ETV Bharat / state

ಹಾಸನದವರ ಬುದ್ಧಿ ನಮಗೂ ಒಂದಿಷ್ಟು ಕೊಡಪ್ಪ: ಸಚಿವ ಮಾಧುಸ್ವಾಮಿ - ಕಾರ್ಯಕ್ರಮ ಏರ್ಪಡಿಸಿ ಬಸವರಾಜ್ ಬೊಮ್ಮಾಯಿ, ಹಾಗೂ ಸಿಎಂ ಯಡಿಯೂರಪ್ಪ

'ಹಾಸನದವರು ಸರ್ಕಾರದಿಂದ ಎಷ್ಟು ಚೆನ್ನಾಗಿ ಕೆಲಸ ಮಾಡಿಸುತ್ತಾರೆ, ಅವರ ಬುದ್ಧಿಯನ್ನು ನಮಗೂ ಒಂದಿಷ್ಟು ಕೊಡಪ್ಪ ಅಂತ ದೇವರಲ್ಲಿ ಕೇಳುತ್ತೇನೆ' ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

KN_HSN_01_JC_MADUSWAMY_PKG_7203289
ಹಾಸನದವರ ಬುದ್ದಿ ನಮಗೂ ಕೊಡಪ್ಪ.. ನಾವು ದಡ್ಡರಾಗಿದ್ದೇವೆ: ಜೆ ಸಿ ಮಾಧುಸ್ವಾಮಿ
author img

By

Published : Dec 13, 2019, 1:51 PM IST

ಚನ್ನರಾಯಪಟ್ಟಣ: 'ಹಾಸನದವರು ಸರ್ಕಾರದಿಂದ ಎಷ್ಟು ಚೆನ್ನಾಗಿ ಕೆಲಸ ಮಾಡಿಸುತ್ತಾರೆ, ಅವರ ಬುದ್ಧಿಯನ್ನು ನಮಗೂ ಒಂದಿಷ್ಟು ಕೊಡಪ್ಪ ಅಂತ ದೇವರಲ್ಲಿ ಕೇಳುತ್ತೇನೆ' ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

ಜೆ.ಸಿ.ಮಾಧುಸ್ವಾಮಿ, ಸಚಿವ

ಚನ್ನರಾಯಪಟ್ಟಣ ತಾಲೂಕು ನುಗ್ಗೆಹಳ್ಳಿಯಲ್ಲಿ ಏತ ನೀರಾವರಿ ಯೋಜನೆಯಡಿ ಕೆರೆಗೆ ನೀರು ಹರಿಸಿ ಬಳಿಕ ಮಾತನಾಡಿದ ಅವರು, ಹಾಸನದವರು ಸಾಕಷ್ಟು ಬುದ್ಧಿವಂತರು. ಅವರಿಗಿರುವ ಬುದ್ಧಿ ನನಗೂ ಒಂದಿಷ್ಟು ಕೊಡಪ್ಪ ಅಂತ ದೇವರಲ್ಲಿ ಕೇಳಿಕೊಳ್ಳುತ್ತೇನೆ. ಕಾರಣ ಸರ್ಕಾರದ ಯಾವುದೇ ಕೆಲಸ, ಕಾಮಗಾರಿ ಇರಲಿ ಎಷ್ಟು ಚೆನ್ನಾಗಿ ತಗೋತಾರೆ ಅಂದ್ರೆ ನಾವು ತುಮಕೂರು ಜಿಲ್ಲೆಯವರು ಸುಮ್ಮನೆ ಕುಳಿತು ದಡ್ಡರಾಗಿದ್ದೇವೆ ಎಂದು ನಗೆ ಚಟಾಕಿ ಹಾರಿಸಿದರು.

ನಾನೂ ಒಬ್ಬ ರೈತನ ಮಗ. ರೈತನ ಪರಿಸ್ಥಿತಿಯನ್ನು ಹತ್ತಿರದಿಂದ ಕಂಡಿದ್ದೇನೆ. ತಾಲೂಕಿನ ನೀರಾವರಿ ಯೋಜನೆಗೆ ಶ್ರಮಿಸಿದ ಯಾರನ್ನೂ ಕೂಡ ಮರೆಯಬಾರದು. ಕೆರೆ ತುಂಬಿದ ಬಳಿಕ ಸರ್ಕಾರದ ಮಟ್ಟದಲ್ಲಿ ಕಾರ್ಯಕ್ರಮ ಏರ್ಪಡಿಸಿ ಬಸವರಾಜ್ ಬೊಮ್ಮಾಯಿ ಹಾಗೂ ಸಿಎಂ ಯಡಿಯೂರಪ್ಪನವರನ್ನು ಆಹ್ವಾನಿಸಿ ಅವರಿಗೆ ಅಭಿನಂದನೆ ಸಲ್ಲಿಸಬೇಕು. ಆ ಕೆಲಸ ಮಾಡುತ್ತೇನೆ ಎಂದರು.

ಚನ್ನರಾಯಪಟ್ಟಣ: 'ಹಾಸನದವರು ಸರ್ಕಾರದಿಂದ ಎಷ್ಟು ಚೆನ್ನಾಗಿ ಕೆಲಸ ಮಾಡಿಸುತ್ತಾರೆ, ಅವರ ಬುದ್ಧಿಯನ್ನು ನಮಗೂ ಒಂದಿಷ್ಟು ಕೊಡಪ್ಪ ಅಂತ ದೇವರಲ್ಲಿ ಕೇಳುತ್ತೇನೆ' ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

ಜೆ.ಸಿ.ಮಾಧುಸ್ವಾಮಿ, ಸಚಿವ

ಚನ್ನರಾಯಪಟ್ಟಣ ತಾಲೂಕು ನುಗ್ಗೆಹಳ್ಳಿಯಲ್ಲಿ ಏತ ನೀರಾವರಿ ಯೋಜನೆಯಡಿ ಕೆರೆಗೆ ನೀರು ಹರಿಸಿ ಬಳಿಕ ಮಾತನಾಡಿದ ಅವರು, ಹಾಸನದವರು ಸಾಕಷ್ಟು ಬುದ್ಧಿವಂತರು. ಅವರಿಗಿರುವ ಬುದ್ಧಿ ನನಗೂ ಒಂದಿಷ್ಟು ಕೊಡಪ್ಪ ಅಂತ ದೇವರಲ್ಲಿ ಕೇಳಿಕೊಳ್ಳುತ್ತೇನೆ. ಕಾರಣ ಸರ್ಕಾರದ ಯಾವುದೇ ಕೆಲಸ, ಕಾಮಗಾರಿ ಇರಲಿ ಎಷ್ಟು ಚೆನ್ನಾಗಿ ತಗೋತಾರೆ ಅಂದ್ರೆ ನಾವು ತುಮಕೂರು ಜಿಲ್ಲೆಯವರು ಸುಮ್ಮನೆ ಕುಳಿತು ದಡ್ಡರಾಗಿದ್ದೇವೆ ಎಂದು ನಗೆ ಚಟಾಕಿ ಹಾರಿಸಿದರು.

ನಾನೂ ಒಬ್ಬ ರೈತನ ಮಗ. ರೈತನ ಪರಿಸ್ಥಿತಿಯನ್ನು ಹತ್ತಿರದಿಂದ ಕಂಡಿದ್ದೇನೆ. ತಾಲೂಕಿನ ನೀರಾವರಿ ಯೋಜನೆಗೆ ಶ್ರಮಿಸಿದ ಯಾರನ್ನೂ ಕೂಡ ಮರೆಯಬಾರದು. ಕೆರೆ ತುಂಬಿದ ಬಳಿಕ ಸರ್ಕಾರದ ಮಟ್ಟದಲ್ಲಿ ಕಾರ್ಯಕ್ರಮ ಏರ್ಪಡಿಸಿ ಬಸವರಾಜ್ ಬೊಮ್ಮಾಯಿ ಹಾಗೂ ಸಿಎಂ ಯಡಿಯೂರಪ್ಪನವರನ್ನು ಆಹ್ವಾನಿಸಿ ಅವರಿಗೆ ಅಭಿನಂದನೆ ಸಲ್ಲಿಸಬೇಕು. ಆ ಕೆಲಸ ಮಾಡುತ್ತೇನೆ ಎಂದರು.

Intro:ಹಾಸನದವರು ಸರ್ಕಾರದಿಂದ ಎಷ್ಟು ಚೆನ್ನಾಗಿ ಕೆಲಸ ತಗೋತಾರೆ ಎಂದ್ರೆ ನಾವು ಸುಮ್ನೆ ತುಮಕೂರಿನಲ್ಲಿ ಕುಳಿತು ದಡ್ಡರಾಗಿದ್ದೇವೆ. ಹಾಗಾಗಿ ಹಾಸನದವರ ಬುದ್ಧಿಯನ್ನು ನಮಗೆ ಕೊಡಪ್ಪ ಅಂತ ದೇವರಲ್ಲಿ ಕೇಳುತ್ತೇನೆ ಎಂದು ಮಾಜಿ ಮಂತ್ರಿ ಎಚ್ ಡಿ ರೇವಣ್ಣಗೆ ಜಿಲ್ಲಾ ಉಸ್ತುವಾರಿ ಸಚಿವ ಜೆ ಸಿ ಮಾಧುಸ್ವಾಮಿ ಪರೋಕ್ಷವಾಗಿ ಟಾಂಗ್ ಕೊಟ್ಟರು.

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕು ನುಗ್ಗೆಹಳ್ಳಿಯಲ್ಲಿ ಏತ ನೀರಾವರಿ ಯೋಜನೆಯಡಿ ನುಗ್ಗೆಹಳ್ಳಿ ಕೆರೆಗೆ ನೀರು ಹರಿಸಿ ಬಳಿಕ ಅವರು ಮಾತನಾಡಿದರು.

ಹಾಸನದವರು ಸಾಕಷ್ಟು ಬುದ್ಧಿವಂತರು ಅವರಿಗಿರುವ ಬುದ್ಧಿ ನನಗೂ ಕೊಡಪ್ಪ ಅಂತ ದೇವರಲ್ಲಿ ಕೇಳಿಕೊಳ್ಳುತ್ತೇನೆ. ಕಾರಣ ಸರ್ಕಾರದ ಯಾವುದೇ ಕೆಲಸ, ಕಾಮಗಾರಿ ಇರಲಿ ಎಷ್ಟು ಚೆನ್ನಾಗಿ ತಗೋತಾರೆ ಅಂದ್ರೆ, ನಾವು ತುಮಕೂರು ಜಿಲ್ಲೆಯವರು ಸುಮ್ಮನೆ ಕುಳಿತು ದಡ್ಡರಾಗಿದ್ದೇವೆ ಹಾಸನದ ಜನಪ್ರತಿನಿಧಿಗಳ ಬುದ್ಧಿವಂತಿಕೆಯ ಅರ್ಧದಷ್ಟು ಬುದ್ದಿಯನ್ನ ನಮಗೂ ಕೊಡು ದೇವ್ರೆ ಎಂದು ಕೇಳಿದ್ದೇನೆ ಎಂದು ಮಾಜಿ ಸಚಿವ ರೇವಣ್ಣಗೆ ಟಾಂಗ್ ಕೊಡುವ ಮೂಲಕ ನಗೆ ಚಟಾಕಿ ಹಾರಿಸಿದರು.

ನಾನು ಒಬ್ಬ ರೈತನ ಮಗ ರೈತನ ಪರಿಸ್ಥಿತಿಯನ್ನು ಹತ್ತಿರದಿಂದ ಕಂಡಿದ್ದೇನೆ. ನೆಲ-ಜಲದ ವಿಚಾರದಲ್ಲಿ ರಾಜಕೀಯ ಮಾಡುವುದು ತರವಲ್ಲ. ಅದು ಯಾವೊಬ್ಬ ಜನಪ್ರತಿನಿಧಿಗೂ ಶೋಭೆ ತರುವಂತಹುದಲ್ಲ. ತಾಲೂಕಿನ ನೀರಾವರಿ ಯೋಜನೆಗೆ ಶ್ರಮಿಸಿದ ಯಾರನ್ನೂ ಕೂಡ ಮರೆಯಬಾರದು. ಕೆರೆ ತುಂಬಿದ ಬಳಿಕ ಸರ್ಕಾರದ ಮಟ್ಟದಲ್ಲಿ ಕಾರ್ಯಕ್ರಮ ಏರ್ಪಡಿಸಿ ಬಸವರಾಜ್ ಬೊಮ್ಮಾಯಿ, ಜಗದೀಶ್ ಶೆಟ್ಟರ್, ಹಾಗೂ ಸಿಎಂ ಯಡಿಯೂರಪ್ಪನವರನ್ನು ಆಹ್ವಾನಿಸಿ ಅವರಿಗೆ ಅಭಿನಂದನೆ ಸಲ್ಲಿಸಬೇಕು ಆ ಕೆಲಸ ಮಾಡುತ್ತೇನೆ ಎಂದರು.

ಜಿಲ್ಲೆ ಹಾಗೂ ತಾಲೂಕಿನ ಎಲ್ಲಾ ಕೆರೆಗಳಿಗೂ ನೀರು ತುಂಬಿಸುವ ಉದ್ದೇಶ ನಮ್ಮ ಸರ್ಕಾರದ್ದು. ಈಗಾಗಲೇ ಬಹುತೇಕ ವ್ಯಾಪ್ತಿಯಲ್ಲಿ ಡಿಪಿಆರ್ ಕಾರ್ಯ ನಡೆದಿದೆ. ತಾಲೂಕಿನ ನೀರಾವರಿ ಯೋಜನೆಯಲ್ಲಿ ಜಮೀನು ಕಳೆದುಕೊಂಡವರಿಗೆ ಪರಿಹಾರವಾಗಿ ಸುಮಾರು 200 ಕೋಟಿ ರೂ ಅವಶ್ಯಕತೆ ಇದ್ದು, ಈ ವಿಚಾರವಾಗಿ ಶೀಘ್ರದಲ್ಲಿ ಸಿಎಂ ಜೊತೆ ಪ್ರಸ್ತಾಪ ಮಾಡಿ ಜಮೀನು ಕಳೆದುಕೊಂಡವರಿಗೆ ಪರಿಹಾರ ಕಲ್ಪಿಸುವ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು.

ಚುನಾವಣೆ ಸಂದರ್ಭದಲ್ಲಿ ನಿಮ್ಮ ಸೇವೆ ಮಾಡುತ್ತೇವೆ ಎಂದು ಮತದಾರರ ಕಾಲಿಡಿದು ಅವಕಾಶ ಕೇಳಿಕೊಂಡ ಹಿನ್ನಲೆ ನನಗೆ ಈ ಸ್ಥಾನ ಕೊಟ್ಟಿದ್ದಾರೆ. ಮಾತನ್ನು ನೆನಪು ಮಾಡಿಕೊಂಡು ನಾವು ರೈತರು ಋಣ ತೀರಿಸಬೇಕು. ಅದನ್ನ ನಮ್ಮ ಅಧಿಕಾರವಧಿಯಲ್ಲಿ ಎಷ್ಟು ಸಾಧ್ಯವೋ ಅಷ್ಟನ್ನು ಮಾಡುತ್ತೇವೆ ಎಂದರು.

ಬೈಟ್ : ಜೆ ಸಿ ಮಾಧುಸ್ವಾಮಿ, ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ.


Body:7203289


Conclusion:ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.