ಹುಬ್ಬಳ್ಳಿ: ನಗರದ ಬಾಲಕಿಯೊಬ್ಬಳನ್ನು ದಾಂಡೇಲಿಯ ಬಸ್ ನಿಲ್ದಾಣದಲ್ಲಿ ಯುವಕನೊಬ್ಬ ಅಪಹರಿಸಿರುವ ಕುರಿತು ದಾಂಡೇಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಲ್ಲಿನ ನವನಗರ ಗಾಮನಗಟ್ಟಿ ಕರಿಯಮ್ಮ ದೇವಿ ದೇವಸ್ಥಾನದ ಬಳಿಯ ನಿವಾಸಿ ಮಿನಾಜಬೇಗಂ ಮಹಮ್ಮದ್ ಅನ್ಸಾರಿ (15) ಅಪಹರಿಸಲ್ಪಟ್ಟ ಬಾಲಕಿ.
![ಅಪಹರಿಸಲ್ಪಟ್ಟ ಬಾಲಕಿ](https://etvbharatimages.akamaized.net/etvbharat/prod-images/7718276_bngjpg.jpg)
ಮಿನಾಜ ಜೂ. 11ರಂದು ತಾಯಿ ಜತೆಗೆ ಬಸ್ನಲ್ಲಿ ಧಾರವಾಡದಿಂದ ಕಾರವಾರದ ಕಡೆಗೆ ಹೊರಟಿದ್ದರು. ಚಹಾ ಕುಡಿಯಲು ಎಂದು ದಾಂಡೇಲಿ ಬಸ್ ನಿಲ್ದಾಣದಲ್ಲಿ ಇಳಿದಿದ್ದರು. ಆ ವೇಳೆ ಬೈಕ್ನಲ್ಲಿ ಬಂದ ಯುವಕನೊಬ್ಬ ಆಕೆಯನ್ನು ಪುಸಲಾಯಿಸಿ ಅಪಹರಿಸಿದ್ದಾನೆ ಎಂದು ಪಾಲಕರು ದೂರಿದ್ದಾರೆ.