ETV Bharat / state

ರೈತನ ಕಣ್ಣಲ್ಲಿ ನೀರು ತರಿಸಿದ ಈರುಳ್ಳಿ!

ಗದಗ ಜಿಲ್ಲೆಯ ಡಂಬಳ ಗ್ರಾಮದ ರೈತ ಬೆಳೆದ 200 ಚೀಲದಷ್ಟು ಈರುಳ್ಳಿಗೆ ಬೆಲೆಯಿಲ್ಲದೇ ರೈತ ಸರ್ಕಾರದ ನೆರವು ಕೋರಿದ್ದಾನೆ.

author img

By

Published : Apr 15, 2020, 8:14 PM IST

Farmers' hardship without the price of onions
ರೈತನ ಕಣ್ಣಲ್ಲಿ ನೀರು ತರಿಸಿದ ಈರುಳ್ಳಿ..ಬೆಲೆಯಿಲ್ಲದೆ ಕಂಗಾಲು

ಗದಗ: ಜಿಲ್ಲೆಯ ಡಂಬಳ ಗ್ರಾಮದ ಹೈದರಸಾಬ್ ಥಾಂಬೋಟಿ ಎಂಬ ರೈತ 2 ಎಕರೆ ಪ್ರದೇಶದಲ್ಲಿ ಬೆಳೆದ 200 ಚೀಲದಷ್ಟು ಈರುಳ್ಳಿ ಮಾರಲಾಗದೇ ಕಂಗಲಾಗಿದ್ದಾನೆ.

ಇವರು ಮನೆಯಲ್ಲಿರುವ ಬಂಗಾರದ ಒಡವೆಗಳನ್ನ ಅಡವಿಟ್ಟು 6 ಲಕ್ಷ ಹಣ ಹೊಂದಿಸಿ ಬೆಳೆ ಬೆಳೆದಿದ್ದರು. ಸುಮಾರು 2ರಿಂದ 3 ಲಕ್ಷ ರೂಪಾಯಿ ಬೆಲೆಬಾಳುವ ಈರುಳ್ಳಿ ಚೀಲವೊಂದಕ್ಕೆ ಈಗ 200ರಿಂದ 300 ರೂಪಾಯಿಗೆ ಕೇಳುತ್ತಿದ್ದಾರೆ. ಇಷ್ಟಕ್ಕೇ ಮಾರಿದರೆ ವಾಹನದ ಬಾಡಿಗೆ ಸಹ ಕಟ್ಟೋಕಾಗಲ್ಲ ಎನ್ನುತ್ತಾರೆ ರೈತ.

ಸರ್ಕಾರ ತಮ್ಮ ಕಷ್ಟಕ್ಕೆ ಸ್ಪಂದಿಸಿ, ತಾವು ಬೆಳೆದ ಬೆಳೆಗೆ ಸೂಕ್ತ ಬೆಲೆ ಒದಗಿಸಲು ಮನವಿ ಮಾಡಿದ್ದಾರೆ.

ಗದಗ: ಜಿಲ್ಲೆಯ ಡಂಬಳ ಗ್ರಾಮದ ಹೈದರಸಾಬ್ ಥಾಂಬೋಟಿ ಎಂಬ ರೈತ 2 ಎಕರೆ ಪ್ರದೇಶದಲ್ಲಿ ಬೆಳೆದ 200 ಚೀಲದಷ್ಟು ಈರುಳ್ಳಿ ಮಾರಲಾಗದೇ ಕಂಗಲಾಗಿದ್ದಾನೆ.

ಇವರು ಮನೆಯಲ್ಲಿರುವ ಬಂಗಾರದ ಒಡವೆಗಳನ್ನ ಅಡವಿಟ್ಟು 6 ಲಕ್ಷ ಹಣ ಹೊಂದಿಸಿ ಬೆಳೆ ಬೆಳೆದಿದ್ದರು. ಸುಮಾರು 2ರಿಂದ 3 ಲಕ್ಷ ರೂಪಾಯಿ ಬೆಲೆಬಾಳುವ ಈರುಳ್ಳಿ ಚೀಲವೊಂದಕ್ಕೆ ಈಗ 200ರಿಂದ 300 ರೂಪಾಯಿಗೆ ಕೇಳುತ್ತಿದ್ದಾರೆ. ಇಷ್ಟಕ್ಕೇ ಮಾರಿದರೆ ವಾಹನದ ಬಾಡಿಗೆ ಸಹ ಕಟ್ಟೋಕಾಗಲ್ಲ ಎನ್ನುತ್ತಾರೆ ರೈತ.

ಸರ್ಕಾರ ತಮ್ಮ ಕಷ್ಟಕ್ಕೆ ಸ್ಪಂದಿಸಿ, ತಾವು ಬೆಳೆದ ಬೆಳೆಗೆ ಸೂಕ್ತ ಬೆಲೆ ಒದಗಿಸಲು ಮನವಿ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.