ETV Bharat / state

ರಾಜ್ಯ, ಕೇಂದ್ರ ರಾಜಕೀಯದಲ್ಲಿ ಬದಲಿಲ್ಲ: ಇದು ಹನುಮನಕೊಪ್ಪ ಗೊಂಬೆ ಭವಿಷ್ಯ

author img

By

Published : Apr 3, 2022, 10:13 AM IST

ಹನುಮನಕೊಪ್ಪ ಗ್ರಾಮದ ಗೊಂಬೆ ಭವಿಷ್ಯ ಪ್ರಕಟಗೊಂಡಿದೆ. ಈ ಸಲ ರಾಜಕೀಯದಲ್ಲಿ ಯಾವುದೇ ಬದಲಾವಣೆ ಇಲ್ಲ, ಮಳೆ, ಬೆಳೆ, ಅನ್ನ,ಆಹಾರಕ್ಕೆ ತೊಂದರೆ ಉಂಟಾಗುವುದಿಲ್ಲ. ಆದ್ರೆ ಉಳುಮೆ ಮಾಡುವ ರೈತರಿಗೆ ಸಣ್ಣಪುಟ್ಟ ಪೆಟ್ಟುಗಳು ಆಗುವ ಸಾಧ್ಯತೆಯಿದೆ ಎಂದು ಗೊಂಬೆಗಳು ಭವಿಷ್ಯ ನುಡಿದಿವೆ.

Hanumanakoppa doll prediction
ಹನುಮನಕೊಪ್ಪ ಗ್ರಾಮದ ಗೊಂಬೆ ಭವಿಷ್ಯ ಪ್ರಕಟ

ಧಾರವಾಡ: ತಾಲೂಕಿನ ಹನುಮನಕೊಪ್ಪ ಗ್ರಾಮದ ಗೊಂಬೆ ಭವಿಷ್ಯ ಪ್ರತಿ ವರ್ಷ‌ ಯುಗಾದಿಯಂದು ನಡೆಯುತ್ತದೆ. ಈ ವರ್ಷ ರಾಜ್ಯ ಮತ್ತು ಕೇಂದ್ರ ರಾಜಕೀಯದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಮಣ್ಣಿನ ಗೊಂಬೆಗಳು ತಿಳಿಸಿವೆ. ಕಳೆದ ವರ್ಷ ಬೊಂಬೆಗಳು ಸಿಎಂ ಬದಲಾವಣೆ ಮುನ್ಸೂಚಣೆ ನೀಡಿದ್ದು, ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದು ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು.

ಹನುಮನಕೊಪ್ಪ ಗ್ರಾಮದ ಗೊಂಬೆ ಭವಿಷ್ಯ

ಯುಗಾದಿಯ ಅಮವಾಸ್ಯೆ ರಾತ್ರಿ ಗೊಂಬೆ ಮಾಡಿಟ್ಟು ಬರುವ ಗ್ರಾಮಸ್ಥರು ಇಂದು ಬೆಳಗಿನ ಜಾವ ಗೊಂಬೆಗಳನ್ನು ನೋಡಿ ಭವಿಷ್ಯ ನಿರ್ಧಾರ ಮಾಡುತ್ತಾರೆ. ಈ ಬಾರಿ ಮಳೆ-ಬೆಳೆ ಉತ್ತಮವಾಗಿರಲಿದೆ, ಅನ್ನ, ಆಹಾರಕ್ಕೆ ತೊಂದರೆ ಉಂಟಾಗುವುದಿಲ್ಲ. ಆದ್ರೆ ಉಳುಮೆ ಮಾಡುವ ರೈತರಿಗೆ ಸಣ್ಣಪುಟ್ಟ ಪೆಟ್ಟುಗಳು ಆಗುವ ಸಾಧ್ಯತೆಯಿದೆ ಎಂದು ಭವಿಷ್ಯ ನುಡಿದಿವೆ.

ಇದನ್ನೂ ಓದಿ: ಮಿಂಚಿನ ಸರಳುಗಳಂತೆ ಕಾಣಿಸಿಕೊಂಡ ಉಲ್ಕಾಪಾತ: ವಿಡಿಯೋ ವೈರಲ್

ಧಾರವಾಡ: ತಾಲೂಕಿನ ಹನುಮನಕೊಪ್ಪ ಗ್ರಾಮದ ಗೊಂಬೆ ಭವಿಷ್ಯ ಪ್ರತಿ ವರ್ಷ‌ ಯುಗಾದಿಯಂದು ನಡೆಯುತ್ತದೆ. ಈ ವರ್ಷ ರಾಜ್ಯ ಮತ್ತು ಕೇಂದ್ರ ರಾಜಕೀಯದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಮಣ್ಣಿನ ಗೊಂಬೆಗಳು ತಿಳಿಸಿವೆ. ಕಳೆದ ವರ್ಷ ಬೊಂಬೆಗಳು ಸಿಎಂ ಬದಲಾವಣೆ ಮುನ್ಸೂಚಣೆ ನೀಡಿದ್ದು, ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದು ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು.

ಹನುಮನಕೊಪ್ಪ ಗ್ರಾಮದ ಗೊಂಬೆ ಭವಿಷ್ಯ

ಯುಗಾದಿಯ ಅಮವಾಸ್ಯೆ ರಾತ್ರಿ ಗೊಂಬೆ ಮಾಡಿಟ್ಟು ಬರುವ ಗ್ರಾಮಸ್ಥರು ಇಂದು ಬೆಳಗಿನ ಜಾವ ಗೊಂಬೆಗಳನ್ನು ನೋಡಿ ಭವಿಷ್ಯ ನಿರ್ಧಾರ ಮಾಡುತ್ತಾರೆ. ಈ ಬಾರಿ ಮಳೆ-ಬೆಳೆ ಉತ್ತಮವಾಗಿರಲಿದೆ, ಅನ್ನ, ಆಹಾರಕ್ಕೆ ತೊಂದರೆ ಉಂಟಾಗುವುದಿಲ್ಲ. ಆದ್ರೆ ಉಳುಮೆ ಮಾಡುವ ರೈತರಿಗೆ ಸಣ್ಣಪುಟ್ಟ ಪೆಟ್ಟುಗಳು ಆಗುವ ಸಾಧ್ಯತೆಯಿದೆ ಎಂದು ಭವಿಷ್ಯ ನುಡಿದಿವೆ.

ಇದನ್ನೂ ಓದಿ: ಮಿಂಚಿನ ಸರಳುಗಳಂತೆ ಕಾಣಿಸಿಕೊಂಡ ಉಲ್ಕಾಪಾತ: ವಿಡಿಯೋ ವೈರಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.