ETV Bharat / state

ಮೈನವಿರೇಳಿಸಿದ NDRF ತಂಡದ ಅಣಕು ಪ್ರದರ್ಶನ

author img

By

Published : Oct 30, 2020, 5:01 PM IST

Updated : Oct 30, 2020, 7:41 PM IST

ಕಟ್ಟಡ ದುರಂತ ನಡೆದಾಗ ಅದರ ಅವಶೇಷಗಳಡಿ ಸಿಲುಕಿದ ಜನರನ್ನು ಯಾವ ರೀತಿ ರಕ್ಷಣೆ ಮಾಡಬೇಕು, ಕಟ್ಟಡದ ಮೇಲ್ಭಾಗದಲ್ಲಿ ಸಿಕ್ಕಿ ಹಾಕಿಕೊಂಡ ಜನರನ್ನು ರೋಪ್ ಮೂಲಕ ಯಾವ ರೀತಿ ಕೆಳಗೆ ಇಳಿಸಬೇಕು ಎಂಬುದರ ಕುರಿತು ಎನ್​​ಡಿಆರ್​ಎಫ್​ ತಂಡದವರು ಜನರಿಗೆ ತಮ್ಮ ಕಾರ್ಯವೈಖರಿ ಬಗ್ಗೆ ತಿಳಿಸಿಕೊಟ್ಟರು.

NDRF
ಎನ್​​ಡಿಆರ್​ಎಫ್​ ​ ತಂಡದ ಅಣುಕು ಪ್ರದರ್ಶನ

ಧಾರವಾಡ: ಎನ್​​ಡಿಆರ್​ಎಫ್​ ​ತಂಡವು ಕಟ್ಟಡ ದುರಂತ ನಡೆದಾಗ ಜನರನ್ನು ಹೇಗೆ ರಕ್ಷಿಸಬೇಕು ಎಂಬುದರ ಕುರಿತು ಅಣಕು ಪ್ರದರ್ಶನ ನಡೆಯಿತು.

ಜಿಲ್ಲಾಡಳಿತ ಹಾಗೂ ಹು-ಧಾ ಮಹಾನಗರ ಪಾಲಿಕೆ ಸೇರಿದಂತೆ ವಿವಿಧ ಇಲಾಖೆ ಸಹಯೋಗದಲ್ಲಿ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ಆವರಣದಲ್ಲಿ ಕಟ್ಟಡ ದುರಂತದ ಅಣಕು ಪ್ರದರ್ಶನ ಆಯೋಜಿಸಲಾಗಿತ್ತು. ಈ ಪ್ರದರ್ಶನವನ್ನು ಸ್ವತಃ ಜಿಲ್ಲಾಧಿಕಾರಿ ನಿತೇಶ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಕಾಂತ, ಮಹಾನಗರ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ಅವರು ಬಂದು ವೀಕ್ಷಿಸಿದರು.

ಎನ್​​ಡಿಆರ್​ಎಫ್​ ​ ತಂಡದ ಅಣುಕು ಪ್ರದರ್ಶನ

ಧಾರವಾಡದಲ್ಲಿ ಕಳೆದ ಬಾರಿ ಸಂಭವಿಸಿದ ದುರಂತ ಮುಂದೆಂದೂ ಆಗಬಾರದು, ಹಾಗೇನಾದರೂ ಆದಲ್ಲಿ ಯಾವ ರೀತಿ ಬೇಗ ಪ್ರತಿಕ್ರಿಯಿಸಬೇಕು ಎಂದು ಎನ್​​ಡಿಆರ್​ಎಫ್ (NDRF)​ ತಂಡದವರು ಮನವರಿಕೆ ಮಾಡಿಕೊಡಲು‌ ಜಿಲ್ಲಾಡಳಿತ ‌ಮುಂದಾಗಿದೆ.

ಇನ್ನೂ ಈ ಅಣಕು ಪ್ರದರ್ಶನದ ಬಗ್ಗೆ ಮಾಹಿತಿಯನ್ನು ಎನ್​​ಡಿಆರ್​ಎಫ್​ ತಂಡದ ಡೆಪ್ಯುಟಿ ಕಮಾಂಡೆಂಟ್ ಸುಖೇಂದ್ರ ದತ್ತಾ ನೀಡಿದರು. ರಾಷ್ಟ್ರಿಯ ವಿಪತ್ತು ನಿರ್ವಹಣಾ ತಂಡ, ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತದ ಸಂಯುಕ್ತಾಶ್ರಯದಲ್ಲಿ ಈ ಅಣಕು ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು. ಎನ್​​ಡಿಆರ್​ಎಫ್​ ತಂಡದವರು ನಡೆಸಿದ ರಕ್ಷಣಾ ಕಾರ್ಯವನ್ನು ಧಾರವಾಡದ ಜನತೆ ನೋಡಿ ಕಣ್ತುಂಬಿಕೊಂಡರು.

ಧಾರವಾಡ: ಎನ್​​ಡಿಆರ್​ಎಫ್​ ​ತಂಡವು ಕಟ್ಟಡ ದುರಂತ ನಡೆದಾಗ ಜನರನ್ನು ಹೇಗೆ ರಕ್ಷಿಸಬೇಕು ಎಂಬುದರ ಕುರಿತು ಅಣಕು ಪ್ರದರ್ಶನ ನಡೆಯಿತು.

ಜಿಲ್ಲಾಡಳಿತ ಹಾಗೂ ಹು-ಧಾ ಮಹಾನಗರ ಪಾಲಿಕೆ ಸೇರಿದಂತೆ ವಿವಿಧ ಇಲಾಖೆ ಸಹಯೋಗದಲ್ಲಿ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ಆವರಣದಲ್ಲಿ ಕಟ್ಟಡ ದುರಂತದ ಅಣಕು ಪ್ರದರ್ಶನ ಆಯೋಜಿಸಲಾಗಿತ್ತು. ಈ ಪ್ರದರ್ಶನವನ್ನು ಸ್ವತಃ ಜಿಲ್ಲಾಧಿಕಾರಿ ನಿತೇಶ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಕಾಂತ, ಮಹಾನಗರ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ಅವರು ಬಂದು ವೀಕ್ಷಿಸಿದರು.

ಎನ್​​ಡಿಆರ್​ಎಫ್​ ​ ತಂಡದ ಅಣುಕು ಪ್ರದರ್ಶನ

ಧಾರವಾಡದಲ್ಲಿ ಕಳೆದ ಬಾರಿ ಸಂಭವಿಸಿದ ದುರಂತ ಮುಂದೆಂದೂ ಆಗಬಾರದು, ಹಾಗೇನಾದರೂ ಆದಲ್ಲಿ ಯಾವ ರೀತಿ ಬೇಗ ಪ್ರತಿಕ್ರಿಯಿಸಬೇಕು ಎಂದು ಎನ್​​ಡಿಆರ್​ಎಫ್ (NDRF)​ ತಂಡದವರು ಮನವರಿಕೆ ಮಾಡಿಕೊಡಲು‌ ಜಿಲ್ಲಾಡಳಿತ ‌ಮುಂದಾಗಿದೆ.

ಇನ್ನೂ ಈ ಅಣಕು ಪ್ರದರ್ಶನದ ಬಗ್ಗೆ ಮಾಹಿತಿಯನ್ನು ಎನ್​​ಡಿಆರ್​ಎಫ್​ ತಂಡದ ಡೆಪ್ಯುಟಿ ಕಮಾಂಡೆಂಟ್ ಸುಖೇಂದ್ರ ದತ್ತಾ ನೀಡಿದರು. ರಾಷ್ಟ್ರಿಯ ವಿಪತ್ತು ನಿರ್ವಹಣಾ ತಂಡ, ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತದ ಸಂಯುಕ್ತಾಶ್ರಯದಲ್ಲಿ ಈ ಅಣಕು ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು. ಎನ್​​ಡಿಆರ್​ಎಫ್​ ತಂಡದವರು ನಡೆಸಿದ ರಕ್ಷಣಾ ಕಾರ್ಯವನ್ನು ಧಾರವಾಡದ ಜನತೆ ನೋಡಿ ಕಣ್ತುಂಬಿಕೊಂಡರು.

Last Updated : Oct 30, 2020, 7:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.