ಗದಗ : ಲಾಕ್ಡೌನ್ ಪರಿಣಾಮ ದೆಹಲಿಯಿಂದ ನಗರಕ್ಕೆ ಬಂದಿರೋ ಗೊಂಬೆ ಮಾರಾಟ ಮಾಡುವವರ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿದೆ, ಗುಡಿಸಲಿನ ಮುಂದೆ ಗೊಂಬೆ ನೇತು ಹಾಕಿದ್ದಾರೆ, ಆದರೆ ಗೊಂಬೆ ಕೊಳ್ಳಲು ಯಾರೂ ಬರುತ್ತಿಲ್ಲ ಹಾಗಾಗಿ ಹೊತ್ತಿನ ಊಟಕ್ಕೂ ಕಷ್ಟಪಡುವಂತಾಗಿದೆ ಇವರ ಸ್ಥಿತಿ.
ಗುಡಿಸಲಿನ ಮುಂದೆ ಮತ್ತೊಬ್ಬರ ಮನವನ್ನು ನಗಿಸೋ ಗೊಂಬೆಗಳು ನಗುತ್ತಿವೆ. ಆದರೆ, ಗೊಂಬೆ ಮಾರುವವರ ಜೀವನ ಅಳುತ್ತಿದೆ. ಹದಿನೈದು ದಿನಗಳ ಮೇಲಾಯಿತು ಹೊಟ್ಟೆಗೆ ಸರಿಯಾದ ಊಟ ಮಾಡಿ, ದುಡಿಮೆ ಇಲ್ಲದೇ ಮನಸ್ಸಿಗೆ ನೆಮ್ಮದಿಯಿಲ್ಲಾ ಎನ್ನುವುದು ಈ ಗೊಂಬೆ ವ್ಯಾಪಾರಿಗಳ ಅಳಲು.