ಧಾರವಾಡ : ವೀರ ಸಾವರ್ಕರ ಅಭಿಮಾನಿ ಬಳಗದ ವತಿಯಿಂದ ಗುಪ್ತಗಾಮಿನಿಯಾದ ಶಾಲ್ಮಲಾ ನದಿಗೆ ಪೂಜೆ ಸಲ್ಲಿಸಿ ಆ ನೀರನ್ನು ಅಯೋಧ್ಯೆಯಲ್ಲಿ ನಡೆಯಲಿರುವ ರಾಮಮಂದಿರ ನಿರ್ಮಾಣದ ಪೂಜಾ ಕಾರ್ಯಕ್ರಮಕ್ಕೆ ಕಳುಹಿಸಿಕೊಡಲಾಯಿತು.
ಶಾಲ್ಮಲಾ ನದಿ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಇಲ್ಲಿನ ಸೋಮೇಶ್ವರ ದೇವಸ್ಥಾನ ದಕ್ಷಿಣ ಕಾಶಿ ಎಂದೇ ಖ್ಯಾತಿ ಪಡೆದಿದೆ. ಈ ದೇವಸ್ಥಾನದ ಸೋಮೇಶ್ವರ ಕುಂಡಕ್ಕೆ ಗುಪ್ತಗಾಮಿನಿಯಾಗಿ ಹರಿದು ಬರುವ ನದಿಯ ಹೆಸರೆ ಶಾಲ್ಮಲಾ.. ಈ ನದಿ ನೀರನ್ನು ಇದೀಗ ಅಯೋಧ್ಯೆಗೆ ಕಳುಹಿಸಿಕೊಡಲಾಗಿದೆ.