ETV Bharat / state

ಥೂ... ಇದೆಂಥ ದುರ್ವಾಸನೆ: ಹುಬ್ಬಳ್ಳಿಯಲ್ಲಿ ಮ್ಯಾನ್​ಹೋಲ್​ ದುರಾವಸ್ಥೆಗೆ ಜನರ ಆಕ್ರೋಶ - ಕೊಳಚೆ ಪ್ರದೇಶ

ಹುಬ್ಬಳ್ಳಿಯ ಮಾದವಪುರದ ಸಿಟಿ ಕ್ಲಿನಿಕ್ ಪಕ್ಕದ ಮ್ಯಾನ್ ಹೋಲ್ ಒಡೆದು ಎಷ್ಟೋ ದಿನ ಕಳೆದರೂ ಅದನ್ನು ಸರಿಮಾಡುವ ಕಾರ್ಯಕ್ಕೆ ನಗರ ಪಾಲಿಕೆ ಮಾತ್ರ ಮುಂದಾಗಿಲ್ಲ. ಅಲ್ಲದೆ ದುರ್ಗಾದೇವಿ ಗುಡಿಯ ಮುಂಭಾಗದ ರಸ್ತೆ, ಭವಾನಿ ನಗರ, ಮಿನಿ ವಿಧಾನಸೌಧದ ಎದುರಿನ ಮ್ಯಾನ್​ ಹೋಲ್ ಸೇರಿದಂತೆ ನಗರದ ಬಹುತೇಕ ಮ್ಯಾನ್ ಹೋಲ್​​​ಗಳ‌ ಸ್ಥಿತಿ ಗಂಭೀರವಾಗಿದ್ದು, ಕೊಳಚೆ ನೀರು ರಸ್ತೆಯಲ್ಲಿ ಹರಿಯುತ್ತಿದೆ.

ಹುಬ್ಬಳ್ಳಿಯಲ್ಲಿ ಮ್ಯಾನ್​ಹೋಲ್​ಗಳ ಅವ್ಯವಸ್ಥೆ
author img

By

Published : Jul 25, 2019, 3:19 PM IST

ಹುಬ್ಬಳ್ಳಿ: ನಗರದಲ್ಲಿರುವ ಬಹುತೇಕ ಒಳಚರಂಡಿಗಳು ನಿರ್ವಹಣೆ ಇಲ್ಲದೇ ಹದಗೆಟ್ಟಿವೆ. ಒಳಚರಂಡಿ ನೀರು ತುಂಬಿ ರಸ್ತೆಗೆ ಬರುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಹುಬ್ಬಳ್ಳಿಯಲ್ಲಿ ಗಬ್ಬೆದ್ದು ನಾರುತ್ತಿವೆ ಮ್ಯಾನ್​​ ಹೋಲ್​ಗಳು

ನಗರದಲ್ಲಿರುವ ಮಾದವಪುರದ ಸಿಟಿ ಕ್ಲಿನಿಕ್ ಪಕ್ಕದ ಮ್ಯಾನ್​ಹೊಲ್ ಒಡೆದು ಎಷ್ಟೋ ದಿನ ಕಳೆದರೂ ಅದನ್ನು ಸರಿಮಾಡುವ ಕಾರ್ಯಕ್ಕೆ ನಗರ ಪಾಲಿಕೆ ಮಾತ್ರ ಮುಂದಾಗಿಲ್ಲ. ಅಲ್ಲದೆ ದುರ್ಗಾದೇವಿ ಗುಡಿಯ ಮುಂಭಾಗದ ರಸ್ತೆ, ಭವಾನಿ ನಗರ, ಮಿನಿ ವಿಧಾನಸೌಧದ ಎದುರಿನ ಮ್ಯಾನ್​ಹೋಲ್ ಸೇರಿದಂತೆ ನಗರದಲ್ಲಿ ಬಹುತೇಕ ಇಂತಹದ್ದೇ ಪರಿಸ್ಥಿತಿ ಇದ್ದು, ಕೊಳಚೆ ನೀರು ರಸ್ತೆಯಲ್ಲಿ ಹರಿಯುತ್ತಿದೆ.

ಗಬ್ಬೆದ್ದು ನಾರುವ ಈ ವ್ಯವಸ್ಥೆಯಿಂದ ರಸ್ತೆಯಲ್ಲಿ ಸಂಚರಿಸುವ ಜನ ಮೂಗು ಮುಚ್ಚಿಕೊಂಡು ಸಂಚರಿಸುವಂತಾಗಿದೆ. ಚರಂಡಿಯ ಕಲ್ಮಶ ರಸ್ತೆ ಮೇಲೆ ಹರಿದು ಪಾದಾಚಾರಿಗಳು, ವಾಹನ ಸವಾರರಿಗೆ ಕಿರಿಕಿರಿಯಾಗುತ್ತಿದೆ. ಹೀಗಿದ್ದರೂ ನಗರಪಾಲಿಕೆ ಅಧಿಕಾರಿಗಳು ಇತ್ತ ತಲೆಹಾಕಿಲ್ಲ. ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಹುಬ್ಬಳ್ಳಿ: ನಗರದಲ್ಲಿರುವ ಬಹುತೇಕ ಒಳಚರಂಡಿಗಳು ನಿರ್ವಹಣೆ ಇಲ್ಲದೇ ಹದಗೆಟ್ಟಿವೆ. ಒಳಚರಂಡಿ ನೀರು ತುಂಬಿ ರಸ್ತೆಗೆ ಬರುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಹುಬ್ಬಳ್ಳಿಯಲ್ಲಿ ಗಬ್ಬೆದ್ದು ನಾರುತ್ತಿವೆ ಮ್ಯಾನ್​​ ಹೋಲ್​ಗಳು

ನಗರದಲ್ಲಿರುವ ಮಾದವಪುರದ ಸಿಟಿ ಕ್ಲಿನಿಕ್ ಪಕ್ಕದ ಮ್ಯಾನ್​ಹೊಲ್ ಒಡೆದು ಎಷ್ಟೋ ದಿನ ಕಳೆದರೂ ಅದನ್ನು ಸರಿಮಾಡುವ ಕಾರ್ಯಕ್ಕೆ ನಗರ ಪಾಲಿಕೆ ಮಾತ್ರ ಮುಂದಾಗಿಲ್ಲ. ಅಲ್ಲದೆ ದುರ್ಗಾದೇವಿ ಗುಡಿಯ ಮುಂಭಾಗದ ರಸ್ತೆ, ಭವಾನಿ ನಗರ, ಮಿನಿ ವಿಧಾನಸೌಧದ ಎದುರಿನ ಮ್ಯಾನ್​ಹೋಲ್ ಸೇರಿದಂತೆ ನಗರದಲ್ಲಿ ಬಹುತೇಕ ಇಂತಹದ್ದೇ ಪರಿಸ್ಥಿತಿ ಇದ್ದು, ಕೊಳಚೆ ನೀರು ರಸ್ತೆಯಲ್ಲಿ ಹರಿಯುತ್ತಿದೆ.

ಗಬ್ಬೆದ್ದು ನಾರುವ ಈ ವ್ಯವಸ್ಥೆಯಿಂದ ರಸ್ತೆಯಲ್ಲಿ ಸಂಚರಿಸುವ ಜನ ಮೂಗು ಮುಚ್ಚಿಕೊಂಡು ಸಂಚರಿಸುವಂತಾಗಿದೆ. ಚರಂಡಿಯ ಕಲ್ಮಶ ರಸ್ತೆ ಮೇಲೆ ಹರಿದು ಪಾದಾಚಾರಿಗಳು, ವಾಹನ ಸವಾರರಿಗೆ ಕಿರಿಕಿರಿಯಾಗುತ್ತಿದೆ. ಹೀಗಿದ್ದರೂ ನಗರಪಾಲಿಕೆ ಅಧಿಕಾರಿಗಳು ಇತ್ತ ತಲೆಹಾಕಿಲ್ಲ. ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

Intro:ಹುಬ್ಬಳಿBody:ಸ್ಲಗ್: ತಲೆ ಎತ್ತಿ ನಿಂತ್ತಿವೆ ಮ್ಯಾನ ಹೋಲ್...


ಹುಬ್ಬಳ್ಳಿ:-ಹುಬ್ಬಳ್ಳಿ ಸ್ಮಾರ್ಟ್ ಸಿಟಿ ನಗರ ಎಂದು ಬಾಯಿ ಮಾತುಗಳಲ್ಲಿ ಹೇಳೊದು ಆಯ್ತು. ಯಾಕೆಂದರೆ ಅವಳಿನಗರದ ಅಕ್ಷರಶಃ ಸಮಸ್ಯೆಗಳ ಸರಮಾಲೆಯಲ್ಲಿ ನರಳುತ್ತಿದೆ. ಅವಳಿನಗರದಲ್ಲಿರುವ ಬಹುತೇಕ ಒಳಚರಂಡಿಗಳು ನಿರ್ವಹಣೆ ಇಲ್ಲದೇ ಹದಗೆಟ್ಟ ಹೋಗಿದ್ದು ಒಳಚರಂಡಿ ನೀರು ತುಂಬಿ ರಸ್ತೆಗೆ ಬರುತ್ತಿದ್ದು, ಇದರಿಂದ ಸಾರ್ವಜನಿಕರು ಪ್ರತಿನಿತ್ಯ ಪರಿದಾಟ ಅನುಭವಿಸುವಂತಾಗಿದ್ದು ಪಾಲಿಕೆ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ. ಇನ್ನೂ ಸ್ವಚ್ಛತೆ ನಮ್ಮ ಆದ್ಯ ಕರ್ತವ್ಯ, ನಾವಿರುವುದು ನಿಮ್ಮ ಸೇವೆಗಾಗಿ ಎಂಬ ತನ್ನ ಧ್ಯೇಯ ವಾಕ್ಯ ಕೇವಲ ಬಾಯಿ ಮಾತಾಗಿ ಉಳಿದಂತಾಗಿದೆ. ಅವಳಿನಗರದ ಬಹುತೇಕ ಕಡೆಯ ಮ್ಯಾನ ಹೋಲ್ ಗಳ ಮೇಲಿನ ಹೊದಿಕೆ ಒಡೆದು ಹೋಗಿದ್ದು, ಕೊಳಚೆ ನೀರೆಲ್ಲಾ ರಸ್ತೆ ಮೇಲೆ ಹರಿಯುವಂತಾಗಿದೆ.‌ ಇಲ್ಲಿನ ಮಾದವಪುರದ ಸಿಟಿ ಕ್ಲಿನಿಕ್ ನ ಪಕ್ಕದ ಮ್ಯಾನ್ ಹೊಲ್ ಒಡೆದು ಎಷ್ಟೋ ದಿನಗಳು ಕಳೆದರು ಅದನ್ನು ಸರಿಮಾಡುವ ಕಾರ್ಯಕ್ಕೆ ಯಾರು ಮುಂದಾಗಿಲ್ಲ. ಇನ್ನೂ ದುರ್ಗಾದೇವಿ ಗುಡಿಯ ಮುಂಭಾಗದ ರಸ್ತೆ, ಭವಾನಿ ನಗರ, ಮಿನಿ ವಿಧಾನ ಸೌಧದ ಎದುರಿನ ಮ್ಯಾಲ ಹೋಲ್ ಸೇರಿದಂತೆ ಹೀಗೆ ನಗರದ ಬಹುತೇಕ ಕಡೆಗಳಲ್ಲಿ ಮ್ಯಾನ್ ಹೋಲ್ ಗಳ‌ ಸ್ಥಿತಿ ಭಿನ್ನವೆನ್ನಿಲ್ಲ.‌ ಪರಿಣಾಮ ಚರಂಡಿ ತುಂಬಿ ಗಲೀಜು ನೀರು ರಸ್ತೆ ಮೇಲೆಯೇ ಹರಿಯುವಂತಾಗಿದೆ. ಇದರಿಂದ ಸುತ್ತಲೂ ಗಬ್ಬೆದ್ದು ನಾರುತ್ತಿದೆ. ಚರಂಡಿಯ ಕಲ್ಮಶ ರಸ್ತೆ ಮೇಲೆ ಹರಿದು ಪಾದಾಚಾರಿಗಳು, ವಾಹನ ಸವಾರರಿಗೆ ಕಿರಿಕಿರಿಯಾಗುವಂತಾಗಿದೆ. ನಗರದಲ್ಲಿ ಇಷ್ಟೇಲ್ಲಾ ಆದರೂ ಪಾಲಿಕೆ ಮಾತ್ರ ಇತ್ತ ತಿರುಗಿ ಕೂಡ ನೋಡದಿರುವುದು ಅಧಿಕಾರಿಗಳ ಕಾರ್ಯವೈಖರಿಗೆ ಕನ್ನಡಿ ಹಿಡಿದಿದೆ.ಇನ್ನೂ ನಗರದ ಹಲವಾರು ಬಡಾವಣೆಗಳಲ್ಲಿ ಯುಜಿಡಿ ಕಾಮಗಾರಿ ಹಿನ್ನೆಲೆ ಹಲವೆಡೆ ಚೆಂಬರ್‌ಗಳು ಒಡೆದು ಸಾರ್ವಜನಿಕರು ತೊಂದರೆ ಅನುಭವಿಸುವುದು ಒಂದಡೆಯಾದರೆ, ನಗರದ ಪ್ರಮುಖ ರಸ್ತೆಗಳಲ್ಲಿಯೇ ಚರಂಡಿ ತುಂಬಿ ರಸ್ತೆ ಮೇಲೆ ಎಲ್ಲೆಂದರಲ್ಲಿ ಹರಿಯುತ್ತಿರುವುದಕ್ಕೆ ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.ಇನ್ನೂ ಈ ಸಮಸ್ಯೆ ಬಗೆಹರಿಸುವಂತೆ ಈಗಾಗಲೇ ಸ್ಥಳೀಯರು ಪಾಲಿಕೆ ಸಿಬ್ಬಂದಿಗೆ ಮನವಿ ಮಾಡಿದರೂ ಸಮಸ್ಯೆ ಮಾತ್ರ ನಿವಾರಣೆ ಆಗಿಲ್ಲ. ಹೀಗಾಗಿ ಅನಿವಾರ್ಯವಾಗಿ ಜನರು ದಿನನಿತ್ಯ ಚರಂಡಿ ನೀರನ್ನೇ ತುಳಿದು ದಾಟುವಂತಾಗಿದೆ. ಪಾಲಿಕೆ ಅಧಿಕಾರಿಗಳು ಈಗಲಾದರೂ ಎಚ್ಚೆತ್ತುಕೊಂಡು ಸಮಸ್ಯೆಗೆ ಪರಿಹಾರ ಕಂಡುಕೊಡಲಿ ಅನ್ನೊದೆ ಸ್ಥಳೀಯರು ಆಗ್ರಹ....

ಬೈಟ್:-ಶಿವು ಕುಮಾರ್ ಅಪ್ಪಾಚಿ....

_________________________


ಹುಬ್ಬಳ್ಳಿ: ಸ್ಟ್ರಿಂಜರ

ಯಲ್ಲಪ್ಪ‌ ಕುಂದಗೋಳConclusion:ಯಲ್ಲಪ್ಪ ಕುಂದಗೊಳ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.