ETV Bharat / state

ಕೇಂದ್ರ, ರಾಜ್ಯ ಸರ್ಕಾರಗಳಿಗೆ ಬಿಸಿ ಮುಟ್ಟಿಸಲು ಬೆಂಗಳೂರಿನಲ್ಲೂ ಟ್ರ್ಯಾಕ್ಟರ್ ಪರೇಡ್..

author img

By

Published : Jan 19, 2021, 9:48 PM IST

ರಾಜ್ಯದಲ್ಲಿ ಕೂಡ ಐಕ್ಯತಾ ಹೋರಾಟ ಸಮಿತಿ ಪ್ರತಿಭಟನೆ ನಡೆಸಲು ನಿರ್ಧರಿಸಿದೆ. ಜ. 26ರಂದು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಗಮನ ಸೆಳೆಯಲು ರಾಜ್ಯದಲ್ಲೂ ಐಕ್ಯತಾ ಹೋರಾಟ ಸಮಿತಿಯಿಂದ ಬೆಂಗಳೂರಿನಲ್ಲಿ ಟ್ರ್ಯಾಕ್ಟರ್ ಪರೇಡ್..

kuruburu Shanthkumar
ಕುರುಬೂರು ಶಾಂತಕುಮಾರ್

ದಾವಣಗೆರೆ : ಕೇಂದ್ರ ಸರ್ಕಾರ ರೈತರ ಹೋರಾಟವನ್ನು ಲಘುವಾಗಿ ಕಾಣುತ್ತಿದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಾವಣಗೆರೆಯಲ್ಲಿ ನಡೆದ ರೈತರ ಸಭೆ ಬಳಿಕ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಈ ಕಾನೂನಿನಿಂದ ರೈತರು ಕೃಷಿ ಕಾರ್ಮಿಕರು, ಶ್ರಮಿಕ ವರ್ಗದವರು ಹೈರಾಣಾಗಿದ್ದಾರೆ. ಹಾಗಾಗಿ, ಇದೇ ಜ. 26ರಂದು ದೆಹಲಿಯಲ್ಲಿ ಟ್ರ್ಯಾಕ್ಟರ್ ಪರೇಡ್ ಮಾಡಲು ರೈತರು ಚಿಂತನೆ ನಡೆಸಿದ್ದಾರೆ.

ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕುರುಬೂರು ಶಾಂತಕುಮಾರ್

ಅದರಂತೆ ದೆಹಲಿಗೆ ತೆರಳಲು ರಾಜ್ಯದ ರೈತರಿಗೆ ರೈಲು ಇಲ್ಲ. ಜತೆಗೆ ಚಳಿ ಹೆಚ್ಚಿರುವ ಕಾರಣ ಅಲ್ಲಿ ನಡೆಯುವ ಟ್ರ್ಯಾಕ್ಟರ್ ಪರೇಡ್​ನಲ್ಲಿ ಭಾಗಿಯಾಗಲು ಆಗುತ್ತಿಲ್ಲ ಎಂದರು.

ಇದನ್ನೂ ಓದಿ: ಮೆಕ್ಕೆಜೋಳದ ರಾಶಿಗೆ ಆವರಿಸಿದ ಕಾಳ್ಗಿಚ್ಚು: ಸುಟ್ಟು ಕರಕಲಾದ ಮುಸುಕಿನ ಜೋಳ

ರಾಜ್ಯದಲ್ಲಿ ಕೂಡ ಐಕ್ಯತಾ ಹೋರಾಟ ಸಮಿತಿ ಪ್ರತಿಭಟನೆ ನಡೆಸಲು ನಿರ್ಧರಿಸಿದೆ. ಜ. 26ರಂದು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಗಮನ ಸೆಳೆಯಲು ರಾಜ್ಯದಲ್ಲೂ ಐಕ್ಯತಾ ಹೋರಾಟ ಸಮಿತಿಯಿಂದ ಬೆಂಗಳೂರಿನಲ್ಲಿ ಟ್ರ್ಯಾಕ್ಟರ್ ಪರೇಡ್ ನಡೆಸಲು ನಿರ್ಧಾರಿಸಲಾಗಿದೆ. ಜನಪರವಾಗಿ ಹೋರಾಟ ನಡೆಸ್ತಿರುವ ಸಾಕಷ್ಟು ಸಂಘಗಳು ಇದರಲ್ಲಿ ಭಾಗಿಯಾಗುತ್ತಿವೆ ಎಂದು ತಿಳಿಸಿದರು.

ದಾವಣಗೆರೆ : ಕೇಂದ್ರ ಸರ್ಕಾರ ರೈತರ ಹೋರಾಟವನ್ನು ಲಘುವಾಗಿ ಕಾಣುತ್ತಿದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಾವಣಗೆರೆಯಲ್ಲಿ ನಡೆದ ರೈತರ ಸಭೆ ಬಳಿಕ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಈ ಕಾನೂನಿನಿಂದ ರೈತರು ಕೃಷಿ ಕಾರ್ಮಿಕರು, ಶ್ರಮಿಕ ವರ್ಗದವರು ಹೈರಾಣಾಗಿದ್ದಾರೆ. ಹಾಗಾಗಿ, ಇದೇ ಜ. 26ರಂದು ದೆಹಲಿಯಲ್ಲಿ ಟ್ರ್ಯಾಕ್ಟರ್ ಪರೇಡ್ ಮಾಡಲು ರೈತರು ಚಿಂತನೆ ನಡೆಸಿದ್ದಾರೆ.

ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕುರುಬೂರು ಶಾಂತಕುಮಾರ್

ಅದರಂತೆ ದೆಹಲಿಗೆ ತೆರಳಲು ರಾಜ್ಯದ ರೈತರಿಗೆ ರೈಲು ಇಲ್ಲ. ಜತೆಗೆ ಚಳಿ ಹೆಚ್ಚಿರುವ ಕಾರಣ ಅಲ್ಲಿ ನಡೆಯುವ ಟ್ರ್ಯಾಕ್ಟರ್ ಪರೇಡ್​ನಲ್ಲಿ ಭಾಗಿಯಾಗಲು ಆಗುತ್ತಿಲ್ಲ ಎಂದರು.

ಇದನ್ನೂ ಓದಿ: ಮೆಕ್ಕೆಜೋಳದ ರಾಶಿಗೆ ಆವರಿಸಿದ ಕಾಳ್ಗಿಚ್ಚು: ಸುಟ್ಟು ಕರಕಲಾದ ಮುಸುಕಿನ ಜೋಳ

ರಾಜ್ಯದಲ್ಲಿ ಕೂಡ ಐಕ್ಯತಾ ಹೋರಾಟ ಸಮಿತಿ ಪ್ರತಿಭಟನೆ ನಡೆಸಲು ನಿರ್ಧರಿಸಿದೆ. ಜ. 26ರಂದು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಗಮನ ಸೆಳೆಯಲು ರಾಜ್ಯದಲ್ಲೂ ಐಕ್ಯತಾ ಹೋರಾಟ ಸಮಿತಿಯಿಂದ ಬೆಂಗಳೂರಿನಲ್ಲಿ ಟ್ರ್ಯಾಕ್ಟರ್ ಪರೇಡ್ ನಡೆಸಲು ನಿರ್ಧಾರಿಸಲಾಗಿದೆ. ಜನಪರವಾಗಿ ಹೋರಾಟ ನಡೆಸ್ತಿರುವ ಸಾಕಷ್ಟು ಸಂಘಗಳು ಇದರಲ್ಲಿ ಭಾಗಿಯಾಗುತ್ತಿವೆ ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.