ETV Bharat / state

ಬೆತ್ತಲೆ ಫೋಟೋ ತೋರಿಸಿ ಯುವತಿಯರಿಗೆ ಬ್ಲಾಕ್ ಮೇಲ್: ಆರೋಪಿ ಬಂಧನ

ಫೇಸ್‌ಬುಕ್ ಮೂಲಕ ಯುವತಿಯರ ಮಾನ ಹರಾಜು ಹಾಕಿ ಹಣ ಸಂಪಾದನೆಗೆ ಇಳಿದಿದ್ದ ಯುವಕನೊಬ್ಬ ಈಗ ಪೊಲೀಸರ ಅತಿಥಿಯಾಗಿರುವ ಘಟನೆ ಹಾಸನದಲ್ಲಿ‌ ನಡೆದಿದೆ.

author img

By

Published : Dec 7, 2019, 8:08 PM IST

KN_HSN_02_07_PRASHANTH_CRIME_AV_KA10026
ಬೆತ್ತಲೆ ಫೋಟೋ ತೋರಿಸಿ ಯುವತಿಯರಿಗೆ ಬ್ಲಾಕ್ ಮೇಲ್: ಆರೋಪಿ ಬಂಧನ

ಹಾಸನ: ಫೇಸ್‌ಬುಕ್ ಮೂಲಕ ಯುವತಿಯರ ಮಾನ ಹರಾಜು ಹಾಕಿ ಹಣ ಸಂಪಾದನೆಗೆ ಇಳಿದಿದ್ದ ಯುವಕನೊಬ್ಬ ಈಗ ಪೊಲೀಸರ ಅತಿಥಿಯಾಗಿರುವ ಘಟನೆ ಹಾಸನದಲ್ಲಿ‌ ನಡೆದಿದೆ.

ವಿಜಯಪುರ ಜಿಲ್ಲೆ ಇಂಡಿ ತಾಲೂಕು ಕೇಡಿಗೆ ಗ್ರಾಮದ ಪ್ರಶಾಂತ್ ರಾಜಶೇಖರ ವಾಮ (24) ಬಂಧಿತ ಆರೋಪಿ. ಕೇಡಿಗೆ ಗ್ರಾಮದಲ್ಲಿ ಕಾರು ಚಾಲಕ ವೃತ್ತಿ ಮಾಡಿಕೊಂಡಿರುವ ಪ್ರಶಾಂತ್, ಫೇಸ್‌ಬುಕ್‌ನಲ್ಲಿ ಯುವತಿಯರ ಫೋಟೊ ಕದ್ದು ಫೋಟೊಶಾಪ್ ಮೂಲಕ ಅವರನ್ನು ಬೆತ್ತಲೆಯಾಗಿಸಿ ನಂತರ ಡಿಲೀಟ್ ಮಾಡಲು ಹಣದ ಬೇಡಿಕೆಯಿಡುತ್ತಿದ್ದ. ಈ ವಂಚಕನನ್ನು ಹಾಸನ ಪೊಲೀಸರು ಬಂಧಿಸಿ ಕಂಬಿ ಹಿಂದೆ ತಳ್ಳಿದ್ದಾರೆ..

ಹಾಸನ: ಫೇಸ್‌ಬುಕ್ ಮೂಲಕ ಯುವತಿಯರ ಮಾನ ಹರಾಜು ಹಾಕಿ ಹಣ ಸಂಪಾದನೆಗೆ ಇಳಿದಿದ್ದ ಯುವಕನೊಬ್ಬ ಈಗ ಪೊಲೀಸರ ಅತಿಥಿಯಾಗಿರುವ ಘಟನೆ ಹಾಸನದಲ್ಲಿ‌ ನಡೆದಿದೆ.

ವಿಜಯಪುರ ಜಿಲ್ಲೆ ಇಂಡಿ ತಾಲೂಕು ಕೇಡಿಗೆ ಗ್ರಾಮದ ಪ್ರಶಾಂತ್ ರಾಜಶೇಖರ ವಾಮ (24) ಬಂಧಿತ ಆರೋಪಿ. ಕೇಡಿಗೆ ಗ್ರಾಮದಲ್ಲಿ ಕಾರು ಚಾಲಕ ವೃತ್ತಿ ಮಾಡಿಕೊಂಡಿರುವ ಪ್ರಶಾಂತ್, ಫೇಸ್‌ಬುಕ್‌ನಲ್ಲಿ ಯುವತಿಯರ ಫೋಟೊ ಕದ್ದು ಫೋಟೊಶಾಪ್ ಮೂಲಕ ಅವರನ್ನು ಬೆತ್ತಲೆಯಾಗಿಸಿ ನಂತರ ಡಿಲೀಟ್ ಮಾಡಲು ಹಣದ ಬೇಡಿಕೆಯಿಡುತ್ತಿದ್ದ. ಈ ವಂಚಕನನ್ನು ಹಾಸನ ಪೊಲೀಸರು ಬಂಧಿಸಿ ಕಂಬಿ ಹಿಂದೆ ತಳ್ಳಿದ್ದಾರೆ..

Intro:ಹಾಸನ: ಫೇಸ್‌ಬುಕ್ ಮೂಲಕ ಯುವತಿಯರ ಮಾನ ಹರಾಜು ಹಾಕಿ ಹಣ ಸಂಪಾದನೆಗೆ ಇಳಿದಿದ್ದ ಯುವಕನೊಬ್ಬ ಹಾಸನದ ಯುವತಿಯರಿಗೆ ಮೋಸ ಮಾಡಲು ಯತ್ನಿಸಿ ಈಗ ಪೊಲೀಸರ ಅತಿಥಿಯಾಗಿರುವ ಘಟನೆ ಹಾಸನದಲ್ಲಿ‌ ನಡೆದಿದೆ.

ವಿಜಯಪುರ ಜಿಲ್ಲೆ ಇಂಡಿ ತಾಲೂಕು ಕೇಡಿಗೆ ಗ್ರಾಮದ ಪ್ರಶಾಂತ್ ರಾಜಶೇಖರ ವಾಮ (24) ಆರೋಪಿ. ಕೇಡಿಗೆ ಗ್ರಾಮದಲ್ಲಿ ಕಾರು ಚಾಲಕ ವೃತ್ತಿ ಮಾಡಿಕೊಂಡಿರುವ ಪ್ರಶಾಂತ್, ಫೇಸ್‌ಬುಕ್‌ನಲ್ಲಿ ಯುವತಿಯರ ಫೋಟೊ ಕದ್ದು ಫೋಟೊಶಾಪ್ ಮೂಲಕ ಅವರನ್ನು ಬೆತ್ತಲೆಯಾಗಿಸಿ ನಂತರ ಡಿಲೀಟ್ ಮಾಡಲು ಹಣದ ಬೇಡಿಕೆಯಿಡುತ್ತಿದ್ದ ವಂಚಕನನ್ನು ಅಪರಾಧ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹಾಸನದ ಯುವತಿಯೊಬ್ಬರಿಗೆ ಏಪ್ರಿಲ್ 7 ರಂದು ಪವಿತ್ರಾ ಎಂಬಾಕೆ ಕರೆ ಮಾಡಿ, ಮಲ್ಲೇಶ ಕುಲಕರ್ಣಿ ಎಂಬುವರು ನಿನ್ನ ಬೆತ್ತಲೆ ಫೋಟೊಗಳನ್ನು ನನಗೆ ಕಳುಹಿಸಿದ್ದಾರೆ. ನಿನ್ನ ಫೋಟೊಗಳನ್ನು ತೆಗೆದು ಹಾಕಬೇಕೆಂದರೆ ಸ್ವಾತಿ ಎಂಬವರಿಗೆ ಕರೆ ಮಾಡು ಎಂದು ನಂಬರ್ ಕೊಟ್ಟಿದ್ದಾಳೆ. ಪವಿತ್ರಾ ಎಂಬಾಕೆಯೇ ಸ್ವಾತಿ ಎಂಬ ಪಾತ್ರ ಸೃಷ್ಟಿಸಿದ್ದಳು. ಇಷ್ಟಕ್ಕೆ ಆತಂಕಗೊಂಡ ಯುವತಿ ಮುಂದೇನು ಮಾಡಬೇಕೆಂದು ಗೊತ್ತಾಗದೆ ಸ್ವಾತಿ ಎಂಬುವರ ನಂಬರ್‌ಗೆ ಕರೆ ಮಾಡಿದ್ದಾರೆ. ಫೋಟೊಗಳನ್ನು ಡಿಲೀಟ್ ಮಾಡುವುದಾಗಿ ಭರವಸೆ ನೀಡಿದ್ದ ಸ್ವಾತಿ ನಂತರ ಮಾತು ಬದಲಿಸಿದ್ದಾಳೆ. ಬೆತ್ತಲೆಯಾಗಿರುವ ಫೊಟೊಗಳನ್ನು ಡಿಲೀಟ್ ಮಾಡಬೇಕೆಂದರೆ ಅಸಲಿ ಫೋಟೊ ಹಾಗೂ ವಿಡಿಯೋ ಬೇಕಾಗುತ್ತದೆ. ಇಲ್ಲವಾದರೆ ಈ ಕೆಲಸ ಅಸಾಧ್ಯ ಎಂದು ಹೇಳಿದ್ದಾಳೆ. ತಾನು ಮೋಸದ ಬಲೆಗೆ ಸಿಲುಕಿದ್ದೇನೆಂದು ಅರಿಯದ ಯುವತಿ ಪೂರ್ವಾಪರ ವಿಚಾರಿಸದೆ ಬೆತ್ತಲೆ ವಿಡಿಯೋ ಮಾಡಿ ಕಳಿಸಿದ್ದಾರೆ.

ಬೆತ್ತಲೆಯಾಗಿರುವ ವಿಡಿಯೋ ತಲುಪಿದ ತಕ್ಷಣವೇ ಯುವತಿಯನ್ನು ಬಲೆಗೆ ಬೀಳಿಸಿಕೊಂಡ ಸ್ವಾತಿ, ಯುವತಿಗೆ ಮತ್ತೆ ಕರೆ ಮಾಡಿ ಬೆತ್ತಲೆ ಚಿತ್ರಗಳು ಡಿಲೀಟ್ ಆಗುತ್ತಿಲ್ಲ. ಪ್ರೀತಮ್ ಎಂಬಾತ ಈಗ ಕರೆ ಮಾಡುತ್ತಾನೆ ಅವನೊಂದಿಗೆ ಮಾತನಾಡಿ ಸಮಸ್ಯೆಯಿಂದ ಪಾರಾಗು ಎಂದು ಕರೆ ಕಟ್ ಮಾಡಿದ್ದಳು. ಅದೇ ತಕ್ಷಣಕ್ಕೆ ಪ್ರೀತಮ್ ಎಂಬಾತ ಸಂಪರ್ಕಿಸಿ, ಬೆಳಗಾವಿಯಲ್ಲಿ ಫೇಸ್‌ಬುಕ್ ಕಂಪನಿಯಲ್ಲಿ ನನ್ನ ಸ್ನೇಹಿತ ಕೆಲಸ ಮಾಡುತ್ತಿದ್ದು ಆತನ ಖಾತೆಗೆ 22 ಸಾವಿರ ರೂ. ಹಾಕಬೇಕು, ಇಲ್ಲವಾದರೆ ಕಷ್ಟವಾಗುತ್ತದೆ. ಈ ವಿಚಾರವನ್ನು ಬಹಿರಂಗಪಡಿಸಿದರೆ ಇನ್ನಷ್ಟು ತೊಂದರೆಗೆ ಸಿಲುಕುತ್ತೀಯ ಎಂದು ಎಚ್ಚರಿಸಿದ್ದಾನೆ. ಇದರಿಂದ ದಿಕ್ಕು ತೋಚದಂತಾದ ಯುವತಿ ಏಪ್ರಿಲ್ 11 ರಂದು 17 ಸಾವಿರ ರೂ.ಗಳನ್ನು ಬಿ.ಸಿ. ಶಿವಾನಂದ ಎಂಬಾತನ ಎಸ್‌ಬಿಐ ಖಾತೆಗೆ ಹಣ ಹಾಕಿದ್ದಾರೆ. ನಂತರ ಮೂರು ದಿನಗಳ ಬಳಿಕ ಆತನೇ ಕರೆ ಮಾಡಿ ಯಾಕೆ ಫೋಟೊಗಳನ್ನೆಲ್ಲ ಡಿಲೀಟ್ ಮಾಡಿಸಿದೆ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ನಂತರ ಬೆತ್ತಲೆ ಫೋಟೊಗಳನ್ನು ಮತ್ತೊಮ್ಮೆ ಕಳುಹಿಸಿದ್ದಾನೆ.

ಬೆತ್ತಲೆ ಫೋಟೊಗಳೆಲ್ಲ ಶಾಶ್ವತವಾಗಿ ಡಿಲೀಟ್ ಆಗಬೇಕೆಂದರೆ 50 ಸಾವಿರ ರೂ. ಕೊಡಬೇಕು. ಇಲ್ಲವಾದರೆ ಫೇಸ್‌ಬುಕ್, ವಾಟ್ಸ್‌ಆಪ್‌ಗಳಲ್ಲಿ ಫೋಟೊ ವೈರಲ್ ಆಗುತ್ತದೆ. ನಿನ್ನ ಸ್ನೇಹಿತರಿಗೂ ಕಳುಹಿಸುತ್ತೇನೆ ಎಂದು ಹೆದರಿಸಿದ್ದಾನೆ. ಆಗ ಯುವತಿ ಪಾಲಕರಿಗೆ ವಿಚಾರ ತಿಳಿಸಿ ಸೈಬರ್ ಠಾಣೆಗೆ ದೂರು ನೀಡಿದ್ದರು.

ಬೇರೆಯವರ ಹೆಸರಿನಿಂದ ಫೇಸ್‌ಬುಕ್‌ನಲ್ಲಿ ವ್ಯವಹರಿಸುತ್ತಿದ್ದ ಪ್ರಶಾಂತ್‌ನ ಪತ್ತೆಗೆ ವಿಜಯಪುರಕ್ಕೆ ಹಾಸನದ ಪೊಲೀಸ್ ಪಿಎಸ್‌ಐ ದೇವೇಂದ್ರಪ್ಪ ಅವರ ನೇತೃತ್ವದಲ್ಲಿ ರಚನೆಯಾದ ತಂಡ ಆತನ ಹುಡುಕಾಟಕ್ಕೆ ಹರಸಾಹಸಪಟ್ಟಿತು. ಪ್ರಶಾಂತ್‌ನ ಫೇಸ್‌ಬುಕ್ ಗೆಳೆಯರನ್ನು ಸಂಪರ್ಕಿಸಿ ಆತನ ವಿವರ ಕಲೆ ಹಾಕಿದ್ದರು. ನಂತರ ಅಲ್ಲಿಗೆ ಭೇಟಿ ನೀಡಿ ಪರಿಶೀಲಿಸಿದಾಗ ಆರೋಪಿ ಸೆರೆ ಸಿಕ್ಕಿದ್ದಾನೆ. ಹಣಕ್ಕಾಗಿ ಅಶ್ಲೀಲವಾಗಿ ಯುವತಿಯರ ಫೋಟೊ ರಚಿಸುತ್ತಿದೆ. ಇಲ್ಲಿವರೆಗೆ ನಾಲ್ವರು ಮಹಿಳೆಯರಿಗೆ ಮೋಸ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

- ಅರಕೆರೆ ಮೋಹನಕುಮಾರ, ಈಟಿವಿ ಭಾರತ, ಹಾಸನ.



Body:0Conclusion:0

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.