ದಾವಣಗೆರೆ : ಗಡಿ ಭದ್ರತಾ ಪಡೆಯಲ್ಲಿ ಕಳೆದ 22 ರ್ಷಗಳಿಂದ ಸೇವೆ ಸಲ್ಲಿಸಿ ನಿವೃತ್ತರಾಗಿ ಸ್ವಗ್ರಾಮಕ್ಕೆ ಆಗಮಿಸಿದ ಯೋಧರನ್ನು ಹೊನ್ನಾಳಿ ಬಿಜೆಪಿ ಶಾಸಕ ಎಂ ಪಿ ರೇಣುಕಾಚಾರ್ಯ ಆತ್ಮೀಯವಾಗಿ ಬರ ಮಾಡಿಕೊಂಡರು.
ಹೊನ್ನಾಳಿ ತಾಲೂಕಿನ ನೇರಲಗುಂಡಿ ಗ್ರಾಮದ ಕೃಷ್ಣನಾಯ್ಕ ಮತ್ತು ಶ್ರೀನಿವಾಸ್ ನಾಯ್ಕ ನಿವೃತ್ತರಾಗಿ ಗ್ರಾಮಕ್ಕೆ ಆಗಮಿಸಿದ ಯೋಧರು. ಈ ಯೋಧರಿಗೆ ಶಾಸಕ ರೇಣುಕಾಚಾರ್ಯ ಅದ್ದೂರಿಯಾಗಿ ಸ್ವಾಗತ ಕೋರಿದರು. ಗ್ರಾಮದಾಧ್ಯಂತ ತೆರೆದ ವಾಹನದಲ್ಲಿ ಯೋಧರ ಮೆರವಣಿಗೆ ಮಾಡಿ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದರು.
ಕಳೆದ 22 ವರ್ಷಗಳಿಂದ ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧರ ಮೆರವಣಿಗೆಯಲ್ಲಿ ಶಾಸಕ ಎಂ ಪಿ ರೇಣುಕಾಚಾರ್ಯ ಭಾಗಿಯಾಗಿ ಅಭಿನಂದನೆ ಸಲ್ಲಿಸಿದರು. ಭಾರತಾಂಬೆಯ ಪರ ಘೋಷಣೆ ಕೂಗಿ ಸಂಭ್ರಮಿಸಿದ ಗ್ರಾಮಸ್ಥರೊಂದಿಗೆ ಸೇರಿ ಯೋಧರ ಪರ ಶಾಸಕ ರೇಣುಕಾಚಾರ್ಯ ಕೂಡ ಘೋಷಣೆ ಮೊಳಗಿಸಿದರು.