ETV Bharat / state

ಬ್ರಿಟೀಷರ ಸಹೋದರರಂತಿದೆ ದೇವೇಗೌಡರ ಕುಟುಂಬ: ಶಾಸಕ ಪ್ರೀತಂಗೌಡ ಕಿಡಿ

author img

By

Published : Mar 24, 2019, 4:06 AM IST

ಕುಟುಂಬ ರಾಜಕಾರಣದ ವಿರುದ್ಧ ದ್ವನಿಯೆತ್ತುವವರು ಬಿಜೆಪಿಗೆ ಬನ್ನಿ. ಈಗಾಗಲೇ ಬಿ ಎಂ ರಸ್ತೆ ಯನ್ನು ಹೊಡೆದು ಅಲ್ಲಿದ್ದ ಬಡ ಕಾರ್ಮಿಕರನ್ನು ಬೀದಿ ಪಾಲು ಮಾಡಿದ್ದಾರೆ. ಸಕಲೇಶಪುರದ ರಸ್ತೆಯನ್ನು ಹೊಡೆಯುವ ಮೂಲಕ ಬಡವರ ಹೊಟ್ಟೆಯ ಮೇಲೆ ಹೊಡೆಯುವ ಇಂತಹವರ ಕುಟುಂಬ ರಾಜಕಾರಣ ಬೇಕಾ ಎಂದು ಪ್ರಶ್ನೆ ಮಾಡಿದರು.

ಶಾಸಕ ಪ್ರೀತಂಗೌಡ

ಹಾಸನ: ಬ್ರಿಟೀಷರು ದೇಶವನ್ನು 200 ವರ್ಷಗಳ ಕಾಲ ಆಳ್ವಿಕೆ ಮಾಡಿದ್ರು. ಆದ್ರೆ, ಬ್ರಿಟೀಷರ ಸಹೋದರರಂತಿರುವ ದೇವೇಗೌಡರ ಕುಟುಂಬದ ಅಪ್ಪ ಮಕ್ಕಳು ಸೇರಿ ಈಗಾಗಲೇ 60 ವರ್ಷ ರಾಜಕಾರಣ ಮಾಡಿದ್ದಾರೆ ಎಂದು ಬಿಜೆಪಿ ಶಾಸಕ ಪ್ರೀತಂಗೌಡ ಗೌಡರ ಕುಟುಂಬದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಾಸನದ ಗುರುರಾಜ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುತ್ತಾ, ನೂರು ವರ್ಷದ ರಾಜಕಾರಣ ಮಾಡೋದಕ್ಕೆ ಮೊಮ್ಮಕ್ಕಳನ್ನು ಕಣಕ್ಕಿಳಿಸುವ ಮೂಲಕ ಮುಂದಿನ 40 ವರ್ಷಕ್ಕೆ ಅಡಿಪಾಯ ಹಾಕುತ್ತಿದ್ದಾರೆ ಎಂದರು.

ಶಾಸಕ ಪ್ರೀತಂಗೌಡ

ಪ್ರತಿಬಾರಿಯೂ ನನ್ನನ್ನ ಆಕಸ್ಮಿಕವಾಗಿ ಬಂದ ಶಾಸಕ, ಲಾಟರಿ ಮೂಲಕ ಗೆದ್ದು ಶಾಸಕರಾಗಿದ್ದಾರೆ ಅಂತ ಗೇಲಿ ಮಾಡುತ್ತಿರುತ್ತಾರೆ ಅಂತವರಿಗೆ ಕಳೆದ ನಗರಸಭಾ ಚುನಾವಣೆಯಲ್ಲಿ ಟ್ರಯಲ್ ಆಗಿ ಉತ್ತರ ಕೊಟ್ಟಿದ್ದು, ಹಾಸನದಲ್ಲಿ. ಅವರು ಇದುವರೆವಿಗೂ ನೋಡಿರದ ಕೆಲವು ಏರಿಯಾಗಳನ್ನು ಕೂಡ ತೋರಿಸಿದ್ದೇವೆ. ಕನ್ನಡ ಸ್ವತಂತ್ರಕ್ಕಾಗಿ ನಾವು ಬ್ರಿಟಿಷರ ವಿರುದ್ಧ ಹೋರಾಡಿದ ದೇವಿ ಅಂತ ಕಾಂಗ್ರೆಸ್ಸಿನವರು ಬೆನ್ನು ತಟ್ಟಿ ಹೇಳಿಕೊಳ್ಳುತ್ತಾರೆ. ಆದರೆ, ಅಂತಹ ಬ್ರಿಟಿಷರ ಸಹೋದರರ ಬೆನ್ನ ಹಿಂದೆಯೇ ದೋಸ್ತಿ ಸರ್ಕಾರ ಮಾಡಿ ಮತ್ತೆ ಕೆಲ ಕಾಂಗ್ರೆಸ್ ನಾಯಕರು ನಾಮಪತ್ರ ಸಲ್ಲಿಸಲು ಇಂದೇ ಹೋಗ್ತಾರಲ್ಲ ಇಂಥವರಿಗೆ ಏನನ್ನ ಬೇಕು ಅಂತ ಟೀಕಿಸಿದರು.

ಕುಟುಂಬ ರಾಜಕಾರಣದ ವಿರುದ್ಧ ದ್ವನಿಯೆತ್ತುವವರು ಬಿಜೆಪಿಗೆ ಬನ್ನಿ. ಈಗಾಗಲೇ ಬಿ ಎಂ ರಸ್ತೆ ಯನ್ನು ಹೊಡೆದು ಅಲ್ಲಿದ್ದ ಬಡ ಕಾರ್ಮಿಕರನ್ನು ಬೀದಿಪಾಲು ಮಾಡಿದ್ದಾರೆ. ಸಕಲೇಶಪುರದ ರಸ್ತೆಯನ್ನು ಹೊಡೆಯುವ ಮೂಲಕ ಬಡವರ ಹೊಟ್ಟೆಯ ಮೇಲೆ ಹೊಡೆಯುವ ಇಂತಹವರ ಕುಟುಂಬ ರಾಜಕಾರಣ ಬೇಕಾ ಅಥವಾ ನೆಮ್ಮದಿಯಿಂದದ ನಿಟ್ಟುಸಿರು ಬಿಡುವಂತೆ ಮಾಡುವ ಮೋದಿ ಸರ್ಕಾರ ಬೇಕಾ ಎಂಬುದನ್ನು ಯೋಚನೆ ಮಾಡಿ ನಿರ್ಧಾರಕ್ಕೆ ಬನ್ನಿ ಅಂತ ಸಲಹೆ ನೀಡಿದರು.

ಹಾಸನ: ಬ್ರಿಟೀಷರು ದೇಶವನ್ನು 200 ವರ್ಷಗಳ ಕಾಲ ಆಳ್ವಿಕೆ ಮಾಡಿದ್ರು. ಆದ್ರೆ, ಬ್ರಿಟೀಷರ ಸಹೋದರರಂತಿರುವ ದೇವೇಗೌಡರ ಕುಟುಂಬದ ಅಪ್ಪ ಮಕ್ಕಳು ಸೇರಿ ಈಗಾಗಲೇ 60 ವರ್ಷ ರಾಜಕಾರಣ ಮಾಡಿದ್ದಾರೆ ಎಂದು ಬಿಜೆಪಿ ಶಾಸಕ ಪ್ರೀತಂಗೌಡ ಗೌಡರ ಕುಟುಂಬದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಾಸನದ ಗುರುರಾಜ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುತ್ತಾ, ನೂರು ವರ್ಷದ ರಾಜಕಾರಣ ಮಾಡೋದಕ್ಕೆ ಮೊಮ್ಮಕ್ಕಳನ್ನು ಕಣಕ್ಕಿಳಿಸುವ ಮೂಲಕ ಮುಂದಿನ 40 ವರ್ಷಕ್ಕೆ ಅಡಿಪಾಯ ಹಾಕುತ್ತಿದ್ದಾರೆ ಎಂದರು.

ಶಾಸಕ ಪ್ರೀತಂಗೌಡ

ಪ್ರತಿಬಾರಿಯೂ ನನ್ನನ್ನ ಆಕಸ್ಮಿಕವಾಗಿ ಬಂದ ಶಾಸಕ, ಲಾಟರಿ ಮೂಲಕ ಗೆದ್ದು ಶಾಸಕರಾಗಿದ್ದಾರೆ ಅಂತ ಗೇಲಿ ಮಾಡುತ್ತಿರುತ್ತಾರೆ ಅಂತವರಿಗೆ ಕಳೆದ ನಗರಸಭಾ ಚುನಾವಣೆಯಲ್ಲಿ ಟ್ರಯಲ್ ಆಗಿ ಉತ್ತರ ಕೊಟ್ಟಿದ್ದು, ಹಾಸನದಲ್ಲಿ. ಅವರು ಇದುವರೆವಿಗೂ ನೋಡಿರದ ಕೆಲವು ಏರಿಯಾಗಳನ್ನು ಕೂಡ ತೋರಿಸಿದ್ದೇವೆ. ಕನ್ನಡ ಸ್ವತಂತ್ರಕ್ಕಾಗಿ ನಾವು ಬ್ರಿಟಿಷರ ವಿರುದ್ಧ ಹೋರಾಡಿದ ದೇವಿ ಅಂತ ಕಾಂಗ್ರೆಸ್ಸಿನವರು ಬೆನ್ನು ತಟ್ಟಿ ಹೇಳಿಕೊಳ್ಳುತ್ತಾರೆ. ಆದರೆ, ಅಂತಹ ಬ್ರಿಟಿಷರ ಸಹೋದರರ ಬೆನ್ನ ಹಿಂದೆಯೇ ದೋಸ್ತಿ ಸರ್ಕಾರ ಮಾಡಿ ಮತ್ತೆ ಕೆಲ ಕಾಂಗ್ರೆಸ್ ನಾಯಕರು ನಾಮಪತ್ರ ಸಲ್ಲಿಸಲು ಇಂದೇ ಹೋಗ್ತಾರಲ್ಲ ಇಂಥವರಿಗೆ ಏನನ್ನ ಬೇಕು ಅಂತ ಟೀಕಿಸಿದರು.

ಕುಟುಂಬ ರಾಜಕಾರಣದ ವಿರುದ್ಧ ದ್ವನಿಯೆತ್ತುವವರು ಬಿಜೆಪಿಗೆ ಬನ್ನಿ. ಈಗಾಗಲೇ ಬಿ ಎಂ ರಸ್ತೆ ಯನ್ನು ಹೊಡೆದು ಅಲ್ಲಿದ್ದ ಬಡ ಕಾರ್ಮಿಕರನ್ನು ಬೀದಿಪಾಲು ಮಾಡಿದ್ದಾರೆ. ಸಕಲೇಶಪುರದ ರಸ್ತೆಯನ್ನು ಹೊಡೆಯುವ ಮೂಲಕ ಬಡವರ ಹೊಟ್ಟೆಯ ಮೇಲೆ ಹೊಡೆಯುವ ಇಂತಹವರ ಕುಟುಂಬ ರಾಜಕಾರಣ ಬೇಕಾ ಅಥವಾ ನೆಮ್ಮದಿಯಿಂದದ ನಿಟ್ಟುಸಿರು ಬಿಡುವಂತೆ ಮಾಡುವ ಮೋದಿ ಸರ್ಕಾರ ಬೇಕಾ ಎಂಬುದನ್ನು ಯೋಚನೆ ಮಾಡಿ ನಿರ್ಧಾರಕ್ಕೆ ಬನ್ನಿ ಅಂತ ಸಲಹೆ ನೀಡಿದರು.

Intro:ಹಾಸನ: ಬ್ರಿಟಿಷರು ದೇಶವನ್ನು 200 ವರ್ಷಗಳ ಕಾಲ ಆಳ್ವಿಕೆ ಮಾಡಿದ್ರು. ಆದ್ರೆ ಬ್ರಿಟಿಷರ ಸಹೋದರರಂತಿರುವ ದೇವೇಗೌಡರ ಕುಟುಂಬದ ಅಪ್ಪ ಮಕ್ಕಳು ಸೇರಿ ಈಗಾಗಲೇ 60 ವರ್ಷ ರಾಜಕಾರಣ ಮಾಡಿದ್ದು, ನೂರು ವರ್ಷದ ರಾಜಕಾರಣ ಮಾಡೋದಕ್ಕೆ ಮೊಮ್ಮಕ್ಕಳನ್ನು ಕಣಕ್ಕಿಳಿಸುವ ಮೂಲಕ ಮುಂದಿನ 40 ವರ್ಷಕ್ಕೆ ಅಡಿಪಾಯ ಹಾಕುತ್ತಿದ್ದಾರೆ ಅಂತ ಹಾಸನದ ಬಿಜೆಪಿ ಶಾಸಕ ಪ್ರೀತಂಗೌಡ ದೇವೇಗೌಡರ ಕುಟುಂಬ ರಾಜಕೀಯದ ವಿರುದ್ಧ ಮತ್ತೆ ಗುಡುಗಿದರು. ಹಾಸನದ ಗುರುರಾಜ ಕಲ್ಯಾಣ ಮಂಟಪದಲ್ಲಿ ಪ್ರಸಿದ್ಧ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡುತ್ತಾ, ಪ್ರತಿಬಾರಿಯೂ ನನ್ನನ್ನ ಆಕಸ್ಮಿಕವಾಗಿ ಬಂದ ಶಾಸಕ ಲಾಟರಿ ಮೂಲಕ ಗೆದ್ದು ಶಾಸಕರಾಗಿದ್ದಾರೆ ಅಂತ ಗೇಲಿ ಮಾಡುತ್ತಿರುತ್ತಾರೆ ಅಂತವರಿಗೆ ಕಳೆದ ನಗರಸಭಾ ಚುನಾವಣೆಯಲ್ಲಿ ಟ್ರಯಲ್ ಆಗಿ ಉತ್ತರ ಕೊಟ್ಟಿದ್ದು, ಹಾಸನದಲ್ಲಿ ಅವರು ಇದುವರೆವಿಗೂ ನೋಡಿರದ ಕೆಲವು ಏರಿಯಾಗಳನ್ನು ಕೂಡ ತೋರಿಸಿದ್ದೇವೆ. ಕನ್ನಡ ಸ್ವತಂತ್ರಕ್ಕಾಗಿ ನಾವು ಬ್ರಿಟಿಷರ ವಿರುದ್ಧ ಹೋರಾಡಿದ ದೇವಿ ಅಂತ ಕಾಂಗ್ರೆಸ್ಸಿನವರು ಬೆನ್ನು ತಟ್ಟಿ ಹೇಳಿಕೊಳ್ಳುತ್ತಾರೆ ಆದರೆ ಅಂತಹ ಬ್ರಿಟಿಷರ ಸಹೋದರರ ಬೆನ್ನ ಹಿಂದೆಯೇ ದೋಸ್ತಿ ಸರ್ಕಾರ ಮಾಡಿ ಮತ್ತೆ ಕೆಲ ಕಾಂಗ್ರೆಸ್ ನಾಯಕರು ನಾಮಪತ್ರ ಸಲ್ಲಿಸಲು ಇಂದೇ ಹೋಗ್ತಾರಲ್ಲ ಇಂಥವರಿಗೆ ಏನನ್ನ ಬೇಕು ಅಂತ ಟೀಕಿಸಿದರು. ಇನ್ನು ಕುಟುಂಬ ರಾಜಕಾರಣದ ವಿರುದ್ಧ ದನಿಯೆತ್ತುವವರು ಬಿಜೆಪಿಗೆ ಬನ್ನಿ. ಈಗಾಗಲೇ ಬಿ ಎಂ ರಸ್ತೆ ಯನ್ನು ಹೊಡೆದು ಅಲ್ಲಿದ್ದ ಬಡ ಕಾರ್ಮಿಕರ ಬೀದಿಪಾಲು ಮಾಡಿದ್ದಾರೆ ಸಕಲೇಶಪುರದ ರಸ್ತೆಯನ್ನು ಹೊಡೆಯುವ ಮೂಲಕ ಬಡವರ ಹೊಟ್ಟೆಯ ಮೇಲೆ ಹೊಡೆದಿರುವ ಇಂತಹವರ ಕುಟುಂಬ ರಾಜಕಾರಣ ಬೇಕಾ ಅಥವಾ ನಿಮ್ಮ ದಿಂದ ನಿಟ್ಟುಸಿರು ಬಿಡುವಂತೆ ಮೋದಿ ಸರ್ಕಾರ ಬೇಕು ಎಂಬುದನ್ನು ಯೋಚನೆ ಮಾಡಿ ನಿರ್ಧಾರಕ್ಕೆ ಬನ್ನಿ ಅಂತ ಸಲಹೆ ನೀಡಿದರು. ಇಷ್ಟೇ ಅಲ್ಲದೆ ಶಾಸಕನ ಮನೆಗೆ ನುಗ್ಗಿ ಮನೆಗೆ ಕಲ್ಲಿನಿಂದ ಹೊಡೆಯುವ ಸಂಸ್ಕೃತಿಯಿರುವ ಕುಟುಂಬ ರಾಜಕಾರಣ ಮಾಡುತ್ತಿರುವ ಅವರು ನಿಮ್ಮನ್ನು ನಿಮ್ಮನ್ನ ಏನು ಮಾಡಬಹುದು ಎಂಬುದನ್ನು ನಾವು ಯೋಚನೆ ಮಾಡಬೇಕಾಗಿದೆ. ಈ ಬಾರಿ ಕಾಂಗ್ರೆಸ್ ನ ಶೇ.10 ವೋಟು ಜೆಡಿಎಸ್ ಗೆ ಹೋಗಬಹುದು. ಆದರೆ ಇನ್ನುಳಿದಂತೆ ಶೇ.20ರಷ್ಟು ಮತಗಳು ಹಾಗೂ ನಮ್ಮಲ್ಲಿರುವ 35ರಷ್ಟು ಮತಗಳು ಖಂಡಿತ ಬಿಜೆಪಿಗೆ ಬರುತ್ತೆ. ಹಾಗಾಗಿ ನಾವು ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ. ಬಿಜೆಪಿ ಹಾಸನದಲ್ಲಿ ಗಿಡವಾಗಿ ಇಲ್ಲ ಅದು ಮರವಾಗಿದೆ ಎಂಬುದನ್ನು ಈ ಚುನಾವಣೆ ಮೂಲಕ ತೋರಿಸೋಣ ಅಂತ ರೇವಣ್ಣ ಸವಾಲ್ ಎಸೆದರು. ನೋ ಚುನಾವಣೆ ಸಂದರ್ಭದಲ್ಲೂ ಕೂಡ ಕಾರ್ಯಕರ್ತರು ಮನೆ ಮನೆಗೆ ತೆರಳದೆ ಕೇವಲ ಕಾಂಗ್ರೆಸ್ ಮುಖಂಡರ ಮನೆಗಳಿಗೆ ಹೋಗಿ ಹಾರ ಹಾಕಿ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹರಿಬಿಟ್ಟು ಗೆದ್ದೆ ಎಂದು ಬೀಗುತ್ತಿದ್ದಾರೆ. ಅವರು ಏಪ್ರಿಲ್ 17ರವರೆಗೆ ಫೇಸ್ಬುಕ್ಕು ವಾಟ್ಸಾಪ್ ನಲ್ಲಿ ಅವರೇ ಗೆಲ್ಲಲಿ. ಆದ್ರೆ 18ರ ರಂದು ಮಾತ್ರ ಬಿಜೆಪಿ ಗೆಲ್ಲಿಸುವ ಮೂಲಕ ಹಾಸನದಲ್ಲಿ ಇತಿಹಾಸ ಸೃಷ್ಟಿಸೋಣ ಎಂದ್ರು. ಬೈಟ್: ಪ್ರೀತಂಗೌಡ, ಬಿಜೆಪಿ ಶಾಸಕ, ಹಾಸನ


Body:0


Conclusion:ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.