ETV Bharat / state

ದೇವೇಗೌಡರು ಲೋಕಸಭೆಯಲ್ಲಿರುತ್ತಿದ್ರೆ ರಾಜ್ಯದ ಪರ ಧ್ವನಿ ಎತ್ತುತ್ತಿದ್ದರು: ಹೆಚ್.ಡಿ.ರೇವಣ್ಣ - ಮಾಜಿ ಸಚಿವ ಹೆಚ್.ಡಿ.ರೇವಣ್ಣ

ದೇವೇಗೌಡರು ಲೋಕಸಭೆಯಲ್ಲಿದ್ದರೆ ಬರಗಾಲದ ಕುರಿತು ರಾಜ್ಯದ ಪರ ಧ್ವನಿ ಎತ್ತುತ್ತಿದ್ದರು. ಕಾಂಗ್ರೆಸ್-ಬಿಜೆಪಿ ಪಕ್ಷದ ನಾಯಕರು ಜೆಡಿಎಸ್‌ಗೆ ಯಾವುದೇ ಕೆಲಸ ಮಾಡಿಕೊಡಬೇಡಿ ಎನ್ನುತ್ತಿದ್ದಾರೆ. ಎರಡು ಪಕ್ಷಗಳು ಜೆಡಿಎಸ್ ಮುಗಿಸುವ ಕೆಲಸಕ್ಕೆ ಮುಂದಾಗಿದ್ದಾರೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ವಾಗ್ದಾಳಿ ನಡೆಸಿದ್ದಾರೆ.

ಮಾಜಿ ಸಚಿವ ಹೆಚ್.ಡಿ.ರೇವಣ್ಣ
author img

By

Published : Nov 7, 2019, 11:33 PM IST

ಹಾಸನ : ದೇವೇಗೌಡರು ಲೋಕಸಭೆಯಲ್ಲಿದ್ದಿದ್ದರೆ ಬರಗಾಲದ ಕುರಿತು ರಾಜ್ಯದ ಪರ ಧ್ವನಿ ಎತ್ತುತ್ತಿದ್ದರು. ಕಾಂಗ್ರೆಸ್-ಬಿಜೆಪಿ ಪಕ್ಷದ ನಾಯಕರು ಜೆಡಿಎಸ್‌ಗೆ ಯಾವುದೇ ಕೆಲಸ ಮಾಡಿಕೊಡಬೇಡಿ ಎನ್ನುತ್ತಿದ್ದಾರೆ. ಎರಡು ಪಕ್ಷಗಳು ಜೆಡಿಎಸ್ ಮುಗಿಸುವ ಕೆಲಸಕ್ಕೆ ಮುಂದಾಗಿದ್ದಾರೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ನಮ್ಮ ಪಕ್ಷದ ಏಳು ಜನ ಶಾಸಕರನ್ನು ಏನು ಮಾಡಿದರು ಎಂದು ಇಡೀ ರಾಜ್ಯದ ಜನರಿಗೆ ಗೊತ್ತಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 105 ಸೀಟ್ ಬರಬೇಕಾದ್ರೆ ಎ ಟೀಂ ಬಿ ಟೀಂ ಎಂದಿದ್ದೆ ಕಾರಣ. ಜಾತ್ಯಾತೀತ ಪಕ್ಷವನ್ನ ಎಲ್ಲಿ ಕೊಲ್ಲಬೇಕೋ ಅಲ್ಲಿ ಕೊಂದರು. ನಂತರ ನಮ್ಮನ್ನು ತಬ್ಬಿಕೊಂಡಿದ್ದೇವೆ. ಐದು ವರ್ಷ ನೀವೇ ಸಿಎಂ ಆಗಬೇಕು ಎಂದಿದ್ದರು ಎಂದು ವ್ಯಂಗ್ಯವಾಡಿದ್ದಾರೆ.

ಇನ್ನು, ಸಮ್ಮಿಶ್ರ ಸರ್ಕಾರ ಯಾವ ರೀತಿ ಪತನವಾಯ್ತು ಎಂದು ರಾಜ್ಯ ಜನತೆಗೆ ಗೊತ್ತಿದೆ. ಕಾಂಗ್ರೆಸ್ ನ ಕೆಲ ಮುಖಂಡರು ಜೆಡಿಎಸ್ ಸಹವಾಸ ಸಾಕು ಎಂದರು. ಅವರೇ ಸಹವಾಸ ಸಾಕು ಎಂದರೆ ನಾವು ಸೈಲೆಂಟಾಗಿದಿವಿ. ನಾವೇನು ಬಿಜೆಪಿಗೆ ಜೆಡಿಎಸ್ ಎಂದು ಬರೆದುಕೊಟ್ಟಿಲ್ಲ. ಬಿಜೆಪಿ ಬೆಂಬಲಿಸುತ್ತೇವೆ ಎಂದು ಎಲ್ಲೂ ಹೇಳಿಲ್ಲ ಎಂದರು.

ಮಾಜಿ ಸಚಿವ ಹೆಚ್.ಡಿ.ರೇವಣ್ಣ

ಅಲ್ಲದೆ, ಈಗ ನೆರೆ ಹಾವಳಿಯಿಂದ ಉತ್ತರ ಕರ್ನಾಟಕ ಸೇರಿ ರಾಜ್ಯದ ಹಲವೆಡೆ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ನಾವಾಗೇ ಬಿಜೆಪಿ ಸರ್ಕಾರ ಬೀಳಿಸಲ್ಲ. ಎರಡು ರಾಜಕೀಯ ಪಕ್ಷಗಳು ಹೊಡೆದಾಡಿಕೊಂಡು ಸರ್ಕಾರ ಹೋಗುವುದಾದರೆ ಹೋಗಲಿ ಎಂದು ಹೇಳಿದ್ದಾರೆ.

ಜೆಡಿಎಸ್ ಬಿಜೆಪಿಯೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಹೆಚ್.ಡಿ.ರೇವಣ್ಣ, ಒಳ ಒಪ್ಪಂದ ಮಾಡಿಕೊಂಡು ಯಾವ ಕೆಲಸ ಮಾಡಿಸಿಕೊಂಡಿದ್ದೀವಿ. ಜೋಳ ಖರೀದಿ ಬಗ್ಗೆ ಮುಖ್ಯಮಂತ್ರಿಗೆ ಪತ್ರ ಬರೆದರೆ ಡಸ್ಟ್ ಬಿನ್ ಗೆ ಹಾಕುತ್ತಾರೆ. ಯಾರು ಸಮ್ಮಿಶ್ರ ಸರ್ಕಾರ ತೆಗೆದ್ರೋ ಅವರಿಗೆ ಕಾಮಗಾರಿ ನೀಡುತ್ತಿದ್ದಾರೆ. ಹಗಲು ಹೊತ್ತು ಯಡಿಯೂರಪ್ಪ, ರಾತ್ರಿ ಹೊತ್ತು ಕಾಂಗ್ರೆಸ್ನಲ್ಲಿ ಇರುತ್ತಾರೆ. ಮಂಡ್ಯದಲ್ಲೂ ಹಗಲು ಹೊತ್ತು ವಿರೋಧ ಪಕ್ಷದ ನಾಯಕರ ಜೊತೆ, ರಾತ್ರಿ ವೇಳೆ ಯಡಿಯೂರಪ್ಪ ಮನೆಯಲ್ಲಿ ಇರುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.

ಬಿಜೆಪಿ ಜೊತೆ ಯಾರು ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ತುಮಕೂರು, ಮಂಡ್ಯ ಜನತೆ ಕೇಳಿದರೆ ಗೊತ್ತಾಗುತ್ತೆ. ನಮಗೆ ಒಳ ಒಪ್ಪಂದದ ಅವಶ್ಯಕತೆ ಇಲ್ಲ. ಕೆಲಸ ಮಾಡಲಿ ಇಲ್ಲದಿದ್ದರೆ ಹಾಗೇ ಬಿದ್ದಿರುತ್ತದೆ, ಹತ್ತು ವರ್ಷ ಹಾಗೇ ಬಿದ್ದಿರಲಿಲ್ಲವೇ. ಕಾಂಗ್ರೆಸ್ ಇದನ್ನೆಲ್ಲ ಬಿಟ್ಟು ಹೋರಾಟ ಮಾಡಬೇಕು ಎಂದು ಹೇಳಿದ್ದಾರೆ.

ಕಾಂಗ್ರೆಸ್​ನಿಂದ ಇಪ್ಪತ್ತು ಸೀಟ್ ಹೋಯ್ತು, ಜೆಡಿಎಸ್​ಗೆ ಮತ ಹಾಕಬೇಡಿ, ಬಿಜೆಪಿಗೆ ಹಾಕಿ ಎಂದ್ರು. ಸುಮ್ನೆ ನಾಮಕಾವಸ್ಥೆಗೆ ಸೆಕ್ಯೂಲರ್ ಪಾರ್ಟಿ ಅನ್ನಬೇಡಿ. ಹರಿಯಾಣದಲ್ಲಿ ಕಾಂಗ್ರೆಸ್ ಮುಖಂಡರು ಸರಿಯಾಗಿ ಕೆಲಸ ಮಾಡಿದ್ದರೆ ಇನ್ನೂ ಇಪ್ಪತ್ತು ಸೀಟ್ ಹೆಚ್ಚಿಗೆ ಬರುತ್ತಿತ್ತು. ಆದರೆ ಚುನಾವಣೆ ಪ್ರಚಾರಕ್ಕೆ ಹೋಗಲೇ ಇಲ್ಲ. ಉಪಚುನಾವಣೆಯಲ್ಲಿ ಯಾರ ಜೊತೆ ಒಪ್ಪಂದ ಇಲ್ಲ. ಎಲ್ಲಾ ಕ್ಷೇತ್ರಗಳಲ್ಲಿಯೂ ಸ್ಪರ್ಧಿಸುತ್ತೇವೆ. ಯಾರ ಜೊತೆ ಒಪ್ಪಂದ ಮಾಡಿಕೊಳ್ಳುವ ಅವಶ್ಯಕತೆ ನಮಗೆ ಇಲ್ಲ ಎಂದು ಕಿಡಿ ಕಾರಿದ್ದಾರೆ.

ಹಾಸನ : ದೇವೇಗೌಡರು ಲೋಕಸಭೆಯಲ್ಲಿದ್ದಿದ್ದರೆ ಬರಗಾಲದ ಕುರಿತು ರಾಜ್ಯದ ಪರ ಧ್ವನಿ ಎತ್ತುತ್ತಿದ್ದರು. ಕಾಂಗ್ರೆಸ್-ಬಿಜೆಪಿ ಪಕ್ಷದ ನಾಯಕರು ಜೆಡಿಎಸ್‌ಗೆ ಯಾವುದೇ ಕೆಲಸ ಮಾಡಿಕೊಡಬೇಡಿ ಎನ್ನುತ್ತಿದ್ದಾರೆ. ಎರಡು ಪಕ್ಷಗಳು ಜೆಡಿಎಸ್ ಮುಗಿಸುವ ಕೆಲಸಕ್ಕೆ ಮುಂದಾಗಿದ್ದಾರೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ನಮ್ಮ ಪಕ್ಷದ ಏಳು ಜನ ಶಾಸಕರನ್ನು ಏನು ಮಾಡಿದರು ಎಂದು ಇಡೀ ರಾಜ್ಯದ ಜನರಿಗೆ ಗೊತ್ತಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 105 ಸೀಟ್ ಬರಬೇಕಾದ್ರೆ ಎ ಟೀಂ ಬಿ ಟೀಂ ಎಂದಿದ್ದೆ ಕಾರಣ. ಜಾತ್ಯಾತೀತ ಪಕ್ಷವನ್ನ ಎಲ್ಲಿ ಕೊಲ್ಲಬೇಕೋ ಅಲ್ಲಿ ಕೊಂದರು. ನಂತರ ನಮ್ಮನ್ನು ತಬ್ಬಿಕೊಂಡಿದ್ದೇವೆ. ಐದು ವರ್ಷ ನೀವೇ ಸಿಎಂ ಆಗಬೇಕು ಎಂದಿದ್ದರು ಎಂದು ವ್ಯಂಗ್ಯವಾಡಿದ್ದಾರೆ.

ಇನ್ನು, ಸಮ್ಮಿಶ್ರ ಸರ್ಕಾರ ಯಾವ ರೀತಿ ಪತನವಾಯ್ತು ಎಂದು ರಾಜ್ಯ ಜನತೆಗೆ ಗೊತ್ತಿದೆ. ಕಾಂಗ್ರೆಸ್ ನ ಕೆಲ ಮುಖಂಡರು ಜೆಡಿಎಸ್ ಸಹವಾಸ ಸಾಕು ಎಂದರು. ಅವರೇ ಸಹವಾಸ ಸಾಕು ಎಂದರೆ ನಾವು ಸೈಲೆಂಟಾಗಿದಿವಿ. ನಾವೇನು ಬಿಜೆಪಿಗೆ ಜೆಡಿಎಸ್ ಎಂದು ಬರೆದುಕೊಟ್ಟಿಲ್ಲ. ಬಿಜೆಪಿ ಬೆಂಬಲಿಸುತ್ತೇವೆ ಎಂದು ಎಲ್ಲೂ ಹೇಳಿಲ್ಲ ಎಂದರು.

ಮಾಜಿ ಸಚಿವ ಹೆಚ್.ಡಿ.ರೇವಣ್ಣ

ಅಲ್ಲದೆ, ಈಗ ನೆರೆ ಹಾವಳಿಯಿಂದ ಉತ್ತರ ಕರ್ನಾಟಕ ಸೇರಿ ರಾಜ್ಯದ ಹಲವೆಡೆ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ನಾವಾಗೇ ಬಿಜೆಪಿ ಸರ್ಕಾರ ಬೀಳಿಸಲ್ಲ. ಎರಡು ರಾಜಕೀಯ ಪಕ್ಷಗಳು ಹೊಡೆದಾಡಿಕೊಂಡು ಸರ್ಕಾರ ಹೋಗುವುದಾದರೆ ಹೋಗಲಿ ಎಂದು ಹೇಳಿದ್ದಾರೆ.

ಜೆಡಿಎಸ್ ಬಿಜೆಪಿಯೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಹೆಚ್.ಡಿ.ರೇವಣ್ಣ, ಒಳ ಒಪ್ಪಂದ ಮಾಡಿಕೊಂಡು ಯಾವ ಕೆಲಸ ಮಾಡಿಸಿಕೊಂಡಿದ್ದೀವಿ. ಜೋಳ ಖರೀದಿ ಬಗ್ಗೆ ಮುಖ್ಯಮಂತ್ರಿಗೆ ಪತ್ರ ಬರೆದರೆ ಡಸ್ಟ್ ಬಿನ್ ಗೆ ಹಾಕುತ್ತಾರೆ. ಯಾರು ಸಮ್ಮಿಶ್ರ ಸರ್ಕಾರ ತೆಗೆದ್ರೋ ಅವರಿಗೆ ಕಾಮಗಾರಿ ನೀಡುತ್ತಿದ್ದಾರೆ. ಹಗಲು ಹೊತ್ತು ಯಡಿಯೂರಪ್ಪ, ರಾತ್ರಿ ಹೊತ್ತು ಕಾಂಗ್ರೆಸ್ನಲ್ಲಿ ಇರುತ್ತಾರೆ. ಮಂಡ್ಯದಲ್ಲೂ ಹಗಲು ಹೊತ್ತು ವಿರೋಧ ಪಕ್ಷದ ನಾಯಕರ ಜೊತೆ, ರಾತ್ರಿ ವೇಳೆ ಯಡಿಯೂರಪ್ಪ ಮನೆಯಲ್ಲಿ ಇರುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.

ಬಿಜೆಪಿ ಜೊತೆ ಯಾರು ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ತುಮಕೂರು, ಮಂಡ್ಯ ಜನತೆ ಕೇಳಿದರೆ ಗೊತ್ತಾಗುತ್ತೆ. ನಮಗೆ ಒಳ ಒಪ್ಪಂದದ ಅವಶ್ಯಕತೆ ಇಲ್ಲ. ಕೆಲಸ ಮಾಡಲಿ ಇಲ್ಲದಿದ್ದರೆ ಹಾಗೇ ಬಿದ್ದಿರುತ್ತದೆ, ಹತ್ತು ವರ್ಷ ಹಾಗೇ ಬಿದ್ದಿರಲಿಲ್ಲವೇ. ಕಾಂಗ್ರೆಸ್ ಇದನ್ನೆಲ್ಲ ಬಿಟ್ಟು ಹೋರಾಟ ಮಾಡಬೇಕು ಎಂದು ಹೇಳಿದ್ದಾರೆ.

ಕಾಂಗ್ರೆಸ್​ನಿಂದ ಇಪ್ಪತ್ತು ಸೀಟ್ ಹೋಯ್ತು, ಜೆಡಿಎಸ್​ಗೆ ಮತ ಹಾಕಬೇಡಿ, ಬಿಜೆಪಿಗೆ ಹಾಕಿ ಎಂದ್ರು. ಸುಮ್ನೆ ನಾಮಕಾವಸ್ಥೆಗೆ ಸೆಕ್ಯೂಲರ್ ಪಾರ್ಟಿ ಅನ್ನಬೇಡಿ. ಹರಿಯಾಣದಲ್ಲಿ ಕಾಂಗ್ರೆಸ್ ಮುಖಂಡರು ಸರಿಯಾಗಿ ಕೆಲಸ ಮಾಡಿದ್ದರೆ ಇನ್ನೂ ಇಪ್ಪತ್ತು ಸೀಟ್ ಹೆಚ್ಚಿಗೆ ಬರುತ್ತಿತ್ತು. ಆದರೆ ಚುನಾವಣೆ ಪ್ರಚಾರಕ್ಕೆ ಹೋಗಲೇ ಇಲ್ಲ. ಉಪಚುನಾವಣೆಯಲ್ಲಿ ಯಾರ ಜೊತೆ ಒಪ್ಪಂದ ಇಲ್ಲ. ಎಲ್ಲಾ ಕ್ಷೇತ್ರಗಳಲ್ಲಿಯೂ ಸ್ಪರ್ಧಿಸುತ್ತೇವೆ. ಯಾರ ಜೊತೆ ಒಪ್ಪಂದ ಮಾಡಿಕೊಳ್ಳುವ ಅವಶ್ಯಕತೆ ನಮಗೆ ಇಲ್ಲ ಎಂದು ಕಿಡಿ ಕಾರಿದ್ದಾರೆ.

Intro:ಹಾಸನ : ದೇವೇಗೌಡರಿಗೆ ವೈಯಕ್ತಿಕವಾಗಿ ಏನು ನಷ್ಟ ಇಲ್ಲ, ರಾಜ್ಯಕ್ಕೆ ನಷ್ಟ. ದೇವೇಗೌಡರು ಲೋಕಸಭೆಯಲ್ಲಿದಿದ್ದರೆ ರಾಜ್ಯದ ಪರ ಧ್ವನಿ ಎತ್ತುತ್ತಿದ್ದರು. ಕಾಂಗ್ರೆಸ್-ಬಿಜೆಪಿ ಪಕ್ಷದ ನಾಯಕರು ಜೆಡಿಎಸ್ಗೆ ಯಾವುದೇ ಕೆಲಸ ಮಾಡಿಕೊಡಬೇಡಿ ಎನ್ನುತ್ತಿದ್ದಾರೆ. ಎರಡು ಪಕ್ಷಗಳು ಜೆಡಿಎಸ್ ಮುಗಿಸುವ ಕೆಲಸಕ್ಕೆ ಮುಂದಾಗಿದ್ದಾರೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ವಾಗ್ದಾಳಿ ನಡೆಸಿದ್ದಾರೆ.
         
ಕಾಂಗ್ರೆಸ್ ನಮ್ಮ ಪಕ್ಷದ ಏಳು ಜನ ಶಾಸಕರನ್ನು ಏನು ಮಾಡಿದರು ಎಂದು ಇಡೀ ರಾಜ್ಯದ ಜನರಿಗೆ ಗೊತ್ತಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ೧೦೫ ಸೀಟ್ ಬರಬೇಕಾದ್ರೆ ಎ ಟೀಂ ಬಿ ಟೀಂ ಎಂದಿದ್ದೆ ಕಾರಣ. ಜಾತ್ಯಾತೀತ ಪಕ್ಷವನ್ನ ಎಲ್ಲಿ ಕೊಲ್ಲಬೇಕೋ ಅಲ್ಲಿ ಕೊಂದರು. ನಂತರ ನಮ್ಮನ್ನು ತಬ್ಬಿಕೊಂಡಿದ್ದೇವೆ. ಐದು ವರ್ಷ ನೀವೇ ಸಿಎಂ ಆಗಬೇಕು ಎಂದಿದ್ದರು ಎಂದು ವ್ಯಂಗ್ಯವಾಡಿದ್ದಾರೆ.

ಇನ್ನು, ಸಮ್ಮಿಶ್ರ ಸರಕಾರ ಯಾವ ರೀತಿ ಪತನವಾಯ್ತು ಎಂದು ರಾಜ್ಯ ಜನತೆಗೆ ಗೊತ್ತಿದೆ. ಕಾಂಗ್ರೆಸ್ನ ಕೆಲ ಮುಖಂಡರು ಜೆಡಿಎಸ್ ಸಹವಾಸ ಸಾಕು ಎಂದರು. ಅವರೇ ಸಹವಾಸ ಸಾಕು ಎಂದರೆ ನಾವು ಸೈಲೆಂಟಾಗಿದಿವಿ. ನಾವೇನು ಬಿಜೆಪಿಗೆ ಜೆಡಿಎಸ್ ಬರೆದುಕೊಟ್ಟಿಲ್ಲ. ಬಿಜೆಪಿ ಬೆಂಬಲಿಸುತ್ತೇವೆ ಎಂದು ಎಲ್ಲೂ ಹೇಳಿಲ್ಲ ಎಂದು ಹೇಳಿಕೊಂಡಿದ್ದಾರೆ.

ಅಲ್ಲದೆ, ಈಗ ನೆರೆ ಹಾವಳಿಯಿಂದ ಉತ್ತರ ಕರ್ನಾಟಕ ಸೇರಿ ರಾಜ್ಯದ ಹಲವೆಡೆ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ನಾವಾಗೇ ಬಿಜೆಪಿ ಸರಕಾರ ಬೀಳಿಸಲ್ಲ. ಎರಡು ರಾಜಕೀಯ ಪಕ್ಷಗಳು ಹೊಡೆದಾಡಿಕೊಂಡು ಸರಕಾರ ಹೋಗುವುದಾದರೆ ಹೋಗಲಿ ಎಂದು ಹೇಳಿದ್ದಾರೆ.

ಜೆಡಿಎಸ್ ಬಿಜೆಪಿಯೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಹೆಚ್.ಡಿ.ರೇವಣ್ಣ, ಒಳ ಒಪ್ಪಂದ ಮಾಡಿಕೊಂಡು ಯಾವ ಕೆಲಸ ಮಾಡಿಸಿಕೊಂಡಿದ್ದೀವಿ. ಜೋಳ ಖರೀದಿ ಬಗ್ಗೆ ಮುಖ್ಯಮಂತ್ರಿಗೆ ಪತ್ರ ಬರೆದರೆ ಡಸ್ಟ್ ಬಿನ್ ಗೆ ಹಾಕುತ್ತಾರೆ. ಯಾರು ಸಮ್ಮಿಶ್ರ ಸರ್ಕಾರ ತೆಗೆದ್ರೋ ಅವರಿಗೆ ಕಾಮಗಾರಿ ನೀಡುತ್ತಿದ್ದಾರೆ. ಹಗಲೊತ್ತು ಯಡಿಯೂರಪ್ಪ, ರಾತ್ರಿ ಹೊತ್ತು ಕಾಂಗ್ರೆಸ್ನಲ್ಲಿ ಇರುತ್ತಾರೆ. ಮಂಡ್ಯದಲ್ಲೂ ಹಗಲೊತ್ತು ವಿರೋಧ ಪಕ್ಷದ ನಾಯಕರ ಜೊತೆ, ರಾತ್ರಿ ವೇಳೆ ಯಡಿಯೂರಪ್ಪ ಮನೆಯಲ್ಲಿ ಇರುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.

ಬಿಜೆಪಿ ಜೊತೆ ಯಾರು ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ತುಮಕೂರು, ಮಂಡ್ಯ ಜನತೆ ಕೇಳಿದರೆ ಗೊತ್ತಾಗುತ್ತೆ. ನಮಗೆ ಒಳ ಒಪ್ಪಂದದ ಅವಶ್ಯಕತೆ ಇಲ್ಲ. ಕೆಲಸ ಮಾಡಲಿ ಇಲ್ಲದಿದ್ದರೆ ಹಾಗೇ ಬಿದ್ದಿರುತ್ತದೆ, ಹತ್ತು ವರ್ಷ ಹಾಗೇ ಬಿದ್ದಿರಲಿಲ್ಲವೇ. ಕಾಂಗ್ರೆಸ್ ಇದನ್ನೆಲ್ಲ ಬಿಟ್ಟು ಹೋರಾಟ ಮಾಡಬೇಕು ಎಂದು ಹೇಳಿದ್ದಾರೆ.

ಬೆಳಿಗ್ಗೆ ಎದ್ದರೆ ದೇವೇಗೌಡರು, ಕುಮಾರಸ್ವಾಮಿಗೆ ಬೈಯ್ಯದಿದ್ದರೆ ಕೆಲವರಿಗೆ ಊಟವೇ ಸೇರಲ್ಲ, ಉಪವಾಸ ಇರುತ್ತಾರೇನೋ. ಕಾಂಗ್ರೆಸ್ನವರೇ ಸಹವಾಸ ಬೇಡ ಅಂದಮೇಲೆ ನಾವು ಸೈಲೆಂಟಾಗಿ ಇರ್ತಿವಿ. ಇದನ್ನು ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಮುಖಂಡರು ತಿಳಿದುಕೊಳ್ಳಬೇಕು. ನಾವೇನು ಬಿಜೆಪಿಗೆ ಜೆಡಿಎಸ್ ಪಕ್ಷ ಅಡ ಇಟ್ಟಿಲ್ಲ. ಎರಡು ರಾಜಕೀಯ ಪಕ್ಷಗಳಿಂದ ದೂರನೇ ಇದ್ದೀವಿ. ನಾವು ಯಾವುದೇ ಪಕ್ಷಗಳಿಗೆ ತೊಂದರೆ ಕೊಡಲ್ಲ. ಮೂರು ವರ್ಷ ಬಿಜೆಪಿ ಸರಕಾರ ನಡೆಸಲಿ ನಮಗೇನುಎಂದು ತಿಳಿಸಿದ್ದಾರೆ.

ಕಾಂಗ್ರೆಸ್ನಿಂದ ಇಪ್ಪತ್ತು ಸೀಟ್ ಹೋಯ್ತು, ಜೆಡಿಎಸ್ಗೆ ಮತ ಹಾಕಬೇಡಿ, ಬಿಜೆಪಿಗೆ ಹಾಕಿ ಎಂದ್ರು. ಸುಮ್ನೆ ನಾಮಕಾವಸ್ಥೆಗೆ ಸೆಕ್ಯೂಲರ್ ಪಾರ್ಟಿ ಅನ್ನಬೇಡಿ. ಹರಿಯಾಣದಲ್ಲಿ ಕಾಂಗ್ರೆಸ್ ಮುಖಂಡರು ಸರಿಯಾಗಿ ಕೆಲಸ ಮಾಡಿದ್ದರೆ ಇನ್ನೂ ಇಪ್ಪತ್ತು ಸೀಟ್ ಹೆಚ್ಚಿಗೆ ಬರುತ್ತಿತ್ತು. ಆದರೆ ಚುನಾವಣೆ ಪ್ರಚಾರಕ್ಕೆ ಹೋಗಲೇ ಇಲ್ಲ. ಉಪಚುನಾವಣೆಯಲ್ಲಿ ಯಾರ ಜೊತೆ ಒಪ್ಪಂದ ಇಲ್ಲ. ಎಲ್ಲಾ ಕ್ಷೇತ್ರಗಳಲ್ಲಿಯೂ ಸ್ಪರ್ಧಿಸುತ್ತೇವೆ. ಯಾರ ಜೊತೆ ಒಪ್ಪಂದ ಮಾಡಿಕೊಳ್ಳುವ ಅವಶ್ಯಕತೆ ನಮಗೆ ಇಲ್ಲ ಎಂದೂ ಕಿಡಿ ಕಾರಿದ್ದಾರೆ.

ಬೈಟ್ : ಎಚ್.ಡಿ. ರೇವಣ್ಣ, ಮಾಜಿ ಸಚಿವ.

-         ಅರಕೆರೆ ಮೋಹನಕುಮಾರ, ಈಟಿವಿ ಭಾರತ, ಹಾಸನ.Body:0Conclusion:0
ETV Bharat Logo

Copyright © 2025 Ushodaya Enterprises Pvt. Ltd., All Rights Reserved.