ETV Bharat / state

ದಾವಣಗೆರೆ: ಲೋಕಾಯುಕ್ತರ ಹೆಸರಲ್ಲಿ ತಹಶಿಲ್ದಾರ್​ಗೆ ಫೋನ್ ಮಾಡಿ ಬೆದರಿಕೆ, ಅಪರಿಚಿತನ ವಿರುದ್ಧ ದೂರು - ಎಫ್ ಐಆರ್

ಲೋಕಾಯುಕ್ತ ಹೆಸರಲ್ಲಿ ಫೋನ್ ಮಾಡಿ​, ನನಗೆ ಪ್ರಾಣ ಬೆದರಿಕೆ ಮತ್ತು ಮಾನಸಿಕ ಕಿರುಕುಳ ನೀಡಿರುವ ವ್ಯಕ್ತಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ತಹಶಿಲ್ದಾರ್ ಎಚ್ ಬಿ ಗೋವಿಂದಪ್ಪ ನ್ಯಾಮತಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Nyamati Police Station
ನ್ಯಾಮತಿ ಪೊಲೀಸ್ ಠಾಣೆ
author img

By ETV Bharat Karnataka Team

Published : Dec 10, 2023, 11:02 PM IST

ದಾವಣಗೆರೆ: ಅಪರಿಚಿತ ವ್ಯಕ್ತಿಯೊಬ್ಬನು ಲೋಕಾಯುಕ್ತ ಸೋಗಿನಲ್ಲಿ ನ್ಯಾಮತಿ ತಾಲೂಕು ತಹಶಿಲ್ದಾರ್​ಗೆ ಫೋನ್​ ಮಾಡಿ, ನಿಮ್ಮ ಹೆಸರಿನಲ್ಲಿ ಎಫ್ ಐಆರ್ ದಾಖಲಾಗಿದೆ. ದಾಳಿ ಆಗದಂತೆ ತಡೆಗೆ ಅನ್ಲೈನ್​ನಲ್ಲಿ ಹಣ ಹಾಕುವಂತೆ ಬೇಡಿಕೆ ಇಟ್ಟಿದ್ದಾನೆ. ತಹಶಿಲ್ದಾರ್ ಹಣ ಹಾಕದಿದ್ದಾಗ ಜೀವ ಬೆದರಿಕೆ ಹಾಕಿರುವ ಘಟನೆ ನಡೆದಿದೆ. ಈ ಘಟನೆ ಶುಕ್ರವಾರ ನಡೆದಿದ್ದರೂ, ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆಗೆ ಸಂಬಂಧಿಸಿದಂತೆ ತಹಶಿಲ್ದಾರ್ ಎಚ್.ಬಿ. ಗೋವಿಂದಪ್ಪ ಅವರು ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಲೋಕಾಯುಕ್ತರೆಂದು ವ್ಯಕ್ತಿ ಫೋನ್ ಕರೆ: ಅಪರಚಿತ ವ್ಯಕ್ತಿ ನ್ಯಾಮತಿ ತಾಲೂಕು ತಹಶಿಲ್ದಾರ್​ಗೆ ಕರೆ ಮಾಡಿ, ತಾನು ಲೋಕಾಯುಕ್ತ ಡಿವೈಎಸ್ಪಿ ಎಂದು ಪರಿಚಯಿಸಿಕೊಂಡು, ತಹಶಿಲ್ದಾರರ ವಿವರ ಪಡೆದಿದ್ದಾನೆ. ನಿಮ್ಮ ವಿರುದ್ಧ ಬೆಂಗಳೂರಿನ ಲೋಕಾಯುಕ್ತ ಕಚೇರಿಯಲ್ಲಿ ಎಫ್ಐಆರ್ ದಾಖಲಾಗಿದೆ. ಲೋಕಾಯುಕ್ತ ಎಸ್‌ಪಿ ಮತ್ತು ಅವರ ಸಿಬ್ಬಂದಿ ಈಗಾಗಲೇ ನೀವು ಕೆಲಸ ಮಾಡುತ್ತಿರುವ ಸ್ಥಳ ಮತ್ತು ವಾಸವಿರುವ ಮನೆಯ ಮೇಲೆ ದಾಳಿ ಮಾಡಲು ತಯಾರಿ ಮಾಡಿಕೊಂಡಿದ್ದಾರೆ ಎಂದು ಫೋನಿನಲ್ಲಿ ನಂಬಿಸಿದ್ದಾ‌ನೆ.

ನಿಮ್ಮ ಬಗ್ಗೆ ಚೆನ್ನಾಗಿ ವಿಚಾರಿಸಿದ್ದೇನೆ, ನೀವು ಒಳ್ಳೆ ಅಧಿಕಾರಿ. ನಾನೂ ‌ಈ ಲೋಕಾಯುಕ್ತ ದಾಳಿ ಆಗದಂತೆ ನೋಡಿಕೊಳ್ಳುತ್ತೇನೆ. ಅದ್ದರಿಂದ ಅನ್ಲೈನ್ ನಲ್ಲಿ ಎರಡು ಲಕ್ಷ ಪೇಮೆಂಟ್ ವರ್ಗಾವಣೆ ಮಾಡುವಂತೆ ಆತನು ತಿಳಿಸಿದ್ದಾನೆ. ‌ಬಳಿಕ ಪದೇ ಪದೇ ಕರೆ ಮಾಡಿ ಹಣ ವರ್ಗಾವಣೆ ಮಾಡಲು ಒತ್ತಾಯಿಸಿದ್ದಾನೆ.

ಹಣ ಹಾಕದೇ ಇದ್ದಾಗ, ನಿನಗೆ ಏನ್ ಮಾಡ್ಬೇಕೋ ಮಾಡ್ತಿವಿ ನಮಗೆ ಗೊತ್ತಿದೆ ಎಂದು ತಹಶಿಲ್ದಾರ್​ಗೆ ವ್ಯಕ್ತಿಯ ತಿಳಿಸಿದ್ದಾನೆ. ತನಗೆ ಪ್ರಾಣ ಬೆದರಿಕೆ ಮತ್ತು ಮಾನಸಿಕ ಕಿರುಕುಳ ನೀಡಿರುವ ವ್ಯಕ್ತಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ತಹಶಿಲ್ದಾರ್ ಎಚ್.ಬಿ. ಗೋವಿಂದಪ್ಪ ದೂರು ದಾಖಲು ಮಾಡಿದ್ದಾರೆ.

ಇದನ್ನೂಓದಿ:ಕೊಡಗು : ಕಾರು ಅಡ್ಡಗಟ್ಟಿ ₹ 50 ಲಕ್ಷ ದರೋಡೆ, ಖದೀಮರ ಬಂಧನಕ್ಕೆ ಬಲೆ ಬೀಸಿದ ಪೊಲೀಸರು

ದಾವಣಗೆರೆ: ಅಪರಿಚಿತ ವ್ಯಕ್ತಿಯೊಬ್ಬನು ಲೋಕಾಯುಕ್ತ ಸೋಗಿನಲ್ಲಿ ನ್ಯಾಮತಿ ತಾಲೂಕು ತಹಶಿಲ್ದಾರ್​ಗೆ ಫೋನ್​ ಮಾಡಿ, ನಿಮ್ಮ ಹೆಸರಿನಲ್ಲಿ ಎಫ್ ಐಆರ್ ದಾಖಲಾಗಿದೆ. ದಾಳಿ ಆಗದಂತೆ ತಡೆಗೆ ಅನ್ಲೈನ್​ನಲ್ಲಿ ಹಣ ಹಾಕುವಂತೆ ಬೇಡಿಕೆ ಇಟ್ಟಿದ್ದಾನೆ. ತಹಶಿಲ್ದಾರ್ ಹಣ ಹಾಕದಿದ್ದಾಗ ಜೀವ ಬೆದರಿಕೆ ಹಾಕಿರುವ ಘಟನೆ ನಡೆದಿದೆ. ಈ ಘಟನೆ ಶುಕ್ರವಾರ ನಡೆದಿದ್ದರೂ, ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆಗೆ ಸಂಬಂಧಿಸಿದಂತೆ ತಹಶಿಲ್ದಾರ್ ಎಚ್.ಬಿ. ಗೋವಿಂದಪ್ಪ ಅವರು ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಲೋಕಾಯುಕ್ತರೆಂದು ವ್ಯಕ್ತಿ ಫೋನ್ ಕರೆ: ಅಪರಚಿತ ವ್ಯಕ್ತಿ ನ್ಯಾಮತಿ ತಾಲೂಕು ತಹಶಿಲ್ದಾರ್​ಗೆ ಕರೆ ಮಾಡಿ, ತಾನು ಲೋಕಾಯುಕ್ತ ಡಿವೈಎಸ್ಪಿ ಎಂದು ಪರಿಚಯಿಸಿಕೊಂಡು, ತಹಶಿಲ್ದಾರರ ವಿವರ ಪಡೆದಿದ್ದಾನೆ. ನಿಮ್ಮ ವಿರುದ್ಧ ಬೆಂಗಳೂರಿನ ಲೋಕಾಯುಕ್ತ ಕಚೇರಿಯಲ್ಲಿ ಎಫ್ಐಆರ್ ದಾಖಲಾಗಿದೆ. ಲೋಕಾಯುಕ್ತ ಎಸ್‌ಪಿ ಮತ್ತು ಅವರ ಸಿಬ್ಬಂದಿ ಈಗಾಗಲೇ ನೀವು ಕೆಲಸ ಮಾಡುತ್ತಿರುವ ಸ್ಥಳ ಮತ್ತು ವಾಸವಿರುವ ಮನೆಯ ಮೇಲೆ ದಾಳಿ ಮಾಡಲು ತಯಾರಿ ಮಾಡಿಕೊಂಡಿದ್ದಾರೆ ಎಂದು ಫೋನಿನಲ್ಲಿ ನಂಬಿಸಿದ್ದಾ‌ನೆ.

ನಿಮ್ಮ ಬಗ್ಗೆ ಚೆನ್ನಾಗಿ ವಿಚಾರಿಸಿದ್ದೇನೆ, ನೀವು ಒಳ್ಳೆ ಅಧಿಕಾರಿ. ನಾನೂ ‌ಈ ಲೋಕಾಯುಕ್ತ ದಾಳಿ ಆಗದಂತೆ ನೋಡಿಕೊಳ್ಳುತ್ತೇನೆ. ಅದ್ದರಿಂದ ಅನ್ಲೈನ್ ನಲ್ಲಿ ಎರಡು ಲಕ್ಷ ಪೇಮೆಂಟ್ ವರ್ಗಾವಣೆ ಮಾಡುವಂತೆ ಆತನು ತಿಳಿಸಿದ್ದಾನೆ. ‌ಬಳಿಕ ಪದೇ ಪದೇ ಕರೆ ಮಾಡಿ ಹಣ ವರ್ಗಾವಣೆ ಮಾಡಲು ಒತ್ತಾಯಿಸಿದ್ದಾನೆ.

ಹಣ ಹಾಕದೇ ಇದ್ದಾಗ, ನಿನಗೆ ಏನ್ ಮಾಡ್ಬೇಕೋ ಮಾಡ್ತಿವಿ ನಮಗೆ ಗೊತ್ತಿದೆ ಎಂದು ತಹಶಿಲ್ದಾರ್​ಗೆ ವ್ಯಕ್ತಿಯ ತಿಳಿಸಿದ್ದಾನೆ. ತನಗೆ ಪ್ರಾಣ ಬೆದರಿಕೆ ಮತ್ತು ಮಾನಸಿಕ ಕಿರುಕುಳ ನೀಡಿರುವ ವ್ಯಕ್ತಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ತಹಶಿಲ್ದಾರ್ ಎಚ್.ಬಿ. ಗೋವಿಂದಪ್ಪ ದೂರು ದಾಖಲು ಮಾಡಿದ್ದಾರೆ.

ಇದನ್ನೂಓದಿ:ಕೊಡಗು : ಕಾರು ಅಡ್ಡಗಟ್ಟಿ ₹ 50 ಲಕ್ಷ ದರೋಡೆ, ಖದೀಮರ ಬಂಧನಕ್ಕೆ ಬಲೆ ಬೀಸಿದ ಪೊಲೀಸರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.