ETV Bharat / state

ತಡೆಹಿಡಿದಿರುವ ಹಾಸನದ ಕಾಮಗಾರಿಗೆ ಚಾಲನೆ ನೀಡದಿದ್ದರೆ ಸಿಎಂ ಮನೆ ಮುಂದೆ ಪ್ರತಿಭಟನೆ: ರೇವಣ್ಣ ಎಚ್ಚರಿಕೆ - HD Revanna warning

ದ್ವೇಷದ ರಾಜಕಾರಣ ಮಾಡುವುದನ್ನ ಬಿಡಬೇಕು. ತಡೆಹಿಡಿದಿರುವ ಹಾಸನದ ಕಾಮಗಾರಿಗಳನ್ನು ಮರುಚಾಲನೆ ಮಾಡಬೇಕು. ಮಾಡದಿದ್ದರೇ ಶಾಸಕರೆಲ್ಲರೂ ಸೇರಿ ಪ್ರತಿಭಟನೆ ಮಾಡುತ್ತೇವೆ.

HD Revanna given warning to CM BSY
ಮಾಜಿ ಸಚಿವ ಹೆಚ್.ಡಿ.ರೇವಣ್ಣ
author img

By

Published : Dec 25, 2020, 2:21 AM IST

ಹಾಸನ: ಕುಮಾರಸ್ವಾಮಿ ಸರ್ಕಾರದಲ್ಲಿ ಬಿಡುಗಡೆಯಾಗಿದ್ದ ಎಲ್ಲಾ ಕಾಮಗಾರಿಗೆ ಸರ್ಕಾರ ತಡೆಯೊಡ್ಡಿದ್ದು, ಅವುಗಳನ್ನು ಶೀಘ್ರವಾಗಿ ಮರು ಚಾಲನೆ ನೀಡದಿದ್ದರೇ ನಮ್ಮ ಪಕ್ಷದ 6 ಶಾಸಕರುಗಳು ಬೆಂಗಳೂರಿನ ಮುಖ್ಯಮಂತ್ರಿ ಮನೆಯ ಮುಂದೆ ಪ್ರತಿಭಟನೆ ನಡೆಸುವುದಾಗಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಎಚ್ಚರಿಕೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿಯವರ ಕಾಲದಲ್ಲಿ ಮಂಜೂರಾಗಿದ್ದ ಹಾಸನದ ಗ್ರೀನ್ ಏರ್​​ಪೋರ್ಟ್, ಚಿಕ್ಕಮಗಳೂರು-ಬೇಲೂರು ರೈಲ್ವೆ ಮಾರ್ಗ, 140 ಕೋಟಿ ವ್ಯಚ್ಚದಲ್ಲಿ ಸ್ಥಾಪನೆಯಾಗಬೇಕಿದ್ದ ನೂತನ ಬಂಧಿಖಾನೆ, ಗೊರೂರು-ಹೇಮಾವತಿ ಜಲಾಶಯದ ಅಚ್ಚುಕಟ್ಟು ವ್ಯಾಪ್ತಿಗೆ ಒಳಪಡುವ ಸಕಲೆಶಪುರ, ಅರಕಲಗೂಡು ಮತ್ತು ಹೊಳೆನರಸೀಪುರ ಕ್ಷೇತ್ರದ ಕೃಷಿ ಭೂಮಿಗೆ ನೀರುಣಿಸುವ ಕಾಮಗಾರಿ, ಹೊಸದಾಗಿ ತೋಟಗಾರಿಕೆ ಮಹಾವಿದ್ಯಾಲಯ ಸ್ಥಾಪಿಸಲು ಸರ್ಕಾರದ ಆದೇಶವಾದ್ದು, ಅದನ್ನು ನಮ್ಮ ಹಾಸನದ ಎಂಎಲ್​ಎಂ ತಡೆಹಿಡಿದ್ದಾನೆ ಎಂದು ಶಾಸಕ ಪ್ರೀತಂಗೌಡ ಹೆಸರನ್ನು ಹೇಳದೇ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ : ಜೆಡಿಎಸ್ ಏನು ಎಂಬುದು ಜನವರಿ ನಂತರ ಗೊತ್ತಾಗಲಿದೆ: ಹೆಚ್.ಡಿ ರೇವಣ್ಣ

ಎಲ್ಲಾ ಕಾಮಗಾರಿಯೂ ಶುರುವಾಗಬೇಕು. ಅಷ್ಟರಲ್ಲಿ ಈ ಲೋಕಲ್ ಎಂಎಲ್ಎ ತಡೆಹಿಡಿಯಬೇಕೆಂದು ಲೆಟರ್​ ಹೆಡ್ ಕೊಟ್ಟು ನಿಲ್ಲಿದ್ದಾನೆ. ವಿನಾ ಕಾರಣ ಯಾವುದಕ್ಕೋ ಹಣ ಖರ್ಚು ಮಾಡುವ ಬದಲು ಸರ್ಕಾರಿ ಶಾಲಾ ಕಾಲೇಜಿಗೆ ಬೆಂಚು, ಟೇಬಲ್ ಕೊಡಿ. ನಿಮ್ಮ ಮಕ್ಕಳಿಗೆ ಒಳ್ಳೆಯದಾಗಬೇಕೆಂದರೆ ಸರ್ಕಾರಿ ಶಾಲಾ-ಕಾಲೇಜಿಗೆ ಮೂಲಭೂತ ಸೌಕರ್ಯ ನೀಡಿ. ನಂತರ ಶಾಲೆ ತೆರೆಯುವ ಚಿಂತನೆ ಮಾಡಿ ಎಂದು ಟಾಂಗ್​ ನೀಡಿದರು.

ಮಾಜಿ ಸಚಿವ ಹೆಚ್.ಡಿ.ರೇವಣ್ಣ

ದ್ವೇಷದ ರಾಜಕಾರಣ ಮಾಡುವುದನ್ನ ಬಿಡಬೇಕು. ತಡೆಹಿಡಿದಿರುವ ಹಾಸನದ ಕಾಮಗಾರಿಗಳನ್ನು ಮರುಚಾಲನೆ ಮಾಡದಿದ್ದರೇ ಜ.15ರ ನಂತರ ಶಾಸಕರೆಲ್ಲರೂ ಸೇರಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಹಾಸನ: ಕುಮಾರಸ್ವಾಮಿ ಸರ್ಕಾರದಲ್ಲಿ ಬಿಡುಗಡೆಯಾಗಿದ್ದ ಎಲ್ಲಾ ಕಾಮಗಾರಿಗೆ ಸರ್ಕಾರ ತಡೆಯೊಡ್ಡಿದ್ದು, ಅವುಗಳನ್ನು ಶೀಘ್ರವಾಗಿ ಮರು ಚಾಲನೆ ನೀಡದಿದ್ದರೇ ನಮ್ಮ ಪಕ್ಷದ 6 ಶಾಸಕರುಗಳು ಬೆಂಗಳೂರಿನ ಮುಖ್ಯಮಂತ್ರಿ ಮನೆಯ ಮುಂದೆ ಪ್ರತಿಭಟನೆ ನಡೆಸುವುದಾಗಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಎಚ್ಚರಿಕೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿಯವರ ಕಾಲದಲ್ಲಿ ಮಂಜೂರಾಗಿದ್ದ ಹಾಸನದ ಗ್ರೀನ್ ಏರ್​​ಪೋರ್ಟ್, ಚಿಕ್ಕಮಗಳೂರು-ಬೇಲೂರು ರೈಲ್ವೆ ಮಾರ್ಗ, 140 ಕೋಟಿ ವ್ಯಚ್ಚದಲ್ಲಿ ಸ್ಥಾಪನೆಯಾಗಬೇಕಿದ್ದ ನೂತನ ಬಂಧಿಖಾನೆ, ಗೊರೂರು-ಹೇಮಾವತಿ ಜಲಾಶಯದ ಅಚ್ಚುಕಟ್ಟು ವ್ಯಾಪ್ತಿಗೆ ಒಳಪಡುವ ಸಕಲೆಶಪುರ, ಅರಕಲಗೂಡು ಮತ್ತು ಹೊಳೆನರಸೀಪುರ ಕ್ಷೇತ್ರದ ಕೃಷಿ ಭೂಮಿಗೆ ನೀರುಣಿಸುವ ಕಾಮಗಾರಿ, ಹೊಸದಾಗಿ ತೋಟಗಾರಿಕೆ ಮಹಾವಿದ್ಯಾಲಯ ಸ್ಥಾಪಿಸಲು ಸರ್ಕಾರದ ಆದೇಶವಾದ್ದು, ಅದನ್ನು ನಮ್ಮ ಹಾಸನದ ಎಂಎಲ್​ಎಂ ತಡೆಹಿಡಿದ್ದಾನೆ ಎಂದು ಶಾಸಕ ಪ್ರೀತಂಗೌಡ ಹೆಸರನ್ನು ಹೇಳದೇ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ : ಜೆಡಿಎಸ್ ಏನು ಎಂಬುದು ಜನವರಿ ನಂತರ ಗೊತ್ತಾಗಲಿದೆ: ಹೆಚ್.ಡಿ ರೇವಣ್ಣ

ಎಲ್ಲಾ ಕಾಮಗಾರಿಯೂ ಶುರುವಾಗಬೇಕು. ಅಷ್ಟರಲ್ಲಿ ಈ ಲೋಕಲ್ ಎಂಎಲ್ಎ ತಡೆಹಿಡಿಯಬೇಕೆಂದು ಲೆಟರ್​ ಹೆಡ್ ಕೊಟ್ಟು ನಿಲ್ಲಿದ್ದಾನೆ. ವಿನಾ ಕಾರಣ ಯಾವುದಕ್ಕೋ ಹಣ ಖರ್ಚು ಮಾಡುವ ಬದಲು ಸರ್ಕಾರಿ ಶಾಲಾ ಕಾಲೇಜಿಗೆ ಬೆಂಚು, ಟೇಬಲ್ ಕೊಡಿ. ನಿಮ್ಮ ಮಕ್ಕಳಿಗೆ ಒಳ್ಳೆಯದಾಗಬೇಕೆಂದರೆ ಸರ್ಕಾರಿ ಶಾಲಾ-ಕಾಲೇಜಿಗೆ ಮೂಲಭೂತ ಸೌಕರ್ಯ ನೀಡಿ. ನಂತರ ಶಾಲೆ ತೆರೆಯುವ ಚಿಂತನೆ ಮಾಡಿ ಎಂದು ಟಾಂಗ್​ ನೀಡಿದರು.

ಮಾಜಿ ಸಚಿವ ಹೆಚ್.ಡಿ.ರೇವಣ್ಣ

ದ್ವೇಷದ ರಾಜಕಾರಣ ಮಾಡುವುದನ್ನ ಬಿಡಬೇಕು. ತಡೆಹಿಡಿದಿರುವ ಹಾಸನದ ಕಾಮಗಾರಿಗಳನ್ನು ಮರುಚಾಲನೆ ಮಾಡದಿದ್ದರೇ ಜ.15ರ ನಂತರ ಶಾಸಕರೆಲ್ಲರೂ ಸೇರಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.