ETV Bharat / state

ಅವಳಿ ನಗರದಲ್ಲಿ ಬಸ್​ ಹತ್ತಲು ಹರಸಾಹಸ... ಜೀವದ ಹಂಗು ತೊರೆದು ವಿದ್ಯಾರ್ಥಿಗಳ ಪ್ರಯಾಣ

ಸೀಟ್ಗಿಂತ ಹೆಚ್ಚಿನ ವಿದ್ಯಾರ್ಥಿಗಳು ಒಂದೇ ಬಸ್​ ಹತ್ತಲು ‌ಹರಸಾಹಸ ಪಡುವಂತ ಸ್ಥಿತಿ ಹುಬ್ಬಳ್ಳಿ-ಧಾರವಾಡ ದಲ್ಲಿ ನಿರ್ಮಾಣವಾಗಿದೆ.

author img

By

Published : Aug 3, 2019, 2:57 PM IST

For students, boarding a bus is an adventure in hubli, ವಾಣಿಜ್ಯನಗರಿಯಲ್ಲಿ ವಿದ್ಯಾರ್ಥಿಗಳಿಗೆ ಬಸ್​ ಹತ್ತುವುದೇ ಸಾಹಸದ ಕೆಲಸ

ಹುಬ್ಬಳ್ಳಿ: ಸೀಟ್ಗಿಂತ ಹೆಚ್ಚಿನ ವಿದ್ಯಾರ್ಥಿಗಳು ಒಂದೇ ಬಸ್​ ಹತ್ತಲು ‌ಹರಸಾಹಸ ಪಡುವಂತ ಸ್ಥಿತಿ ಹುಬ್ಬಳ್ಳಿ-ಧಾರವಾಡ ದಲ್ಲಿ ನಿರ್ಮಾಣವಾಗಿದೆ.

ಅವಳಿನಗರದಲ್ಲಿ ಬಸ್ ​ಸಂಚಾರ ಒಂದು ಮುಗಿಯದ ಸಮಸ್ಯೆಯಾಗಿ ಪರಿಣಮಿಸುತ್ತಿದ್ದು, ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಬಸ್ ಹತ್ತಲು ಹಾಗೂ ಇಳಿಯಲು‌ ಸಾಹಸ ಮಾಡುತ್ತಿದ್ದಾರೆ.

ವಾಣಿಜ್ಯನಗರಿಯಲ್ಲಿ ವಿದ್ಯಾರ್ಥಿಗಳಿಗೆ ಬಸ್​ ಹತ್ತುವುದೇ ಸಾಹಸದ ಕೆಲಸ

ಬೆಳಗ್ಗೆ ಸರಿಯಾದ ಸಮಯಕ್ಕೆ ತರಗತಿಗೆ ತಲುಪುವ ನಿಟ್ಟಿನಲ್ಲಿ, ವಿದ್ಯಾರ್ಥಿಗಳು ಬಸ್ಸಿನ ಬಾಗಿಲಿನಲ್ಲಿ ಹಾಗೂ ಫುಟ್​​ಬೋರ್ಡ್ ಮೇಲೆ ನಿಂತು ಜೀವದ ಹಂಗು ತೊರೆದು ಸಂಚರಿಸುತ್ತಿದ್ದಾರೆ. ಈವರೆಗೂ, ಹುಡುಗರು ಫುಟ್​​ಬೋರ್ಡ್ ಹಾಗೂ ಬಸ್ ಬಾಗಿಲಲ್ಲಿ ನಿಂತು ಸಂಚರಿಸುತ್ತಿದ್ದರು. ಇದೀಗ ಬಸ್​ ಸಮಸ್ಯೆಯಿಂದ ವಿದ್ಯಾರ್ಥಿನಿಯರು ಸಹ ‌ಸ್ವಲ್ಪ ಜಾಗ ಸಿಕ್ಕರೆ ಸಾಕು ಹೇಗೋ ಮನೆ ಮುಟ್ಟಿಕೊಳ್ಳಬಹುದು ಎಂದು ಈ ದುಸ್ಸಾಹಸಕ್ಕೆ ಕೈ ಹಾಕುತ್ತಿದ್ದಾರೆ.

ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಇಂತಹ ಸಮಸ್ಯೆಗಳು ಗೋಚರಿಸುತ್ತಿದ್ದರೂ ಕೂಡ ಅಧಿಕಾರಿಗಳು ಹಾಗೂ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯವರು ಯಾವುದೇ ಕ್ರಮ ಕೈಗೊಂಡಿಲ್ಲ. ಸಾರ್ವಜನಿಕರ ಅವಶ್ಯಕತೆಗನುಗುಣವಾಗಿ ಬಸ್ ಟೈಮಿಂಗ್ ಹಾಗೂ ಬಸ್ ವ್ಯವಸ್ಥೆ ಕಲ್ಪಿಸುವ ಮೂಲಕ ಸಮಸ್ಯೆಗೆ ಕಡಿವಾಣ ಹಾಕಬೇಕಿದೆ.

ಹುಬ್ಬಳ್ಳಿ: ಸೀಟ್ಗಿಂತ ಹೆಚ್ಚಿನ ವಿದ್ಯಾರ್ಥಿಗಳು ಒಂದೇ ಬಸ್​ ಹತ್ತಲು ‌ಹರಸಾಹಸ ಪಡುವಂತ ಸ್ಥಿತಿ ಹುಬ್ಬಳ್ಳಿ-ಧಾರವಾಡ ದಲ್ಲಿ ನಿರ್ಮಾಣವಾಗಿದೆ.

ಅವಳಿನಗರದಲ್ಲಿ ಬಸ್ ​ಸಂಚಾರ ಒಂದು ಮುಗಿಯದ ಸಮಸ್ಯೆಯಾಗಿ ಪರಿಣಮಿಸುತ್ತಿದ್ದು, ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಬಸ್ ಹತ್ತಲು ಹಾಗೂ ಇಳಿಯಲು‌ ಸಾಹಸ ಮಾಡುತ್ತಿದ್ದಾರೆ.

ವಾಣಿಜ್ಯನಗರಿಯಲ್ಲಿ ವಿದ್ಯಾರ್ಥಿಗಳಿಗೆ ಬಸ್​ ಹತ್ತುವುದೇ ಸಾಹಸದ ಕೆಲಸ

ಬೆಳಗ್ಗೆ ಸರಿಯಾದ ಸಮಯಕ್ಕೆ ತರಗತಿಗೆ ತಲುಪುವ ನಿಟ್ಟಿನಲ್ಲಿ, ವಿದ್ಯಾರ್ಥಿಗಳು ಬಸ್ಸಿನ ಬಾಗಿಲಿನಲ್ಲಿ ಹಾಗೂ ಫುಟ್​​ಬೋರ್ಡ್ ಮೇಲೆ ನಿಂತು ಜೀವದ ಹಂಗು ತೊರೆದು ಸಂಚರಿಸುತ್ತಿದ್ದಾರೆ. ಈವರೆಗೂ, ಹುಡುಗರು ಫುಟ್​​ಬೋರ್ಡ್ ಹಾಗೂ ಬಸ್ ಬಾಗಿಲಲ್ಲಿ ನಿಂತು ಸಂಚರಿಸುತ್ತಿದ್ದರು. ಇದೀಗ ಬಸ್​ ಸಮಸ್ಯೆಯಿಂದ ವಿದ್ಯಾರ್ಥಿನಿಯರು ಸಹ ‌ಸ್ವಲ್ಪ ಜಾಗ ಸಿಕ್ಕರೆ ಸಾಕು ಹೇಗೋ ಮನೆ ಮುಟ್ಟಿಕೊಳ್ಳಬಹುದು ಎಂದು ಈ ದುಸ್ಸಾಹಸಕ್ಕೆ ಕೈ ಹಾಕುತ್ತಿದ್ದಾರೆ.

ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಇಂತಹ ಸಮಸ್ಯೆಗಳು ಗೋಚರಿಸುತ್ತಿದ್ದರೂ ಕೂಡ ಅಧಿಕಾರಿಗಳು ಹಾಗೂ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯವರು ಯಾವುದೇ ಕ್ರಮ ಕೈಗೊಂಡಿಲ್ಲ. ಸಾರ್ವಜನಿಕರ ಅವಶ್ಯಕತೆಗನುಗುಣವಾಗಿ ಬಸ್ ಟೈಮಿಂಗ್ ಹಾಗೂ ಬಸ್ ವ್ಯವಸ್ಥೆ ಕಲ್ಪಿಸುವ ಮೂಲಕ ಸಮಸ್ಯೆಗೆ ಕಡಿವಾಣ ಹಾಕಬೇಕಿದೆ.

Intro:ಹುಬ್ಬಳ್ಳಿ-02

ಏ.. ಸ್ಟಾಪ್ ಸ್ಟಾಪ್..ಸ್ವಲ್ಪ ತಡಿರಿ ನಾನು ಹತ್ಕೋಳ್ತಿನಿ. ಅಯ್ಯೋ.... ಬಸ್ ಹೊರಟೇ ಬಿಟ್ಟಿತ್ತು... ಬೇಗ ಹತ್ತು......ಎಂದು ಹೇಳುವ ಮೂಲಕ ವಿದ್ಯಾರ್ಥಿಗಳು ಬಸ್ ಹತ್ತಲು ‌ಹರಸಾಹಸ ಪಡುವಂತ ಸ್ಥಿತಿ ‌ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ನಿರ್ಮಾಣವಾಗಿದೆ.

ಹೌದು..ಅವಳಿನಗರದಲ್ಲಿ ಸಂಚಾರದ್ದು, ಒಂದು ಮುಗಿಯದ ಸಮಸ್ಯೆಯಾಗಿ ಪರಿಣಮಿಸುತ್ತಿದ್ದು, ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಬಸ್ ಹತ್ತಲು ಹಾಗೂ ಇಳಿಯಲು‌ ಸಾಹಸ ಪ್ರದರ್ಶಿಸುವ ಅನಿವಾರ್ಯತೆ ಎದುರಾಗಿದೆ. ಶಾಲಾ ಕಾಲೇಜುಗಳಿಗೆ ಹೋಗುವುದು ಬರುವುದು ಒಂದು ಪ್ರತಿನಿತ್ಯದ ಗೋಳಾಟವೇ ಆಗಿ ಹೋಗಿದೆ. ಬೆಳಿಗ್ಗೆ ಶಾಲಾ ಕಾಲೇಜುಗಳಿಗೆ ಸರಿಯಾದ ಸಮಯಕ್ಕೆ ತರಗತಿಯಲ್ಲಿ ಇರಲು ವಿದ್ಯಾರ್ಥಿಗಳು ಬಸ್ಸಿನ ಬಾಗಿಲಿನಲ್ಲಿ ಹಾಗೂ ಪುಟ್ ಬೋರ್ಡ್ ಮೇಲೆ ಸಂಚರಿಸುವ ಮೂಲಕ ಜೀವದ ಹಂಗು ತೊರೆದು ಸಂಚರಿಸುತ್ತಿದ್ದಾರೆ.

ಇಷ್ಟು ದಿನ ಹುಡುಗರು ಪುಟ್ ಬೋರ್ಡ್ ಹಾಗೂ ಬಸ್ ಬಾಗಿಲಿಗೆ ನಿಂತು ಸಂಚರಿಸುವುದನ್ನು ನೋಡಿದ್ದೇವೆ. ಆದರೆ ಈಗ ವಿದ್ಯಾರ್ಥಿನಿಯರು ‌ಸ್ವಲ್ಪ ಜಾಗೆ ಸಿಕ್ಕರೆ ಸಾಕು ಹೇಗೋ ಮನೆ ಮುಟ್ಟಿಕೊಳ್ಳಬಹುದು ಎಂದು ಈ ದುಸ್ಸಾಹಸಕ್ಕೆ ಕೈ ಹಾಕುತ್ತಿದ್ದಾರೆ.

ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಇಂತಹ ಸಮಸ್ಯೆಗಳು ಗೋಚರಿಸುತ್ತಿದ್ದರೂ ಕೂಡ ಅಧಿಕಾರಿಗಳು ಹಾಗೂ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯವರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಅಲ್ಲದೆ ಸಾರ್ವಜನಿಕರ ಅವಶ್ಯಕತೆಗೆ ಅನುಗುಣವಾಗಿ ಬಸ್ ಟೈಮಿಂಗ್ ಹಾಗೂ ಬಸ್ ವ್ಯವಸ್ಥೆ ಕಲ್ಪಿಸುವ ಮೂಲಕ ಸಮಸ್ಯೆಗೆ ಕಡಿವಾಣ ಹಾಕುವ ಕೆಲಸವನ್ನು ಮಾಡಬೇಕಿದೆ.Body:H B GaddadConclusion:Etv hubli
ETV Bharat Logo

Copyright © 2024 Ushodaya Enterprises Pvt. Ltd., All Rights Reserved.