಿದ್ದು, ಹೊಳೆನರಸೀಪುರದ ವಸಂತಾ ಎಂಬ ಮಹಿಳೆಯೇ ಕೊಲೆ ಮಾಡಿದ ಆರೋಪಿ ಎಂದು ಗುರುತಿಸಲಾಗಿದೆ.

ಡಿಸೆಂಬರ್ 1ರ ರಾತ್ರಿ ನ್ಯೂ ಮದೀನಾ ಹೊಟೆಲ್ ಮುಂದೆ ಈ ಘಟನೆ ನಡೆದಿದ್ದು, ಸಿಸಿಟಿವಿ ಆಧಾರದ ಮೇರೆಗೆ ಹೊಳೆನರಸೀಪುರ ಪೊಲೀಸರು ಹತ್ಯೆ ಪ್ರಕರಣ ಬೇಧಿಸಿದ್ದಾರೆ.

ಕೊಲೆಯಾದ ಮಂಜು

ಪಾನಮತ್ತರಾಗಿದ್ದ ಇಬ್ಬರು ಪರಸ್ಪರ ಬೆತ್ತಲಾಗಿ ಮದೀನಾ ಹೋಟೆಲ್ ಮುಂಭಾಗ ಲೈಂಗಿಕ ಕ್ರಿಯೆ ನಡೆಸಿದ್ದು, ಬಳಿಕ ಹಣದ ವಿಚಾರದಲ್ಲಿ ಇಬ್ಬರ ನಡುವೆ ಗಲಾಟೆಯಾಗಿದೆ. ಹಣ ಕೊಡದ ಹಿನ್ನೆಲೆಯಲ್ಲಿ ವಸಂತಾ ಪಕ್ಕದಲ್ಲಿದ್ದ ದೊಣ್ಣೆಯಿಂದ ಮಂಜುವಿನ ತಲೆಗೆ ಮತ್ತು ಇತರ ಭಾಗಗಳಿಗೆ ಹೊಡಿದು ಕೊಲೆ ಮಾಡಿದ್ದಾಳೆ. ಹಾಗೆಯೇ ಭಯದಲ್ಲಿ ಅರೆ ಬೆತ್ತಲಾಗಿಯೇ ಸ್ಥಳದಿಂದ ಓಡಿ ಹೋಗಿದ್ದಾಳೆ ಎನ್ನಲಾಗಿದೆ.

ಈ ಎಲ್ಲಾ ದೃಶ್ಯ ಸ್ಥಳದಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ತಲೆಗೆ ಗಂಭೀರವಾಗಿ ಗಾಯವಾಗಿದ್ದರಿಂದ ತೀವ್ರ ರಕ್ತಸ್ರಾವವಾಗಿ ಮಂಜು ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಸೋಮವಾರ ಪುರಸಭೆ ಮಳಿಗೆಯ ಮುಂದೆ ಮೈಮೇಲೆ ಬಟ್ಟೆಯಿಲ್ಲದ ಸ್ಥಿತಿಯಲ್ಲಿಯೇ ಮಂಜು ಮೃತದೇಹ ಪತ್ತೆಯಾಗಿತ್ತು. ಬಳಿಕ ಸ್ಥಳೀಯ ಸಿಸಿಟಿವಿ ಕ್ಯಾಮೆರಾ ದೃಶ್ಯ ಹಾಗೂ ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ಸಿಪಿಐ ಅಶೋಕ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ, ಆರೋಪಿ ವಂಸತಾಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಹಾಸನ: ಕುಡಿದ ಮತ್ತಿನಲ್ಲಿಯೇ ಸರಸ ನಡೆಸಿ ಬಳಿಕ ಬೆತ್ತಲಾಗಿದ್ದ ಪ್ರಿಯಕರನನ್ನು ದೊಣ್ಣೆಯಿಂದ ಹೊಡಿದು ಕೊಲೆ ಮಾಡಿದ ಪ್ರೇಯಸಿಯೊಬ್ಬಳು, ತಾನೂ ಕೂಡ ಅರೆ ಬೆತ್ತಲಾಗಿಯೇ ಸ್ಥಳದಿಂದ ಓಡಿ ಹೋಗಿರುವ ಘಟನೆ ಹೊಳೆನರಸೀಪುರ ಪಟ್ಟಣದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಅರಕಲಗೂಡು ತಾಲೂಕಿನ ಬಸವಪಟ್ಟಣ ನಿವಾಸಿ ಮಂಜು (43) ಕೊಲೆಯಾದ ದುರ್ದೈವಿಯಾಗಿದ್ದು, ಹೊಳೆನರಸೀಪುರದ ವಸಂತಾ ಎಂಬ ಮಹಿಳೆಯೇ ಕೊಲೆ ಮಾಡಿದ ಆರೋಪಿ ಎಂದು ಗುರುತಿಸಲಾಗಿದೆ.

ಡಿಸೆಂಬರ್ 1ರ ರಾತ್ರಿ ನ್ಯೂ ಮದೀನಾ ಹೊಟೆಲ್ ಮುಂದೆ ಈ ಘಟನೆ ನಡೆದಿದ್ದು, ಸಿಸಿಟಿವಿ ಆಧಾರದ ಮೇರೆಗೆ ಹೊಳೆನರಸೀಪುರ ಪೊಲೀಸರು ಹತ್ಯೆ ಪ್ರಕರಣ ಬೇಧಿಸಿದ್ದಾರೆ.

ಕೊಲೆಯಾದ ಮಂಜು

ಪಾನಮತ್ತರಾಗಿದ್ದ ಇಬ್ಬರು ಪರಸ್ಪರ ಬೆತ್ತಲಾಗಿ ಮದೀನಾ ಹೋಟೆಲ್ ಮುಂಭಾಗ ಲೈಂಗಿಕ ಕ್ರಿಯೆ ನಡೆಸಿದ್ದು, ಬಳಿಕ ಹಣದ ವಿಚಾರದಲ್ಲಿ ಇಬ್ಬರ ನಡುವೆ ಗಲಾಟೆಯಾಗಿದೆ. ಹಣ ಕೊಡದ ಹಿನ್ನೆಲೆಯಲ್ಲಿ ವಸಂತಾ ಪಕ್ಕದಲ್ಲಿದ್ದ ದೊಣ್ಣೆಯಿಂದ ಮಂಜುವಿನ ತಲೆಗೆ ಮತ್ತು ಇತರ ಭಾಗಗಳಿಗೆ ಹೊಡಿದು ಕೊಲೆ ಮಾಡಿದ್ದಾಳೆ. ಹಾಗೆಯೇ ಭಯದಲ್ಲಿ ಅರೆ ಬೆತ್ತಲಾಗಿಯೇ ಸ್ಥಳದಿಂದ ಓಡಿ ಹೋಗಿದ್ದಾಳೆ ಎನ್ನಲಾಗಿದೆ.

ಈ ಎಲ್ಲಾ ದೃಶ್ಯ ಸ್ಥಳದಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ತಲೆಗೆ ಗಂಭೀರವಾಗಿ ಗಾಯವಾಗಿದ್ದರಿಂದ ತೀವ್ರ ರಕ್ತಸ್ರಾವವಾಗಿ ಮಂಜು ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಸೋಮವಾರ ಪುರಸಭೆ ಮಳಿಗೆಯ ಮುಂದೆ ಮೈಮೇಲೆ ಬಟ್ಟೆಯಿಲ್ಲದ ಸ್ಥಿತಿಯಲ್ಲಿಯೇ ಮಂಜು ಮೃತದೇಹ ಪತ್ತೆಯಾಗಿತ್ತು. ಬಳಿಕ ಸ್ಥಳೀಯ ಸಿಸಿಟಿವಿ ಕ್ಯಾಮೆರಾ ದೃಶ್ಯ ಹಾಗೂ ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ಸಿಪಿಐ ಅಶೋಕ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ, ಆರೋಪಿ ವಂಸತಾಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Intro:ಹಾಸನ: ಲೈಂಗಿಕ ಸಂಪರ್ಕದ ಬಳಿಕ ಬೆತ್ತಲಾಗಿದ್ದ ಪ್ರಿಯಕರನನ್ನು ದೊಣ್ಣೆಯಿಂದ ಬಡಿದು ಕೊಲೆಗೈದು ಆಕೆಯೂ ಬೆತ್ತಲಾಗಿಯೇ ಸ್ಥಳದಿಂದ ಓಡಿ ಹೋಗಿರುವ ಘಟನೆ ಹಾಸನ ಜಿಲ್ಲೆಯ ಹೊಳೆನರಸೀಪುರ ಪಟ್ಟಣದಲ್ಲಿ ನಡೆದಿದ್ದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಅರಕಲಗೂಡು ತಾಲೂಕಿನ ಬಸವಪಟ್ಟಣ ನಿವಾಸಿ ಮಂಜು (43) ಕೊಲೆಯಾದ ದುರ್ದೈವಿ. ಹೊಳೆನರಸೀಪುರದ ವಸಂತಾ ಎಂಬ ಮಹಿಳೆಯೇ ಕೊಲೆ ಮಾಡಿದ ಆರೋಪಿ ಎಂದು ಗುರುತಿಸಲಾಗಿದೆ. ಡಿ. 1ರ ರಾತ್ರಿ ನ್ಯೂ ಮದೀನಾ ಹೋಟೆಲ್ ಮಳಿಗೆ ಮುಂದೆ ಈ ಘಟನೆ ನಡೆದಿದ್ದು, ಸಿಸಿಟಿವಿ ಆಧಾರದ ಮೇರೆಗೆ ಹೊಳೆನರಸೀಪುರ ಪೊಲೀಸರು ಹತ್ಯೆ ಪ್ರಕರಣ ಬೇಧಿಸಿದ್ದಾರೆ.

ಪಾನಮತ್ತರಾಗಿದ್ದ ಇಬ್ಬರು ಪರಸ್ಪರ ಬೆತ್ತಲಾಗಿ ಮದೀನಾ ಹೋಟೆಲ್ ಮುಂಭಾಗ ಲೈಂಗಿಕ ಕ್ರಿಯೆ ನಡೆಸಿ, ಬಳಿಕ ಹಣದ ವಿಚಾರದಲ್ಲಿ ಇಬ್ಬರ ನಡುವೆ ಗಲಾಟೆಯಾಗಿದ್ದು, ಹಣ ಕೊಡದ ಹಿನ್ನೆಲೆಯಲ್ಲಿ ವಸಂತ ಪಕ್ಕದಲ್ಲಿದ್ದ ದೊಣ್ಣೆಯಿಂದ ಮಂಜುವಿನ ತಲೆಗೆ ಮತ್ತು ಇತರ ಭಾಗಗಳಿಗೆ ಬಡಿದು ಕೊಲೆ ಮಾಡಿದ ಭಯದಲ್ಲಿ ತನಗರಿವಿಲ್ಲದೆಯೇ ಬೆತ್ತಲಾಗಿಯೇ ಸ್ಥಳದಿಂದ ಓಡಿ ಹೋಗಿದ್ದಾಳೆ.

ಕೂಲಿ ಕೆಲಸ ಮಾಡಿಕೊಂಡಿದ್ದ ಅರಕಲಗೂಡು ತಾಲೂಕಿನ ಬಸವಾಪಟ್ಟಣ ನಿವಾಸಿ ಮಂಜು ಹೊಳೆನರಸೀಪುರ ಪಟ್ಟಣದ ವಸಂತಾ ಎಂಬ ಮಹಿಳೆಯೊಂದಿಗೆ ಅನೈತಿಕ ಸಂಬಂಧವಿತ್ತು. ಡಿಸೆಂಬರ್ 1ರ ರಾತ್ರಿ ಒಟ್ಟಿಗೇ ಇಬ್ಬರು ಮಾಂಸಾಹಾರ ಸೇವನೆಯ ಜೊತೆ ಮಧ್ಯಪಾನ ಮಾಡಿ ಹೋಟೆಲ್ ಮುಂಭಾಗದಲ್ಲಿಯೇ ಸರಸ ಸಲ್ಲಾಪ ಮಾಡಿಕೊಂಡು ಹಣದ ವಿಚಾರವಾಗಿ ವಸಂತ ಕೊಲೆ ಮಾಡಿ ಜೈಲು ಪಾಲಾಗಿದ್ದಾಳೆ.

ಇಬ್ಬರೂ ಬೆತ್ತಲೆ ಇರುವಾಗಲೇ ಬಡಿದಾಡಿಕೊಂಡು, ವಂಸತಾ ದೊಣ್ಣೆಯಿಂದ ಮಂಜು ತಲೆಗೆ ಹೊಡೆದು ಕೊಲೆಗೈದು ಬಳಿಕ ಬೆತ್ತಲಾಗೇ ಓಡುತ್ತಿರೊ ದೃಶ್ಯ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ತಲೆಗೆ ತೀವ್ರ ಪೆಟ್ಟು ಬಿದ್ದ ಹಿನ್ನಲೆಯಲ್ಲಿ ತೀವ್ರ ರಕ್ತಸ್ರಾವವಾದ ಪರಿಣಾಮ ಮಂಜು ಸ್ಥಳದಲ್ಲೇ ಮೃತಪಟ್ಟಿದ್ದಾನೆ. 

ಸೋಮವಾರ ಪುರಸಭೆ ಮಳಿಗೆ ಮುಂದೆ ಮೈಮೇಲೆ ಬಟ್ಟೆಯಿಲ್ಲದ ಸ್ಥಿತಿಯಲ್ಲಿಯೇ ಮಂಜು ಮೃತದೇಹ ಪತ್ತೆಯಾಗಿತ್ತು. ಬಳಿಕ ಸ್ಥಳೀಯ ಸಿಸಿಟಿವಿ ಕ್ಯಾಮೆರಾ ದೃಶ್ಯ ಹಾಗು ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ಸಿಪಿಐ ಅಶೋಕ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿ ವಂಸತಾಳನ್ನು ಬಂಧಿಸಲಾಗಿದ್ದು, ಆಕೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.


Body:7203289


Conclusion:ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.