ETV Bharat / state

ಹಾಸನ ಜಿಲ್ಲೆಯಲ್ಲಿ ಮಳೆ ಅಬ್ಬರ... ಹಾರಿಹೋದ ಮನೆ ಮೇಲ್ಛಾವಣಿ, ನೆಲಕಚ್ಚಿದ ಬಾಳೆ - undefined

ಹಾಸನ ಜಿಲ್ಲೆಯಲ್ಲಿ ಒಂದೆಡೆ ಚುನಾವಣೆ ಪ್ರಚಾರದ ಅಬ್ಬರ ಇದೆ. ಈ ನಡುವೆ ಕಳೆದ ಮೂರು ದಿನಗಳಿಂದ ವರುಣನ ಆರ್ಭಟ ಸಹ ಜೋರಾಗಿದೆ. ಕೆಲವೆಡೆ ಮಳೆಯಿಂದ ಮನೆಗಳು ಹಾನಿಗೊಳಗಾಗಿವೆ.

ಜಿಲ್ಲೆಯಲ್ಲಿ ಮಳೆ ಆರ್ಭಟ
author img

By

Published : Apr 10, 2019, 10:20 AM IST

ಹಾಸನ: ಮೂರು ದಿನದಿಂದ ಜಿಲ್ಲೆಯಲ್ಲಿ ಮಳೆರಾಯ ಅಬ್ಬರಿಸುತ್ತಿದ್ದು, ಮಳೆಯ ಅಬ್ಬರಕ್ಕೆ ಜಿಲ್ಲೆಯ ರೈತಾಪಿ ವರ್ಗ ಸಂತೋಷ ಪಡುತ್ತಿದ್ದರೆ. ಇನ್ನೊಂದೆಡೆ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ.

ಸಕಲೇಶಪುರ ಭಾಗದಿಂದ ಆರಂಭವಾದ ಮಳೆ ಜಿಲ್ಲೆಯ ಚನ್ನರಾಯಪಟ್ಟಣ, ಬೇಲೂರು ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸುರಿದಿದೆ. ವರುಣನ ಅಬ್ಬರಕ್ಕೆ ಸಕಲೇಶಪುರ ತಾಲೂಕಿನ ಚಂಗಡಿಹಳ್ಳಿಯಲ್ಲಿ ಮನೆಯ ಮೇಲ್ಛಾವಣಿ ಹಾರಿ ಹೋಗಿದ್ದು, ಗೃಹಪಯೋಗಿ ವಸ್ತುಗಳು ನೀರು ಪಾಲಾಗಿವೆ.

ಹಾಸನ ಜಿಲ್ಲೆಯಲ್ಲಿ ಮಳೆ ಆರ್ಭಟ

ಇನ್ನು ನಗರದಲ್ಲಿ ರಭಸವಾಗಿ ಬೀಸಿದ ಬಿರುಗಾಳಿಗೆ ಕೆಎಸ್ಆರ್​ಟಿಸಿ ತರಬೇತಿ ಕೇಂದ್ರದ ಬಳಿ ಮರವೊಂದು ರಸ್ತೆ ಮೇಲೆ ಬಿದ್ದು ಪರಿಣಾಮ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಅರಕಲಗೂಡು ಪಟ್ಟಣದಲ್ಲಿ ಸಿಡಿಲಿನ ಬಡಿತಕ್ಕೆ ತೆಂಗಿನ ಮರವೂಂದು ಸುಟ್ಟು ಹೋಗಿದೆ.

ಚನ್ನರಾಯಪಟ್ಟಣ ತಾಲೂಕಿನ ಹಲವು ಕಡೆ ತೆಂಗಿನ ಮರಗಳು ನೆರಕ್ಕುರುಳಿವೆ. ತಾಲೂಕಿನ ಶೆಟ್ಟಿಹಳ್ಳಿ ಗ್ರಾಮದ ಪುಟ್ಟಣ್ಣ ಹಾಗೂ ದಯಾನಂದ್ ಅವರ ಬಾಳೆ ತೋಟಗಳು ಬೀಸಿದ ಬಿರುಗಾಳಿಗೆ ನೆಲಕಚ್ಚಿವೆ.

ಹಾಸನ: ಮೂರು ದಿನದಿಂದ ಜಿಲ್ಲೆಯಲ್ಲಿ ಮಳೆರಾಯ ಅಬ್ಬರಿಸುತ್ತಿದ್ದು, ಮಳೆಯ ಅಬ್ಬರಕ್ಕೆ ಜಿಲ್ಲೆಯ ರೈತಾಪಿ ವರ್ಗ ಸಂತೋಷ ಪಡುತ್ತಿದ್ದರೆ. ಇನ್ನೊಂದೆಡೆ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ.

ಸಕಲೇಶಪುರ ಭಾಗದಿಂದ ಆರಂಭವಾದ ಮಳೆ ಜಿಲ್ಲೆಯ ಚನ್ನರಾಯಪಟ್ಟಣ, ಬೇಲೂರು ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸುರಿದಿದೆ. ವರುಣನ ಅಬ್ಬರಕ್ಕೆ ಸಕಲೇಶಪುರ ತಾಲೂಕಿನ ಚಂಗಡಿಹಳ್ಳಿಯಲ್ಲಿ ಮನೆಯ ಮೇಲ್ಛಾವಣಿ ಹಾರಿ ಹೋಗಿದ್ದು, ಗೃಹಪಯೋಗಿ ವಸ್ತುಗಳು ನೀರು ಪಾಲಾಗಿವೆ.

ಹಾಸನ ಜಿಲ್ಲೆಯಲ್ಲಿ ಮಳೆ ಆರ್ಭಟ

ಇನ್ನು ನಗರದಲ್ಲಿ ರಭಸವಾಗಿ ಬೀಸಿದ ಬಿರುಗಾಳಿಗೆ ಕೆಎಸ್ಆರ್​ಟಿಸಿ ತರಬೇತಿ ಕೇಂದ್ರದ ಬಳಿ ಮರವೊಂದು ರಸ್ತೆ ಮೇಲೆ ಬಿದ್ದು ಪರಿಣಾಮ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಅರಕಲಗೂಡು ಪಟ್ಟಣದಲ್ಲಿ ಸಿಡಿಲಿನ ಬಡಿತಕ್ಕೆ ತೆಂಗಿನ ಮರವೂಂದು ಸುಟ್ಟು ಹೋಗಿದೆ.

ಚನ್ನರಾಯಪಟ್ಟಣ ತಾಲೂಕಿನ ಹಲವು ಕಡೆ ತೆಂಗಿನ ಮರಗಳು ನೆರಕ್ಕುರುಳಿವೆ. ತಾಲೂಕಿನ ಶೆಟ್ಟಿಹಳ್ಳಿ ಗ್ರಾಮದ ಪುಟ್ಟಣ್ಣ ಹಾಗೂ ದಯಾನಂದ್ ಅವರ ಬಾಳೆ ತೋಟಗಳು ಬೀಸಿದ ಬಿರುಗಾಳಿಗೆ ನೆಲಕಚ್ಚಿವೆ.

Intro:ಹಾಸನ: ಯುಗಾದಿ ಮುಗಿದ ಮರುದಿನದಿಂದ ಜಿಲ್ಲೆಯಲ್ಲಿ ವರುಣ ಅಬ್ಬರಿಸುತ್ತಿದ್ದಾನೆ. ಮಳೆರಾಯನ ಅಬ್ಬರದಿಂದ ಜಿಲ್ಲೆಯಲ್ಲಿ ರೈತಾಪಿ ವರ್ಗ ಖುಷಿಯಾಗಿದ್ದರು ಕೂಡ ಕೆಲವಡೆ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ.

ಮೂರು ದಿನದಿಂದ ಜಿಲ್ಲೆಯಲ್ಲಿ ಮತ್ತೆ ಮಳೆಯ ಅಬ್ಬರ ಜೋರಾಗಿದೆ. ಸಕಲೇಶಪುರ ಭಾಗದಿಂದ ಆರಂಭವಾದ ಮಳೆ ಇಂದು ಜಿಲ್ಲೆಯ ಹಾಸನ ಚನ್ನರಾಯಪಟ್ಟಣ ಬೇಲೂರು ಭಾಗದಲ್ಲಿ ವರುಣ ತನ್ನ ರುದ್ರನರ್ತನ ತೋರಿದ್ದಾನೆ.

ವರುಣನ ಅಬ್ಬರಕ್ಕೆ ಸಕಲೇಶಪುರ ತಾಲೂಕಿನ ಚಂಗಡಿಹಳ್ಳಿಯಲ್ಲಿ ಮನೆಯ ಮೇಲ್ಚಾವಣಿ ಹಾರಿ ಹೋಗಿದ್ದು ಮನೆಯಲ್ಲಿದ್ದ ಗೃಹಪಯೋಗಿ ವಸ್ತುಗಳು ನೀರು ಪಾಲಾಗಿದೆ. ಇನ್ನು ಹಾಸನ ನಗರದಲ್ಲಿ ರಬಸವಾಗಿ ಬೀಸಿದ ಬಿರುಗಾಳಿಗೆ ಕೆಎಸ್ಆರ್ಟಿಸಿ ತರಬೇತಿ ಕೇಂದ್ರದ ಬಳಿ ಮರವೊಂದು ರಸ್ತೆಗೆ ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.

ಅರಕಲಗೂಡು ಪಟ್ಟಣದಲ್ಲಿ ಸಿಡಿಲಿನ ಬಡಿತಕ್ಕೆ ತೆಂಗಿನ ಮರವೂಂದು ಸುಟ್ಟುಹೋಗಿತ್ತು. ಇಂದು ಬೀಸಿದ ಬಾರಿ ಬಿರುಗಾಳಿಗೆ ಚನ್ನರಾಯಪಟ್ಟಣ ತಾಲ್ಲೂಕಿನ ಹಲವು ಕಡೆ ತೆಂಗಿನ ಮರಗಳು ನೆರಕ್ಕುರುಳಿವೆ. ಇನ್ನು ತಾಲೂಕಿನ ಶೆಟ್ಟಿಹಳ್ಳಿ ಗ್ರಾಮದ ಪುಟ್ಟಣ್ಣ ಹಾಗೂ ದಯಾನಂದ್ ರವರ ಬಾಳೆ ತೋಟಗಳು ಬೀಸಿದ ಬಿರುಗಾಳಿಗೆ ನೆಲಕಟ್ಚಿವೆ.

ಇನ್ನು ಇದೆ ಗ್ರಾಮದ ಕುಮಾರ್ ಎಂಬವರ ಮನೆ ಕೂಡ ಬಿರುಗಾಳಿ ಮತ್ತು ಸುರಿದ ಮಳೆಗೆ ಮನೆಯ ಹಂಚು ಹಾರಿ ಹೋಗಿದ್ದು ಮನೆಯಲ್ಲಿ ವಸ್ತುಗಳು ಮಳೆಯಿಂದ ಹಾನಿಗೊಳಗಾಗಿವೆ.

ಒಟ್ಟಾರೆ ಮೂರು ದಿನಗಳಿಂದ ಸುರಿಯುತ್ತಿರುವ ರೇವತಿ ಮಳೆ ಜಿಲ್ಲೆಯಲ್ಲಿ ಕೆಲವು ಕಡೆ ರೈತಾಪಿ ವರ್ಗದವರಿಗೆ ಖುಷಿ ಕೊಟ್ಟು ಕೃಷಿ ಚಟುವಟಿಕೆಗಳಿಗೆ ಅನುಕೂಲ ಮಾಡಿಕೊಟ್ಟರೆ, ಕೆಲವು ಕುಟುಂಬಗಳಿಗೆ ಮಾತ್ರ ನೋವುಂಟು ಮಾಡಿದ್ದಾನೆ.

ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.


Body:0


Conclusion:ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.