ETV Bharat / state

ಸತತ ಮಳೆಗೆ ಆಲೂಗಡ್ಡೆ ಹಾಳು : ಸಂಕಷ್ಟದಲ್ಲಿ ಧಾರವಾಡದ ಅನ್ನದಾತರು!

author img

By

Published : Oct 18, 2019, 8:38 PM IST

Updated : Oct 18, 2019, 9:54 PM IST

ಇಷ್ಟು ವರ್ಷ ಬರಕ್ಕೆ ತುತ್ತಾಗಿದ್ದ ಧಾರವಾಡ ಜಿಲ್ಲೆಯಲ್ಲಿ ಅಕಾಲಿಕವಾಗಿ ಸುರಿದ ಬಾರಿ ಮಳೆಯಿಂದ ಇದೀಗ ರೈತರು ಕಂಗೆಟ್ಟಿದ್ದು, ಆಲೂ ಬೆಳೆದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ರೈತ

ಧಾರವಾಡ: ಜಿಲ್ಲೆಯಲ್ಲಿ ಮಳೆ ಎನ್ನುವುದು ರೈತರಿಗೆ ಬಹಳ‌ ತೊಂದರೆ ಉಂಟು ಮಾಡುತ್ತಿದೆ. ಸತತ ಬರಗಾಲದಿಂದ ಬೇಸತ್ತಿದ್ದ ಧಾರವಾಡದ ರೈತರು ಇದೀಗ‌ ಸುರಿದ ಮಳೆಗೆ ಬೇಸತ್ತು ಹೋಗಿದ್ದಾರೆ. ಅದರಲ್ಲೂ ಕೆಲ ತೋಟಗಾರಿಕೆ ಬೆಳೆ ಬೆಳೆದ ರೈತರ ಪಾಡಂತೂ ದೇವರೇ ಬಲ್ಲ ಎಂಬಂತಾಗಿದೆ ಈ ಕುರಿತು ಒಂದು ವಿಶೇಷ ವರದಿ ಇಲ್ಲಿದೆ.

ಆಲೂಗಡ್ಡೆ ಬೆಳೆದು ಸಂಕಷ್ಟಕ್ಕೆ ಸಿಲುಕಿದ ರೈತ

ಆಲೂಗಡ್ಡೆ ಬೆಳೆದು ಸಂಕಷ್ಟದಲ್ಲಿರುವ ರೈತನ ಹೆಸರು ಭೀಮಣ್ಣ ತಳಗೇರಿ. ಇವರು ಧಾರವಾಡದ ಕಮಲಾಪೂರ ನಿವಾಸಿ. ಇವರು ಹೊಲದಲ್ಲಿ ಬೆಳೆದ ಆಲೂಗಡ್ಡೆ ಸಂಪೂರ್ಣವಾಗಿ ಕೊಳೆತು ಹೋಗಿದೆ. ಇದೀಗ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತಾಗಿದೆ.

ತಮ್ಮ 15 ಎಕರೆ ಜಮೀನಿನಲ್ಲಿ ಆಲೂಗಡ್ಡೆ ಬೆಳೆದಿದ್ದ ಭೀಮಣ್ಣ ಇದೀಗ ಆಲೂಗಡ್ಡೆ ಯಾಕಾದರೂ ಜಮೀನಿಗೆ ಬಿತ್ತನೆ ಮಾಡಿದೇನೋ ಎನ್ನುತ್ತಿದ್ದಾರೆ. ಉತ್ತರ ಕರ್ನಾಟಕದಲ್ಲಿ ಎರಡು ತಿಂಗಳ ಹಿಂದೆ ಸುರಿದ ಬಾರೀ ಮಳೆ ಅನಾಹುತ ಸೃಷ್ಟಿ‌ ಮಾಡಿ ಸುಮ್ಮನಾಗಿತ್ತು. ಆದ್ರೆ ಇದೀಗ ಆವಾಗೊಮ್ಮೆ ಇವಾಗೊಮ್ಮೆ ಆಗುತ್ತಿರುವ ಮಳೆಯಿಂದ ಆಲೂಗಡ್ಡೆಗೆ ತಂಪು ಹಿಡಿದು ಇಡೀ ಹೊಲದಲ್ಲಿನ ಆಲೂಗಡ್ಡೆ ಕೊಳೆತು ಹೋಗುತ್ತಿರುವುದು ರೈತ ಭೀಮಣ್ಣನನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ.

ಜಿಲ್ಲೆಯಲ್ಲಿ ಒಟ್ಟು 1,300 ಹೆಕ್ಟೇರ್ ಪ್ರದೇಶದಲ್ಲಿ ಆಲೂಗಡ್ಡೆ ಬೆಳೆಯಲಾಗಿತ್ತು. ಧಾರವಾಡ ತಾಲೂಕಿನ ತಡಕೋಡ, ಹಂಗರಕಿ, ನರೇಂದ್ರ ಲಕಮಾಪೂರ ಹಾಗೂ ಕುಂದಗೋಳ ನವಲಗುಂದ ಭಾಗದಲ್ಲಿ ಹೆಚ್ಚು ಬೆಳೆಯಲಾಗುತ್ತೆ. ಹೀಗೆ ಆಲೂ‌ ಬೆಳೆದು ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದ ರೈತರ ಆಸೆಗೆ ತಣ್ಣೀರು ಎರಚಿದಂತಾಗಿದೆ.

ಒಟ್ಟಿನಲ್ಲಿ ‌ಇಷ್ಟು ವರ್ಷ ಬರಕ್ಕೆ ತುತ್ತಾಗಿದ್ದ ರೈತರಿಗೆ ಇದೀಗ ಬಾರಿ ಮಳೆ ಆಘಾತ ನೀಡಿದೆ. ಅದರಲ್ಲೂ ಜಿಲ್ಲೆಯ ಪ್ರಮುಖ ಬೆಳೆಯಾದ ಆಲೂಗಡ್ಡೆ ಈ ಬಾರೀ ಕೈಕೊಟ್ಟಿದೆ. ಇದರಿಂದಾಗಿ ಸಾವಿರಾರುವ ರೈತರ ಪಾಲಿಗೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಅನ್ನುವಂತಾಗಿದೆ. ಮಳೆ ಬರಲಿ‌ ಬರದೇ ಇರಲಿ ರೈತ ಮಾತ್ರ ಕಣ್ಣೀರಲ್ಲಿ ಕೈ ತೊಳೆಯುವುದು ಮಾತ್ರ ತಪ್ಪಿಲ್ಲ ಆದ್ರೆ ಇದೀಗ ಸರ್ಕಾರ ಇತ್ತ ಕಡೆ ಗಮನವಹಿಸಿ ಪರಿಹಾರ ಕೊಟ್ಟು ರೈತರ ಕಣ್ಣೀರು ಒರೆಸುವ ಕೆಲಸ ಮಾಡಬೇಕಿದೆ.

ಧಾರವಾಡ: ಜಿಲ್ಲೆಯಲ್ಲಿ ಮಳೆ ಎನ್ನುವುದು ರೈತರಿಗೆ ಬಹಳ‌ ತೊಂದರೆ ಉಂಟು ಮಾಡುತ್ತಿದೆ. ಸತತ ಬರಗಾಲದಿಂದ ಬೇಸತ್ತಿದ್ದ ಧಾರವಾಡದ ರೈತರು ಇದೀಗ‌ ಸುರಿದ ಮಳೆಗೆ ಬೇಸತ್ತು ಹೋಗಿದ್ದಾರೆ. ಅದರಲ್ಲೂ ಕೆಲ ತೋಟಗಾರಿಕೆ ಬೆಳೆ ಬೆಳೆದ ರೈತರ ಪಾಡಂತೂ ದೇವರೇ ಬಲ್ಲ ಎಂಬಂತಾಗಿದೆ ಈ ಕುರಿತು ಒಂದು ವಿಶೇಷ ವರದಿ ಇಲ್ಲಿದೆ.

ಆಲೂಗಡ್ಡೆ ಬೆಳೆದು ಸಂಕಷ್ಟಕ್ಕೆ ಸಿಲುಕಿದ ರೈತ

ಆಲೂಗಡ್ಡೆ ಬೆಳೆದು ಸಂಕಷ್ಟದಲ್ಲಿರುವ ರೈತನ ಹೆಸರು ಭೀಮಣ್ಣ ತಳಗೇರಿ. ಇವರು ಧಾರವಾಡದ ಕಮಲಾಪೂರ ನಿವಾಸಿ. ಇವರು ಹೊಲದಲ್ಲಿ ಬೆಳೆದ ಆಲೂಗಡ್ಡೆ ಸಂಪೂರ್ಣವಾಗಿ ಕೊಳೆತು ಹೋಗಿದೆ. ಇದೀಗ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತಾಗಿದೆ.

ತಮ್ಮ 15 ಎಕರೆ ಜಮೀನಿನಲ್ಲಿ ಆಲೂಗಡ್ಡೆ ಬೆಳೆದಿದ್ದ ಭೀಮಣ್ಣ ಇದೀಗ ಆಲೂಗಡ್ಡೆ ಯಾಕಾದರೂ ಜಮೀನಿಗೆ ಬಿತ್ತನೆ ಮಾಡಿದೇನೋ ಎನ್ನುತ್ತಿದ್ದಾರೆ. ಉತ್ತರ ಕರ್ನಾಟಕದಲ್ಲಿ ಎರಡು ತಿಂಗಳ ಹಿಂದೆ ಸುರಿದ ಬಾರೀ ಮಳೆ ಅನಾಹುತ ಸೃಷ್ಟಿ‌ ಮಾಡಿ ಸುಮ್ಮನಾಗಿತ್ತು. ಆದ್ರೆ ಇದೀಗ ಆವಾಗೊಮ್ಮೆ ಇವಾಗೊಮ್ಮೆ ಆಗುತ್ತಿರುವ ಮಳೆಯಿಂದ ಆಲೂಗಡ್ಡೆಗೆ ತಂಪು ಹಿಡಿದು ಇಡೀ ಹೊಲದಲ್ಲಿನ ಆಲೂಗಡ್ಡೆ ಕೊಳೆತು ಹೋಗುತ್ತಿರುವುದು ರೈತ ಭೀಮಣ್ಣನನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ.

ಜಿಲ್ಲೆಯಲ್ಲಿ ಒಟ್ಟು 1,300 ಹೆಕ್ಟೇರ್ ಪ್ರದೇಶದಲ್ಲಿ ಆಲೂಗಡ್ಡೆ ಬೆಳೆಯಲಾಗಿತ್ತು. ಧಾರವಾಡ ತಾಲೂಕಿನ ತಡಕೋಡ, ಹಂಗರಕಿ, ನರೇಂದ್ರ ಲಕಮಾಪೂರ ಹಾಗೂ ಕುಂದಗೋಳ ನವಲಗುಂದ ಭಾಗದಲ್ಲಿ ಹೆಚ್ಚು ಬೆಳೆಯಲಾಗುತ್ತೆ. ಹೀಗೆ ಆಲೂ‌ ಬೆಳೆದು ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದ ರೈತರ ಆಸೆಗೆ ತಣ್ಣೀರು ಎರಚಿದಂತಾಗಿದೆ.

ಒಟ್ಟಿನಲ್ಲಿ ‌ಇಷ್ಟು ವರ್ಷ ಬರಕ್ಕೆ ತುತ್ತಾಗಿದ್ದ ರೈತರಿಗೆ ಇದೀಗ ಬಾರಿ ಮಳೆ ಆಘಾತ ನೀಡಿದೆ. ಅದರಲ್ಲೂ ಜಿಲ್ಲೆಯ ಪ್ರಮುಖ ಬೆಳೆಯಾದ ಆಲೂಗಡ್ಡೆ ಈ ಬಾರೀ ಕೈಕೊಟ್ಟಿದೆ. ಇದರಿಂದಾಗಿ ಸಾವಿರಾರುವ ರೈತರ ಪಾಲಿಗೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಅನ್ನುವಂತಾಗಿದೆ. ಮಳೆ ಬರಲಿ‌ ಬರದೇ ಇರಲಿ ರೈತ ಮಾತ್ರ ಕಣ್ಣೀರಲ್ಲಿ ಕೈ ತೊಳೆಯುವುದು ಮಾತ್ರ ತಪ್ಪಿಲ್ಲ ಆದ್ರೆ ಇದೀಗ ಸರ್ಕಾರ ಇತ್ತ ಕಡೆ ಗಮನವಹಿಸಿ ಪರಿಹಾರ ಕೊಟ್ಟು ರೈತರ ಕಣ್ಣೀರು ಒರೆಸುವ ಕೆಲಸ ಮಾಡಬೇಕಿದೆ.

Intro:ಧಾರವಾಡ: ಜಿಲ್ಲೆಯಲ್ಲಿ ಮಳೆ ಎನ್ನುವುದು ರೈತರಿಗೆ ಬಹಳ‌ ತೊಂದರೆ ಉಂಟು ಮಾಡುತ್ತಿದೆ...ಸತತ ಬರಗಾಲದಿಂದ ಬೇಸತ್ತಿದ್ದ ಧಾರವಾಡದ ರೈತರು ಇದೀಗ‌ ಸುರಿದ ಮಳೆಗೆ ಬೇಸತ್ತು ಹೋಗಿದ್ದಾರೆ..‌‌...ಅದರಲ್ಲೂ ಕೆಲ ತೋಟಗಾರಿಕೆ ಬೆಳೆ ಬೆಳೆದ ರೈತರ ಪಾಡಂತೂ ದೇವರೇ ಬಲ್ಲ ಎಂಬಂತಾಗಿದೆ ಈ ಕುರಿತು ಒಂದು ವಿಶೇಷ ವರದಿ ಇಲ್ಲಿದೆ.....

ಹೌದು!!!! ಹೀಗೆ ಕೈಯಲ್ಲಿ ಆಲೂಗಡ್ಡೆ ಹಿಡಿದುಕೊಂಡು ನಿಂತಿರುವ ರೈತನ ಹೆಸರು ಭೀಮಣ್ಣ ತಳಗೇರಿ ಇವರು ಧಾರವಾಡದ ಕಮಲಾಪೂರ ನಿವಾಸಿ.....ಇವರು ಹೊಲದಲ್ಲಿ ಬೆಳೆದ ಆಲೂಗಡ್ಡೆಗೆ ಸಂಪೂರ್ಣವಾಗಿ ಕೊಳೆತು ಹೋಗಿದೆ......ಇದೀಗ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತಾಗಿದೆ ರೈತ ಭೀಮಣ್ಣನ ಗೋಳು...

ತಮ್ಮ ೧೫ ಎಕರೆ ಜಮೀನಿನಲ್ಲಿ ಆಲೂಗಡ್ಡೆ ಬೆಳೆದಿದ್ದ ಭೀಮಣ್ಣ ಇದೀಗ ಆಲೂಗಡ್ಡೆ ಯಾಕಾದರೂ ಜಮೀನಿಗೆ ಬಿತ್ತನೆ ಮಾಡಿದೇನೋ ಎನ್ನುತ್ತಿದ್ದಾರೆ.....ಉತ್ತರ ಕರ್ನಾಟಕದಲ್ಲಿ ಎರಡು ತಿಂಗಳ ಹಿಂದೆ ಸುರಿದ ಬಾರೀ ಮಳೆ ಅನಾಹುತ ಸೃಷ್ಟಿ‌ ಮಾಡಿ ಸುಮ್ಮನಾಗಿತ್ತು....ಆದ್ರೆ ಇದೀಗ ಅವಾಗೊಮ್ಮೆ ಇವಾಗೊಮ್ಮೆ ಆಗುತ್ತಿರುವ ಮಳೆಯಿಂದ ಆಲೂಗಡ್ಡೆಗೆ ತಂಪು ಹಿಡಿದು ಇಡೀ ಹೊಲದಲ್ಲಿನ ಆಲೂಗಡ್ಡೆ ಕೊಳೆತು ಹೋಗುತ್ತಿರುವುದು ರೈತ ಭೀಮಣ್ಣನ ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ..


Body:ಒಂದು ಎಕರೆ ಆಲೂಗಡ್ಡೆ ಬೆಳೆಯಲು ೪೦-೫೦ ಸಾವಿರ ಖರ್ಚು ಬರುತ್ತದೆ‌‌‌‌....ಇಂತದರಲ್ಲಿ ೧೫ ಎಕರೆಯಲ್ಲಿ ಆಲೂಗಡ್ಡೆ ಬೆಳೆದು ಒಂದು ನಯಾಪೈಸೆ ಲಾಭವಿಲ್ಲದೇ ತಲೆಮೇಲೆ ಕೈಹೊತ್ತು‌ ಕೂರುವಂತಾಗಿದೆ ರೈತ ಭೀಮಣ್ಣನ ಪಾಡು....೧೫ ಎಕರೆ ಜಮೀನಿನಲ್ಲಿ ಕೊಳೆತು ಹೋದ ಆಲೂಗಡ್ಡೆಯನ್ನು ‌೧೩ ಎಕರೆ ಹರಗಲಾಗಿದೆ....ಇನ್ನೂಳಿದ ಎರಡು ಎಕರೆ ಜಮೀನಿನಲ್ಲಿ ಉಳಿದ ಆಲೂವನ್ನು ತೆಗೆಯಲಾಗುತ್ತಿದೆ ಎನ್ನುತ್ತಾರೆ ರೈತ ಭೀಮಣ್ಣ...

ಜಿಲ್ಲೆಯಲ್ಲಿ ಒಟ್ಟು ೧೩೦೦ ಹೆಕ್ಟೇರ್ ಪ್ರದೇಶದಲ್ಲಿ ಆಲೂಗಡ್ಡೆ ಬೆಳೆಯಲಾಗಿತ್ತು...ಧಾರವಾಡ ತಾಲೂಕಿನ ತಡಕೋಡ, ಹಂಗರಕಿ, ನರೇಂದ್ರ ಲಕಮಾಪೂರ ಹಾಗೂ ಕುಂದಗೋಳ ನವಲಗುಂದ ಭಾಗದಲ್ಲಿ ಹೆಚ್ಚು ಬೆಳೆಯಲಾಗುತ್ತೆ...ಹೀಗೆ ಆಲೂ‌ ಬೆಳೆದ ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದ ರೈತರ ಆಸೆಗೆ ತಣ್ಣೀರು ಎರಚಿದಂತಾಗಿದೆ.....

ಒಟ್ಟಿನಲ್ಲಿ ‌ಇಷ್ಟು ವರ್ಷ ಬರಕ್ಕೆ ತುತ್ತಾಗಿದ್ದ ರೈತರಿಗೆ ಇದೀಗ ಬಾರಿ ಮಳೆ ಆಘಾತ ನೀಡಿದೆ...ಅದರಲ್ಲೂ ಜಿಲ್ಲೆಯ ಪ್ರಮುಖ ಬೆಳೆಯಾದ ಆಲೂಗಡ್ಡೆ ಈ ಬಾರೀ ಕೈಕೊಟ್ಟಿದೆ...ಇದರಿಂದಾಗಿ ಸಾವಿರಾರುವ ರೈತರ ಪಾಲಿಗೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಅನ್ನುವಂತಾಗಿದೆ...ಮಳೆ ಬರಲಿ‌ ಬರದೇ ಇರಲಿ ರೈತ ಮಾತ್ರ ಕಣ್ಣೀರಲ್ಲಿ ಕೈ ತೊಳೆಯುವುದು ಮಾತ್ರ ತಪ್ಪಿಲ್ಲ ಆದ್ರೆ ಇದೀಗ ಸರ್ಕಾರ ಇತ್ತ ಕಡೆ ಗಮನವಹಿಸಿ ಪರಿಹಾರ ಕೊಟ್ಟು ರೈತರ ಕಣ್ಣೀರು ಒರೆಸುವ ಕೆಲಸ ಮಾಡಬೇಕಿದೆ....


Conclusion:
Last Updated : Oct 18, 2019, 9:54 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.