ETV Bharat / state

ಎಂಟಿಬಿ, ಶಂಕರ್, ಮುನಿರತ್ನಗೆ ಸಚಿವ ಸ್ಥಾನ ಕೊಡಲೇಬೇಕು: ಸಚಿವ ಭೈರತಿ ಬಸವರಾಜ್

author img

By

Published : Jan 11, 2021, 12:01 PM IST

ಎಂಟಿಬಿ ನಾಗರಾಜ್, ಆರ್​.ಶಂಕರ್ ಹಾಗೂ ಮುನಿರತ್ನಗೆ ಸಚಿವ ಸ್ಥಾನ ನೀಡಬೇಕು ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಸಿಎಂ ಯಡಿಯೂರಪ್ಪರಿಗೆ ಮನವಿ ಮಾಡಿದ್ದಾರೆ.

Minister Bhairati basavaraj
ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್

ದಾವಣಗೆರೆ: ಎಂಟಿಬಿ ನಾಗರಾಜ್, ಆರ್​. ಶಂಕರ್ ಹಾಗೂ ಮುನಿರತ್ನಗೆ ಸಚಿವ ಸ್ಥಾನ ಕೊಡಲೇಬೇಕೆಂದು‌ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಸಿಎಂ ಯಡಿಯೂರಪ್ಪರಿಗೆ ಮನವಿ ಮಾಡಿದ್ದಾರೆ.

ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್

ದಾವಣಗೆರೆಯಲ್ಲಿ ಮಾತನಾಡಿದ‌ ಅವರು, ಎಂಟಿಬಿ ನಾಗರಾಜ್, ಆರ್​. ಶಂಕರ್ ಹಾಗೂ ಮುನಿರತ್ನಗೆ ಸಚಿವ ಸ್ಥಾನ ನೀಡ್ತೀವಿ ಎಂದು ಸಿಎಂ ಹೇಳಿದ್ದಾರೆ. ನಮ್ಮ ಜೊತೆ ಬಂದವರಿಗೆ ಸಚಿವ ಸ್ಥಾನ ನೀಡಿ ಎಂದು ಸಿಎಂ ಯಡಿಯೂರಪ್ಪನವರಿಗೆ ಮನವಿ ಮಾಡಿದ್ದೇವೆ ಎಂದರು.

ಇದನ್ನು ಓದಿ: ಜ.13 ಅಥವಾ 14 ರಂದು ಸಂಪುಟ ವಿಸ್ತರಣೆ: ಸಿಎಂ ಬಿಎಸ್​ವೈ

ಇನ್ನು ಬಸನಗೌಡ ಪಾಟೀಲ್​ ಯತ್ನಾಳ್ ಬಗ್ಗೆ ಪ್ರತಿಕ್ರಿಯಿಸಿದ ಅವರು, "ಏನೋ ಹೇಳ್ತಾ ಇರ್ತಾರೆ. ಅವರ ಬಗ್ಗೆ ನಾನು ಪ್ರತಿಕ್ರಿಯೆ ನೀಡಲು ಇಷ್ಟ ಪಡಲ್ಲ, ಒಂದೂವರೆ ವರ್ಷದಿಂದ ಹೇಳ್ತಾನೆ ಇದ್ದಾರೆ. ಸಿಎಂ ಬದಲಾವಣೆ ಆಗುತ್ತಾರೆಂದು. ಆದರೆ ಅವರು ಸಚಿವ ಸ್ಥಾನ ತೆಗೆದುಕೊಳ್ಳಲ್ಲ ಅಂದರೆ ಅವರ ವಿವೇಚನೆಗೆ ಬಿಟ್ಟಿದ್ದು. ಅವರು ಸಚಿವ ಸ್ಥಾನ‌ ಬೇಡ ಅಂದರೆ ಅವರ ಬದಲಿ ಸಾಕಷ್ಟು ಜನ ಹಿರಿಯ ನಾಯಕರು ಸಚಿವ ಸ್ಥಾನಕ್ಕಾಗಿ ಕಾಯುತ್ತಿದ್ದಾರೆ ಎಂದು ಟಾಂಗ್ ನೀಡಿದರು.

ಇನ್ನು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವನಾಗಿ ಮುಂದುವರೆಸಿದರೆ ಸಂತೋಷ. ಇಷ್ಟು ದಿನಗಳ‌ ಕಾಲ ಕೆಲಸ‌ ಮಾಡಿರುವುದು ಸಂತಸ ಇದೆ ಎಂದು ಸಚಿವ ಭೈರತಿ ಬಸವರಾಜ್ ಹೇಳಿದರು.

ದಾವಣಗೆರೆ: ಎಂಟಿಬಿ ನಾಗರಾಜ್, ಆರ್​. ಶಂಕರ್ ಹಾಗೂ ಮುನಿರತ್ನಗೆ ಸಚಿವ ಸ್ಥಾನ ಕೊಡಲೇಬೇಕೆಂದು‌ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಸಿಎಂ ಯಡಿಯೂರಪ್ಪರಿಗೆ ಮನವಿ ಮಾಡಿದ್ದಾರೆ.

ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್

ದಾವಣಗೆರೆಯಲ್ಲಿ ಮಾತನಾಡಿದ‌ ಅವರು, ಎಂಟಿಬಿ ನಾಗರಾಜ್, ಆರ್​. ಶಂಕರ್ ಹಾಗೂ ಮುನಿರತ್ನಗೆ ಸಚಿವ ಸ್ಥಾನ ನೀಡ್ತೀವಿ ಎಂದು ಸಿಎಂ ಹೇಳಿದ್ದಾರೆ. ನಮ್ಮ ಜೊತೆ ಬಂದವರಿಗೆ ಸಚಿವ ಸ್ಥಾನ ನೀಡಿ ಎಂದು ಸಿಎಂ ಯಡಿಯೂರಪ್ಪನವರಿಗೆ ಮನವಿ ಮಾಡಿದ್ದೇವೆ ಎಂದರು.

ಇದನ್ನು ಓದಿ: ಜ.13 ಅಥವಾ 14 ರಂದು ಸಂಪುಟ ವಿಸ್ತರಣೆ: ಸಿಎಂ ಬಿಎಸ್​ವೈ

ಇನ್ನು ಬಸನಗೌಡ ಪಾಟೀಲ್​ ಯತ್ನಾಳ್ ಬಗ್ಗೆ ಪ್ರತಿಕ್ರಿಯಿಸಿದ ಅವರು, "ಏನೋ ಹೇಳ್ತಾ ಇರ್ತಾರೆ. ಅವರ ಬಗ್ಗೆ ನಾನು ಪ್ರತಿಕ್ರಿಯೆ ನೀಡಲು ಇಷ್ಟ ಪಡಲ್ಲ, ಒಂದೂವರೆ ವರ್ಷದಿಂದ ಹೇಳ್ತಾನೆ ಇದ್ದಾರೆ. ಸಿಎಂ ಬದಲಾವಣೆ ಆಗುತ್ತಾರೆಂದು. ಆದರೆ ಅವರು ಸಚಿವ ಸ್ಥಾನ ತೆಗೆದುಕೊಳ್ಳಲ್ಲ ಅಂದರೆ ಅವರ ವಿವೇಚನೆಗೆ ಬಿಟ್ಟಿದ್ದು. ಅವರು ಸಚಿವ ಸ್ಥಾನ‌ ಬೇಡ ಅಂದರೆ ಅವರ ಬದಲಿ ಸಾಕಷ್ಟು ಜನ ಹಿರಿಯ ನಾಯಕರು ಸಚಿವ ಸ್ಥಾನಕ್ಕಾಗಿ ಕಾಯುತ್ತಿದ್ದಾರೆ ಎಂದು ಟಾಂಗ್ ನೀಡಿದರು.

ಇನ್ನು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವನಾಗಿ ಮುಂದುವರೆಸಿದರೆ ಸಂತೋಷ. ಇಷ್ಟು ದಿನಗಳ‌ ಕಾಲ ಕೆಲಸ‌ ಮಾಡಿರುವುದು ಸಂತಸ ಇದೆ ಎಂದು ಸಚಿವ ಭೈರತಿ ಬಸವರಾಜ್ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.