ETV Bharat / state

ಐ.ಆರ್​.ಡಿ.ಎ.ಐ ಇದೀಗ ವಿಮಾ ಕಂಪನಿಗಳನ್ನು ನಿಯಂತ್ರಿಸುತ್ತಿದೆ: ಎಂ. ನಾರಾಯಣ ಹೆಗಡೆ

author img

By

Published : Nov 17, 2019, 11:20 AM IST

ಕೇಂದ್ರ ಸರ್ಕಾರದ ಅಂಗಸಂಸ್ಥೆಯಾದ ಐಆರ್​ಡಿಎಐ ವಿಮಾ ಕಂಪನಿಗಳನ್ನು ನಿಯಂತ್ರಣ ಮಾಡುತ್ತಿದ್ದು, ಇದೀಗ 2019 ರ ಕರಡನ್ನು ಸಿದ್ಧಪಡಿಸಿದೆ. ಈ ಕರಡಿನಿಂದ ಸ್ವತಂತ್ರ ಸರ್ವೇಯರ್​ಗೆ ಅನ್ಯಾಯವಾಗುತ್ತಿದ್ದು, ಅಲ್ಲದೇ ಬಹುಪಾಲು ಜನರು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ ಎಂದು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಇನ್ಶುರೆನ್ಸ್ ಸರ್ವೇಯರ್ಸ್ ಆ್ಯಂಡ್ ಲಾಸ್ ಅಸೋಶಿಯೇಷನ್ಸ್​ ಸದಸ್ಯ ಎಂ ನಾರಾಯಣ ಹೆಗಡೆ ಹೇಳಿದರು.

ಐ.ಆರ್​.ಡಿ.ಎ.ಐ ಇದೀಗ ವಿಮಾ ಕಂಪನಿಗಳನ್ನು ನಿಯಂತ್ರಣ ಮಾಡುತ್ತಿದೆ : ಎಮ್‌ ನಾರಾಯಣ ಹೆಗಡೆ

ಹುಬ್ಬಳ್ಳಿ: ಕೇಂದ್ರ ಸರ್ಕಾರದ ಅಂಗಸಂಸ್ಥೆಯಾದ ಐಆರ್​ಡಿಎಐ ವಿಮಾ ಕಂಪನಿಗಳನ್ನು ನಿಯಂತ್ರಣ ಮಾಡುತ್ತಿದ್ದು, ಇದೀಗ 2019 ರ ಕರಡನ್ನು ಸಿದ್ಧಪಡಿಸಿದೆ. ಈ ಕರಡಿನಿಂದ ಸ್ವತಂತ್ರ ಸರ್ವೇಯರ್​ಗೆ ಅನ್ಯಾಯವಾಗುತ್ತಿದೆ. ಅಲ್ಲದೇ ಬಹುಪಾಲು ಜನರು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ ಎಂದು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಇನ್ಶುರೆನ್ಸ್ ಸರ್ವೇಯರ್ಸ್ ಆ್ಯಂಡ್ ಲಾಸ್ ಅಸೋಶಿಯೇಷನ್​ ಸದಸ್ಯ ಎಂ ನಾರಾಯಣ ಹೆಗಡೆ ಹೇಳಿದ್ರು.

ಐ.ಆರ್​.ಡಿ.ಎ.ಐ ಇದೀಗ ವಿಮಾ ಕಂಪನಿಗಳನ್ನು ನಿಯಂತ್ರಣ ಮಾಡುತ್ತಿದೆ : ಎಂ ನಾರಾಯಣ ಹೆಗಡೆ

ನಗರದಲ್ಲಿಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಹೊಸ ಕರಡು ನಿಯಮ ಜಾರಿಯಾದರೆ ಖಾಸಗಿ ಕಂಪನಿಗಳಿಗೆ ಈಗಿರುವ ನಿರ್ಬಂಧಿತ 50 ಸಾವಿರ ಮಿತಿಯಿಂದ 75 ಸಾವಿರಕ್ಕೆ ಹೆಚ್ಚಿಸುವ ಪ್ರಸ್ತಾಪ ಇದಾಗಿದ್ದು, ಈ ನಿರ್ಧಾರದಿಂದ ಸ್ವತಂತ್ರ ಸರ್ವೇಯರ್​ಗಳಿಗೆ ಬಾರಿ ಅನ್ಯಾಯವಾಗಲಿದೆ. ಅಲ್ಲದೇ ಕೆಲವು ಖಾಸಗಿ ವಿಮಾ ಕಂಪನಿಗಳು ಕೇಂದ್ರ ಸರ್ಕಾರದ ಅಂಗಸಂಸ್ಥೆ ಐಆರ್​ಡಿಎಐಯ 64 ಯುಎಂನ ನಿಯಮಗಳನ್ನು ಪಾಲಿಸದೆ ಗ್ರಾಹಕರಿಗೆ ಮೋಸ ಮಾಡುತ್ತಿವೆ ಎಂದು ದೂರಿದರು.

ಐಆರ್ ಡಿಎಐ ಮತ್ತು ಜಿಐಪಿಎಸ್ ಎ ನಿಯಮಗಳ ಅನ್ವಯ ವಿಮಾ ಕಂಪನಿಗಳು ಅಪಘಾತವಾದ ವಾಹನಗಳ ದುರಸ್ತಿ ವೆಚ್ಚ 50 ಸಾವಿರ ರೂ.ಗಳಷ್ಟು ಇದ್ದಾಗ ವಿಮಾ ಕಂಪನಿಗಳು ಪರಿಶೀಲನೆಯನ್ನು ಸ್ವತಂತ್ರ ಸರ್ವೇಯರ್ ಅಥವಾ ಆಯಾ ವಿಮಾ ಸಿಬ್ಬಂದಿ ಮಾಡಬಹುದು. ಅದೇ 50 ಸಾವಿರಕ್ಕಿಂತ ಹೆಚ್ಚು ಇದ್ದಾಗ ಐಆರ್​ಡಿಎಐ ನ 64 ಯುಎಂ ನಿಯಮದಂತೆ ಕಡ್ಡಾಯವಾಗಿ ಸ್ವತಂತ್ರ ಸರ್ವೇಯರ್​ಗಳ ಮುಖೇನ ಪರಿಶೀಲಿಸಿ ಅವರು ಮಾಡಿದ ಶಿಫಾರಸ್ಸಿನಂತೆ ಗ್ರಾಹಕರಿಗೆ ಹಣ ಸಂದಾಯ ಮಾಡಿ, ಜಿಎಪಿಎಸ್​ಎ ಫೀಸ್ ಶೆಡ್ಯೂಲ್ ಪ್ರಕಾರ ಸರ್ವೇಯರ್​ಗೆ ಶುಲ್ಕ ಕೊಡಬೇಕೆಂಬ ನಿಯಮ ಇದೆ. ಆದ್ರೆ ಖಾಸಗಿ ವಿಮಾ ಕಂಪನಿಗಳು ಈ ಯಾವ ನಿಯಮಗಳನ್ನು ಪಾಲಿಸದೆ ಲಾಭಕ್ಕಾಗಿ ಯಾವುದೇ ಪರಿಶೀಲನೆಗೆ ಸಂಬಂಧಿಸಿದ ಅರ್ಹತೆಗಳಿಲ್ಲದ ತಮ್ಮ ಕಂಪನಿಗಳ ಕೆಲಸಾಗಾರರಿಂದಲೇ ವಾಹನಗಳ ಪರಿಶೀಲನೆ ಮಾಡಿಸಿ ಗ್ರಾಹಕರಿಗೆ ಮೋಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಘಟಕದ ಸದಸ್ಯರು 2018 ಜುಲೈ ನಲ್ಲಿ ಐಆರ್​ಡಿಎಐ ಅಧಿಕಾರಿಗಳಿಗೆ ಖಾಸಗಿ ಕಂಪನಿಗಳು ಮಾಡುತ್ತಿರುವ ಮೋಸದ ಬಗ್ಗೆ ಲಿಖಿತ ದೂರು ಸಲ್ಲಿಸಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನುಕ್ರಮ ಜರುಗಿಸುವಂತೆ ಆಗ್ರಹಿಸಲಾಗಿದೆ. ಅಲ್ಲದೇ 2019 ಸೆ.3 ರಂದು ಹುಬ್ಬಳ್ಳಿ ವಿಮಾ ಸಮೀಕ್ಷಕರ ನಿಯೋಗದೊಂದಿಗೆ ಹೈದರಾಬಾದ್​ಗೆ ಹೋಗಿ ಐಆರ್​ಡಿಎಐ ಚೇರ್ಮನ್ ಅವರಿಗೆ ಭೇಟಿ ಆಗಿ ಈ ಕುರಿತು ಮನವಿ ಸಲ್ಲಿಸಲಾಗಿದ್ದು, ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನಹರಿಸಿ 2019 ರ ಕರಡನ್ನು ಮತ್ತೊಮ್ಮೆ ಪರಿಶೀಲನೆಗೆ ಒಳಪಡಿಸಬೇಕೆಂದು ಆಗ್ರಹಿಸಿದರು.

ಹುಬ್ಬಳ್ಳಿ: ಕೇಂದ್ರ ಸರ್ಕಾರದ ಅಂಗಸಂಸ್ಥೆಯಾದ ಐಆರ್​ಡಿಎಐ ವಿಮಾ ಕಂಪನಿಗಳನ್ನು ನಿಯಂತ್ರಣ ಮಾಡುತ್ತಿದ್ದು, ಇದೀಗ 2019 ರ ಕರಡನ್ನು ಸಿದ್ಧಪಡಿಸಿದೆ. ಈ ಕರಡಿನಿಂದ ಸ್ವತಂತ್ರ ಸರ್ವೇಯರ್​ಗೆ ಅನ್ಯಾಯವಾಗುತ್ತಿದೆ. ಅಲ್ಲದೇ ಬಹುಪಾಲು ಜನರು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ ಎಂದು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಇನ್ಶುರೆನ್ಸ್ ಸರ್ವೇಯರ್ಸ್ ಆ್ಯಂಡ್ ಲಾಸ್ ಅಸೋಶಿಯೇಷನ್​ ಸದಸ್ಯ ಎಂ ನಾರಾಯಣ ಹೆಗಡೆ ಹೇಳಿದ್ರು.

ಐ.ಆರ್​.ಡಿ.ಎ.ಐ ಇದೀಗ ವಿಮಾ ಕಂಪನಿಗಳನ್ನು ನಿಯಂತ್ರಣ ಮಾಡುತ್ತಿದೆ : ಎಂ ನಾರಾಯಣ ಹೆಗಡೆ

ನಗರದಲ್ಲಿಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಹೊಸ ಕರಡು ನಿಯಮ ಜಾರಿಯಾದರೆ ಖಾಸಗಿ ಕಂಪನಿಗಳಿಗೆ ಈಗಿರುವ ನಿರ್ಬಂಧಿತ 50 ಸಾವಿರ ಮಿತಿಯಿಂದ 75 ಸಾವಿರಕ್ಕೆ ಹೆಚ್ಚಿಸುವ ಪ್ರಸ್ತಾಪ ಇದಾಗಿದ್ದು, ಈ ನಿರ್ಧಾರದಿಂದ ಸ್ವತಂತ್ರ ಸರ್ವೇಯರ್​ಗಳಿಗೆ ಬಾರಿ ಅನ್ಯಾಯವಾಗಲಿದೆ. ಅಲ್ಲದೇ ಕೆಲವು ಖಾಸಗಿ ವಿಮಾ ಕಂಪನಿಗಳು ಕೇಂದ್ರ ಸರ್ಕಾರದ ಅಂಗಸಂಸ್ಥೆ ಐಆರ್​ಡಿಎಐಯ 64 ಯುಎಂನ ನಿಯಮಗಳನ್ನು ಪಾಲಿಸದೆ ಗ್ರಾಹಕರಿಗೆ ಮೋಸ ಮಾಡುತ್ತಿವೆ ಎಂದು ದೂರಿದರು.

ಐಆರ್ ಡಿಎಐ ಮತ್ತು ಜಿಐಪಿಎಸ್ ಎ ನಿಯಮಗಳ ಅನ್ವಯ ವಿಮಾ ಕಂಪನಿಗಳು ಅಪಘಾತವಾದ ವಾಹನಗಳ ದುರಸ್ತಿ ವೆಚ್ಚ 50 ಸಾವಿರ ರೂ.ಗಳಷ್ಟು ಇದ್ದಾಗ ವಿಮಾ ಕಂಪನಿಗಳು ಪರಿಶೀಲನೆಯನ್ನು ಸ್ವತಂತ್ರ ಸರ್ವೇಯರ್ ಅಥವಾ ಆಯಾ ವಿಮಾ ಸಿಬ್ಬಂದಿ ಮಾಡಬಹುದು. ಅದೇ 50 ಸಾವಿರಕ್ಕಿಂತ ಹೆಚ್ಚು ಇದ್ದಾಗ ಐಆರ್​ಡಿಎಐ ನ 64 ಯುಎಂ ನಿಯಮದಂತೆ ಕಡ್ಡಾಯವಾಗಿ ಸ್ವತಂತ್ರ ಸರ್ವೇಯರ್​ಗಳ ಮುಖೇನ ಪರಿಶೀಲಿಸಿ ಅವರು ಮಾಡಿದ ಶಿಫಾರಸ್ಸಿನಂತೆ ಗ್ರಾಹಕರಿಗೆ ಹಣ ಸಂದಾಯ ಮಾಡಿ, ಜಿಎಪಿಎಸ್​ಎ ಫೀಸ್ ಶೆಡ್ಯೂಲ್ ಪ್ರಕಾರ ಸರ್ವೇಯರ್​ಗೆ ಶುಲ್ಕ ಕೊಡಬೇಕೆಂಬ ನಿಯಮ ಇದೆ. ಆದ್ರೆ ಖಾಸಗಿ ವಿಮಾ ಕಂಪನಿಗಳು ಈ ಯಾವ ನಿಯಮಗಳನ್ನು ಪಾಲಿಸದೆ ಲಾಭಕ್ಕಾಗಿ ಯಾವುದೇ ಪರಿಶೀಲನೆಗೆ ಸಂಬಂಧಿಸಿದ ಅರ್ಹತೆಗಳಿಲ್ಲದ ತಮ್ಮ ಕಂಪನಿಗಳ ಕೆಲಸಾಗಾರರಿಂದಲೇ ವಾಹನಗಳ ಪರಿಶೀಲನೆ ಮಾಡಿಸಿ ಗ್ರಾಹಕರಿಗೆ ಮೋಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಘಟಕದ ಸದಸ್ಯರು 2018 ಜುಲೈ ನಲ್ಲಿ ಐಆರ್​ಡಿಎಐ ಅಧಿಕಾರಿಗಳಿಗೆ ಖಾಸಗಿ ಕಂಪನಿಗಳು ಮಾಡುತ್ತಿರುವ ಮೋಸದ ಬಗ್ಗೆ ಲಿಖಿತ ದೂರು ಸಲ್ಲಿಸಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನುಕ್ರಮ ಜರುಗಿಸುವಂತೆ ಆಗ್ರಹಿಸಲಾಗಿದೆ. ಅಲ್ಲದೇ 2019 ಸೆ.3 ರಂದು ಹುಬ್ಬಳ್ಳಿ ವಿಮಾ ಸಮೀಕ್ಷಕರ ನಿಯೋಗದೊಂದಿಗೆ ಹೈದರಾಬಾದ್​ಗೆ ಹೋಗಿ ಐಆರ್​ಡಿಎಐ ಚೇರ್ಮನ್ ಅವರಿಗೆ ಭೇಟಿ ಆಗಿ ಈ ಕುರಿತು ಮನವಿ ಸಲ್ಲಿಸಲಾಗಿದ್ದು, ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನಹರಿಸಿ 2019 ರ ಕರಡನ್ನು ಮತ್ತೊಮ್ಮೆ ಪರಿಶೀಲನೆಗೆ ಒಳಪಡಿಸಬೇಕೆಂದು ಆಗ್ರಹಿಸಿದರು.

Intro:ಹುಬ್ಬಳ್ಳಿ-02

ಕೇಂದ್ರ ಸರ್ಕಾರದ ಅಂಗಸಂಸ್ಥೆ ಯಾದ ಐಆರ್ ಡಿಎಐ ವಿಮಾ ಕಂಪನಿಗಳನ್ನು ನಿಯಂತ್ರಣ ಮಾಡುತ್ತಿದ್ದು, ಇದೀಗ 2019 ರ ಕರಡನ್ನು ಸಿದ್ದಪಡಿಸಿದ್ದು, ಈ ಕರಡಿನಿಂದ ಸ್ವತಂತ್ರ ಸರ್ವೇಯರ್ ಅನ್ಯಾಯವಾಗುತ್ತಿದ್ದು, ಅಲ್ಲದೇ ಬಹುಪಾಲು ಜನರು ಕೆಲಸ ಕಳೆದುಕೊಳ್ಳುವ ಭಿತ್ತಿಯಲ್ಲಿದ್ದಾರೆ ಎಂದು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಇನ್ಶುರೆನ್ಸ್ ಸರ್ವೇಯರ್ಸ್ ಆ್ಯಂಡ್ ಲಾಸ್ ಅಸೇಸ್ಸೋರ್ಸ್ ನ ಎಮ್‌
ನಾರಾಯಣ ಹೆಗಡೆ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹೊಸ ಕರಡು ನಿಯಮ ಜಾರಿಯಾದರೆ ಖಾಸಗಿ ಕಂಪನಿಗಳಿಗೆ ಈಗಿರುವ ನಿರ್ಬಂಧಿತ 50 ಸಾವಿರ ಮಿತಿಯಿಂದ 75 ಸಾವಿರ ಕ್ಕೆ ಹೆಚ್ಚಿಸುವ ಪ್ರಸ್ತಾಪ ಇದಾಗಿದ್ದು, ಈ ನಿರ್ಧಾರದಿಂದ ಸ್ವತಂತ್ರ ಸರ್ವೇಯರ್ ಗಳಿಗೆ ಬಾರಿ ಅನ್ಯಾಯವಾಗಲಿದೆ. ಅಲ್ಲದೇ ಕೆಲವು ಖಾಸಗಿ ವಿಮಾ ಕಂಪನಿಗಳು ಕೇಂದ್ರ ಸರ್ಕಾರದ ಅಂಗಸಂಸ್ಥೆ ಐಆರ್ ಡಿಎಐಯ 64 ಯುಎಮ್ ನ ನಿಯಮಗಳನ್ನು ಪಾಲಿಸದೇ ಗ್ರಾಹಕರಿಗೆ ಮೋಸ ಮಾಡುತ್ತಿವೆ ಎಂದು ದೂರಿದರು.
ಐಆರ್ ಡಿಎಐ ಮತ್ತು ಜಿಐಪಿಎಸ್ ಎ ನಿಯಮಗಳ ಅನ್ವಯ ವಿಮಾ ಕಂಪನಿಗಳು ಅಪಘಾತವಾದ ವಾಹನಗಳ ದುರಸ್ತಿ ವೆಚ್ಚ 50 ಸಾವಿರ ರೂಗಳಷ್ಟು ಇದ್ದಾಗ ವಿಮಾ ಕಂಪನಿಗಳು ಪರಿಶೀಲನೆಯನ್ನು ಸ್ವತಂತ್ರ ಸರ್ವೇಯರ್ ಅಥವಾ ಆಯಾ ವಿಮಾ ಸಿಬ್ಬಂದಿ ಮಾಡಬಹುದು. ಅದೇ 50 ಸಾವಿರಕ್ಕಿಂತ ಹೆಚ್ಚು ಇದ್ದಾಗ ಐಆರ್ ಡಿಎಐ ನ 64 ಯುಎಮ್ ನಿಯಮದಂತೆ ಕಡ್ಡಾಯವಾಗಿ ಸ್ವತಂತ್ರ ಸರ್ವೇಯರ್ ಗಳ ಮುಖೇನ ಪರಿಶೀಲನೆ ಮಾಡಿಸಿ ಅವರು ಮಾಡಿದ ಶಿಫಾರಸ್ಸಿನಂತೆ ಗ್ರಾಹಕರಿಗೆ ಹಣ ಸಂದಾಯ ಮಾಡಿ, ಜಿಎಪಿಎಸ್ ಎ ಫೀಸ್ ಶೇಡ್ಯುಲ್ ಪ್ರಕಾರ ಸರ್ವೇಯರ್ ಗೆ ಶುಲ್ಕ ಕೊಡಬೇಕೆಂಬ ನಿಯಮ ಇದೆ. ಆದರೆ ಖಾಸಗಿ ವಿಮಾ ಕಂಪನಿಗಳು ಈ ಯಾವ ನಿಯಮಗಳನ್ನು ಪಾಲಿಸದೇ ಲಾಭಕ್ಕಾಗಿ ಯಾವುದೇ ಪರಿಶೀಲನೆಗೆ ಸಂಬಂಧಿಸಿದ ಅರ್ಹತೆಗಳಿಲ್ಲದ ತಮ್ಮ ಕಂಪನಿಗಳ ಕೆಲಸಾಗಾರರಿಂದಲೇ ವಾಹನಗಳ ಪರಿಶೀಲನೆ ಮಾಡಿಸಿ ಗ್ರಾಹಕರಿಗೆ ಮೋಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಘಟಕದ ಸದಸ್ಯರು 2018 ಜುಲೈ ನಲ್ಲಿ ಐಆರ್ ಡಿಎಐ ಅಧಿಕಾರಿಗಳಿಗೆ ಖಾಸಗಿ ಕಂಪನಿಗಳು ಮಾಡುತ್ತಿರುವ ಮೋಸದ ಬಗ್ಗೆ ಲಿಖಿತ ದೂರು ಸಲ್ಲಿಸಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನುಕ್ರಮ ಜರುಗಿಸುವಂತೆ ಆಗ್ರಹಿಸಲಾಗಿದೆ. ಅಲ್ಲದೇ 2019 ಸೆ.3 ರಂದು ಹುಬ್ಬಳ್ಳಿ ವಿಮಾ ಸಮೀಕ್ಷಕರ ನಿಯೋಗದೊಂದಿಗೆ ಹೈದರಾಬಾದ್ ಗೆ ಹೋಗಿ ಐಆರ್ ಡಿಎಐ ಚೇರ್ಮನ್ ಅವರಿಗೆ ಭೇಟಿ ಆಗಿ ಈ ಕುರಿತು ಮನವಿ ಸಲ್ಲಿಸಲಾಗಿದ್ದು, ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನಹರಿಸಿ 2019 ರ ಕರಡನ್ನು ಮತ್ತೊಮ್ಮೆ ಪರಿಶೀಲನೆಗೆ ಒಳಪಡಿಸಬೇಕೆಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಭರತ ಧರ್ಮಸಿಂಗ್, ಶ್ರೀರಂಗ ಹನುಮಸಾಗರ, ಸಂದೀಪ್ ಹಳ್ಳಿ, ಎಮ್.ಎನ್.ಪಾಟೀಲ, ನೀಲಕಂಠ ದೊಂಗಡಿ, ಗುರುರಾಜ ಛಬ್ಬಿ, ಮಹೇಶ ದೇಶಪಾಂಡೆ ಸೇರಿದಂತೆ ಮುಂತಾದವರು ಇದ್ದರು.

ಬೈಟ್ - ನಾರಾಯಣ ಹೆಗಡೆ,
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಇನ್ಶುರೆನ್ಸ್ ಸರ್ವೇಯರ್Body:H B GaddadConclusion:Etv hubli
ETV Bharat Logo

Copyright © 2024 Ushodaya Enterprises Pvt. Ltd., All Rights Reserved.