ETV Bharat / state

ಅಕಾಲಿಕ ಮಳೆಯಿಂದ ಬೆಳೆ ನಾಶ: ಧಾರವಾಡದಲ್ಲಿ ಯುವ ರೈತರ ಸರಣಿ ಆತ್ಮಹತ್ಯೆ

ಧಾರವಾಡ ಜಿಲ್ಲೆಯಲ್ಲಿ ಅಕಾಲಿಕ ಮಳೆಯಿಂದ ಸಾಕಷ್ಟು ಬೆಳೆ ಹಾನಿಯಾಗಿದೆ. ಪರಿಣಾಮ, ಮಾಡಿದ ಸಾಲ ತೀರಿಸಲಾಗದೆ ಕಂಗೆಟ್ಟು ಯುವ ರೈತರು ಆತ್ಮಹತ್ಯೆಯ ದಾರಿ ತುಳಿಯುತ್ತಿದ್ದಾರೆ.

author img

By

Published : Mar 9, 2022, 4:34 PM IST

Dharwad young farmers are committing suicide due to loss of crops
ಬೆಳೆ ಹಾನಿನಿಂದ ಧಾರವಾಡದಲ್ಲಿ ಯುವ ರೈತರ ಸರಣಿ ಅತ್ಮಹತ್ಯೆ

ಹುಬ್ಬಳ್ಳಿ: ಅಕಾಲಿಕೆ ಮಳೆಯಿಂದ ಜಿಲ್ಲೆಯಲ್ಲಿ ಬೆಳೆ ನೆಲಕಚ್ಚಿದೆ. ಅಳಿದುಳಿದಿರುವ ಬೆಳೆಗೆ ಸರಿಯಾದ ಬೆಲೆ ಸಿಗದ ಹತಾಶೆಯಿಂದ ಯುವ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ನಡೆಯುತ್ತಿವೆ.


ನವೆಂಬರ್ ತಿಂಗಳಿನಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ ಸುಮಾರು 14 ಯುವ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೋವಿಡ್ ಶುರುವಾದ ಬಳಿಕ ಸಾಕಷ್ಟು ಯುವಕರು ಕೃಷಿಯತ್ತ ಮುಖ ಮಾಡಿದ್ದರು. ಆದರೆ ಕೃಷಿಗೆ ಮಾಡಿರುವ ಸಾಲ ತೀರಿಸಲಾಗದೆ ಭವಿಷ್ಯದ ಬದುಕಿನ‌ ದಾರಿಯೂ ಸಾವಿಗೆ ಶರಣಾಗುತ್ತಿದ್ದಾರೆ ಎಂದು ತಿಳಿದುಬಂದಿದೆ.

ಮಳೆಗೆ ಜಿಲ್ಲೆಯಲ್ಲಿ ಮೆಣಸು, ಕಡಲೆ, ಹತ್ತಿ, ಗೋವಿನಜೋಳ ಬೆಳೆ ಹಾಳಾಗಿತ್ತು. ಅದರಲ್ಲೂ ಸಣ್ಣ ಹಿಡುವಳಿದಾರರು ಸಾಲದ ಸುಳಿಗೆ ಸಿಲುಕಿ‌ ಪರದಾಡುತ್ತಿದ್ದಾರೆ. ಅಕಾಲಿಕ ವರ್ಷಧಾರೆಯಿಂದ 1,17,389 ಹೆಕ್ಟೇರ್ ಪ್ರದೇಶದ ಕೃಷಿ ಬೆಳೆ, 14,67,880 ಹೆಕ್ಟೇರ್ ಪ್ರದೇಶದ ತೋಟಗಾರಿಕಾ ಬೆಳೆ ನೀರಿನಲ್ಲಿ ಕೊಚ್ಚಿ ಹೋಗಿದೆ. 49,601 ಹೆಕ್ಟೇರ್ ಹತ್ತಿ, 16,251 ಹೆಕ್ಟೇರ್ ಜೋಳ, 9,347 ಹೆಕ್ಟೇರ್ ಭತ್ತ, 11,960 ಹೆಕ್ಟೇರ್ ಮೆಣಸಿನಕಾಯಿ, 2,300 ಹೆಕ್ಟೇರ್ ಈರುಳ್ಳಿ ಕೂಡ ನಾಶವಾಗಿದೆ.

ಧಾರವಾಡದಲ್ಲಿ 3, ಹುಬ್ಬಳ್ಳಿಯಲ್ಲಿ 1, ಕುಂದಗೋಳದಲ್ಲಿ 1, ನವಲಗುಂದದಲ್ಲಿ 6, ಅಣ್ಣಿಗೇರಿ ತಾಲೂಕಿನಲ್ಲಿ ಮೂವರು ಸೇರಿದಂತೆ ಇದುವರೆಗೆ 14 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ನಾನು ಜನರಿಗೋಸ್ಕರ ಕೆಲಸ ಮಾಡುತ್ತೇನೆ, ಕ್ರೆಡಿಟ್​​​ಗಾಗಿ ಅಲ್ಲ: ಸಂಸದೆ ಸುಮಲತಾ ಅಂಬರೀಶ್

ಹುಬ್ಬಳ್ಳಿ: ಅಕಾಲಿಕೆ ಮಳೆಯಿಂದ ಜಿಲ್ಲೆಯಲ್ಲಿ ಬೆಳೆ ನೆಲಕಚ್ಚಿದೆ. ಅಳಿದುಳಿದಿರುವ ಬೆಳೆಗೆ ಸರಿಯಾದ ಬೆಲೆ ಸಿಗದ ಹತಾಶೆಯಿಂದ ಯುವ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ನಡೆಯುತ್ತಿವೆ.


ನವೆಂಬರ್ ತಿಂಗಳಿನಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ ಸುಮಾರು 14 ಯುವ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೋವಿಡ್ ಶುರುವಾದ ಬಳಿಕ ಸಾಕಷ್ಟು ಯುವಕರು ಕೃಷಿಯತ್ತ ಮುಖ ಮಾಡಿದ್ದರು. ಆದರೆ ಕೃಷಿಗೆ ಮಾಡಿರುವ ಸಾಲ ತೀರಿಸಲಾಗದೆ ಭವಿಷ್ಯದ ಬದುಕಿನ‌ ದಾರಿಯೂ ಸಾವಿಗೆ ಶರಣಾಗುತ್ತಿದ್ದಾರೆ ಎಂದು ತಿಳಿದುಬಂದಿದೆ.

ಮಳೆಗೆ ಜಿಲ್ಲೆಯಲ್ಲಿ ಮೆಣಸು, ಕಡಲೆ, ಹತ್ತಿ, ಗೋವಿನಜೋಳ ಬೆಳೆ ಹಾಳಾಗಿತ್ತು. ಅದರಲ್ಲೂ ಸಣ್ಣ ಹಿಡುವಳಿದಾರರು ಸಾಲದ ಸುಳಿಗೆ ಸಿಲುಕಿ‌ ಪರದಾಡುತ್ತಿದ್ದಾರೆ. ಅಕಾಲಿಕ ವರ್ಷಧಾರೆಯಿಂದ 1,17,389 ಹೆಕ್ಟೇರ್ ಪ್ರದೇಶದ ಕೃಷಿ ಬೆಳೆ, 14,67,880 ಹೆಕ್ಟೇರ್ ಪ್ರದೇಶದ ತೋಟಗಾರಿಕಾ ಬೆಳೆ ನೀರಿನಲ್ಲಿ ಕೊಚ್ಚಿ ಹೋಗಿದೆ. 49,601 ಹೆಕ್ಟೇರ್ ಹತ್ತಿ, 16,251 ಹೆಕ್ಟೇರ್ ಜೋಳ, 9,347 ಹೆಕ್ಟೇರ್ ಭತ್ತ, 11,960 ಹೆಕ್ಟೇರ್ ಮೆಣಸಿನಕಾಯಿ, 2,300 ಹೆಕ್ಟೇರ್ ಈರುಳ್ಳಿ ಕೂಡ ನಾಶವಾಗಿದೆ.

ಧಾರವಾಡದಲ್ಲಿ 3, ಹುಬ್ಬಳ್ಳಿಯಲ್ಲಿ 1, ಕುಂದಗೋಳದಲ್ಲಿ 1, ನವಲಗುಂದದಲ್ಲಿ 6, ಅಣ್ಣಿಗೇರಿ ತಾಲೂಕಿನಲ್ಲಿ ಮೂವರು ಸೇರಿದಂತೆ ಇದುವರೆಗೆ 14 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ನಾನು ಜನರಿಗೋಸ್ಕರ ಕೆಲಸ ಮಾಡುತ್ತೇನೆ, ಕ್ರೆಡಿಟ್​​​ಗಾಗಿ ಅಲ್ಲ: ಸಂಸದೆ ಸುಮಲತಾ ಅಂಬರೀಶ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.