ETV Bharat / state

ಬಿಸಿಲಿನ ತಾಪಮಾನಕ್ಕೆ ಅಲ್ಲಲ್ಲಿ ವಿವಿಪ್ಯಾಟ್ ಕೈಕೊಟ್ಟಿವೆ: ಜಿಲ್ಲಾಧಿಕಾರಿ ಗುರುದತ್ತ ಹೆಗಡೆ

author img

By

Published : May 10, 2023, 7:13 PM IST

ಕೆಲವೊಂದು ಕಡೆ ಬೆಳಿಗ್ಗೆ ಮಷಿನ್​ಗೆ ತೊಂದರೆ ಆಗಿದೆ. ಇನ್ನುಳಿದ ಕಡೆ ವಿವಿ ಪ್ಯಾಟ್​ ಕೈ ಕೊಟ್ಟಿದೆ ಎಂದು ಧಾರವಾಡ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಗುರುದತ್ತ ಹೆಗಡೆ
ಜಿಲ್ಲಾಧಿಕಾರಿ ಗುರುದತ್ತ ಹೆಗಡೆ

ಜಿಲ್ಲಾಧಿಕಾರಿ ಗುರುದತ್ತ ಹೆಗಡೆ

ಧಾರವಾಡ: ಬಿಸಿಲಿನ ತಾಪಮಾನಕ್ಕೆ ಅಲ್ಲಲ್ಲಿ ವಿವಿಪ್ಯಾಟ್ ಕೈಕೊಟ್ಟಿವೆ. ಧಾರವಾಡ ಜಿಲ್ಲೆಯಲ್ಲಿ 34 ವಿವಿ ಪ್ಯಾಟ್ ಬದಲಾವಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.

ಧಾರವಾಡ ವನಿತಾ ಶಾಲೆಯ ಮತದಾನ ಕೇಂದ್ರಕ್ಕೆ ಭೇಟಿ ನೀಡಿದ ಬಳಿಕ‌ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆಲವೊಂದು ಕಡೆ ಬೆಳಿಗ್ಗೆ ಮಷಿನ್​ಗೆ ತೊಂದ್ರೆ ಆಗಿದೆ. ಇನ್ನುಳಿದ ಕಡೆ ವಿವಿ ಪ್ಯಾಟ್​ ಕೈ ಕೊಟ್ಟಿದೆ. ಸ್ಥಳೀಯ ಪಕ್ಷದ ಎಜೆಂಟರ್​ ಸಮ್ಮುಖದಲ್ಲಿಯೇ ಬದಲಾವಣೆ ಮಾಡಲಾಗಿದೆ. ಎರಡು ಕಂಟ್ರೋಲ್ ಯುನಿಟ್‌ ಮೋಕ್​ಫೋಲ್ ಬದಲಾವಣೆ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.

ಮತದಾರರ ಪಟ್ಟಿಯನ್ನು ಚೆಕ್ ಮಾಡಿಲ್ಲ: ಮತದಾರರ ಪಟ್ಟಿಯಿಂದ ಹೆಸರು ಕೈ ಬಿಟ್ಟ ವಿಚಾರಕ್ಕೆ ಮಾತನಾಡಿದ ಅವರು, ಈ ಬಗ್ಗೆ ಕೂಡ ನಮಗೆ ದೂರು ಬಂದಿದೆ. ಕಳೆದ ಆರು ತಿಂಗಳ ಹಿಂದೆ ಆಗಿದ್ದು, ಮತದಾರರ ಪಟ್ಟಿ ಇಲ್ಲದೇ ಇರೋರ ಬಗ್ಗೆ ಮಾಹಿತಿ ತಿಳಿಸಲು ಹೇಳಲಾಗಿತ್ತು. ಕಳೆದ 6 ತಿಂಗಳಲ್ಲಿ 40 ಸಾವಿರ ಮತದಾರರನ್ನು ಪಟ್ಟಿಯಲ್ಲಿ ಸೇರಿಸಲಾಗಿತ್ತು. ಕೆಲವೊಬ್ಬರು ಮತದಾರರ ಪಟ್ಟಿಯನ್ನು ಚೆಕ್ ಮಾಡಿಲ್ಲ. ಕೆಲವೊಬ್ಬರದು ಬೇರೆ ಕಡೆ ಹೆಸರು ಇರುವುದರಿಂದ ಪಟ್ಟಿಯಿಂದ ಕೈ ಬಿಡಲಾಗಿದೆ.‌ ಈ ಬಾರಿ ಚುನಾವಣೆ ಮತ ಹಾಕಲು ಅವರಿಗೆ ಅವಕಾಶ ಇಲ್ಲ, ಫಾರಂ ಸಿಕ್ಸ್ ಅಪ್ಲೈ ಮಾಡಿದ್ರೆ ಸೇರಿಸಲಾಗುವುದು ಎಂದರು.

ಯಾರಿಗೆ‌ ಮತ ಹಾಕಿರೊದಾಗಿ ಹೇಳೋದು ತಪ್ಪು: ಮತದಾನ ಮಾಡಿರೋ ವಿಡಿಯೋ ಬಹಿರಂಗ ಪಡಿಸಿದ ವಿಚಾರದ ಕುರಿತು ಮಾತನಾಡಿದ ಅವರು, ಈ ಬಗ್ಗೆ ಎಲ್ಲರಲ್ಲೂ ಜಾಗೃತಿ ಮೂಡಿಸಲಾಗಿತ್ತು. ಮತ ಹಾಕಿದ್ದನ್ನು ವಿಡಿಯೋ ಮಾಡೋದು, ಯಾರಿಗೆ‌ ಮತ ಹಾಕಿರೊದಾಗಿ ಹೇಳೋದು ತಪ್ಪು. ಎಲ್ಲರೂ ಒಳ್ಳೆಯ ಮನೋಭಾವದಿಂದ ಮತದಾನ ಮಾಡಿ ಎಂದು ಮನವಿ ಮಾಡಿಕೊಂಡರು.

ಸರತಿ ಸಾಲಿನಲ್ಲಿ ನಿಂತು ಬೇಸತ್ತು ಮನೆಗೆ ವಾಪಸಾದ ಮತದಾರರು: ಇನ್ನೊಂದೆಡೆ ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ ರಾಜ್ಯದೆಲ್ಲೆಡೆ ಬಿರುಸಿನ ಮತದಾನ ನಡೆಯುತ್ತಿದೆ. ಮತದಾರರು ದಿನವಿಡೀ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡುತ್ತಿದ್ದಾರೆ. ಆದರೆ ಕೆಲವೆಡೆ ಗಂಟೆಗಟ್ಟಲೇ ಸರತಿ ಸಾಲಿನಲ್ಲಿ ನಿಂತರೂ ಮತದಾನ ಮಾಡಲು ಸಾಧ್ಯವಾಗದೇ ಪರದಾಡಿರುವ ಘಟನೆಗಳು ಸಹ ತಿಳಿದು ಬಂದಿದೆ. ಬೆಂಗಳೂರು ದಕ್ಷಿಣ ವಿಧಾನಸಭೆಯ ದೊಡ್ಡನಾಗಮಂಗಲ ಮತಗಟ್ಟೆ ಕೇಂದ್ರದಲ್ಲಿ ಸರತಿ ಸಾಲಿನಲ್ಲಿ ನಿಂತು ಬೇಸತ್ತ ಮತದಾರರು ಮತದಾನ ಮಾಡದೆ ಮನೆಗೆ ವಾಪಸಾಗಿರುವ ಘಟನೆಯೂ ನಡೆದಿದೆ.

ಸುಮಾರು ಎಂಟು ಸಾವಿರ ಮತದಾರರಿಗೆ ಒಂದೇ ಮತಕೇಂದ್ರ ನಿಗದಿಯಾಗಿರುವುದೆ ಈ ನೂಕು‌ನುಗ್ಗಲಿಗೆ ಕಾರಣ ಎಂದು ಮತದಾರರು ದೂರಿದ್ದಾರೆ. ಮತದಾನಕ್ಕಾಗಿ ಬೆಳಗ್ಗೆಯಿಂದ ಕಾದರೂ ಸಾಲು ಸಾಗುತ್ತಿಲ್ಲ. ದಿನವೆಲ್ಲ ಹೀಗೆ ಕಾಯುವುದು ಹೇಗೆ? ಎಂದು ಮತದಾರರು ಪ್ರಶ್ನಿಸಿದ್ದಾರೆ. ಎಲೆಕ್ಟ್ರಾನಿಕ್ ಸಿಟಿಯಲ್ಲಿ ವಲಸೆ ಮತದಾರರು ಹೆಚ್ಚಿರುವ ಕಾರಣ ಚುನಾವಣಾಧಿಕಾರಿಗಳು ಮತಕೇಂದ್ರ ನಿರ್ಧರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಹೆಚ್ಚುವರಿ ಮತ ಕೇಂದ್ರ ತೆರೆಯಲು ಒತ್ತಾಯಿಸಿದರೂ ಚುನಾವಣಾಧಿಕಾರಿಗಳು ಜಾಣ ಕಿವುಡುತನ ಪ್ರದರ್ಶಿಸುತ್ತಿದ್ದಾರೆಂದು ಮತದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಮತದಾನ ಮಾಡಲು ಸರತಿ ಸಾಲಿನಲ್ಲಿ ನಿಂತು ಬೇಸತ್ತು ಮನೆಗೆ ವಾಪಸಾದ ಮತದಾರರು!

ಜಿಲ್ಲಾಧಿಕಾರಿ ಗುರುದತ್ತ ಹೆಗಡೆ

ಧಾರವಾಡ: ಬಿಸಿಲಿನ ತಾಪಮಾನಕ್ಕೆ ಅಲ್ಲಲ್ಲಿ ವಿವಿಪ್ಯಾಟ್ ಕೈಕೊಟ್ಟಿವೆ. ಧಾರವಾಡ ಜಿಲ್ಲೆಯಲ್ಲಿ 34 ವಿವಿ ಪ್ಯಾಟ್ ಬದಲಾವಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.

ಧಾರವಾಡ ವನಿತಾ ಶಾಲೆಯ ಮತದಾನ ಕೇಂದ್ರಕ್ಕೆ ಭೇಟಿ ನೀಡಿದ ಬಳಿಕ‌ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆಲವೊಂದು ಕಡೆ ಬೆಳಿಗ್ಗೆ ಮಷಿನ್​ಗೆ ತೊಂದ್ರೆ ಆಗಿದೆ. ಇನ್ನುಳಿದ ಕಡೆ ವಿವಿ ಪ್ಯಾಟ್​ ಕೈ ಕೊಟ್ಟಿದೆ. ಸ್ಥಳೀಯ ಪಕ್ಷದ ಎಜೆಂಟರ್​ ಸಮ್ಮುಖದಲ್ಲಿಯೇ ಬದಲಾವಣೆ ಮಾಡಲಾಗಿದೆ. ಎರಡು ಕಂಟ್ರೋಲ್ ಯುನಿಟ್‌ ಮೋಕ್​ಫೋಲ್ ಬದಲಾವಣೆ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.

ಮತದಾರರ ಪಟ್ಟಿಯನ್ನು ಚೆಕ್ ಮಾಡಿಲ್ಲ: ಮತದಾರರ ಪಟ್ಟಿಯಿಂದ ಹೆಸರು ಕೈ ಬಿಟ್ಟ ವಿಚಾರಕ್ಕೆ ಮಾತನಾಡಿದ ಅವರು, ಈ ಬಗ್ಗೆ ಕೂಡ ನಮಗೆ ದೂರು ಬಂದಿದೆ. ಕಳೆದ ಆರು ತಿಂಗಳ ಹಿಂದೆ ಆಗಿದ್ದು, ಮತದಾರರ ಪಟ್ಟಿ ಇಲ್ಲದೇ ಇರೋರ ಬಗ್ಗೆ ಮಾಹಿತಿ ತಿಳಿಸಲು ಹೇಳಲಾಗಿತ್ತು. ಕಳೆದ 6 ತಿಂಗಳಲ್ಲಿ 40 ಸಾವಿರ ಮತದಾರರನ್ನು ಪಟ್ಟಿಯಲ್ಲಿ ಸೇರಿಸಲಾಗಿತ್ತು. ಕೆಲವೊಬ್ಬರು ಮತದಾರರ ಪಟ್ಟಿಯನ್ನು ಚೆಕ್ ಮಾಡಿಲ್ಲ. ಕೆಲವೊಬ್ಬರದು ಬೇರೆ ಕಡೆ ಹೆಸರು ಇರುವುದರಿಂದ ಪಟ್ಟಿಯಿಂದ ಕೈ ಬಿಡಲಾಗಿದೆ.‌ ಈ ಬಾರಿ ಚುನಾವಣೆ ಮತ ಹಾಕಲು ಅವರಿಗೆ ಅವಕಾಶ ಇಲ್ಲ, ಫಾರಂ ಸಿಕ್ಸ್ ಅಪ್ಲೈ ಮಾಡಿದ್ರೆ ಸೇರಿಸಲಾಗುವುದು ಎಂದರು.

ಯಾರಿಗೆ‌ ಮತ ಹಾಕಿರೊದಾಗಿ ಹೇಳೋದು ತಪ್ಪು: ಮತದಾನ ಮಾಡಿರೋ ವಿಡಿಯೋ ಬಹಿರಂಗ ಪಡಿಸಿದ ವಿಚಾರದ ಕುರಿತು ಮಾತನಾಡಿದ ಅವರು, ಈ ಬಗ್ಗೆ ಎಲ್ಲರಲ್ಲೂ ಜಾಗೃತಿ ಮೂಡಿಸಲಾಗಿತ್ತು. ಮತ ಹಾಕಿದ್ದನ್ನು ವಿಡಿಯೋ ಮಾಡೋದು, ಯಾರಿಗೆ‌ ಮತ ಹಾಕಿರೊದಾಗಿ ಹೇಳೋದು ತಪ್ಪು. ಎಲ್ಲರೂ ಒಳ್ಳೆಯ ಮನೋಭಾವದಿಂದ ಮತದಾನ ಮಾಡಿ ಎಂದು ಮನವಿ ಮಾಡಿಕೊಂಡರು.

ಸರತಿ ಸಾಲಿನಲ್ಲಿ ನಿಂತು ಬೇಸತ್ತು ಮನೆಗೆ ವಾಪಸಾದ ಮತದಾರರು: ಇನ್ನೊಂದೆಡೆ ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ ರಾಜ್ಯದೆಲ್ಲೆಡೆ ಬಿರುಸಿನ ಮತದಾನ ನಡೆಯುತ್ತಿದೆ. ಮತದಾರರು ದಿನವಿಡೀ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡುತ್ತಿದ್ದಾರೆ. ಆದರೆ ಕೆಲವೆಡೆ ಗಂಟೆಗಟ್ಟಲೇ ಸರತಿ ಸಾಲಿನಲ್ಲಿ ನಿಂತರೂ ಮತದಾನ ಮಾಡಲು ಸಾಧ್ಯವಾಗದೇ ಪರದಾಡಿರುವ ಘಟನೆಗಳು ಸಹ ತಿಳಿದು ಬಂದಿದೆ. ಬೆಂಗಳೂರು ದಕ್ಷಿಣ ವಿಧಾನಸಭೆಯ ದೊಡ್ಡನಾಗಮಂಗಲ ಮತಗಟ್ಟೆ ಕೇಂದ್ರದಲ್ಲಿ ಸರತಿ ಸಾಲಿನಲ್ಲಿ ನಿಂತು ಬೇಸತ್ತ ಮತದಾರರು ಮತದಾನ ಮಾಡದೆ ಮನೆಗೆ ವಾಪಸಾಗಿರುವ ಘಟನೆಯೂ ನಡೆದಿದೆ.

ಸುಮಾರು ಎಂಟು ಸಾವಿರ ಮತದಾರರಿಗೆ ಒಂದೇ ಮತಕೇಂದ್ರ ನಿಗದಿಯಾಗಿರುವುದೆ ಈ ನೂಕು‌ನುಗ್ಗಲಿಗೆ ಕಾರಣ ಎಂದು ಮತದಾರರು ದೂರಿದ್ದಾರೆ. ಮತದಾನಕ್ಕಾಗಿ ಬೆಳಗ್ಗೆಯಿಂದ ಕಾದರೂ ಸಾಲು ಸಾಗುತ್ತಿಲ್ಲ. ದಿನವೆಲ್ಲ ಹೀಗೆ ಕಾಯುವುದು ಹೇಗೆ? ಎಂದು ಮತದಾರರು ಪ್ರಶ್ನಿಸಿದ್ದಾರೆ. ಎಲೆಕ್ಟ್ರಾನಿಕ್ ಸಿಟಿಯಲ್ಲಿ ವಲಸೆ ಮತದಾರರು ಹೆಚ್ಚಿರುವ ಕಾರಣ ಚುನಾವಣಾಧಿಕಾರಿಗಳು ಮತಕೇಂದ್ರ ನಿರ್ಧರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಹೆಚ್ಚುವರಿ ಮತ ಕೇಂದ್ರ ತೆರೆಯಲು ಒತ್ತಾಯಿಸಿದರೂ ಚುನಾವಣಾಧಿಕಾರಿಗಳು ಜಾಣ ಕಿವುಡುತನ ಪ್ರದರ್ಶಿಸುತ್ತಿದ್ದಾರೆಂದು ಮತದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಮತದಾನ ಮಾಡಲು ಸರತಿ ಸಾಲಿನಲ್ಲಿ ನಿಂತು ಬೇಸತ್ತು ಮನೆಗೆ ವಾಪಸಾದ ಮತದಾರರು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.