ETV Bharat / state

ಅಕ್ರಮ ಮದ್ಯ ಮಾರಾಟದ ವಿರುದ್ದ ಧ್ವನಿ ಎತ್ತಿದ ಕಲಘಟಗಿ ಶಾಸಕ - ಕಲಘಟಗಿ ಶಾಸಕ ಸಿಎಂ ನಿಂಬಣ್ಣವರ್

ಅಕ್ರಮ ಮದ್ಯ ಮಾರಾಟ ವಿರುದ್ಧ ಕಲಘಟಗಿ ಶಾಸಕ ಸಿಎಂ ನಿಂಬಣ್ಣವರ್ ಧ್ವನಿ ಎತ್ತಿದ್ದು, ಇದರ ವಿರುದ್ಧ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಕಲಘಟಗಿ ಶಾಸಕ ಸಿಎಂ ನಿಂಬಣ್ಣವರ್
ಕಲಘಟಗಿ ಶಾಸಕ ಸಿಎಂ ನಿಂಬಣ್ಣವರ್
author img

By

Published : Dec 1, 2020, 3:44 PM IST

ಹುಬ್ಬಳ್ಳಿ: ಅಕ್ರಮ ಮದ್ಯ ಮಾರಾಟ ವಿರುದ್ಧ ಕಲಘಟಗಿ ವಿಧಾನಸಭಾ ಕ್ಷೇತ್ರದ ಶಾಸಕ ಸಿಎಂ ನಿಂಬಣ್ಣವರ್ ಧ್ವನಿ ಎತ್ತಿದ್ದಾರೆ.‌ ಕಲಘಟಗಿ ತಾಲೂಕಿನಲ್ಲಿ ಅಕ್ರಮ ಮದ್ಯ ಮಾರಾಟ ವಿಪರೀತವಾಗಿದೆ‌. ಸರ್ಕಾರ ತಕ್ಷಣ ಬ್ರೇಕ್ ಹಾಕದಿದ್ದರೆ ಬರುವ ಸಂಕ್ರಾಂತಿಯೊಳಗೆ ಹೋರಾಟ ನಡೆಸುವ ಅನಿವಾರ್ಯತೆ ಇದೆ. ಸಾರ್ವಜನಿಕರು ಮತ್ತು ಮಹಿಳೆಯರ ಜೊತೆ ಸೇರಿ ಹೋರಾಟ ಮಾಡಲಾಗುವುದು ಎಂದು ಆಡಳಿತ ಪಕ್ಷದ ಶಾಸಕರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಮುಂಬರುವ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ಮಾಡುತ್ತೇನೆ‌. ಬೇರೆಬೇರೆ ರಾಜ್ಯದಲ್ಲಿ ಈಗಾಗಲೇ ಮದ್ಯ ಮಾರಾಟ ಈಗಾಗಲೇ ಸ್ಥಗಿತಗೊಂಡಿದೆ.

ಕಲಘಟಗಿ ಶಾಸಕ ಸಿಎಂ ನಿಂಬಣ್ಣವರ್
ಅದರಂತೆ ನಮ್ಮ ರಾಜ್ಯದಲ್ಲಿ ಸಾರಾಯಿ ಸಂಪೂರ್ಣ ಕ್ಲೋಸ್ ಆಗಬೇಕು. ಸರ್ಕಾರ ಈ ಬಗ್ಗೆ ಎಚ್ಚರಗೊಳ್ಳಬೇಕು. ಸರ್ಕಾರದ ಮದ್ಯ ಮಾರಾಟದ ಧೋರಣೆಯನ್ನು ನಾನು ವೈಯಕ್ತಿಕವಾಗಿ ವಿರೋಧಿಸುತ್ತೇನೆ. ಸರ್ಕಾರಗಳು ಪ್ರತಿವರ್ಷ ಸರ್ಕಾರಿ ಹಾಗೂ ಖಾಸಗಿ ಒಡೆತನದ ಮದ್ಯದಂಗಡಿಗಳನ್ನ ಮಂಜೂರು ಮಾಡುತ್ತಿರುವುದು ಹಳ್ಳಿಗಳ ಜನರ ಬದುಕನ್ನ ಹಾಳು ಮಾಡುತ್ತಿವೆ ಎಂದರು.

ಈಗಾಗಲೇ ಮಂಜೂರಾಗಿ ಸರ್ಕಾರಿ ಹಾಗೂ ಖಾಸಗಿ ಒಡೆತನದ ಮದ್ಯದಂಗಡಿಗಳು ತಾಲೂಕಿನಲ್ಲಿ ಕೆಲವು ಗ್ರಾಮಗಳನ್ನ ಹಂಚಿಕೊಂಡು ಕಾನೂನು ಬಾಹಿರವಾಗಿ ಮದ್ಯವನ್ನ ಹಗಲು ರಾತ್ರಿಯೆನ್ನದೇ ಸರಬರಾಜು ಮಾಡುತ್ತಿವೆ. ಇದರಿಂದ ಸಾರ್ವಜನಿಕ ನೆಮ್ಮದಿ ಹಾಳಾಗುತ್ತಿದೆ. ತಾಲೂಕಿನಲ್ಲಿರುವ ಸರ್ಕಾರಿ, ಖಾಸಗಿ ಮದ್ಯದಂಗಡಿಗಳು ತಕ್ಷಣ ಬಂದ್ ಮಾಡಬೇಕು. ತಕ್ಷಣ ನಿಲ್ಲಿಸಿ ಸಾಮಾಜಿಕ ಸ್ವಾಸ್ಥ್ಯ ಕಾಪಾಡಲು ಸ್ಥಳೀಯ ಪೊಲೀಸ್, ಅಬಕಾರಿ ಇಲಾಖೆಯ ಅಧಿಕಾರಿಗಳು ಮುಂದಾಗಬೇಕೆಂದು ಒತ್ತಾಯಿಸಿದರು.

ಹುಬ್ಬಳ್ಳಿ: ಅಕ್ರಮ ಮದ್ಯ ಮಾರಾಟ ವಿರುದ್ಧ ಕಲಘಟಗಿ ವಿಧಾನಸಭಾ ಕ್ಷೇತ್ರದ ಶಾಸಕ ಸಿಎಂ ನಿಂಬಣ್ಣವರ್ ಧ್ವನಿ ಎತ್ತಿದ್ದಾರೆ.‌ ಕಲಘಟಗಿ ತಾಲೂಕಿನಲ್ಲಿ ಅಕ್ರಮ ಮದ್ಯ ಮಾರಾಟ ವಿಪರೀತವಾಗಿದೆ‌. ಸರ್ಕಾರ ತಕ್ಷಣ ಬ್ರೇಕ್ ಹಾಕದಿದ್ದರೆ ಬರುವ ಸಂಕ್ರಾಂತಿಯೊಳಗೆ ಹೋರಾಟ ನಡೆಸುವ ಅನಿವಾರ್ಯತೆ ಇದೆ. ಸಾರ್ವಜನಿಕರು ಮತ್ತು ಮಹಿಳೆಯರ ಜೊತೆ ಸೇರಿ ಹೋರಾಟ ಮಾಡಲಾಗುವುದು ಎಂದು ಆಡಳಿತ ಪಕ್ಷದ ಶಾಸಕರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಮುಂಬರುವ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ಮಾಡುತ್ತೇನೆ‌. ಬೇರೆಬೇರೆ ರಾಜ್ಯದಲ್ಲಿ ಈಗಾಗಲೇ ಮದ್ಯ ಮಾರಾಟ ಈಗಾಗಲೇ ಸ್ಥಗಿತಗೊಂಡಿದೆ.

ಕಲಘಟಗಿ ಶಾಸಕ ಸಿಎಂ ನಿಂಬಣ್ಣವರ್
ಅದರಂತೆ ನಮ್ಮ ರಾಜ್ಯದಲ್ಲಿ ಸಾರಾಯಿ ಸಂಪೂರ್ಣ ಕ್ಲೋಸ್ ಆಗಬೇಕು. ಸರ್ಕಾರ ಈ ಬಗ್ಗೆ ಎಚ್ಚರಗೊಳ್ಳಬೇಕು. ಸರ್ಕಾರದ ಮದ್ಯ ಮಾರಾಟದ ಧೋರಣೆಯನ್ನು ನಾನು ವೈಯಕ್ತಿಕವಾಗಿ ವಿರೋಧಿಸುತ್ತೇನೆ. ಸರ್ಕಾರಗಳು ಪ್ರತಿವರ್ಷ ಸರ್ಕಾರಿ ಹಾಗೂ ಖಾಸಗಿ ಒಡೆತನದ ಮದ್ಯದಂಗಡಿಗಳನ್ನ ಮಂಜೂರು ಮಾಡುತ್ತಿರುವುದು ಹಳ್ಳಿಗಳ ಜನರ ಬದುಕನ್ನ ಹಾಳು ಮಾಡುತ್ತಿವೆ ಎಂದರು.

ಈಗಾಗಲೇ ಮಂಜೂರಾಗಿ ಸರ್ಕಾರಿ ಹಾಗೂ ಖಾಸಗಿ ಒಡೆತನದ ಮದ್ಯದಂಗಡಿಗಳು ತಾಲೂಕಿನಲ್ಲಿ ಕೆಲವು ಗ್ರಾಮಗಳನ್ನ ಹಂಚಿಕೊಂಡು ಕಾನೂನು ಬಾಹಿರವಾಗಿ ಮದ್ಯವನ್ನ ಹಗಲು ರಾತ್ರಿಯೆನ್ನದೇ ಸರಬರಾಜು ಮಾಡುತ್ತಿವೆ. ಇದರಿಂದ ಸಾರ್ವಜನಿಕ ನೆಮ್ಮದಿ ಹಾಳಾಗುತ್ತಿದೆ. ತಾಲೂಕಿನಲ್ಲಿರುವ ಸರ್ಕಾರಿ, ಖಾಸಗಿ ಮದ್ಯದಂಗಡಿಗಳು ತಕ್ಷಣ ಬಂದ್ ಮಾಡಬೇಕು. ತಕ್ಷಣ ನಿಲ್ಲಿಸಿ ಸಾಮಾಜಿಕ ಸ್ವಾಸ್ಥ್ಯ ಕಾಪಾಡಲು ಸ್ಥಳೀಯ ಪೊಲೀಸ್, ಅಬಕಾರಿ ಇಲಾಖೆಯ ಅಧಿಕಾರಿಗಳು ಮುಂದಾಗಬೇಕೆಂದು ಒತ್ತಾಯಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.