ಧಾರವಾಡ: ವಲಸೆ ಕಾರ್ಮಿಕರ ಆಶ್ರಯ ತಾಣಗಳಿಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಆರ್.ಎಸ್.ಚಿನ್ನಣ್ಣವರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
![Judge R.chinnanna who visited the shelters of migrant workers](https://etvbharatimages.akamaized.net/etvbharat/prod-images/kn-dwd-5-hostel-officer-visit-av-ka10001_05042020155938_0504f_1586082578_1072.jpg)
ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಲಾಕ್ಡೌನ್ ಘೋಷಣೆಯಾಗಿರುವ ಈ ಅವಧಿಯಲ್ಲಿ ದೇಶದ ವಿವಿಧ ಭಾಗಗಳು ಮತ್ತು ರಾಜ್ಯದ ನಾನಾ ಜಿಲ್ಲೆಗಳ ವಲಸೆ ಕಾರ್ಮಿಕರು ನಿರಾಶ್ರಿತರಾಗಬಾರದು ಎಂಬ ಕಾಳಜಿಯೊಂದಿಗೆ ಸರ್ಕಾರ ವಿವಿಧ ಹಾಸ್ಟೆಲ್ಗಳಲ್ಲಿ ಪ್ರಾರಂಭಿಸಿರುವ ವಲಸೆ ಕಾರ್ಮಿಕರ ಆಶ್ರಯ ತಾಣ ಆರಂಭಿಸಿದೆ. ಜಿಲ್ಲೆಯ ವಿವಿಧ 9 ಸ್ಥಳಗಳಲ್ಲಿ 315 ವಲಸೆ ಕಾರ್ಮಿಕರಿಗೆ ಊಟ, ವಸತಿ ಸೌಕರ್ಯ ಕಲ್ಪಿಸಲಾಗಿದ್ದು, ಸಪ್ತಾಪುರದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ (ಗೌರಿಶಂಕರ) ಹಾಸ್ಟೆಲ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ ( ಆದರ್ಶ) ಹಾಸ್ಟೆಲ್ ಹಾಗೂ ರಂಗಾಯಣಕ್ಕೆ ಆರ್.ಎಸ್.ಚಿನ್ನಣ್ಣವರ ಭೇಟಿ ನೀಡಿ, ಅಲ್ಲಿನ ಕಾರ್ಮಿಕರೊಂದಿಗೆ ಮಾತನಾಡಿದರು.
![Judge R.chinnanna who visited the shelters of migrant workers](https://etvbharatimages.akamaized.net/etvbharat/prod-images/kn-dwd-5-hostel-officer-visit-av-ka10001_05042020155938_0504f_1586082578_57.jpg)
ಒಂದೇ ಕೊಠಡಿಯಲ್ಲಿ ಬಹಳ ಜನ ಇರಬಾರದು. ನಿಗದಿಪಡಿಸಿದವರು ಮಾತ್ರ ಇರಬೇಕು. ಅನಗತ್ಯವಾಗಿ ಎಲ್ಲರೂ ಒಂದೇ ಕಡೆ ಸೇರಬಾರದು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಹಾಸ್ಟೆಲ್ ಸಿಬ್ಬಂದಿ ಕೂಡ ತಮ್ಮ ವೈಯಕ್ತಿಕ ಸ್ವಚ್ಛತೆ ಮತ್ತು ಆರೋಗ್ಯದ ಬಗ್ಗೆ ಎಚ್ಚರವಹಿಸಬೇಕು ಎಂದು ಸಲಹೆ ನೀಡಿದರು. ಅಲ್ಲದೇ ರಂಗಾಯಣದಲ್ಲಿರುವ 69 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರನ್ನು ಬಿಸಿಎಂ ಹಾಸ್ಟೆಲ್ಗೆ ಸ್ಥಳಾಂತರಿಸಲು ಸೂಚಿಸಿದರು.