ETV Bharat / state

ತಿಂಗಳಾದರೂ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿ ಜಾರಿಗೆ ತರಲು ವಿಫಲ: ಮಾಜಿ ಸಚಿವ ಆರ್ ಅಶೋಕ್ ವ್ಯಂಗ್ಯ

author img

By

Published : Jun 24, 2023, 9:31 PM IST

Updated : Jun 24, 2023, 10:55 PM IST

ಪ್ರಧಾನಿ ನರೇಂದ್ರ ಮೋದಿ 5 ಕೆ ಜಿ ಅಕ್ಕಿ ಕೊಡುತ್ತಿದ್ದಾರೆ. ಚೀಲದ ಹಣ ಮಾತ್ರ ಸಿದ್ದರಾಮಯ್ಯ ಕೊಡುತ್ತಿದ್ದಾರೆ. ಮಾನ ಮರ್ಯಾದೆ ಇದ್ದರೆ ಘೋಷಣೆ ಮಾಡುವ ಮುಂಚೆ ಕಾಂಗ್ರೆಸ್​ವೂ ಕೇಂದ್ರ ಸರ್ಕಾರ, ಫುಡ್ ಕಾರ್ಪೊರೇಷನ್ ಕೇಳಬೇಕಿತ್ತು: ಮಾಜಿ ಸಚಿವ ಆರ್ ಅಶೋಕ್ ಟೀಕೆ

Former minister R Ashok spoke to reporters.
ಮಾಜಿ ಸಚಿವ ಆರ್ ಅಶೋಕ್ ಸುದ್ದಿಗಾರರೊಂದಿಗೆ ಮಾತನಾಡಿದರು.

ಮಾಜಿ ಸಚಿವ ಆರ್ ಅಶೋಕ್ ಸುದ್ದಿಗಾರರೊಂದಿಗೆ ಮಾತನಾಡಿದರು.

ಹಾಸನ: ಚುನಾವಣೆಯಲ್ಲಿ ನೀಡಿದ ಭರವಸೆಯಂತೆ ಕಾಂಗ್ರೆಸ್ ಸರ್ಕಾರವು ತಿಂಗಳಾದರೂ ಇದುವರೆಗೂ ಐದು ಗ್ಯಾರಂಟಿ ಜಾರಿ ಮಾಡಿಲ್ಲ ಎಂದು ವ್ಯಂಗ್ಯವಾಡಿದ ಅವರು, ಮುಂದೆ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಯಾವ ಕಾರಣಕ್ಕೂ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಮಾಜಿ ಸಚಿವ ಆರ್. ಅಶೋಕ್ ತಿಳಿಸಿದರು.

ನಗರದ ಹೊರವಲಯದಲ್ಲಿರುವ ಹೆಚ್​​ಎಂಟಿ ಸಮುದಾಯ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ, ಮಾಧ್ಯಮದೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆ ತಯಾರಿಗೆ ನರೇಂದ್ರ ಮೋದಿ ಅವರು ತಮ್ಮ 9 ವರ್ಷದ ಸಾಧನೆಯನ್ನು ಮನೆ ಮನೆಗೆ ಮುಟ್ಟಿಸುತ್ತೇವೆ. ಅಟಲ್ ಬಿಹಾರಿ ವಾಜಪೇಯಿ ಅವರು ಬಹಳಷ್ಟು ಕೆಲಸ ಮಾಡಿದ್ದಾರೆ. ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ತಿಂಗಳಾದರೂ, ಗ್ಯಾರಂಟಿ ಯಾವುದು ಇನ್ನೂ ಜಾರಿಯಾಗಿರುವುದಿಲ್ಲ. ಈಗಾಗಲೇ ಬಸ್ ಡೋರ್ ಕಿತ್ತು ಹಾಕುವುದೇ ಅವರ ಗ್ಯಾರಂಟಿ ಆಗಿದೆ. ಕೆಲವು ಗ್ಯಾರಂಟಿಗಳೊಂದಿಗೆ ಮೋದಿ ಹೆಸರು ಹೇಳುತ್ತಿದ್ದಾರೆ. ನಮಗಿಂತ ಹೆಚ್ಚಾಗಿ ಮೋದಿ ಹೆಸರನ್ನು ಕಾಂಗ್ರೆಸ್ ಹೇಳುತ್ತಿದೆ. ಅವರ ಬಳಿ ಹಣವಿಲ್ಲ ರಾಜ್ಯದ ಖಜಾನೆ ಖಾಲಿಯಾಗಿದೆ. ನಮ್ಮ ಮೇಲೆ ಅಕ್ಕಿಕೊಡದ ಅರೋಪ, ಅದು ಕಾಂಗ್ರೆಸ್ ಪ್ರಣಾಳಿಕೆ ಎಂದು ಟಾಂಗ್ ನೀಡಿದರು.

ಅಕ್ಕಿ ಕೊಡಲು 10 ಸಾವಿರ ಕೋಟಿ ಹಣ ಬೇಕು. ಯಾರದೋ ಮ್ಯಾನೇಜರ್ ಗೆ ಬರೆದ ಲೆಟರ್ ಇಟ್ಟುಕೊಂಡು ಆಟ ಆಡುತ್ತಿದ್ದಾರೆ. ಲೋಕಸಭಾ ಚುನಾವಣೆವರೆಗೆ ಮೋದಿ ಟಾರ್ಗೆಟ್. ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ - ಬಿಜೆಪಿ ಮೈತ್ರಿ ಚರ್ಚೆ ಇಲ್ಲ. ಅದರ ಬಗ್ಗೆ ಯೋಚನೆ ಕೂಡ ಇಲ್ಲ ಎಂದು ಅಶೋಕ್​ ಸ್ಪಷ್ಟಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು 5 ಕೆ ಜಿ ಅಕ್ಕಿ ಕೊಡುತ್ತಿದ್ದಾರೆ. ಚೀಲದ ಹಣ ಮಾತ್ರ ಸಿದ್ದರಾಮಯ್ಯ ಕೊಡುತ್ತಿದ್ದಾರೆ. ಮಾನ ಮರ್ಯಾದೆ ಇದ್ದರೆ ಘೋಷಣೆ ಮಾಡುವುದಕ್ಕೆ ಮುಂಚೆ ಕೇಂದ್ರ ಸರ್ಕಾರ ಹಾಗೂ ಫುಡ್ ಕಾರ್ಪೊರೇಷನ್ ಕೇಳಬೇಕಿತ್ತು. ನಳಿನ್ ಕುಮಾರ್ ಕಟೀಲ್ ಇದ್ದು, ರಾಜ್ಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಹುದ್ದೆ ಖಾಲಿ ಇರುವುದಿಲ್ಲ ಎಂದು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಮಾಜಿ ಡಿಸಿಎಂ ಅಶೋಕ್​ ಉತ್ತರಿಸಿದರು.

200 ಯೂನಿಟ್ ಉಚಿತ ವಿದ್ಯುತ್ ನಾಳೆ 100 ಯೂನಿಟ್​​​ಗೆ ಬರಬಹುದು. ಕೇಂದ್ರ ಸರ್ಕಾರ ವಿದ್ಯುತ್ ಕೊಡುತ್ತಿಲ್ಲ ಎಂದು ಮೋದಿ ಹೆಸರು ಹೇಳುತ್ತಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬರುವ ವಿಶ್ವಾಸ ಇರಲಿಲ್ಲ. ಆದ ಕಾರಣ ಅವರು ಗ್ಯಾರಂಟಿ ಬಿಟ್ಟಿ ಭಾಗ್ಯ ಘೋಷಣೆ ಮಾಡಿದ್ದರು.

ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಇದು ಸಮ್ಮಿಶ್ರ ಸರ್ಕಾರದ ಮೇಲೆ ಎತ್ತಿ ಹಾಕಬಹುದು ಎಂದು ತಿಳಿದುಕೊಂಡಿದ್ದರು. ಈಗಲೂ ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಸಮ್ಮಿಶ್ರ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿ ಇದೆ. ಡಿ ಕೆ ಶಿವಕುಮಾರ್​​ಗೆ ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಹುದ್ದೆ ಕೊಡುವುದಿಲ್ಲ ಎಂದು ಅಶೋಕ್​ ಭವಿಷ್ಯ ನುಡಿದರು.

ಪ್ರಧಾನಿ ನರೇಂದ್ರ ಮೋದಿ ಪ್ರಧಾನಿಯಾದರೆ ರಾಜ್ಯ ಸರ್ಕಾರ ಉಳಿಯುವುದಿಲ್ಲ. ಲೋಕಸಭೆ ಚುನಾವಣೆವರೆಗೆ ಹಿಂದೆ ದೆವ್ವಗಳಿಗೆ ಮನೆ ಮುಂದೆ ಬರೆಯುತ್ತಿದ್ದರು.. ಇಂದು ಬೇಡ ನಾಳೆ ಬಾ ಬೊರ್ಡ್​ ಹಾಕುತ್ತಿದ್ದೆವು. ಅದೇ ರಿತಿ ಲೋಕಸಭಾ ಚುನಾವಣೆವರೆಗೆ ಮುಂದುವರೆಯುತ್ತದೆ. 24 ಗಂಟೆಯಲ್ಲಿ ಅಕ್ಕಿ ಕೊಡುವುದಾಗಿ ಹೇಳಿದ ಸಿದ್ದರಾಮಯ್ಯ ಒಂದು ತಿಂಗಳ ಅಕ್ಕಿ ಉಳಿತಾಯದಿಂದ 1 ಸಾವಿರ ಕೋಟಿ ಹಣ ಉಳಿಸುತ್ತಿದ್ದಾರೆ. 2 ಸಾವಿರ ಹಣ ಕೂಡ ಮಹಿಳೆಯರಿಗೆ ಸಿಗುವುದಿಲ್ಲ. ಮನೆ ಸೊಸೆ ಅತ್ತೆ ಜಗಳವಾಡಿ ತೀರ್ಮಾನ ಆದ ಮೇಲೆ 2ಸಾವಿರ ರೂಪಾಯಿ ಕೊಡುತ್ತಾರೆ. ಪ್ರತಿಯೊಂದು ಯೋಜನೆಗೆ ಚೆಕ್ ಪೋಸ್ಟ್ ಮಾಡುತ್ತಿದ್ದಾರೆ. ಅದು ಒಂದು ತಿಂಗಳು ಮುಂದೆ ಹೋದರೆ 1 ಸಾವಿರ ಕೋಟಿ ಹಣ ಉಳಿಯುತ್ತದೆ. ಕಾಂಗ್ರೆಸ್ ದೇಶವನ್ನು 50 ವರ್ಷ ಲೂಟಿ ಮಾಡಿದೆ ಎಂದು ಆರೋಪಿಸಿದರು.

ಇದನ್ನೂಓದಿ:ಅಕ್ಕಿ, ಮನೆ, ಸಿಲಿಂಡರ್ ಕೊಡಿ ಸಾಕು ಎಂದ ನಾರಿಯರು..

ಮಾಜಿ ಸಚಿವ ಆರ್ ಅಶೋಕ್ ಸುದ್ದಿಗಾರರೊಂದಿಗೆ ಮಾತನಾಡಿದರು.

ಹಾಸನ: ಚುನಾವಣೆಯಲ್ಲಿ ನೀಡಿದ ಭರವಸೆಯಂತೆ ಕಾಂಗ್ರೆಸ್ ಸರ್ಕಾರವು ತಿಂಗಳಾದರೂ ಇದುವರೆಗೂ ಐದು ಗ್ಯಾರಂಟಿ ಜಾರಿ ಮಾಡಿಲ್ಲ ಎಂದು ವ್ಯಂಗ್ಯವಾಡಿದ ಅವರು, ಮುಂದೆ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಯಾವ ಕಾರಣಕ್ಕೂ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಮಾಜಿ ಸಚಿವ ಆರ್. ಅಶೋಕ್ ತಿಳಿಸಿದರು.

ನಗರದ ಹೊರವಲಯದಲ್ಲಿರುವ ಹೆಚ್​​ಎಂಟಿ ಸಮುದಾಯ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ, ಮಾಧ್ಯಮದೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆ ತಯಾರಿಗೆ ನರೇಂದ್ರ ಮೋದಿ ಅವರು ತಮ್ಮ 9 ವರ್ಷದ ಸಾಧನೆಯನ್ನು ಮನೆ ಮನೆಗೆ ಮುಟ್ಟಿಸುತ್ತೇವೆ. ಅಟಲ್ ಬಿಹಾರಿ ವಾಜಪೇಯಿ ಅವರು ಬಹಳಷ್ಟು ಕೆಲಸ ಮಾಡಿದ್ದಾರೆ. ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ತಿಂಗಳಾದರೂ, ಗ್ಯಾರಂಟಿ ಯಾವುದು ಇನ್ನೂ ಜಾರಿಯಾಗಿರುವುದಿಲ್ಲ. ಈಗಾಗಲೇ ಬಸ್ ಡೋರ್ ಕಿತ್ತು ಹಾಕುವುದೇ ಅವರ ಗ್ಯಾರಂಟಿ ಆಗಿದೆ. ಕೆಲವು ಗ್ಯಾರಂಟಿಗಳೊಂದಿಗೆ ಮೋದಿ ಹೆಸರು ಹೇಳುತ್ತಿದ್ದಾರೆ. ನಮಗಿಂತ ಹೆಚ್ಚಾಗಿ ಮೋದಿ ಹೆಸರನ್ನು ಕಾಂಗ್ರೆಸ್ ಹೇಳುತ್ತಿದೆ. ಅವರ ಬಳಿ ಹಣವಿಲ್ಲ ರಾಜ್ಯದ ಖಜಾನೆ ಖಾಲಿಯಾಗಿದೆ. ನಮ್ಮ ಮೇಲೆ ಅಕ್ಕಿಕೊಡದ ಅರೋಪ, ಅದು ಕಾಂಗ್ರೆಸ್ ಪ್ರಣಾಳಿಕೆ ಎಂದು ಟಾಂಗ್ ನೀಡಿದರು.

ಅಕ್ಕಿ ಕೊಡಲು 10 ಸಾವಿರ ಕೋಟಿ ಹಣ ಬೇಕು. ಯಾರದೋ ಮ್ಯಾನೇಜರ್ ಗೆ ಬರೆದ ಲೆಟರ್ ಇಟ್ಟುಕೊಂಡು ಆಟ ಆಡುತ್ತಿದ್ದಾರೆ. ಲೋಕಸಭಾ ಚುನಾವಣೆವರೆಗೆ ಮೋದಿ ಟಾರ್ಗೆಟ್. ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ - ಬಿಜೆಪಿ ಮೈತ್ರಿ ಚರ್ಚೆ ಇಲ್ಲ. ಅದರ ಬಗ್ಗೆ ಯೋಚನೆ ಕೂಡ ಇಲ್ಲ ಎಂದು ಅಶೋಕ್​ ಸ್ಪಷ್ಟಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು 5 ಕೆ ಜಿ ಅಕ್ಕಿ ಕೊಡುತ್ತಿದ್ದಾರೆ. ಚೀಲದ ಹಣ ಮಾತ್ರ ಸಿದ್ದರಾಮಯ್ಯ ಕೊಡುತ್ತಿದ್ದಾರೆ. ಮಾನ ಮರ್ಯಾದೆ ಇದ್ದರೆ ಘೋಷಣೆ ಮಾಡುವುದಕ್ಕೆ ಮುಂಚೆ ಕೇಂದ್ರ ಸರ್ಕಾರ ಹಾಗೂ ಫುಡ್ ಕಾರ್ಪೊರೇಷನ್ ಕೇಳಬೇಕಿತ್ತು. ನಳಿನ್ ಕುಮಾರ್ ಕಟೀಲ್ ಇದ್ದು, ರಾಜ್ಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಹುದ್ದೆ ಖಾಲಿ ಇರುವುದಿಲ್ಲ ಎಂದು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಮಾಜಿ ಡಿಸಿಎಂ ಅಶೋಕ್​ ಉತ್ತರಿಸಿದರು.

200 ಯೂನಿಟ್ ಉಚಿತ ವಿದ್ಯುತ್ ನಾಳೆ 100 ಯೂನಿಟ್​​​ಗೆ ಬರಬಹುದು. ಕೇಂದ್ರ ಸರ್ಕಾರ ವಿದ್ಯುತ್ ಕೊಡುತ್ತಿಲ್ಲ ಎಂದು ಮೋದಿ ಹೆಸರು ಹೇಳುತ್ತಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬರುವ ವಿಶ್ವಾಸ ಇರಲಿಲ್ಲ. ಆದ ಕಾರಣ ಅವರು ಗ್ಯಾರಂಟಿ ಬಿಟ್ಟಿ ಭಾಗ್ಯ ಘೋಷಣೆ ಮಾಡಿದ್ದರು.

ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಇದು ಸಮ್ಮಿಶ್ರ ಸರ್ಕಾರದ ಮೇಲೆ ಎತ್ತಿ ಹಾಕಬಹುದು ಎಂದು ತಿಳಿದುಕೊಂಡಿದ್ದರು. ಈಗಲೂ ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಸಮ್ಮಿಶ್ರ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿ ಇದೆ. ಡಿ ಕೆ ಶಿವಕುಮಾರ್​​ಗೆ ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಹುದ್ದೆ ಕೊಡುವುದಿಲ್ಲ ಎಂದು ಅಶೋಕ್​ ಭವಿಷ್ಯ ನುಡಿದರು.

ಪ್ರಧಾನಿ ನರೇಂದ್ರ ಮೋದಿ ಪ್ರಧಾನಿಯಾದರೆ ರಾಜ್ಯ ಸರ್ಕಾರ ಉಳಿಯುವುದಿಲ್ಲ. ಲೋಕಸಭೆ ಚುನಾವಣೆವರೆಗೆ ಹಿಂದೆ ದೆವ್ವಗಳಿಗೆ ಮನೆ ಮುಂದೆ ಬರೆಯುತ್ತಿದ್ದರು.. ಇಂದು ಬೇಡ ನಾಳೆ ಬಾ ಬೊರ್ಡ್​ ಹಾಕುತ್ತಿದ್ದೆವು. ಅದೇ ರಿತಿ ಲೋಕಸಭಾ ಚುನಾವಣೆವರೆಗೆ ಮುಂದುವರೆಯುತ್ತದೆ. 24 ಗಂಟೆಯಲ್ಲಿ ಅಕ್ಕಿ ಕೊಡುವುದಾಗಿ ಹೇಳಿದ ಸಿದ್ದರಾಮಯ್ಯ ಒಂದು ತಿಂಗಳ ಅಕ್ಕಿ ಉಳಿತಾಯದಿಂದ 1 ಸಾವಿರ ಕೋಟಿ ಹಣ ಉಳಿಸುತ್ತಿದ್ದಾರೆ. 2 ಸಾವಿರ ಹಣ ಕೂಡ ಮಹಿಳೆಯರಿಗೆ ಸಿಗುವುದಿಲ್ಲ. ಮನೆ ಸೊಸೆ ಅತ್ತೆ ಜಗಳವಾಡಿ ತೀರ್ಮಾನ ಆದ ಮೇಲೆ 2ಸಾವಿರ ರೂಪಾಯಿ ಕೊಡುತ್ತಾರೆ. ಪ್ರತಿಯೊಂದು ಯೋಜನೆಗೆ ಚೆಕ್ ಪೋಸ್ಟ್ ಮಾಡುತ್ತಿದ್ದಾರೆ. ಅದು ಒಂದು ತಿಂಗಳು ಮುಂದೆ ಹೋದರೆ 1 ಸಾವಿರ ಕೋಟಿ ಹಣ ಉಳಿಯುತ್ತದೆ. ಕಾಂಗ್ರೆಸ್ ದೇಶವನ್ನು 50 ವರ್ಷ ಲೂಟಿ ಮಾಡಿದೆ ಎಂದು ಆರೋಪಿಸಿದರು.

ಇದನ್ನೂಓದಿ:ಅಕ್ಕಿ, ಮನೆ, ಸಿಲಿಂಡರ್ ಕೊಡಿ ಸಾಕು ಎಂದ ನಾರಿಯರು..

Last Updated : Jun 24, 2023, 10:55 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.