ETV Bharat / state

ಹಾಸನದ ಜೈನಕಾಶಿಯಲ್ಲಿ 2 ದಿನ ಗಣಿತೋತ್ಸವ... ಭಾರತೀಯ ಗಣಿತ ಶಾಸ್ತ್ರದ ಮೆಲುಕು - President of South Jainakshi peet Sri Charukeerthi Bhattaraka Swamiji

ಹಾಸನದ ಜೈನಕಾಶಿಯಲ್ಲಿ ಎರಡು ದಿನಗಳ ಕಾಲ ಗಣಿತ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ.

Ganithothsava celebration in Hassan jainakashi
ಹಾಸನದ ಜೈನಕಾಶಿಯಲ್ಲಿ 2 ದಿನಗಳ ಕಾಲ ನಡೆಯುತ್ತಿರುವ ಗಣಿತೋತ್ಸವ
author img

By

Published : Jan 11, 2020, 6:24 AM IST

ಹಾಸನ: ಸಾಹಿತ್ಯ ಸಮ್ಮೇಳನ, ಧಾರ್ಮಿಕ ಸಮಾವೇಶ, ಮಸ್ತಕಾಭಿಷೇಕ ಸಮಾರಂಭ, ಮಕ್ಕಳ ವಾರ್ಷಿಕ ಸಮಾರಂಭಗಳ ನಡುವೆ ಇದೇ ಮೊದಲ ಬಾರಿಗೆ ಗಣಿತ ಸಮ್ಮೇಳನ ಆಯೋಜನೆ ಮಾಡಿರುವುದು ತುಂಬಾ ಸಂತಸ ತಂದಿದೆ ಎಂದು ದಕ್ಷಿಣ ಜೈನಕಾಶಿ ಪೀಠಾಧ್ಯಕ್ಷ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.

ಹಾಸನದ ಜೈನ ಕಾಶಿಯಲ್ಲಿ ಗಣಿತೋತ್ಸವ

ಹಾಸನದ ಜೈನಕಾಶಿಯಲ್ಲಿ ಎರಡು ದಿನಗಳ ಕಾಲ ನಡೆಯುತ್ತಿರುವ ಗಣಿತ ಉತ್ಸವ ಸಮ್ಮೇಳನ ಉದ್ಘಾಟನೆ ಮಾಡಿದ ಬಳಿಕ ಮಾತನಾಡಿದ ಅವರು, ಗಣಿತ ಯಾರಿಗೆ ಬೇಡ ಹೇಳಿ. ದೇಶದ ಪ್ರತಿಯೊಬ್ಬರಿಗೂ ಗಣಿತ ಅಗತ್ಯವಾಗಿ ಬೇಕಿದೆ. ಆದರೆ, ನಮ್ಮ ವಿದ್ಯಾರ್ಥಿಗಳು ಗಣಿತ ವಿಚಾರದಲ್ಲಿ ಸಾಕಷ್ಟು ಹಿಂದೆ ಉಳಿದಿದ್ದಾರೆ. ನಾವುಗಳು ಕೂಡ ಈ ವಿಚಾರದಲ್ಲಿ ಬಹಳಷ್ಟು ಕಲಿಯಬೇಕಿದೆ. ವಿದ್ಯಾರ್ಥಿಗಳಲ್ಲಿ ಗಣಿತ ಜ್ಞಾನವನ್ನು ಹೆಚ್ಚಿಸುವಂತ ಕೆಲಸ ಆಗಬೇಕಿದೆ ಎಂದರು.

Ganithothsava celebration in Hassan jainakashi
ಗಣಿತ ಸಮ್ಮೇಳನದ ಸಮ್ಮೇಳನಾಧ್ಯಕ್ಷೆ ಪದ್ಮಾವತಮ್ಮ

ಗಣಿತದ ತಂದೆ ಎಂದು ಕರೆಯಲಾಗುವ ಪೈಥಾಗೋರಸ್ ಗ್ರೀಕ್​ನ ಸಂಶೋಧಕ. ಅವನು ಶಾಖಾಹಾರಿ ಆಗಿದ್ದ. ಗಣಿತಕ್ಕೋಸ್ಕರ ತನ್ನ ಜೀವನವನ್ನೇ ಮುಡುಪಾಗಿಟ್ಟು ಪ್ರಪಂಚಕ್ಕೆ ಗಣಿತದ ದಾರ್ಶನಿಕನಾದ. ಭಾರತದ ವೇದದಲ್ಲಿಯೂ ಗಣಿತ ಶಾಸ್ತ್ರವಿದೆ. ಶ್ರವಣಬೆಳಗೊಳದಲ್ಲಿ ಪ್ರಾಕೃತ ವಿಶ್ವವಿದ್ಯಾಲಯವಿದ್ದು, ಧವಳದಲ್ಲಿ ಗಣಿತವಿದೆ. ಹೀಗಾಗಿ, ಪ್ರತಿಯೊಂದು ಧರ್ಮದಲ್ಲಿಯೂ ಗಣಿತ ಬಹಳ ಮುಖ್ಯ ಪಾತ್ರ ವಹಿಸಿದೆ. ವಿಶ್ವದಲ್ಲಿಯೇ ಗಣಿತ ತನ್ನದೆಯಾದ ಮಹತ್ವ ಪಡೆದುಕೊಂಡಿದೆ ಎಂದು ಹೇಳಿದರು.

ಗಣಿತ ಸಮ್ಮೇಳನದ ಸಮ್ಮೇಳನಾಧ್ಯಕ್ಷೆ ಪದ್ಮಾವತಮ್ಮರವರ ಮಾತು

ಹಾಸನದ ಜೈನಕಾಶಿಯಲ್ಲಿ 2 ದಿನಗಳ ಕಾಲ ನಡೆಯುತ್ತಿರುವ ಗಣಿತೋತ್ಸವ

ಗಣಿತ ಸಮ್ಮೇಳನದ ಅಧ್ಯಕ್ಷೆ ಪದ್ಮಾವತಮ್ಮ ಮಾತನಾಡಿ, ಗಣಿತಕ್ಕಾಗಿ ನಾನು ನನ್ನ ಜೀವನವನ್ನೇ ಮುಡಿಪಾಗಿಟ್ಟಿದ್ದೇನೆ. ನನ್ನನ್ನು ಗುರುತಿಸಿ ಗಣಿತ ಸಮ್ಮೇಳನದ ಅಧ್ಯಕ್ಷೆಯನ್ನಾಗಿ ಆಯ್ಕೆ ಮಾಡಿದ್ದು, ನನ್ನ ಪೂರ್ವ ಜನ್ಮದ ಪುಣ್ಯ ಎಂದರು.

ಗಣಿತಕ್ಕೆ ಆರ್ಯಭಟ, ಮಹಾವೀರಚಾರ್ಯರು, ಭಾಸ್ಕರಾಚಾರ್ಯರಂತಹ ಭಾರತೀಯರ ಕೊಡುಗೆ ಸಾಕಷ್ಟಿದೆ. ಗಣಿತ ವಿಜ್ಞಾನ ಯುಗದಲ್ಲಿ ಮಹಾರಾಣಿ ಎಂದು ಕರೆಯುತ್ತೇವೆ. ಮಹಾವೀರ್ ಆಚಾರ್ಯರು ಗಣಿತ ಸಾರಸಂಗ್ರಹ ಎಂಬ ಗ್ರಂಥ ರಚಿಸಿದ್ದಾರೆ. ಹಿಂದೆ ಅವರು ಬರೆದಿರುವ ಗಣಿತಕ್ಕೆ ಅಷ್ಟು ಸ್ಥಾನಮಾನ ಇರಲಿಲ್ಲ. ಆಗ ಗಣಿತ ಜ್ಯೋತಿಷ್ಯರ ಹಿಡಿತದಲ್ಲಿತ್ತು. ಆಗ ಮಹಾವೀರ್ ಆಚಾರ್ಯರು ಬರೆದ ಈ ಪುಸ್ತಕ ಗಣಿತಕ್ಕಾಗಿಯೇ ಮೀಸಲಿಟ್ಟಿದ್ದರಿಂದ ಗಣಿತ ಸಾಕಷ್ಟು ಬಳಕೆಗೆ ಬಂತು ಎಂದು ವಿವರಿಸಿದರು.

ಹಲವರು ಗಣಿತ ಕಲಿಯುವುದು ಕಷ್ಟ ಎನ್ನುತ್ತಾರೆ. ಆದರೆ, ಗಣಿತವನ್ನು ಅತಿ ಸರಳವಾದ ರೀತಿಯಲ್ಲಿ ಬಿಡಿಸುವ ಮಾರ್ಗವನ್ನು ಜೈನ ಗಣಿತ ತಜ್ಞರು ತೋರಿಸಿಕೊಟ್ಟಿದ್ದಾರೆ. ಜೈನಕಾಶಿಯಲ್ಲಿ ಗಣಿತ ಸಮ್ಮೇಳನ ನಡೆಯುತ್ತಿರುವುದು ಖುಷಿಯ ಸಂಗತಿ. ಮುಂದಿನ ದಿನಗಳಲ್ಲಿ ಇಂತಹ ಗಣಿತ ಸಮ್ಮೇಳನಗಳು ರಾಜ್ಯದ ಪ್ರತಿ ಜಿಲ್ಲೆಯಲ್ಲಿ ನಡೆದಾಗ ಮಾತ್ರ ಹೆಚ್ಚು- ಹೆಚ್ಚು ವಿದ್ಯಾರ್ಥಿಗಳು ಗಣಿತದ ಬಗ್ಗೆ ಆಸಕ್ತಿ ತಳೆಯುತ್ತಾರೆ ಎಂದರು.

ಹಾಸನ: ಸಾಹಿತ್ಯ ಸಮ್ಮೇಳನ, ಧಾರ್ಮಿಕ ಸಮಾವೇಶ, ಮಸ್ತಕಾಭಿಷೇಕ ಸಮಾರಂಭ, ಮಕ್ಕಳ ವಾರ್ಷಿಕ ಸಮಾರಂಭಗಳ ನಡುವೆ ಇದೇ ಮೊದಲ ಬಾರಿಗೆ ಗಣಿತ ಸಮ್ಮೇಳನ ಆಯೋಜನೆ ಮಾಡಿರುವುದು ತುಂಬಾ ಸಂತಸ ತಂದಿದೆ ಎಂದು ದಕ್ಷಿಣ ಜೈನಕಾಶಿ ಪೀಠಾಧ್ಯಕ್ಷ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.

ಹಾಸನದ ಜೈನ ಕಾಶಿಯಲ್ಲಿ ಗಣಿತೋತ್ಸವ

ಹಾಸನದ ಜೈನಕಾಶಿಯಲ್ಲಿ ಎರಡು ದಿನಗಳ ಕಾಲ ನಡೆಯುತ್ತಿರುವ ಗಣಿತ ಉತ್ಸವ ಸಮ್ಮೇಳನ ಉದ್ಘಾಟನೆ ಮಾಡಿದ ಬಳಿಕ ಮಾತನಾಡಿದ ಅವರು, ಗಣಿತ ಯಾರಿಗೆ ಬೇಡ ಹೇಳಿ. ದೇಶದ ಪ್ರತಿಯೊಬ್ಬರಿಗೂ ಗಣಿತ ಅಗತ್ಯವಾಗಿ ಬೇಕಿದೆ. ಆದರೆ, ನಮ್ಮ ವಿದ್ಯಾರ್ಥಿಗಳು ಗಣಿತ ವಿಚಾರದಲ್ಲಿ ಸಾಕಷ್ಟು ಹಿಂದೆ ಉಳಿದಿದ್ದಾರೆ. ನಾವುಗಳು ಕೂಡ ಈ ವಿಚಾರದಲ್ಲಿ ಬಹಳಷ್ಟು ಕಲಿಯಬೇಕಿದೆ. ವಿದ್ಯಾರ್ಥಿಗಳಲ್ಲಿ ಗಣಿತ ಜ್ಞಾನವನ್ನು ಹೆಚ್ಚಿಸುವಂತ ಕೆಲಸ ಆಗಬೇಕಿದೆ ಎಂದರು.

Ganithothsava celebration in Hassan jainakashi
ಗಣಿತ ಸಮ್ಮೇಳನದ ಸಮ್ಮೇಳನಾಧ್ಯಕ್ಷೆ ಪದ್ಮಾವತಮ್ಮ

ಗಣಿತದ ತಂದೆ ಎಂದು ಕರೆಯಲಾಗುವ ಪೈಥಾಗೋರಸ್ ಗ್ರೀಕ್​ನ ಸಂಶೋಧಕ. ಅವನು ಶಾಖಾಹಾರಿ ಆಗಿದ್ದ. ಗಣಿತಕ್ಕೋಸ್ಕರ ತನ್ನ ಜೀವನವನ್ನೇ ಮುಡುಪಾಗಿಟ್ಟು ಪ್ರಪಂಚಕ್ಕೆ ಗಣಿತದ ದಾರ್ಶನಿಕನಾದ. ಭಾರತದ ವೇದದಲ್ಲಿಯೂ ಗಣಿತ ಶಾಸ್ತ್ರವಿದೆ. ಶ್ರವಣಬೆಳಗೊಳದಲ್ಲಿ ಪ್ರಾಕೃತ ವಿಶ್ವವಿದ್ಯಾಲಯವಿದ್ದು, ಧವಳದಲ್ಲಿ ಗಣಿತವಿದೆ. ಹೀಗಾಗಿ, ಪ್ರತಿಯೊಂದು ಧರ್ಮದಲ್ಲಿಯೂ ಗಣಿತ ಬಹಳ ಮುಖ್ಯ ಪಾತ್ರ ವಹಿಸಿದೆ. ವಿಶ್ವದಲ್ಲಿಯೇ ಗಣಿತ ತನ್ನದೆಯಾದ ಮಹತ್ವ ಪಡೆದುಕೊಂಡಿದೆ ಎಂದು ಹೇಳಿದರು.

ಗಣಿತ ಸಮ್ಮೇಳನದ ಸಮ್ಮೇಳನಾಧ್ಯಕ್ಷೆ ಪದ್ಮಾವತಮ್ಮರವರ ಮಾತು

ಹಾಸನದ ಜೈನಕಾಶಿಯಲ್ಲಿ 2 ದಿನಗಳ ಕಾಲ ನಡೆಯುತ್ತಿರುವ ಗಣಿತೋತ್ಸವ

ಗಣಿತ ಸಮ್ಮೇಳನದ ಅಧ್ಯಕ್ಷೆ ಪದ್ಮಾವತಮ್ಮ ಮಾತನಾಡಿ, ಗಣಿತಕ್ಕಾಗಿ ನಾನು ನನ್ನ ಜೀವನವನ್ನೇ ಮುಡಿಪಾಗಿಟ್ಟಿದ್ದೇನೆ. ನನ್ನನ್ನು ಗುರುತಿಸಿ ಗಣಿತ ಸಮ್ಮೇಳನದ ಅಧ್ಯಕ್ಷೆಯನ್ನಾಗಿ ಆಯ್ಕೆ ಮಾಡಿದ್ದು, ನನ್ನ ಪೂರ್ವ ಜನ್ಮದ ಪುಣ್ಯ ಎಂದರು.

ಗಣಿತಕ್ಕೆ ಆರ್ಯಭಟ, ಮಹಾವೀರಚಾರ್ಯರು, ಭಾಸ್ಕರಾಚಾರ್ಯರಂತಹ ಭಾರತೀಯರ ಕೊಡುಗೆ ಸಾಕಷ್ಟಿದೆ. ಗಣಿತ ವಿಜ್ಞಾನ ಯುಗದಲ್ಲಿ ಮಹಾರಾಣಿ ಎಂದು ಕರೆಯುತ್ತೇವೆ. ಮಹಾವೀರ್ ಆಚಾರ್ಯರು ಗಣಿತ ಸಾರಸಂಗ್ರಹ ಎಂಬ ಗ್ರಂಥ ರಚಿಸಿದ್ದಾರೆ. ಹಿಂದೆ ಅವರು ಬರೆದಿರುವ ಗಣಿತಕ್ಕೆ ಅಷ್ಟು ಸ್ಥಾನಮಾನ ಇರಲಿಲ್ಲ. ಆಗ ಗಣಿತ ಜ್ಯೋತಿಷ್ಯರ ಹಿಡಿತದಲ್ಲಿತ್ತು. ಆಗ ಮಹಾವೀರ್ ಆಚಾರ್ಯರು ಬರೆದ ಈ ಪುಸ್ತಕ ಗಣಿತಕ್ಕಾಗಿಯೇ ಮೀಸಲಿಟ್ಟಿದ್ದರಿಂದ ಗಣಿತ ಸಾಕಷ್ಟು ಬಳಕೆಗೆ ಬಂತು ಎಂದು ವಿವರಿಸಿದರು.

ಹಲವರು ಗಣಿತ ಕಲಿಯುವುದು ಕಷ್ಟ ಎನ್ನುತ್ತಾರೆ. ಆದರೆ, ಗಣಿತವನ್ನು ಅತಿ ಸರಳವಾದ ರೀತಿಯಲ್ಲಿ ಬಿಡಿಸುವ ಮಾರ್ಗವನ್ನು ಜೈನ ಗಣಿತ ತಜ್ಞರು ತೋರಿಸಿಕೊಟ್ಟಿದ್ದಾರೆ. ಜೈನಕಾಶಿಯಲ್ಲಿ ಗಣಿತ ಸಮ್ಮೇಳನ ನಡೆಯುತ್ತಿರುವುದು ಖುಷಿಯ ಸಂಗತಿ. ಮುಂದಿನ ದಿನಗಳಲ್ಲಿ ಇಂತಹ ಗಣಿತ ಸಮ್ಮೇಳನಗಳು ರಾಜ್ಯದ ಪ್ರತಿ ಜಿಲ್ಲೆಯಲ್ಲಿ ನಡೆದಾಗ ಮಾತ್ರ ಹೆಚ್ಚು- ಹೆಚ್ಚು ವಿದ್ಯಾರ್ಥಿಗಳು ಗಣಿತದ ಬಗ್ಗೆ ಆಸಕ್ತಿ ತಳೆಯುತ್ತಾರೆ ಎಂದರು.

Intro:ಹಾಸನ: ಗಣಿತ ಎನ್ನುವುದು ಸರ್ವಧರ್ಮ, ಸರ್ವಮತ, ಸರ್ವದೇವ, ಗಣಿತ ಯಾರಿಗೆ ಬೇಡ ಹೇಳಿ. . ? ಹುಟ್ಟಿನಿಂದ ಸಾಯುವವರೆಗೆ ಗಣಿತ ನಮ್ಮೊಂದಿಗೆ ಇರುತ್ತದೆ. ಅಂತ ದಕ್ಷಿಣ ಜೈನಕಾಶಿ ಪೀಠಾಧ್ಯಕ್ಷ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅಭಿಪ್ರಾಯಪಟ್ಟರು.

ಹಾಸನದ ಜೈನಕಾಶಿಯಲ್ಲಿ ಎರಡು ದಿನಗಳ ಕಾಲ ನಡೆಯುತ್ತಿರುವ ಗಣಿತ ಉತ್ಸವ ಸಮ್ಮೇಳನದ ಉದ್ಘಾಟನೆ ಮಾಡಿದ ಬಳಿಕ ಅವರು ಶಿಕ್ಷಕರ ವೃಂದದವರಿಗೆ ಆಶೀರ್ವಚನ ನೀಡುವ ವೇಳೆ ಈ ಮಾತನಾಡಿದರು.

ನಾವು ಸಾಹಿತ್ಯಸಮ್ಮೇಳನ, ಧಾರ್ಮಿಕ ಸಮಾವೇಶ, ಮಸ್ತಕಾಭಿಷೇಕ ಸಮಾರಂಭ ಮಕ್ಕಳ ವಾರ್ಷಿಕ ಸಮಾರಂಭ ಕೇಳಿದ್ದೆವು ಆದರೆ ಮೊದಲ ಬಾರಿಗೆ ನಾವು ಗಣಿತ ಸಮ್ಮೇಳನವನ್ನು ಕೇಳಿ ಅದನ್ನ ನನ್ನ ಕ್ಷೇತ್ರದಲ್ಲಿಯೇ ಆಯೋಜನೆ ಮಾಡಿರುವುದು ನನಗೆ ತುಂಬಾ ಸಂತಸವಾಗಿದೆ. ಇವತ್ತು ಗಣಿತ ಯಾರಿಗೆ ಬೇಡ ಹೇಳಿ. ಇವತ್ತು ದೇಶದಲ್ಲಿ ವಿದ್ಯಾರ್ಥಿ ವರ್ಗ ಗಣಿತ ವಿಚಾರದಲ್ಲಿ ಸಾಕಷ್ಟು ಹಿಂದೆ ಉಳಿದಿದೆ ಅಷ್ಟೇ ಅಲ್ಲ ನಾವುಗಳು ಕೂಡ ಹಿಂದೆ ಉಳಿದಿದ್ದು ದೇಶದ ವಿದ್ಯಾರ್ಥಿಗಳ ವರ್ಗವನ್ನು ನಾವು ಗಣಿತದ ಮೂಲಕ ಅವರ ಜ್ಞಾನವನ್ನು ಮತ್ತಷ್ಟು ಹೆಚ್ಚಿಸಬೇಕು ಎಂದರು.

ನಾವು ಶ್ರವಣಬೆಳಗೊಳ ಬೆಟ್ಟವನ್ನು ಹತ್ತುವ ಮುನ್ನ ಬೆಟ್ಟಕ್ಕೆ ಎಷ್ಟು ಮೆಟ್ಟಿಲುಗಳಿವೆ ಎಂದು ಕೇಳುವ ಮೂಲಕ ಅಲ್ಲಿಯೂ ಕೂಡ ಗಣಿತವನ್ನು ಬಳಸುತ್ತೇವೆ ಇದರ ಜೊತೆಗೆ ಎಲ್ಲಾ ವಿಷಯದ ಪರೀಕ್ಷೆಯಲ್ಲಿಯೂ ಕೂಡ ನಿನಗೆ ಎಷ್ಟು ಅಂಕ ಬಂದಿದೆ ಎಂಬುದನ್ನು ಗರಿಷ್ಠ ಕನಿಷ್ಠ ಅಂಕ ಎಂದು ತುಲನೆ ಮಾಡುವ ಮೂಲಕ ಅಲ್ಲಿಯೂ ಕೂಡ ಗಣಿತ ಬಳಕೆಯಾಗುತ್ತದೆ ಹಾಗಾಗಿ ಗಣಿತ ಜೀವನ ಕಷ್ಟ ಅಲ್ಲ ದೇಶದ ಅಭಿವೃದ್ಧಿಗೂ ಕೂಡ ಬಹಳ ಮುಖ್ಯ ಅಂತ ಹೇಳಿದರು.

ಗಣಿತದ ತಂದೆ ಎಂದು ಕರೆಯಲಾಗುವ ಪೈಥಾಗೋರಸ್ ಗ್ರೀಕ್ ನ ಸಂಶೋಧಕ ಆತ ಶಾಖಾಹಾರಿ ಅಂತನು ಕೂಡ ಪ್ರಸಿದ್ಧರಾಗಿದ್ದ. ಆತ ಗಣಿತ ಕ್ಕೋಸ್ಕರ ತನ್ನ ಜೀವನವನ್ನೇ ಮುಡುಪಾಗಿಟ್ಟು ಪ್ರಪಂಚಕ್ಕೆ ಗಣಿತವನ್ನು ಕೊಟ್ಟಂತಹ ದಾರ್ಶನಿಕ ಆತ ಗಣಿತದ ಒಂದನ್ನು ದೇವರು ಎಂದು ಭಾವಿಸಿದವನು. ನಮ್ಮ ಭಾರತದಲ್ಲಿಯೂ ಗಣಿತವಿದೆ ವೇದದಲ್ಲಿಯು ಗಣಿತವಿದೆ. ಶ್ರವಣಬೆಳಗೊಳದಲ್ಲಿರುವ ಪ್ರಾಕೃತ ವಿಶ್ವವಿದ್ಯಾಲಯವಿದ್ದು ಧವಳದಲ್ಲಿಯೂ ಗಣಿತವಿದೆ. ಹೀಗಾಗಿ ಪ್ರತಿಯೊಂದು ಧರ್ಮದಲ್ಲಿಯೂ ಗಣಿತ ಬಹಳ ಮುಖ್ಯ ಪಾತ್ರ ವಹಿಸಿದ್ದು, ವಿಶ್ವದಲ್ಲಿಯೇ ಗಣಿತ ತನ್ನದೇ ಆದಂತಹ ಮಹತ್ವವನ್ನು ಪಡೆದುಕೊಂಡಿದ್ದು ಅಂತಹ ಅಖಿಲ ಭಾರತ ಮೊದಲ ಗಣೇಶೋತ್ಸವ ಸಮ್ಮೇಳನ ಗೊಮ್ಮಟನ ಕ್ಷೇತ್ರದಲ್ಲಿ ನಡೆಯುತ್ತಿರುವುದು ನನಗೆ ತುಂಬಾ ಖುಷಿ ತಂದಿದೆ ಎಂದರು

ಬೈಟ್: ಚಾರುಕೀರ್ತಿ ಭಟ್ಟಾರಕ ಸ್ವಾಮಿಜೀ, ಜೈನ ಪೀಠಾಧ್ಯಕ್ಷ ಶ್ರವಣಬೆಳಗೊಳ.




Body:7203289


Conclusion:ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.