ETV Bharat / state

ರಾಜನಹಳ್ಳಿ ವಾಲ್ಮೀಕಿ ಗುರು ಪೀಠದಲ್ಲಿ ಫೆ.8, 9 ರಂದು ಜಾತ್ರೆ

author img

By ETV Bharat Karnataka Team

Published : Jan 9, 2024, 6:57 PM IST

ಫೆಬ್ರವರಿ 8 ಹಾಗೂ 9 ರಂದು ರಾಜನಹಳ್ಳಿ ವಾಲ್ಮೀಕಿ ಗುರು ಪೀಠದಲ್ಲಿ ವಾಲ್ಮೀಕಿ ಜಾತ್ರೆ ನಡೆಯಲಿದೆ.

Valmiki Guru Peeth  Valmiki Jatre  ವಾಲ್ಮೀಕಿ ಗುರು ಪೀಠ  ವಾಲ್ಮೀಕಿ ಜಾತ್ರೆ  ಸಚಿವ ಕೆ ಎನ್ ರಾಜಣ್ಣ
ಫೆ.8, 9 ರಂದು ರಾಜನಹಳ್ಳಿ ವಾಲ್ಮೀಕಿ ಗುರು ಪೀಠದಲ್ಲಿ ವಾಲ್ಮೀಕಿ ಜಾತ್ರೆ
ಸಚಿವ ಕೆ ಎನ್ ರಾಜಣ್ಣ ಪ್ರತಿಕ್ರಿಯೆ

ದಾವಣಗೆರೆ: ರಾಜನಹಳ್ಳಿ ವಾಲ್ಮೀಕಿ ಗುರು ಪೀಠದಲ್ಲಿ ಇಂದು ಮಂಗಳವಾರ ಜಾತ್ರಾ ಮಹೋತ್ಸವದ ಹಿನ್ನೆಲೆ ಪೂರ್ವಭಾವಿ ಸಭೆ ನಡೆಯಿತು. ಫೆಬ್ರವರಿ 8 ಮತ್ತು 9 ರಂದು ರಾಜನಹಳ್ಳಿ ವಾಲ್ಮೀಕಿ ಗುರು ಪೀಠದಲ್ಲಿ ವಾಲ್ಮೀಕಿ ಜಾತ್ರೆ ಹಮ್ಮಿಕೊಳ್ಳಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ವಾಲ್ಮೀಕಿ ಜಾತ್ರಾ ಮಹೋತ್ಸವದ ಅಧ್ಯಕ್ಷರಾಗಿ ಸಚಿವ ಕೆ.ಎನ್. ರಾಜಣ್ಣ ಅವರನ್ನು ಸಮುದಾಯ ಆಯ್ಕೆ ಮಾಡಿದೆ. ಸಚಿವ ಕೆಎನ್ ರಾಜಣ್ಣ ಮತ್ತು ವಾಲ್ಮೀಕಿ ಗುರುಪೀಠದ ಪ್ರಸನಾನಂದ ಪುರಿ ಸ್ವಾಮೀಜಿ ಸಮ್ಮುಖದಲ್ಲಿ ಈ ಸಭೆ ಜರುಗಿತು.

ಪೂರ್ವಭಾವಿ ಸಭೆ ನಂತರ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಸಚಿವ ಕೆ ಎನ್ ರಾಜಣ್ಣ ಮಾತನಾಡಿ, ''ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ಇರುವ ವಾಲ್ಮೀಕಿ ಗುರುಪೀಠದಲ್ಲಿ ಎರಡು ದಿನಗಳ ಕಾಲ ನಡೆಯುವ ಜಾತ್ರೆಗೆ ರಾಜ್ಯಾದ್ಯಂತ ಭಕ್ತರು ಬರಲಿದ್ದಾರೆ. ವಾಲ್ಮೀಕಿಯೇ ರಾಮನನ್ನು ಜಗತ್ತಿಗೆ ಪರಿಚಯಿಸಿದ್ದು, ಇದೇ ಜನವರಿ 22 ರಂದು ಅಯೋಧ್ಯಯಲ್ಲಿ ರಾಮ ಮಂದಿರ ಉದ್ಘಾಟನೆ ಆಗಲಿದೆ. ರಾಮಾಯಣ ಬರೆಯದೇ ಇದ್ದರೇ ರಾಮನ ಪರಿಚಯವೇ ಆಗುತ್ತಿರಲಿಲ್ಲ. ಈಗ ಅಯೋಧ್ಯೆಯಲ್ಲಿ ರಾಮ ಮಂದಿರದ ರೀತಿಯಲ್ಲಿ ವಾಲ್ಮೀಕಿ ಮಂದಿರ ಆಗಬೇಕು. ವಾಲ್ಮೀಕಿ ಜಾತ್ರೆಯಲ್ಲಿ ಈ ನಿರ್ಣಯ ಕೈಗೊಂಡು ಕೇಂದ್ರ ಹಾಗೂ ರಾಮ ಜನ್ಮಭೂಮಿ ಟ್ರಸ್ಟ್​ಗೆ ‌ಕಳುಹಿಸಲಾಗುವುದು'' ಎಂದು ಮಾಹಿತಿ ನೀಡಿದರು.

''ವಾಲ್ಮೀಕಿ ಜಾತ್ರೆಗೆ ನಟ ಸುದೀಪ್ ಅವರನ್ನು ಕರೆಯಬೇಕಾ ಅಥವಾ ಬೇಡ್ವಾ ಎಂಬುದರ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳಲಾಗುವುದು'' ಎಂದ ಅವರು ತಿಳಿಸಿದರು.

ಕಾಂಗ್ರೆಸ್​ನಲ್ಲಿ ಸಿಎಂ ಆಗಲು ಸಾಕಷ್ಟು ಜನರಿಗೆ ಆಸೆಯಿದೆ - ಕೆ ಎನ್ ರಾಜಣ್ಣ: ''ಸಿಎಂ ಅವಕಾಶವನ್ನು ಯಾರಾದರೂ ಬೇಡಾ ಅಂತಾರಾ, ಕಾಂಗ್ರೆಸ್​ನಲ್ಲಿ ಸಿಎಂ ಆಗಲು ಸಾಕಷ್ಟು ಜನರಿಗೆ ಆಸೆಯಿದೆ. ಆದರೆ, ನಮ್ಮ ಪಕ್ಷದಲ್ಲಿ ಈಗ ಸಿಎಂ ಸ್ಥಾನ ಖಾಲಿ ಇಲ್ವಲ್ಲ'' ಎಂದು ಸಚಿವ ಕೆ ಎನ್ ರಾಜಣ್ಣ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

''ಸಿಎಂ ಸ್ಥಾನ ಖಾಲಿಯಾದ ಮೇಲೆ ಪರಿಶಿಷ್ಟರು ಆಗಬೇಕೋ, ಹಿಂದುಳಿದವರು ಆಗಬೇಕೋ ಅಥವಾ ಬೇರೆ ಯಾರು ಆಗಬೇಕು ಎನ್ನುವ ಚರ್ಚೆಗೆ ಬರುತ್ತದೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧಿಸುತ್ತದೆ. ಬಿಜೆಪಿ - ಜೆಡಿಎಸ್​ನವರು ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಇನ್ನು ಜೆಡಿಎಸ್ ಪಕ್ಷ ಜಾತ್ಯತೀತ ಪಕ್ಷ ಎಂದು ಹೇಳಿ ಬಿಜೆಪಿ ಜೊತೆ ಸೇರಿದೆ. ಬಿಜೆಪಿ ಜೊತೆಗೆ ಸೇರಿದ ಮೇಲೆ ಜಾತ್ಯತೀತ ಎಂಬುದು ಎಲ್ಲಿ ಇದೆ'' ಎಂದು ಪ್ರಶ್ನಿಸಿದರು.

ರಾಜ್ಯ ಸರ್ಕಾರದಲ್ಲಿ ಡಿಸಿಎಂ ಸ್ಥಾನ ಹೆಚ್ಚಾಗಬೇಕು ಎಂಬ ವಿಚಾರವಾಗಿ ಪ್ರತಿಕ್ರಿಯಿಸಿ, ''ಡಿಸಿಎಂ ಸ್ಥಾನ ಹೆಚ್ಚು ಮಾಡಬೇಕು ಎಂದು ಬಹುತೇಕ ಶಾಸಕರು ಹಾಗೂ ಸಚಿವರ ಅಭಿಪ್ರಾಯವಾಗಿದೆ. ಇನ್ನಷ್ಟು ಡಿಸಿಎಂ ಸ್ಥಾನ ನೀಡಿದರೆ, ಆ ಜಾತಿಯ ಮತಗಳು ಮತ್ತಷ್ಟು ಗಟ್ಟಿಯಾಗುತ್ತವೆ ಎಂಬ ಬಗ್ಗೆ ಕಳೆದ ದಿನ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಕೂಡ ಬೆಂಗಳೂರಿಗೆ ಆಗಮಿಸಿದ್ದ ವೇಳೆ ಚರ್ಚೆ ನಡೆದಿದೆ'' ಎಂದರು.

ನಮಗೆ ಬೇರೆ ಪಕ್ಷದವರ ಅವಶ್ಯಕತೆ ಇಲ್ಲ: ನಮ್ಮ ಪಕ್ಷದಲ್ಲೇ 138 ಜನ ಶಾಸಕರಿದ್ದಾರೆ. ಬೇರೆ ಪಕ್ಷದವರ ಅವಶ್ಯಕತೆ ನಮಗಿಲ್ಲ. ದೆಹಲಿಗೆ 11 ರಂದು ಎಲ್ಲ ಉಸ್ತುವಾರಿ ಸಚಿವರಿಗೆ ಹೈಕಮಾಂಡ್ ಬುಲಾವ್ ಬಂದಿದೆ. ಎಲ್ಲ ಜಿಲ್ಲಾ ಉಸ್ತುವಾರಿ ಸಚಿವರು ಜ. 11ರಂದು ಮಧ್ಯಾಹ್ನ 3ಕ್ಕೆ ಬರಲು ತಿಳಿಸಲಾಗಿದೆ. ನಮ್ಮದು ಡಿಸಿಎಂ ಒತ್ತಾಯ ನಿರಂತರವಾಗಿರೋದು. ಹೈಕಮಾಂಡ್ ಮುಂದೆ ಕೂಡ ಇಟ್ಡಿದ್ದೇವೆ. ಎಲ್ಲರಿಗೂ ಅಧಿಕಾರ ಹಂಚಿಕೊಳ್ಳಲು ಈ ಡಿಸಿಎಂ ಸ್ಥಾನ ಅಗತ್ಯವಿದೆ'' ಎಂದು ಸಚಿವ ಕೆ ಎನ್ ರಾಜಣ್ಣ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಇದನ್ನೂ ಓದಿ: ಕಾಂಗ್ರೆಸ್​​​​ನವರು ಜನರ ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ: ಪ್ರಹ್ಲಾದ್​ ಜೋಶಿ

ಸಚಿವ ಕೆ ಎನ್ ರಾಜಣ್ಣ ಪ್ರತಿಕ್ರಿಯೆ

ದಾವಣಗೆರೆ: ರಾಜನಹಳ್ಳಿ ವಾಲ್ಮೀಕಿ ಗುರು ಪೀಠದಲ್ಲಿ ಇಂದು ಮಂಗಳವಾರ ಜಾತ್ರಾ ಮಹೋತ್ಸವದ ಹಿನ್ನೆಲೆ ಪೂರ್ವಭಾವಿ ಸಭೆ ನಡೆಯಿತು. ಫೆಬ್ರವರಿ 8 ಮತ್ತು 9 ರಂದು ರಾಜನಹಳ್ಳಿ ವಾಲ್ಮೀಕಿ ಗುರು ಪೀಠದಲ್ಲಿ ವಾಲ್ಮೀಕಿ ಜಾತ್ರೆ ಹಮ್ಮಿಕೊಳ್ಳಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ವಾಲ್ಮೀಕಿ ಜಾತ್ರಾ ಮಹೋತ್ಸವದ ಅಧ್ಯಕ್ಷರಾಗಿ ಸಚಿವ ಕೆ.ಎನ್. ರಾಜಣ್ಣ ಅವರನ್ನು ಸಮುದಾಯ ಆಯ್ಕೆ ಮಾಡಿದೆ. ಸಚಿವ ಕೆಎನ್ ರಾಜಣ್ಣ ಮತ್ತು ವಾಲ್ಮೀಕಿ ಗುರುಪೀಠದ ಪ್ರಸನಾನಂದ ಪುರಿ ಸ್ವಾಮೀಜಿ ಸಮ್ಮುಖದಲ್ಲಿ ಈ ಸಭೆ ಜರುಗಿತು.

ಪೂರ್ವಭಾವಿ ಸಭೆ ನಂತರ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಸಚಿವ ಕೆ ಎನ್ ರಾಜಣ್ಣ ಮಾತನಾಡಿ, ''ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ಇರುವ ವಾಲ್ಮೀಕಿ ಗುರುಪೀಠದಲ್ಲಿ ಎರಡು ದಿನಗಳ ಕಾಲ ನಡೆಯುವ ಜಾತ್ರೆಗೆ ರಾಜ್ಯಾದ್ಯಂತ ಭಕ್ತರು ಬರಲಿದ್ದಾರೆ. ವಾಲ್ಮೀಕಿಯೇ ರಾಮನನ್ನು ಜಗತ್ತಿಗೆ ಪರಿಚಯಿಸಿದ್ದು, ಇದೇ ಜನವರಿ 22 ರಂದು ಅಯೋಧ್ಯಯಲ್ಲಿ ರಾಮ ಮಂದಿರ ಉದ್ಘಾಟನೆ ಆಗಲಿದೆ. ರಾಮಾಯಣ ಬರೆಯದೇ ಇದ್ದರೇ ರಾಮನ ಪರಿಚಯವೇ ಆಗುತ್ತಿರಲಿಲ್ಲ. ಈಗ ಅಯೋಧ್ಯೆಯಲ್ಲಿ ರಾಮ ಮಂದಿರದ ರೀತಿಯಲ್ಲಿ ವಾಲ್ಮೀಕಿ ಮಂದಿರ ಆಗಬೇಕು. ವಾಲ್ಮೀಕಿ ಜಾತ್ರೆಯಲ್ಲಿ ಈ ನಿರ್ಣಯ ಕೈಗೊಂಡು ಕೇಂದ್ರ ಹಾಗೂ ರಾಮ ಜನ್ಮಭೂಮಿ ಟ್ರಸ್ಟ್​ಗೆ ‌ಕಳುಹಿಸಲಾಗುವುದು'' ಎಂದು ಮಾಹಿತಿ ನೀಡಿದರು.

''ವಾಲ್ಮೀಕಿ ಜಾತ್ರೆಗೆ ನಟ ಸುದೀಪ್ ಅವರನ್ನು ಕರೆಯಬೇಕಾ ಅಥವಾ ಬೇಡ್ವಾ ಎಂಬುದರ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳಲಾಗುವುದು'' ಎಂದ ಅವರು ತಿಳಿಸಿದರು.

ಕಾಂಗ್ರೆಸ್​ನಲ್ಲಿ ಸಿಎಂ ಆಗಲು ಸಾಕಷ್ಟು ಜನರಿಗೆ ಆಸೆಯಿದೆ - ಕೆ ಎನ್ ರಾಜಣ್ಣ: ''ಸಿಎಂ ಅವಕಾಶವನ್ನು ಯಾರಾದರೂ ಬೇಡಾ ಅಂತಾರಾ, ಕಾಂಗ್ರೆಸ್​ನಲ್ಲಿ ಸಿಎಂ ಆಗಲು ಸಾಕಷ್ಟು ಜನರಿಗೆ ಆಸೆಯಿದೆ. ಆದರೆ, ನಮ್ಮ ಪಕ್ಷದಲ್ಲಿ ಈಗ ಸಿಎಂ ಸ್ಥಾನ ಖಾಲಿ ಇಲ್ವಲ್ಲ'' ಎಂದು ಸಚಿವ ಕೆ ಎನ್ ರಾಜಣ್ಣ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

''ಸಿಎಂ ಸ್ಥಾನ ಖಾಲಿಯಾದ ಮೇಲೆ ಪರಿಶಿಷ್ಟರು ಆಗಬೇಕೋ, ಹಿಂದುಳಿದವರು ಆಗಬೇಕೋ ಅಥವಾ ಬೇರೆ ಯಾರು ಆಗಬೇಕು ಎನ್ನುವ ಚರ್ಚೆಗೆ ಬರುತ್ತದೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧಿಸುತ್ತದೆ. ಬಿಜೆಪಿ - ಜೆಡಿಎಸ್​ನವರು ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಇನ್ನು ಜೆಡಿಎಸ್ ಪಕ್ಷ ಜಾತ್ಯತೀತ ಪಕ್ಷ ಎಂದು ಹೇಳಿ ಬಿಜೆಪಿ ಜೊತೆ ಸೇರಿದೆ. ಬಿಜೆಪಿ ಜೊತೆಗೆ ಸೇರಿದ ಮೇಲೆ ಜಾತ್ಯತೀತ ಎಂಬುದು ಎಲ್ಲಿ ಇದೆ'' ಎಂದು ಪ್ರಶ್ನಿಸಿದರು.

ರಾಜ್ಯ ಸರ್ಕಾರದಲ್ಲಿ ಡಿಸಿಎಂ ಸ್ಥಾನ ಹೆಚ್ಚಾಗಬೇಕು ಎಂಬ ವಿಚಾರವಾಗಿ ಪ್ರತಿಕ್ರಿಯಿಸಿ, ''ಡಿಸಿಎಂ ಸ್ಥಾನ ಹೆಚ್ಚು ಮಾಡಬೇಕು ಎಂದು ಬಹುತೇಕ ಶಾಸಕರು ಹಾಗೂ ಸಚಿವರ ಅಭಿಪ್ರಾಯವಾಗಿದೆ. ಇನ್ನಷ್ಟು ಡಿಸಿಎಂ ಸ್ಥಾನ ನೀಡಿದರೆ, ಆ ಜಾತಿಯ ಮತಗಳು ಮತ್ತಷ್ಟು ಗಟ್ಟಿಯಾಗುತ್ತವೆ ಎಂಬ ಬಗ್ಗೆ ಕಳೆದ ದಿನ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಕೂಡ ಬೆಂಗಳೂರಿಗೆ ಆಗಮಿಸಿದ್ದ ವೇಳೆ ಚರ್ಚೆ ನಡೆದಿದೆ'' ಎಂದರು.

ನಮಗೆ ಬೇರೆ ಪಕ್ಷದವರ ಅವಶ್ಯಕತೆ ಇಲ್ಲ: ನಮ್ಮ ಪಕ್ಷದಲ್ಲೇ 138 ಜನ ಶಾಸಕರಿದ್ದಾರೆ. ಬೇರೆ ಪಕ್ಷದವರ ಅವಶ್ಯಕತೆ ನಮಗಿಲ್ಲ. ದೆಹಲಿಗೆ 11 ರಂದು ಎಲ್ಲ ಉಸ್ತುವಾರಿ ಸಚಿವರಿಗೆ ಹೈಕಮಾಂಡ್ ಬುಲಾವ್ ಬಂದಿದೆ. ಎಲ್ಲ ಜಿಲ್ಲಾ ಉಸ್ತುವಾರಿ ಸಚಿವರು ಜ. 11ರಂದು ಮಧ್ಯಾಹ್ನ 3ಕ್ಕೆ ಬರಲು ತಿಳಿಸಲಾಗಿದೆ. ನಮ್ಮದು ಡಿಸಿಎಂ ಒತ್ತಾಯ ನಿರಂತರವಾಗಿರೋದು. ಹೈಕಮಾಂಡ್ ಮುಂದೆ ಕೂಡ ಇಟ್ಡಿದ್ದೇವೆ. ಎಲ್ಲರಿಗೂ ಅಧಿಕಾರ ಹಂಚಿಕೊಳ್ಳಲು ಈ ಡಿಸಿಎಂ ಸ್ಥಾನ ಅಗತ್ಯವಿದೆ'' ಎಂದು ಸಚಿವ ಕೆ ಎನ್ ರಾಜಣ್ಣ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಇದನ್ನೂ ಓದಿ: ಕಾಂಗ್ರೆಸ್​​​​ನವರು ಜನರ ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ: ಪ್ರಹ್ಲಾದ್​ ಜೋಶಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.