ಧಾರವಾಡ: ನವಲಗುಂದ ತಾಲೂಕಿನ ತುಪ್ಪದಕುರಹಟ್ಟಿ ಹಾಗೂ ನಾವಳ್ಳಿ ಗ್ರಾಮದ ರೈತರು ಪಿಡಬ್ಲ್ಯೂಡಿ ಇಲಾಖೆಯಿಂದ ಕಲ್ವಡ್ ನಿರ್ಮಾಣ ಕಾಮಗಾರಿಯನ್ನು ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿ ಕೈಯಲ್ಲಿ ವಿಷದ ಬಾಟಲಿ ಹಿಡಿದುಕೊಂಡು ಪ್ರತಿಭಟನೆ ನಡೆಸಿದ್ದಾರೆ.
ಗ್ರಾಮಗಳ ರೈತರ ಜಮೀನಿನ ಬದಿಯಲ್ಲಿ ನರಗುಂದ - ಗದಗ ರಾಜ್ಯ ಹೆದ್ದಾರಿ ಹಾದು ಹೋಗಿದೆ. ಈಗ ರೈತರ ಜಮೀನುಗಳ ಬದಿಯಲ್ಲಿ ಪಿಡಬ್ಲ್ಯೂಡಿ ಇಲಾಖೆಯಿಂದ ಕಲ್ ವಡ್ ( ಪೂಲ್ ) ನಿರ್ಮಾಣ ಕಾಮಗಾರಿ ಕೈಗೊಂಡಿದೆ.
ಓದಿ:ತಮಿಳಿನ ಆ ಸಿನಿಮಾದಲ್ಲಿ ನಟಿಸಲ್ಲ ಅಂದ್ರಂತೆ ಶಿವಣ್ಣ!
ಇದರಿಂದ ಎತ್ತರದ ಪ್ರದೇಶದಲ್ಲಿನ ನೂರಾರು ಎಕರೆಗಳಲ್ಲಿ ಬಿದ್ದಂತಹ ಮಳೆ ನೀರು ಸುಮಾರು 16 ರೈತರ 55 ಎಕರೆಯಷ್ಟು ಜಮೀನುಗಳಲ್ಲಿ ನುಗ್ಗಿ ಬೆಳೆಗಳನ್ನು ಸಂಪೂರ್ಣವಾಗಿ ನಾಶ ಮಾಡುತ್ತದೆ. ಹೀಗಾಗಿ ಈ ಕಾಮಗಾರಿಯನ್ನು ಈ ಕೂಡಲೇ ನಿಲ್ಲಿಸಬೇಕು. ಇಲ್ಲವಾದಲ್ಲಿ ನಾವು ವಿಷ ಕುಡಿಯಬೇಕಾಗುತ್ತೆ ಎಂದು ರೈತರು ಎಚ್ಚರಿಸಿದ್ದಾರೆ.