ETV Bharat / state

ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗಾಗಿ ಹೋರಾಟ: ಪಾದಯಾತ್ರೆಯಿಂದ ಸಮಸ್ಯೆ ಬಗೆಹರಿಯಲ್ಲ ಎಂದ ನಿರಾಣಿ

ಸಿಎಂ ಯಡಿಯೂರಪ್ಪನವರಿಗೆ ಪಂಚಮಸಾಲಿ ಸಮಾಜದ ಮೇಲೆ ಅಪಾರ ಪ್ರೀತಿ ಇದೆ. ಪ್ರತಿಭಟನೆ, ಇನ್ನೊಂದು ಯಾವುದನ್ನು ಮಾಡಬೇಡಿ ಎಂದು ಕೂಡಲ ಸಂಗಮ ಶ್ರೀಗಳಿಗೆ ನೂತನ ಸಚಿವ ಮುರುಗೇಶ್ ನಿರಾಣಿ ಮನವಿ ಮಾಡಿದರು.

author img

By

Published : Jan 14, 2021, 7:06 PM IST

ನಿರಾಣಿ ಕಿವಿ ಮಾತು
ನಿರಾಣಿ ಕಿವಿ ಮಾತು

ದಾವಣಗೆರೆ: ಪಾದಯಾತ್ರೆಯಿಂದ 2ಎ ಮೀಸಲಾತಿ ಸಮಸ್ಯೆ ಬಗೆಹರಿಯುವುದಿಲ್ಲ. ಅದರ ಬಗ್ಗೆ ಕುಳಿತು ಚರ್ಚೆ ಮಾಡಿದರೆ ಸಮಸ್ಯೆ ಬಗೆ ಹರಿಯುತ್ತದೆ ಎಂದು ನೂತನ ಸಚಿವ ಮುರುಗೇಶ್ ನಿರಾಣಿ ಅವರು ಕೂಡಲಸಂಗಮ ಪೀಠಾಧ್ಯಕ್ಷ ಜಯಮೃತ್ಯುಂಜಯ ಶ್ರೀಗೆ ಮನವಿ ಮಾಡಿದರು.

ಜಿಲ್ಲೆಯ ಹರಿಹರ ತಾಲೂಕಿನ ಪಂಚಮಸಾಲಿ ಪೀಠದಲ್ಲಿ ನಡೆಯುತ್ತಿರುವ ಹರಜಾತ್ರೆಯ ವೇದಿಕೆಯಲ್ಲಿ ಮಾತನಾಡಿದ ಅವರು, ಕೂಡಲ ಸಂಗಮ ಶ್ರೀಗಳು ಪಾದಯಾತ್ರೆ ಕೈಬಿಡುವಂತೆ ಹೇಳಿದರು.

ಹರಜಾತ್ರೆಯ ವೇದಿಕೆಯಲ್ಲಿ ಮಾತನಾಡಿದ ನೂತನ ಸಚಿವ ಮುರುಗೇಶ್ ನಿರಾಣಿ

2ಎ ಮೀಸಲಾತಿ ನೀಡುವಲ್ಲಿ ಸರ್ಕಾರ ಸಿದ್ಧವಾಗಿದ್ದು, ಅದಕ್ಕೆ ಕಮಿಟಿ, ಸಬ್ ಕಮಿಟಿಗಳನ್ನು ಮಾಡಿ ಚರ್ಚಿಸಬೇಕಾಗಿದೆ. ಸಿಎಂ ಯಡಿಯೂರಪ್ಪನವರಿಗೆ ಪಂಚಮಸಾಲಿ ಸಮಾಜದ ಮೇಲೆ ಅಪಾರ ಪ್ರೀತಿ ಇದೆ. ಪ್ರತಿಭಟನೆ, ಇನ್ನೊಂದು ಯಾವುದನ್ನು ಮಾಡಬೇಡಿ ಎಂದರು.

ದಾವಣಗೆರೆ: ಪಾದಯಾತ್ರೆಯಿಂದ 2ಎ ಮೀಸಲಾತಿ ಸಮಸ್ಯೆ ಬಗೆಹರಿಯುವುದಿಲ್ಲ. ಅದರ ಬಗ್ಗೆ ಕುಳಿತು ಚರ್ಚೆ ಮಾಡಿದರೆ ಸಮಸ್ಯೆ ಬಗೆ ಹರಿಯುತ್ತದೆ ಎಂದು ನೂತನ ಸಚಿವ ಮುರುಗೇಶ್ ನಿರಾಣಿ ಅವರು ಕೂಡಲಸಂಗಮ ಪೀಠಾಧ್ಯಕ್ಷ ಜಯಮೃತ್ಯುಂಜಯ ಶ್ರೀಗೆ ಮನವಿ ಮಾಡಿದರು.

ಜಿಲ್ಲೆಯ ಹರಿಹರ ತಾಲೂಕಿನ ಪಂಚಮಸಾಲಿ ಪೀಠದಲ್ಲಿ ನಡೆಯುತ್ತಿರುವ ಹರಜಾತ್ರೆಯ ವೇದಿಕೆಯಲ್ಲಿ ಮಾತನಾಡಿದ ಅವರು, ಕೂಡಲ ಸಂಗಮ ಶ್ರೀಗಳು ಪಾದಯಾತ್ರೆ ಕೈಬಿಡುವಂತೆ ಹೇಳಿದರು.

ಹರಜಾತ್ರೆಯ ವೇದಿಕೆಯಲ್ಲಿ ಮಾತನಾಡಿದ ನೂತನ ಸಚಿವ ಮುರುಗೇಶ್ ನಿರಾಣಿ

2ಎ ಮೀಸಲಾತಿ ನೀಡುವಲ್ಲಿ ಸರ್ಕಾರ ಸಿದ್ಧವಾಗಿದ್ದು, ಅದಕ್ಕೆ ಕಮಿಟಿ, ಸಬ್ ಕಮಿಟಿಗಳನ್ನು ಮಾಡಿ ಚರ್ಚಿಸಬೇಕಾಗಿದೆ. ಸಿಎಂ ಯಡಿಯೂರಪ್ಪನವರಿಗೆ ಪಂಚಮಸಾಲಿ ಸಮಾಜದ ಮೇಲೆ ಅಪಾರ ಪ್ರೀತಿ ಇದೆ. ಪ್ರತಿಭಟನೆ, ಇನ್ನೊಂದು ಯಾವುದನ್ನು ಮಾಡಬೇಡಿ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.