ETV Bharat / state

ಗದಗದಲ್ಲಿ ಸರ್ಕಾರಿ ಜಾಗ ಒತ್ತುವರಿ.. ನೋಟಿಸ್​ಗೆ​ ಬಗ್ಗದವರ ಕಟ್ಟಡದ ಮೇಲೆ ಜೆಸಿಬಿ ಸವಾರಿ

author img

By

Published : Jun 5, 2022, 9:08 PM IST

ಗದಗ-ಬೆಟಗೇರಿ ನಗರಸಭೆಯ 12 ನೇ ವಾರ್ಡ್​ನಲ್ಲಿ ನಗರಸಭೆಯ ಆಸ್ತಿಯನ್ನು ಅತಿಕ್ರಮಣ ಮಾಡಿ ನಿರ್ಮಿಸಲಾದ ಕಟ್ಟಡಗಳನ್ನ ಜೆಸಿಬಿ ಮೂಲಕ ತೆರವುಗೊಳಿಸಲಾಯ್ತು.

ಸರ್ಕಾರದ ಒತ್ತುವರಿ ಜಾಗ ಜೆಸಿಬಿ ಮೂಲಕ ತೆರವು
ಸರ್ಕಾರದ ಒತ್ತುವರಿ ಜಾಗ ಜೆಸಿಬಿ ಮೂಲಕ ತೆರವು

ಗದಗ: ಸರ್ಕಾರಿ ಆಸ್ತಿ ಅಂದ್ರೆ ಹೇಳೋರು ಕೇಳೋರು ಯಾರೂ ಇಲ್ಲ ಅಂತಾ ಗುಳುಂ ಮಾಡೋರೆ ಸಂಖ್ಯೆ ಹೆಚ್ಚಾಗಿದೆ. ಯಾರೂ ಬೇಕಾದರೂ ಒತ್ತುವರಿ ಮಾಡಿಕೊಳ್ಳಬಹುದು ಅನ್ನುವ ಪರಿಸ್ಥಿತಿ ಇತ್ತು. ಆದರೆ, ಇಲ್ಲಿನ ಅಧಿಕಾರಿಗಳು ಅದಕ್ಕೆ ಬ್ರೇಕ್ ಹಾಕ್ತಿದ್ದಾರೆ. ನಗರದಲ್ಲಿ ಅತಿಕ್ರಮಣವಾಗಿರೋ ನಗರಸಭೆ ಆಸ್ತಿಯನ್ನ ಗುರುತಿಸಿ ತೆರವು ಕಾರ್ಯಾಚರಣೆ ಮಾಡಲಾಗ್ತಿದೆ.

ಸರ್ಕಾರದ ಒತ್ತುವರಿ ಜಾಗ ಜೆಸಿಬಿ ಮೂಲಕ ತೆರವು

ಗದಗ-ಬೆಟಗೇರಿ ನಗರಸಭೆಯ 12 ನೇ ವಾರ್ಡ್​ನಲ್ಲಿ ನಗರಸಭೆಯ ಆಸ್ತಿಯನ್ನು ಅತಿಕ್ರಮಣ ಮಾಡಿ ನಿರ್ಮಿಸಲಾದ ಕಟ್ಟಡಗಳನ್ನ ಜೆಸಿಬಿ ಮೂಲಕ ತೆರವುಗೊಳಿಸಲಾಯ್ತು. ನಗರಸಭೆ ಮತ್ತು ರೈಲ್ವೆ ಇಲಾಖೆಯ ಆಸ್ತಿಯನ್ನು ಪ್ರಭಾವಿಗಳು ಒತ್ತುವರಿ ಮಾಡಿದ್ದರು.

ಈ ಸಂಬಂಧ ನಗರಸಭೆ ಮತ್ತು ರೈಲ್ವೆ ಇಲಾಖೆಯಿಂದ ಒತ್ತುವರಿ ಮಾಡಿದ್ದವರಿಗೆ ನೋಟಿಸ್ ಜಾರಿ ಮಾಡಿ, ತೆರವು ಮಾಡುವಂತೆ ಹೇಳಲಾಗಿತ್ತು. ಆದರೆ ನೋಟಿಸ್ ಗೆ ಬಗ್ಗದಿದ್ದಕ್ಕೆ ನಗರಸಭೆ ಹಾಗೂ ರೈಲ್ವೆ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ ತೆರವುಗೊಳಿಸಲಾಗಿದೆ.

ಓದಿ: ದಟ್ಟ ಅರಣ್ಯದ ನಡುವೆ ಪುಟ್ಟ ಶಾಲೆ: ಪಾಠದ ಜೊತೆ ಪರಿಸರ ಜ್ಞಾನ ನೀಡುವ ದೇಗುಲ

ಗದಗ: ಸರ್ಕಾರಿ ಆಸ್ತಿ ಅಂದ್ರೆ ಹೇಳೋರು ಕೇಳೋರು ಯಾರೂ ಇಲ್ಲ ಅಂತಾ ಗುಳುಂ ಮಾಡೋರೆ ಸಂಖ್ಯೆ ಹೆಚ್ಚಾಗಿದೆ. ಯಾರೂ ಬೇಕಾದರೂ ಒತ್ತುವರಿ ಮಾಡಿಕೊಳ್ಳಬಹುದು ಅನ್ನುವ ಪರಿಸ್ಥಿತಿ ಇತ್ತು. ಆದರೆ, ಇಲ್ಲಿನ ಅಧಿಕಾರಿಗಳು ಅದಕ್ಕೆ ಬ್ರೇಕ್ ಹಾಕ್ತಿದ್ದಾರೆ. ನಗರದಲ್ಲಿ ಅತಿಕ್ರಮಣವಾಗಿರೋ ನಗರಸಭೆ ಆಸ್ತಿಯನ್ನ ಗುರುತಿಸಿ ತೆರವು ಕಾರ್ಯಾಚರಣೆ ಮಾಡಲಾಗ್ತಿದೆ.

ಸರ್ಕಾರದ ಒತ್ತುವರಿ ಜಾಗ ಜೆಸಿಬಿ ಮೂಲಕ ತೆರವು

ಗದಗ-ಬೆಟಗೇರಿ ನಗರಸಭೆಯ 12 ನೇ ವಾರ್ಡ್​ನಲ್ಲಿ ನಗರಸಭೆಯ ಆಸ್ತಿಯನ್ನು ಅತಿಕ್ರಮಣ ಮಾಡಿ ನಿರ್ಮಿಸಲಾದ ಕಟ್ಟಡಗಳನ್ನ ಜೆಸಿಬಿ ಮೂಲಕ ತೆರವುಗೊಳಿಸಲಾಯ್ತು. ನಗರಸಭೆ ಮತ್ತು ರೈಲ್ವೆ ಇಲಾಖೆಯ ಆಸ್ತಿಯನ್ನು ಪ್ರಭಾವಿಗಳು ಒತ್ತುವರಿ ಮಾಡಿದ್ದರು.

ಈ ಸಂಬಂಧ ನಗರಸಭೆ ಮತ್ತು ರೈಲ್ವೆ ಇಲಾಖೆಯಿಂದ ಒತ್ತುವರಿ ಮಾಡಿದ್ದವರಿಗೆ ನೋಟಿಸ್ ಜಾರಿ ಮಾಡಿ, ತೆರವು ಮಾಡುವಂತೆ ಹೇಳಲಾಗಿತ್ತು. ಆದರೆ ನೋಟಿಸ್ ಗೆ ಬಗ್ಗದಿದ್ದಕ್ಕೆ ನಗರಸಭೆ ಹಾಗೂ ರೈಲ್ವೆ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ ತೆರವುಗೊಳಿಸಲಾಗಿದೆ.

ಓದಿ: ದಟ್ಟ ಅರಣ್ಯದ ನಡುವೆ ಪುಟ್ಟ ಶಾಲೆ: ಪಾಠದ ಜೊತೆ ಪರಿಸರ ಜ್ಞಾನ ನೀಡುವ ದೇಗುಲ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.