ETV Bharat / state

ಪುಣ್ಯಸ್ನಾನದ ವೇಳೆ ಕೊಚ್ಚಿಹೋದ ಸಹೋದರಿಯರು: ತಂಗಿ ಶವ ಪತ್ತೆ, ಅಕ್ಕನಿಗಾಗಿ ಶೋಧ ಕಾರ್ಯ - ದಾವಣಗೆರೆಯಲ್ಲಿ ಸಹೋದರಿಯರ ಶವ ಪತ್ತೆ

ಉಕ್ಕಡಗಾತ್ರಿ ಸಮೀಪ ತುಂಗಭದ್ರಾ ನದಿಯಲ್ಲಿ ಕೊಚ್ಚಿ ಹೋದ ಸಹೋದರಿಯರು. ಸದ್ಯ ತಂಗಿಯ ಶವ ಪತ್ತೆಯಾಗಿದ್ದು, ಅಕ್ಕನ ಮೃತದೇಹಕ್ಕಾಗಿ ಶೋಧ ಕಾರ್ಯ ಮುಂದುವರಿದಿದೆ.

ಉಕ್ಕಡಗಾತ್ರಿ ಬಳಿ ಪುಣ್ಯಸ್ನಾನದ ವೇಳೆ ಕೊಚ್ಚಿಹೋದ ಸಹೋದರಿಯರು
ಉಕ್ಕಡಗಾತ್ರಿ ಬಳಿ ಪುಣ್ಯಸ್ನಾನದ ವೇಳೆ ಕೊಚ್ಚಿಹೋದ ಸಹೋದರಿಯರು
author img

By

Published : Sep 6, 2022, 5:13 PM IST

ದಾವಣಗೆರೆ: ಸ್ನಾನ‌‌ ಮಾಡಲು ನದಿಗೆ ಇಳಿದು ನೀರುಪಾಲಾಗಿದ್ದ ಸಹೋದರಿಬ್ಬರ ಪೈಕಿ ಒಬ್ಬರ ಮೃತದೇಹ ಪತ್ತೆಯಾಗಿದೆ. ಪುಷ್ಪಾ (17) ಶವ ಪತ್ತೆಯಾಗಿದ್ದು, ಚೈತ್ರಾ (19) ಮೃತದೇಹಕ್ಕಾಗಿ ಶೋಧ ಕಾರ್ಯ ಮುಂದುವರೆದಿದೆ.

ಪುಣ್ಯಸ್ನಾನದ ವೇಳೆ ಕೊಚ್ಚಿಹೋಗಿದ್ದ ಸಹೋದರಿಯರು: ಕಳೆದ ದಿ‌ನ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಉಕ್ಕಡಗಾತ್ರಿ ಸಮೀಪದ ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡಲು ತೆರಳಿ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದರು. ನೀರಿನಲ್ಲಿ ಕೊಚ್ಚಿ ಹೋಗಿ ಒಂದು ದಿನದ ಬಳಿಕ ಪುಷ್ಪಾ ಮೃತದೇಹ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ನಂದಗಾವಿ ಗ್ರಾಮದ ಬಳಿ ಪತ್ತೆಯಾಗಿದೆ. ಇದೀಗ ಪುಷ್ಪಾ ಸಹೋದರಿ ಚೈತ್ರಾ ಮೃತದೇಹಕ್ಕಾಗಿ ಶೋಧಕಾರ್ಯ ಮುಂದುವರೆದಿದೆ.

ಚೈತ್ರಾ ಮತ್ತು ಪುಷ್ಪಾ ಅವರು ದಾವಣಗೆರೆ ತಾಲೂಕಿನ ಮಾಯಕೊಂಡ ಹೋಬಳಿಯ ಹುಚ್ಚವ್ವನಹಳ್ಳಿ ಗ್ರಾಮದ ವೀರಾಚಾರಿ ಅವರ ಪುತ್ರಿಯರು. ಕಳೆದ ದಿನ ಕುಟುಂಬ ಸಮೇತ ಉಕ್ಕಡಗಾತ್ರಿ ಕರಿಬಸವೇಶ್ವರ ಸ್ವಾಮಿಯ ದರ್ಶನಕ್ಕಾಗಮಿಸಿ ಪುಣ್ಯಸ್ನಾನದ ವೇಳೆ ಕೊಚ್ಚಿ ಹೋಗಿದ್ದರು.

ತಹಶೀಲ್ದಾರ್ ಡಾ.ಎಂ.ಬಿ.ಅಶ್ವತ್ಥ, ಪಿಎಸ್‌ಐ ರವಿಕುಮಾರ್ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಅಗ್ನಿಶಾಮಕ ದಳದ ತುರ್ತು ಸೇವಾ ಸಿಬ್ಬಂದಿ ಶೋಧ ಕಾರ್ಯ ಮುಂದುವರೆಸಿದೆ.

(ಇದನ್ನೂ ಓದಿ: ಸ್ನಾನ‌‌ಕ್ಕೆಂದು ತುಂಗಾಭದ್ರಾ ನದಿಗಿಳಿದ ಸಹೋದರಿಯರು ನೀರುಪಾಲು: ಸಿಸಿಟಿವಿಯಲ್ಲಿ ದುರ್ಘಟನೆ ಸೆರೆ)

ದಾವಣಗೆರೆ: ಸ್ನಾನ‌‌ ಮಾಡಲು ನದಿಗೆ ಇಳಿದು ನೀರುಪಾಲಾಗಿದ್ದ ಸಹೋದರಿಬ್ಬರ ಪೈಕಿ ಒಬ್ಬರ ಮೃತದೇಹ ಪತ್ತೆಯಾಗಿದೆ. ಪುಷ್ಪಾ (17) ಶವ ಪತ್ತೆಯಾಗಿದ್ದು, ಚೈತ್ರಾ (19) ಮೃತದೇಹಕ್ಕಾಗಿ ಶೋಧ ಕಾರ್ಯ ಮುಂದುವರೆದಿದೆ.

ಪುಣ್ಯಸ್ನಾನದ ವೇಳೆ ಕೊಚ್ಚಿಹೋಗಿದ್ದ ಸಹೋದರಿಯರು: ಕಳೆದ ದಿ‌ನ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಉಕ್ಕಡಗಾತ್ರಿ ಸಮೀಪದ ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡಲು ತೆರಳಿ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದರು. ನೀರಿನಲ್ಲಿ ಕೊಚ್ಚಿ ಹೋಗಿ ಒಂದು ದಿನದ ಬಳಿಕ ಪುಷ್ಪಾ ಮೃತದೇಹ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ನಂದಗಾವಿ ಗ್ರಾಮದ ಬಳಿ ಪತ್ತೆಯಾಗಿದೆ. ಇದೀಗ ಪುಷ್ಪಾ ಸಹೋದರಿ ಚೈತ್ರಾ ಮೃತದೇಹಕ್ಕಾಗಿ ಶೋಧಕಾರ್ಯ ಮುಂದುವರೆದಿದೆ.

ಚೈತ್ರಾ ಮತ್ತು ಪುಷ್ಪಾ ಅವರು ದಾವಣಗೆರೆ ತಾಲೂಕಿನ ಮಾಯಕೊಂಡ ಹೋಬಳಿಯ ಹುಚ್ಚವ್ವನಹಳ್ಳಿ ಗ್ರಾಮದ ವೀರಾಚಾರಿ ಅವರ ಪುತ್ರಿಯರು. ಕಳೆದ ದಿನ ಕುಟುಂಬ ಸಮೇತ ಉಕ್ಕಡಗಾತ್ರಿ ಕರಿಬಸವೇಶ್ವರ ಸ್ವಾಮಿಯ ದರ್ಶನಕ್ಕಾಗಮಿಸಿ ಪುಣ್ಯಸ್ನಾನದ ವೇಳೆ ಕೊಚ್ಚಿ ಹೋಗಿದ್ದರು.

ತಹಶೀಲ್ದಾರ್ ಡಾ.ಎಂ.ಬಿ.ಅಶ್ವತ್ಥ, ಪಿಎಸ್‌ಐ ರವಿಕುಮಾರ್ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಅಗ್ನಿಶಾಮಕ ದಳದ ತುರ್ತು ಸೇವಾ ಸಿಬ್ಬಂದಿ ಶೋಧ ಕಾರ್ಯ ಮುಂದುವರೆಸಿದೆ.

(ಇದನ್ನೂ ಓದಿ: ಸ್ನಾನ‌‌ಕ್ಕೆಂದು ತುಂಗಾಭದ್ರಾ ನದಿಗಿಳಿದ ಸಹೋದರಿಯರು ನೀರುಪಾಲು: ಸಿಸಿಟಿವಿಯಲ್ಲಿ ದುರ್ಘಟನೆ ಸೆರೆ)

ETV Bharat Logo

Copyright © 2025 Ushodaya Enterprises Pvt. Ltd., All Rights Reserved.