ETV Bharat / state

ಶೂಲವಾದ ಸಾಲ: ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ!

author img

By

Published : Nov 16, 2019, 6:12 PM IST

ಆರ್ಥಿಕ‌ ಮುಗ್ಗಟ್ಟಿನಿಂದ ಸಾಲ ಮಾಡಿ ಸರಿಯಾಗಿ ಬಡ್ಡಿ ನೀಡಿದರೂ ಸಹ ಸಾಲ ನೀಡಿದವನ ಕಿರಕುಳದಿಂದ ಬೇಸತ್ತು ಮಹಿಳೆಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹುಬ್ಬಳ್ಳಿ ನಗರದಲ್ಲಿ ನಡೆದಿದೆ.

ಶೂಲವಾದ ಸಾಲ

ಹುಬ್ಬಳ್ಳಿ: ಆರ್ಥಿಕ‌ ಮುಗ್ಗಟ್ಟಿನಿಂದ ಸಾಲ ಮಾಡಿ ಸರಿಯಾಗಿ ಬಡ್ಡಿ ನೀಡಿದರೂ ಸಹ ಸಾಲ ನೀಡಿದವನ ಕಿರಕುಳದಿಂದ ಬೇಸತ್ತು ಮಹಿಳೆಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹುಬ್ಬಳ್ಳಿ ನಗರದಲ್ಲಿ ನಡೆದಿದೆ.

ಶೂಲವಾದ ಸಾಲ

ನಗರದ ಆರ್​ಜಿಎಸ್ ಕಾಲೋನಿ ನಿವಾಸಿಗಳಾದ ಶೀತಲ್​ ಮತ್ತು ಯಲ್ಲಪ್ಪ ದಂಪತಿ ಕೂಲಿ ನಾಲಿ ಮಾಡಿ‌ ಸಂಸಾರದ ನೌಕೆ‌ ಸಾಗಿಸುತ್ತಿದ್ದರು. ಆದರೆ ಹಣದ ಮುಗ್ಗಟ್ಟಿನಿಂದ ಅದೇ ಏರಿಯಾದ ಪ್ರಶಾಂತ ಮೇಲಾ ಎಂಬುವರ ಬಳಿ ಸಾಲ ಮಾಡಿದ್ದರು. ಮೊದಲು 2%ರಷ್ಟು ಬಡ್ಡಿ ನೀಡಬೇಕೆಂದು ಹೇಳಿದ್ದ ಪ್ರಶಾಂತ, ತದನಂತರ 10% ಬಡ್ಡಿ ನೀಡುವಂತೆ ಕಿರುಕುಳ ನೀಡಿದ್ದಾನೆ. ಆದ್ರೂ ಕಷ್ಟ ಪಟ್ಟು ಬಡ್ಡಿ ನೀಡುತ್ತಿದ್ದರು. ಆದ್ರೆ ಕಳೆದ ತಿಂಗಳು ಬಡ್ಡಿ ಹಣ ನೀಡದ ಕಾರಣ‌ ಶೀತಲ್ ಹಾಗೂ ಆಕೆಯ ಪತಿ ಯಲ್ಲಪ್ಪನನ್ನು ಮನೆಯಲ್ಲಿ ಕೂಡಿ ಹಾಕಿ ಕಿರುಕುಳ‌ ನೀಡಿದ್ದ ಎಂದು ಆರೋಪಿಸಲಾಗಿದೆ.

ಪ್ರಶಾಂತ್​ ಕಿರುಕುಳದಿಂದ ಬೇಸತ್ತ ಶೀತಲ್​ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಶೀತಲ್​ಳನ್ನು ತಕ್ಷಣ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಎರಡು ದಿನಗಳ‌ ಕಾಲ ಐಸಿಯೂನಲ್ಲಿ ಚಿಕಿತ್ಸೆ ಪಡೆದು ವಾರ್ಡ್​ಗೆ ಶಿಫ್ಟ್ ಮಾಡಲಾಗಿದೆ. ಆದ್ರು ವೈದ್ಯರು ಶೀತಲ್ ಕಂಡಿಷನ್ ಇನ್ನೂ ಕ್ರಿಟಿಕಲ್ ಇದೆ ಎಂದಿದ್ದಾರೆ. ಈ ಬಗ್ಗೆ ಕೇಶ್ವಾಪುರ ಪೊಲೀಸರನ್ನು ಕೇಳಿದ್ರೆ, ಪ್ರಕರಣ ಸದ್ಯ ನಮ್ಮ ಗಮನಕ್ಕೆ ಬಂದಿದೆ. ಕೂಡಲೇ ನಾವು ತನಿಖೆ ನಡೆಸುತ್ತೇವೆ ‌ಎಂದಿದ್ದಾರೆ.

ಹುಬ್ಬಳ್ಳಿ: ಆರ್ಥಿಕ‌ ಮುಗ್ಗಟ್ಟಿನಿಂದ ಸಾಲ ಮಾಡಿ ಸರಿಯಾಗಿ ಬಡ್ಡಿ ನೀಡಿದರೂ ಸಹ ಸಾಲ ನೀಡಿದವನ ಕಿರಕುಳದಿಂದ ಬೇಸತ್ತು ಮಹಿಳೆಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹುಬ್ಬಳ್ಳಿ ನಗರದಲ್ಲಿ ನಡೆದಿದೆ.

ಶೂಲವಾದ ಸಾಲ

ನಗರದ ಆರ್​ಜಿಎಸ್ ಕಾಲೋನಿ ನಿವಾಸಿಗಳಾದ ಶೀತಲ್​ ಮತ್ತು ಯಲ್ಲಪ್ಪ ದಂಪತಿ ಕೂಲಿ ನಾಲಿ ಮಾಡಿ‌ ಸಂಸಾರದ ನೌಕೆ‌ ಸಾಗಿಸುತ್ತಿದ್ದರು. ಆದರೆ ಹಣದ ಮುಗ್ಗಟ್ಟಿನಿಂದ ಅದೇ ಏರಿಯಾದ ಪ್ರಶಾಂತ ಮೇಲಾ ಎಂಬುವರ ಬಳಿ ಸಾಲ ಮಾಡಿದ್ದರು. ಮೊದಲು 2%ರಷ್ಟು ಬಡ್ಡಿ ನೀಡಬೇಕೆಂದು ಹೇಳಿದ್ದ ಪ್ರಶಾಂತ, ತದನಂತರ 10% ಬಡ್ಡಿ ನೀಡುವಂತೆ ಕಿರುಕುಳ ನೀಡಿದ್ದಾನೆ. ಆದ್ರೂ ಕಷ್ಟ ಪಟ್ಟು ಬಡ್ಡಿ ನೀಡುತ್ತಿದ್ದರು. ಆದ್ರೆ ಕಳೆದ ತಿಂಗಳು ಬಡ್ಡಿ ಹಣ ನೀಡದ ಕಾರಣ‌ ಶೀತಲ್ ಹಾಗೂ ಆಕೆಯ ಪತಿ ಯಲ್ಲಪ್ಪನನ್ನು ಮನೆಯಲ್ಲಿ ಕೂಡಿ ಹಾಕಿ ಕಿರುಕುಳ‌ ನೀಡಿದ್ದ ಎಂದು ಆರೋಪಿಸಲಾಗಿದೆ.

ಪ್ರಶಾಂತ್​ ಕಿರುಕುಳದಿಂದ ಬೇಸತ್ತ ಶೀತಲ್​ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಶೀತಲ್​ಳನ್ನು ತಕ್ಷಣ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಎರಡು ದಿನಗಳ‌ ಕಾಲ ಐಸಿಯೂನಲ್ಲಿ ಚಿಕಿತ್ಸೆ ಪಡೆದು ವಾರ್ಡ್​ಗೆ ಶಿಫ್ಟ್ ಮಾಡಲಾಗಿದೆ. ಆದ್ರು ವೈದ್ಯರು ಶೀತಲ್ ಕಂಡಿಷನ್ ಇನ್ನೂ ಕ್ರಿಟಿಕಲ್ ಇದೆ ಎಂದಿದ್ದಾರೆ. ಈ ಬಗ್ಗೆ ಕೇಶ್ವಾಪುರ ಪೊಲೀಸರನ್ನು ಕೇಳಿದ್ರೆ, ಪ್ರಕರಣ ಸದ್ಯ ನಮ್ಮ ಗಮನಕ್ಕೆ ಬಂದಿದೆ. ಕೂಡಲೇ ನಾವು ತನಿಖೆ ನಡೆಸುತ್ತೇವೆ ‌ಎಂದಿದ್ದಾರೆ.

Intro:ಹುಬ್ಬಳ್ಳಿ-03

Anchor
ಆ ದಂಪತಿ ಕೂಲಿ ನಾಲಿ ಮಾಡಿ‌ ಸಂಸಾರದ ನೌಕೆ‌ ಸಾಗಿಸುತ್ತಿದ್ದರು, ಆದ್ರೆ ಆರ್ಥಿಕ‌ ಮುಗ್ಗಟ್ಟಿನಿಂದ ಅವರು ಆತನ‌ ಬಳಿ‌ ಸಾಲ ಮಾಡಿದ್ದರು. ಸಾಲಕ್ಕೆ‌ ಬಡ್ಡಿ ನೀಡುತ್ತಿದ್ರು ದಂಪತಿಗಳನ್ನ ಆ ದಂಧೆಕೋರ ಇನ್ನಿಲ್ಲದ ಕಿರುಕುಳ ನೀಡಿದ. ಹೀಗಾಗಿ ನೊಂದ ಜೀವ ಕಿರುಕುಳ ತಾಳಲಾರದೇ ವಿಷ ಸೇವಿಸಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾಳೆ.

Voice over..

GFX in
ಮೀಟರ್ ಬಡ್ಡಿ ದಂದೆಕೋರ ಕಿರುಕುಳ....!

ಮನನೊಂದ ಮಹಿಳೆಯಿಂದ‌ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ
....!
Gfx out

ಆಸ್ಪತ್ರೆಯ ಬೆಡ್ ಮೇಲೆ‌ ಸಾವು ಬದುಕಿನ ಮಧ್ಯೆ ಹೋರಾಡುತ್ತಿರೋ ಮಹಿಳೆ...ಹೆಂಡತಿ ಪರಸ್ಥಿತಿ‌‌ ನೋಡಿ ಆತಂಕದಲ್ಲಿರೋ ಪತಿ.
ಯಸ್.. ಇಂತೆದೆಲ್ಲಾ ದೃಶ್ಯಗಳ ಕಂಡು ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ.‌ ಅಂದಹಾಗೇ ಇಲ್ಲಿ ಆಸ್ಪತ್ರೆಯ ಬೆಡ್ ಮೇಲೆ ಸಾವು ಬದುಕಿನ ಮಧ್ಯೆ ಹೋರಾಡುತ್ತಿರೋ ಮಹಿಳೆಯ ಹೆಸರು ಶಿತಲ್ ಇಂಚಲ್ ಹುಬ್ಬಳ್ಳಿಯ ಆರ್ ಜಿಎಸ್ ಕಾಲೋನಿ ನಿವಾಸಿ.‌ ಈಕೆ‌ ತನ್ನ ಪತಿ ಜೊತೆ‌ ಸೇರಿ ಕೂಲಿ ನಾಲಿ ಮಾಡಿಕೊಂಡು ಜೀವನ‌ ಸಾಗಿತ್ತಿದ್ದಳು, ಆದ್ರೆ ಜೀವನದಲ್ಲಿ ಬಂದ‌ ಕಷ್ಟಕ್ಕೆ ಅದೇ ಏರಿಯಾದ ಪ್ರಶಾಂತ ಮೇಲಾ ಎಂಬುವರ ಬಳಿ ಅಲ್ಪ ಸ್ವಲ್ಪ ಸಾಲ‌ ಮಾಡಿದ್ದರು. ‌ಮೊದ ಮೊದಲು ಪ್ರತಿಶತಃ 2ರಷ್ಟು ಬಡ್ಡಿ ನೀಡಬೇಕೆಂದು ಹೇಳಿದ್ದ ಪ್ರಶಾಂತ ತದನಂತರ 10 ಪರ್ಸೆಂಟ್ ನೀಡುವಂತೆ ಕಿರುಕುಳ ನೀಡಿದ್ದಾನೆ. ಆದ್ರೂ ಕಷ್ಟ ಪಟ್ಟು ಬಡ್ಡಿ ನೀಡುತ್ತಿದ್ದರು. ಆದ್ರೆ ಕಳೆದ ತಿಂಗಳು ಬಡ್ಡಿ ಹಣ ನೀಡದಕ್ಕೆ‌ ಶೀತಲ್ ಹಾಗೂ ಆಕೆಯ ಪತಿಯನ್ನ ಮನೆಯಲ್ಲಿ ಕೂಡಿ ಹಾಕಿ ಕಿರುಕುಳ‌ ನೀಡಿದ್ದನಂತೆ. ಆತನ ಕೈಕಾಲು ಹಿಡಿದು ಶಿಥಲ್ ಪತಿ ಅಲ್ಲಿಂದ ತನ್ನ ಪತ್ನಿ ಕರೆದುಕೊಂಡು ಬಂದಿದ್ದ . ಆದ್ರು ಮತ್ತೆ ಕಿರುಕುಳ‌ ನೀಡಿದ್ದಕ್ಕೆ ಮನನೊಂದು ಶೀತಲ್ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

ಬೈಟ್ - ಯಲ್ಲಪ್ಪ, ಶೀತಲ್‌ ಪತಿ.
Voice over..

ಸಧ್ಯ ಕಳೆದರೆಡೂ ದಿನಗಳಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆತುತ್ತಿರುವ ಶೀತಲ್, ಎರಡೂ ದಿನಗಳ‌ ಕಾಲ ಐಸಿಯೂ ನಲ್ಲ ಚಿಕಿತ್ಸೆ ಪಡೆದು ವಾಡ್೯ ಗೆ ಶಿಫ್ಟ್ ಮಾಡಲಾಗಿದೆ, ಆದ್ರು ವೈದ್ಯರು ಶೀತಲ್ ಕಂಡಿಷನ್ ಇನ್ನು ಕ್ರಿಟಿಕಲ್ ಇದೆ ಎನ್ನುವ ಮಾಹಿತಿ ನೀಡಿದ್ದಾರೆ. ಆದ್ರೆ ಇಷ್ಟೊಂದು ಪ್ರಮಾಣದಲ್ಲಿ ತಾವು ತೆಗೆದುಕೊಂಡ‌ ಅಸಲಿಗೆ ಬಡ್ಡಿ ನೀಡಿದ್ರು ಈ ಮೀಟರ್ ಬಡ್ಡಿ ಕುಳ ಮಾತ್ರ ದಂಪತಿಗೆ ಇನ್ನಿಲ್ಲದೆ ಕಿರುಕುಳ‌ ನೀಡುತ್ತಿದ್ದಾನಂತೆ, ಹೀಗಾಗೆ ನಮಗೆ ರಕ್ಷಣೆ ನೀಬೇಕು ಎನ್ನುತ್ತಾನೆ ಶೀತಲ್ ಪತಿ.

ಬೈಟ್ - ಯಲ್ಲಪ್ಪ, ಶೀತಲ್ ಪತಿ


Voice over

ಸಧ್ಯ ಈ ಬಗ್ಗೆ ಕೇಶ್ಬಾಪುರ ಪೊಲೀಸರನ್ನ‌ ಕೇಳಿದ್ರೆ ಪ್ರಕರಣ ಸಧ್ಯ ನಮ್ಮ ಗಮನಕ್ಕೆ ಬಂದಿದ್ದು, ಕೂಡಲೆ ನಾವು ತನಿಖೆ ನಡೆಸುತ್ತವೆ ‌ಎನ್ನುತ್ತಾರೆ. ಆದ್ರೆ ಖಾಕಿ ಈ ಕೆಲಸ‌ ಮೊದಲೇ ಮಾಡಿದ್ದರೆ ಈ ದಂಪತಿಗಳು ಇಷ್ಟೊಂದು ಕಷ್ಟ ಅನುಭವಿಸಬೇಕಾಗುತ್ತಿರಲಿಲ್ಲ.
_________________________________________________________________________

H B Gaddad
Etv BHARAT HubballiBody:H B GaddadConclusion:Etv hubli

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.