ETV Bharat / state

ಚಪ್ಪಲಿ ಕಾಯುತ್ತಾ ಭಕ್ತರ ಬಾಯಾರಿಕೆ ತಣಿಸುವ ಬಾಳಣ್ಣ... ಹುಬ್ಬಳ್ಳಿಯಲ್ಲೊಬ್ಬ ಆಧುನಿಕ ಭಗೀರಥ

author img

By

Published : May 27, 2019, 5:38 PM IST

ಹುಬ್ಬಳ್ಳಿಯಲ್ಲಿ ಚಪ್ಪಲಿ ಕಾಯುವ ಕಾಯಕಯೋಗಿಯೊಬ್ಬ ದೇವಸ್ಥಾನಕ್ಕೆ ಬಂದ ಭಕ್ತರಿಗೆ ನೀರು ನೀಡಿ ಅವರ ದಾಹ ತಣಿಸುವ ಮೂಲಕ ಇದೀಗ ಗಮನ ಸೆಳೆದಿದ್ದಾರೆ.

ಚಪ್ಪಲಿ ಕಾಯುತ್ತಾ ಭಕ್ತರ ಬಾಯಾರಿಕೆ ತಣಿಸುವ ಬಾಳಣ್ಣ

ಹುಬ್ಬಳ್ಳಿ: ಸುಡು ಬಿಸಿಲಿನಲ್ಲಿ ದೇವಸ್ಥಾನಕ್ಕೆ ಬರುವ ಭಕ್ತರು ಬಾಯಾರಿಕೆಯಿಂದ ಬಳಲಬಾರದೆಂದು ಚಪ್ಪಲಿ ಕಾಯುವ ಕಾಯಕಯೋಗಿಯೊಬ್ಬರು ತಾವೇ ಖುದ್ದಾಗಿ 'ಶುದ್ಧ ನೀರಿನ ಘಟಕ'ದಿಂದ ನೀರು ತಂದು ಭಕ್ತರ ದಾಹ ತಣಿಸುವ ಮೂಲಕ ಗಮನ ಸೆಳೆದಿದ್ದಾರೆ.

ಹೌದು, ಮೂರುಸಾವಿರ ಮಠದ ಆವರಣದಲ್ಲಿ ಚಪ್ಪಲಿ ಕಾಯುವ ಬಾಳಣ್ಣ ತೊರಗಲ್​ ಎಂಬುವರು ತಮ್ಮ ಕಾಯಕದ ಜೊತೆ ನೀರು ದಾಸೋಹ ಮಾಡುತ್ತಿದ್ದು, ಈ ನಿಸ್ವಾರ್ಥ ಸೇವೆ ಕಂಡು ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಠದ ಆವರಣದಲ್ಲಿ ಚಪ್ಪಲಿ ಸ್ಟ್ಯಾಂಡ್​ ಇಟ್ಟುಕೊಂಡಿರುವ ಬಾಳಣ್ಣ, ಮಠಕ್ಕೆ ಬಂದ ಭಕ್ತರಿಗೆ ನೀರು ಕೊಟ್ಟು ದಾಹ ನೀಗಿಸುತ್ತಿದ್ದಾರೆ.

ಹುಬ್ಬಳ್ಳಿಯಲ್ಲಿ ಹೀಗೊಬ್ಬ ಆಧುನಿಕ ಭಗೀರಥ

ಇಲ್ಲಿಗೆ ಬರುವ ಭಕ್ತರ ಯೋಗಕ್ಷೇಮ ವಿಚಾರಿಸುವ ಬಾಳಣ್ಣ, ಅವರ ಚಪ್ಪಲಿಗಳನ್ನು ತಮ್ಮ ಹತ್ತಿರ ಬಿಡಿಸಿಕೊಂಡು ಅಲ್ಲಿದ್ದ ನೀರು ಕೊಟ್ಟು ಉಪಚರಿಸುವುದು ಇವರ ನಿತ್ಯದ ಕಾಯಕ. ಭಕ್ತರ ದಾಹ ಅರಿತ ಬಾಳಣ್ಣ ಎರಡು ರೂ. ಕಾಯಿನ್ ಹಾಕಿ ತಾವೇ ಕ್ಯಾನ್​ ತುಂಬಿಸಿಕೊಂಡು ಬರುತ್ತಾರೆ. ಹೀಗೆ ದಿನಕ್ಕೆ 10 ರಿಂದ 15 ಕ್ಕೂ ಹೆಚ್ಚು ಕ್ಯಾನ್​ಗಳನ್ನು ತಂದು ಭಕ್ತರ ದಾಹ ತಣಿಸುತ್ತಾರೆ. ಕಳೆದ 44 ವರ್ಷಗಳಿಂದ ಮೂರು ಸಾವಿರ ಮಠದಲ್ಲಿ ಇದೇ ಕಾಯಕ ಮಾಡುತ್ತಿದ್ದಾರೆ ಎಂದು ಇವರ ಕಲ್ಮಶವಿಲ್ಲದ ಸೇವೆಯನ್ನ ಹೊಗಳುತ್ತಾರೆ ಸ್ಥಳೀಯರು.

ಭಕ್ತರು ಚಪ್ಪಲಿ ಬಿಡುವ ಮುನ್ನ ನೀಡುವ 2 ರೂ., 5 ರೂ. ಹಣವೇ ನಮ್ಮ ಕುಟುಂಬಕ್ಕೆ ಆದಾಯ. ಹಾಗಂತ ಚಪ್ಪಲಿ ನೋಡಿಕೊಳ್ಳುವುದಕ್ಕಾಗಿ ಯಾರ ಬಳಿಯೂ ಹಣ ಕೇಳುವುದಿಲ್ಲ. ಬದಲಾಗಿ ಅವರಾಗಿಯೇ ಕೊಟ್ಟರೆ ಮಾತ್ರ ಹಣ ತೆಗೆದುಕೊಳ್ಳುತ್ತೇನೆ. ಇದು ನನ್ನ ನಿಶ್ವಾರ್ಥ ಸೇವೆ ಅಷ್ಟೇ ಎನ್ನುತ್ತಾರೆ ಬಾಳಣ್ಣ ತೊರಗಲ್‌. ಒಟ್ಟಿನಲ್ಲಿ ಸುಡು ಬಿಸಿಲಿನಲ್ಲಿ ದೇವಸ್ಥಾನಕ್ಕೆ ಬಂದ ಭಕ್ತರಿಗೆ ನೀರು ಕೊಟ್ಟು ದಾಹ ಇಂಗಿಸುವ ಹುಬ್ಬಳ್ಳಿಯ ಈ ಭಗೀರಥನನ್ನು ಮೆಚ್ಚಲೇಬೇಕು.

ಹುಬ್ಬಳ್ಳಿ: ಸುಡು ಬಿಸಿಲಿನಲ್ಲಿ ದೇವಸ್ಥಾನಕ್ಕೆ ಬರುವ ಭಕ್ತರು ಬಾಯಾರಿಕೆಯಿಂದ ಬಳಲಬಾರದೆಂದು ಚಪ್ಪಲಿ ಕಾಯುವ ಕಾಯಕಯೋಗಿಯೊಬ್ಬರು ತಾವೇ ಖುದ್ದಾಗಿ 'ಶುದ್ಧ ನೀರಿನ ಘಟಕ'ದಿಂದ ನೀರು ತಂದು ಭಕ್ತರ ದಾಹ ತಣಿಸುವ ಮೂಲಕ ಗಮನ ಸೆಳೆದಿದ್ದಾರೆ.

ಹೌದು, ಮೂರುಸಾವಿರ ಮಠದ ಆವರಣದಲ್ಲಿ ಚಪ್ಪಲಿ ಕಾಯುವ ಬಾಳಣ್ಣ ತೊರಗಲ್​ ಎಂಬುವರು ತಮ್ಮ ಕಾಯಕದ ಜೊತೆ ನೀರು ದಾಸೋಹ ಮಾಡುತ್ತಿದ್ದು, ಈ ನಿಸ್ವಾರ್ಥ ಸೇವೆ ಕಂಡು ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಠದ ಆವರಣದಲ್ಲಿ ಚಪ್ಪಲಿ ಸ್ಟ್ಯಾಂಡ್​ ಇಟ್ಟುಕೊಂಡಿರುವ ಬಾಳಣ್ಣ, ಮಠಕ್ಕೆ ಬಂದ ಭಕ್ತರಿಗೆ ನೀರು ಕೊಟ್ಟು ದಾಹ ನೀಗಿಸುತ್ತಿದ್ದಾರೆ.

ಹುಬ್ಬಳ್ಳಿಯಲ್ಲಿ ಹೀಗೊಬ್ಬ ಆಧುನಿಕ ಭಗೀರಥ

ಇಲ್ಲಿಗೆ ಬರುವ ಭಕ್ತರ ಯೋಗಕ್ಷೇಮ ವಿಚಾರಿಸುವ ಬಾಳಣ್ಣ, ಅವರ ಚಪ್ಪಲಿಗಳನ್ನು ತಮ್ಮ ಹತ್ತಿರ ಬಿಡಿಸಿಕೊಂಡು ಅಲ್ಲಿದ್ದ ನೀರು ಕೊಟ್ಟು ಉಪಚರಿಸುವುದು ಇವರ ನಿತ್ಯದ ಕಾಯಕ. ಭಕ್ತರ ದಾಹ ಅರಿತ ಬಾಳಣ್ಣ ಎರಡು ರೂ. ಕಾಯಿನ್ ಹಾಕಿ ತಾವೇ ಕ್ಯಾನ್​ ತುಂಬಿಸಿಕೊಂಡು ಬರುತ್ತಾರೆ. ಹೀಗೆ ದಿನಕ್ಕೆ 10 ರಿಂದ 15 ಕ್ಕೂ ಹೆಚ್ಚು ಕ್ಯಾನ್​ಗಳನ್ನು ತಂದು ಭಕ್ತರ ದಾಹ ತಣಿಸುತ್ತಾರೆ. ಕಳೆದ 44 ವರ್ಷಗಳಿಂದ ಮೂರು ಸಾವಿರ ಮಠದಲ್ಲಿ ಇದೇ ಕಾಯಕ ಮಾಡುತ್ತಿದ್ದಾರೆ ಎಂದು ಇವರ ಕಲ್ಮಶವಿಲ್ಲದ ಸೇವೆಯನ್ನ ಹೊಗಳುತ್ತಾರೆ ಸ್ಥಳೀಯರು.

ಭಕ್ತರು ಚಪ್ಪಲಿ ಬಿಡುವ ಮುನ್ನ ನೀಡುವ 2 ರೂ., 5 ರೂ. ಹಣವೇ ನಮ್ಮ ಕುಟುಂಬಕ್ಕೆ ಆದಾಯ. ಹಾಗಂತ ಚಪ್ಪಲಿ ನೋಡಿಕೊಳ್ಳುವುದಕ್ಕಾಗಿ ಯಾರ ಬಳಿಯೂ ಹಣ ಕೇಳುವುದಿಲ್ಲ. ಬದಲಾಗಿ ಅವರಾಗಿಯೇ ಕೊಟ್ಟರೆ ಮಾತ್ರ ಹಣ ತೆಗೆದುಕೊಳ್ಳುತ್ತೇನೆ. ಇದು ನನ್ನ ನಿಶ್ವಾರ್ಥ ಸೇವೆ ಅಷ್ಟೇ ಎನ್ನುತ್ತಾರೆ ಬಾಳಣ್ಣ ತೊರಗಲ್‌. ಒಟ್ಟಿನಲ್ಲಿ ಸುಡು ಬಿಸಿಲಿನಲ್ಲಿ ದೇವಸ್ಥಾನಕ್ಕೆ ಬಂದ ಭಕ್ತರಿಗೆ ನೀರು ಕೊಟ್ಟು ದಾಹ ಇಂಗಿಸುವ ಹುಬ್ಬಳ್ಳಿಯ ಈ ಭಗೀರಥನನ್ನು ಮೆಚ್ಚಲೇಬೇಕು.

Intro:ಹುಬ್ಬಳಿBody:ಸ್ಲಗ್: ನಿಸ್ವಾರ್ಥ ಸೇವೆ .ನೀರಿನ ದಾಸೋಹದಿಂದ ಪ್ರಸಿದ್ಧ ಬಾಳಣ್ಣ..



ಹುಬ್ಬಳ್ಳಿ:- ಇವರು ಭಕ್ತರ ಚಪ್ಪಲಿ ಕಾಯವ ಕಾಯಕಯೋಗಿ, ಸುಡುವ ಬಿಸಿಲಿನಲ್ಲಿ ಮಠಕ್ಕೆ ಬಂದ ಭಕ್ತರು ಬಾಯಾರಿಕೆಯಿಂದ ಬಳಲಬಾರದೆಂದು ತಾವೇ ಕುದ್ದಾಗಿ ''ಶುದ್ಧ ನೀರಿನ''ಘಟಕ್ಕದಿಂದ ನೀರು ತಂದು ಭಕ್ತರ ದಾಹವನ್ನು ನೀಗಿಸುತ್ತಿದ್ದಾರೆ. ಇವರ ಈ ನಿಸ್ವಾರ್ಥ ಸೇವೆ ' ಎಲ್ಲರನ್ನೂ ಮೆಚ್ಚವಂತಿದೆ....

ಹೌದು ಕರ್ನಾಟಕದ ಪ್ರಸಿದ್ಧಿ ವಿರಕ್ತ ಮಠ' ಹಾಗೂ ಮೂರುಸಾವಿರ ಮಠದ ಆವರಣದಲ್ಲಿ ಇಂತದೊಂದು ಕಾಯಕದ ಜೊತೆ ನೀರು ದಾಸೋಹ ಮಾಡುತ್ತಿರುವವರ ಹೆಸರು ಬಾಳಣ್ಣ ತೊರಗಲ್,ಮಠದ ಆವರಣದಲ್ಲಿ ಚಪ್ಪಲಿ ಸ್ಟ್ಯಾಂಡ್ ಇಟ್ಟುಕೊಂಡು ಓರ್ವ ಹಿರಿಯ ಜೀವಿ ಚಪ್ಪಲಿ, ಕಾಯುವ ಕಾಯಕ‌ ಮಾಡುತ್ತಿದ್ದಾರೆ.ಮೂರಸಾವಿರ ಮಠಕ್ಕೆ ದಿನವೂ ಸಾವಿರಕ್ಕೂ ಹೆಚ್ಚು ಬರುತ್ತಾರೆ.ಅವರೆಲ್ಲ ಗುರುಸಿದ್ದೆಶ್ವರರು ಮತ್ತು ಮುಜೂಗ ಗದ್ದುಗೆಗಳ ದರ್ಶನ ಹಾಗೂ ಪೀಠಾಧಿಪತಿ ಗುರುಸಿದ್ದ ರಾಜಯೋಗಿಂದ್ರ ಮಹಾಸ್ವಾಮಿಗಳ ಆರ್ಶೀವಾದ ಪಡೆಯಬೇಕಿದ್ರೆ ತಾವು ಧರಿಸಿದ ಚಪ್ಪಡಿಗಳನ್ನು ಇವದ ಹತ್ತಿರವೆ ಬಿಡಬೇಕು.ಹೀಗೆ ಬಂದ ಭಕ್ತರ ಜೊತೆ ಮಾತನಾಡುತ್ತಾ ಎಲ್ಲಿಂದ್ರ ಬಂದಿರಿ ಅವ್ವಾರ್ ಅಪ್ಪಾರ ಅಲ್ಲಿ ಬೀಡಬ್ಯಾಡರಿ ಚಪ್ಪಲಿ ಇಲ್ಲೆ ನನ್ನ್ ಹತ್ತಿರ ಬಿಡ್ರಿ ಅನ್ನುತ್ತಾ ಯೋಗಕ್ಷೇಮ ವಿಚಾರಿಸಿ ಅಲ್ಲೆ ಕುರ್ಚಿ ಮೇಲೆ ಇಟ್ಟಿರುವ ನೀರಿನ ಟ್ಯಾಂಕ್ ತೋರಿಸಿ' ತೂಗೊರಿ ನೀರು ಕುಡಿರಿ ಬಿಸಿಲು ಬಹಳ ಇದೆ, ಎಂದು ಕಲ್ಮಶವಿಲ್ಲದ ಭಾವನೆಯಿಂದ ಉಪಚರಿಸುತ್ತಾರೆ.
ಹೀಗೆ ಮಠಕ್ಕೆ ಬಂದ ಭಕ್ತರಿಗಾಗಿ ದಾಸೋಹ ಭವನದಲ್ಲಿ ಪ್ರಸಾದ ಕುಡಿಯಿವ ನೀರಿನ ವ್ಯವಸ್ಥೆ ಇದೆ.ಹೋರಗಡೆ ಆವರಣದಲ್ಲಿ ' ಶುದ್ಧ ಕುಡಿಯುವ ನೀರಿನ ಘಟಕವು ಇದ್ರೂ ಸಹ ಅದೂ ಗ್ಲಾಸ್ ಗಳಲ್ಲಿ ತುಂಬಬಹುದಾಗಿದೆ.ಹಾಗಾಗಿ ಎಲ್ಲರಿಗೂ ಕುಡಿಯುವ ನೀರು ಲಭಿಸದಿರುವದನ್ನು ಅರಿತ ಬಾಳಣ್ಣ ಎರಡು ರೂಪಾಯಿ ಕಾಯಿನ್ ಹಾಕಿ ತಾವೆ ಕ್ಯಾನ್ ತುಂಬಿಸಿಕೊಂದ ಬಂದು ಇಡುತ್ತಾರೆ.ಹೀಗೆ ದಿನಕ್ಕೆ ೧೦ ರಿಂದ ೧೫ ಕ್ಕೂ ಹೆಚ್ಚು ಕ್ಯಾನ ಮುಖಾಂತರ ಬಂದ ಭಕ್ತರಿಗೆ ನೀರು ದಾಸೋಹ ಮಾಡುತ್ತಿದ್ದಾರೆ.ಬಾಳಣ್ಣ ಮೂರು ಸಾವಿರ ಮಠದಲ್ಲಿ ಕಳೆದ ೪೪ ವರ್ಷಗಳಿಂದ ಇಲ್ಲಿ ಚಪ್ಪಲಿ ಕಾತುವ ಕಾಯಕದಲ್ಲಿ ನಿರತರಾಗಿದ್ದಾರೆ, ಇವರಿಗೆ ಇದೊಂದೆ ಕಾಯಕ ಮಾಡುತ್ತಾರೆ.ವರ್ಷವಿಡೀ ಮಳೆ,ಚಳಿ ಬಿಸಿಲು ಲೆಕ್ಕಸಿದೆ ನಿಸ್ವಾರ್ಥ ಸೇವೆ ಮಾಡುತ್ತಿದ್ದಾರೆ. ಮಠಕ್ಕೆ ಬಂದ ಭಕ್ತರು ಚಪ್ಪಲಿ ಬಿಡುವು ಮುನ್ನ ನೀಡುವ ೨ ರೂ ೫ ರೂ ಇವರ ಕುಟುಂಬಕ್ಕೆ ಆದಾಯವಾಗಿದೆ. ಹಾಗಂತ ಚಪ್ಪಲಿ ನೋಡಿಕೊಳ್ಳುವುದಕ್ಕಾಗಿ ಯಾರ ಬಳಿಯೂ ಹಣ ಕೇಳುವುದಿಲ್ಲ,ಬದಲಾಗಿ ಅವರಾಗಿಯೇ ಕೊಟ್ರೆ ಮಾತ್ರ ಹಣ ತೆಗೆದುಕೊಳ್ಳುತ್ತಾರೆ.ಅವರಿಗೆ ಬರುವ ಆದಾಯದಲ್ಲಿಯೆ ಬರುವ ನೂರಾರು ಭಕ್ತರಿಗೆ ಚಪ್ಪಲಿ ಕಾಯುವ ಸೇವೆ ಅಲ್ಲದೆ ನೀರು ನೀಡಿ ದಾಹವನ್ನು ನೀಗಿಸುತ್ತಿದ್ದಾರೆ ಇವರು ಈ ಸೇವೆಯನ್ನು ನೋಡಿದ ಭಕ್ಕರು ಬಾಳಣ್ಣ ಬಹಳ ವರ್ಷಗಳಿಂದ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ,ಬಾಳಣ್ಣ ಇನ್ನೂ ಹೆಚ್ಚು ಕಾಲ ಮಠದಲ್ಲಿ ಸೇವೆ ಮಾಡಲಿ ಹಾಗೂ ಅವರಿಗೆ ಅಜ್ಜಾರ ಆರ್ಶೀವಾದವಿದೆ ಅನ್ನುತ್ತಾರೆ ಮಠಕ್ಕೆ ಬಂದ ಭಕ್ತರು....! ಒಟ್ಟಿನಲ್ಲಿ ಇವರ ಸೇವೆ ಇನ್ನೂ ಹೆಚ್ಚು ಕಾಲ ಹೀಗೆ ಇರಲಿ ಎನ್ನುವುದೇ ನಮ್ಮ ಆಶಯ....

ಬೈಟ:೧) ಬಾಳಣ್ಣ ತೊರಗಲ್‌.

ಬೈಟ್:೨)ಅಶೋಕ ಬಿರಾದಾರ ಭಕ್ತರು.

_________________________

ಹುಬ್ಬಳ್ಳಿ: ಸ್ಟ್ರಿಂಜರ

ಯಲ್ಲಪ್ಪ‌ ಕುಂದಗೋಳConclusion:ಯಲ್ಲಪ್ಪ ಕುಂದಗೊಳ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.