ETV Bharat / state

ಸಾರ್ವಜನಿಕವಾಗಿ ಗಣಪತಿ ಪ್ರತಿಷ್ಠಾಪನೆ ಅನುಮತಿ ಆಗ್ರಹಿಸಿ ಹರಿಹರದ ಹಿಂದೂ ಜಾಗರಣ ವೇದಿಕೆಯಿಂದ ಮನವಿ

author img

By

Published : Aug 17, 2020, 9:26 PM IST

ಸಾರ್ವಜನಿಕವಾಗಿ ಗಣಪತಿ ಪ್ರತಿಷ್ಠಾಪನೆಗೆ ಅನುಮತಿ ಆಗ್ರಹಿಸಿ ಹರಿಹರದ ಹಿಂದೂ ಜಾಗರಣ ವೇದಿಯಿಂದ ತಹಶೀಲ್ದಾರ್ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

Appeal
Appeal

ಹರಿಹರ: ಸಾರ್ವಜನಿಕವಾಗಿ ಗಣಪತಿ ಪ್ರತಿಷ್ಠಾಪನೆಗೆ ಅನುಮತಿ ಆಗ್ರಹಿಸಿ ಹರಿಹರದ ಹಿಂದೂ ಜಾಗರಣ ವೇದಿಕೆಯಿಂದ ತಹಶೀಲ್ದಾರ್ ಮುಖಾಂತರ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ನವರಿಗೆ ಉಪ ತಹಶೀಲ್ದಾರ್ ಚೆನ್ನವೀರ ಸ್ವಾಮಿಯವರಿಗೆ ಮನವಿ ಸಲ್ಲಿಸಲಾಯಿತು.

ನಂತರ ಮಾತನಾಡಿದ ಮುಖಂಡರು ಸ್ವಾತಂತ್ರ್ಯ ಸಂಗ್ರಾಮದ ನೇತಾರಾ ಬಾಲಗಂಗಾಧರ ತಿಲಕ್ ರವರು ಇಡೀ ದೇಶವನ್ನು ಒಗ್ಗೂಡಿಸಿ ಸ್ವಾತಂತ್ರದ ಕಿಚ್ಚು ಹಚ್ಚಲು ಮನೆಯಲ್ಲಿದ್ದ ಗಣೇಶ ಹಬ್ಬದ ಆಚರಣೆಯನ್ನು ಸಾರ್ವಜನಿಕ ಗೊಳಿಸಿದರು.
ಜಾತಿ, ಪ್ರಾಂತ್ಯ, ಭಾಷೆ ಪಕ್ಷ ಮರೆತು ಏಕತೆ ಯಿಂದ ಒಂದುಗೂಡಿಸಿ ಕಳೆದ 125 ವರ್ಷಗಳಿಂದ ಈ ಗಣೇಶ ಹಬ್ಬದ ಸಂಪ್ರದಾಯವನ್ನು ದೇಶದ ಮೂಲೆ ಮೂಲಗಳಲ್ಲಿ ಪಸರಿಸಿದರು. ಧರ್ಮದ ರಕ್ಷಣೆಗೆ ಲಕ್ಷಾಂತರ ಯುವಕರಿಗೆ ಪ್ರೇರಣೆಯಾಗಿ ಅನೇಕ ಕಲಾವಿದರಿಗೆ ಪ್ರತಿಭೆಗಳಿಗೆ ಸಂಸ್ಕ್ರತಿಗೆ ವೇದಿಕೆಯಾಗಿದೆ ಇಂತಹ ಸಾರ್ವಜನಿಕ ಉತ್ಸವವನ್ನು ಈ ವರ್ಷ ಸರ್ಕಾರವು ಕೋವಿಡ್ 19 ಹಿನ್ನೆಲೆಯಲ್ಲಿ ಅನುಮತಿ ನೀಡದಿರುವುದು ಅತ್ಯಂತ ನೋವಿನ ಹಾಗೂ ಖಂಡನೀಯ ಎಂದರು.

ದೇಶದ ಜನರು ಕೋವಿಡ್ ವಿಷಯದಲ್ಲಿ ಜಾಗೃತರಿದ್ದು ನಿಯಮ ಮೀರಿ ವರ್ತಿಸುವುದಿಲ್ಲ ಅನ್ನುವುದು ತಮಗೆ ಗೊತ್ತಿದ್ದರೂ ಕೋವಿಡ್ ನೆಪಕ್ಕೆ ಪರಂಪರೆ, ಧಾರ್ಮಿಕ ಭಾವನೆ, ಶ್ರದ್ಧೆ ಯನ್ನು ಘಾಸಿಗೊಳಿಸಿದಂತಾಗುತ್ತದೆ.
ಈ ಹಿಂದೆ ದೇಶದಲ್ಲಿ ತುರ್ತು ಪರಿಸ್ಥಿತಿ ಬಂದಾಗಲೂ ಈ ರೀತಿ ನಿಯಮಗಳು ಜಾರಿ ಮಾಡಿರಲಿಲ್ಲ. ಅಲ್ಲದೇ ಪಕ್ಕದ ಮಹಾರಾಷ್ಟ್ರ ರಾಜ್ಯದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಯಾವುದೇ ನಿರ್ಭಂದವಿಲ್ಲ ಎಂದರು.

ರಾಜ್ಯದಲ್ಲಿ ಬಾರ್ ಗಳು, ಮಹಲ್, ಸಾರಿಗೆ, ದೇವಸ್ಥಾನ, ಚರ್ಚ್, ವ್ಯಾಯಾಮ ಶಾಲೆಗಳಿಗೆ ಅನುಮತಿ ನೀಡಿದ್ದು ಗಣೇಶನ ಉತ್ಸವಕ್ಕೆ ಈ ರೀತಿಯ ಸರ್ಕಾರದ ನಿರ್ಭಂದವೇಕೆ ಎಂದರು.

ಈ ಬೆಳವಣಿಗೆಯನ್ನು ನೋಡಿದರೆ ದೇಶದಲ್ಲಿನ ಹಿಂದೂ ಧರ್ಮಗಳ ಹಬ್ಬಗಳನ್ನು ಹಂತ ಹಂತವಾಗಿ ನಿಲ್ಲಿಸುವ ಸಂಚು ಎದ್ದು ಕಾಣುತ್ತಿದೆ. ಹಿಂದೂ ಧರ್ಮದ ಭಾವನೆಗಳಿಗೆ ಧಕ್ಕೆ ತರುವ ಸರ್ಕಾರದ ಈ ನಿರ್ಧಾರವನ್ನು ಹಿಂದಕ್ಕೆ ಪಡೆಯಬೇಕು ಎಂದು ಹಿಂದೂ ಜಾಗರಣ ವೇದಿಕೆ ಆಗ್ರಹಿಸಿದ್ದಾರೆ.

ಈ ವೇಳೆ ಮಂಜುನಾಥ್ ರಟ್ಟಿಹಳ್ಳಿ, ದಿನೇಶ್ ಅರ್ಜುನ್, ಬಿ.ಟಿ ಚೇತನ್, ಭರತ್ ಶೆಟ್ಟಿ, ಚಂದನ್, ಪ್ರವೀಣ್ ಹನಗವಾಡಿ ಹಾಗೂ ಇತರೆ ಸದಸ್ಯರು ಉಪಸ್ಥಿತರಿದ್ದರು.

ಹರಿಹರ: ಸಾರ್ವಜನಿಕವಾಗಿ ಗಣಪತಿ ಪ್ರತಿಷ್ಠಾಪನೆಗೆ ಅನುಮತಿ ಆಗ್ರಹಿಸಿ ಹರಿಹರದ ಹಿಂದೂ ಜಾಗರಣ ವೇದಿಕೆಯಿಂದ ತಹಶೀಲ್ದಾರ್ ಮುಖಾಂತರ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ನವರಿಗೆ ಉಪ ತಹಶೀಲ್ದಾರ್ ಚೆನ್ನವೀರ ಸ್ವಾಮಿಯವರಿಗೆ ಮನವಿ ಸಲ್ಲಿಸಲಾಯಿತು.

ನಂತರ ಮಾತನಾಡಿದ ಮುಖಂಡರು ಸ್ವಾತಂತ್ರ್ಯ ಸಂಗ್ರಾಮದ ನೇತಾರಾ ಬಾಲಗಂಗಾಧರ ತಿಲಕ್ ರವರು ಇಡೀ ದೇಶವನ್ನು ಒಗ್ಗೂಡಿಸಿ ಸ್ವಾತಂತ್ರದ ಕಿಚ್ಚು ಹಚ್ಚಲು ಮನೆಯಲ್ಲಿದ್ದ ಗಣೇಶ ಹಬ್ಬದ ಆಚರಣೆಯನ್ನು ಸಾರ್ವಜನಿಕ ಗೊಳಿಸಿದರು.
ಜಾತಿ, ಪ್ರಾಂತ್ಯ, ಭಾಷೆ ಪಕ್ಷ ಮರೆತು ಏಕತೆ ಯಿಂದ ಒಂದುಗೂಡಿಸಿ ಕಳೆದ 125 ವರ್ಷಗಳಿಂದ ಈ ಗಣೇಶ ಹಬ್ಬದ ಸಂಪ್ರದಾಯವನ್ನು ದೇಶದ ಮೂಲೆ ಮೂಲಗಳಲ್ಲಿ ಪಸರಿಸಿದರು. ಧರ್ಮದ ರಕ್ಷಣೆಗೆ ಲಕ್ಷಾಂತರ ಯುವಕರಿಗೆ ಪ್ರೇರಣೆಯಾಗಿ ಅನೇಕ ಕಲಾವಿದರಿಗೆ ಪ್ರತಿಭೆಗಳಿಗೆ ಸಂಸ್ಕ್ರತಿಗೆ ವೇದಿಕೆಯಾಗಿದೆ ಇಂತಹ ಸಾರ್ವಜನಿಕ ಉತ್ಸವವನ್ನು ಈ ವರ್ಷ ಸರ್ಕಾರವು ಕೋವಿಡ್ 19 ಹಿನ್ನೆಲೆಯಲ್ಲಿ ಅನುಮತಿ ನೀಡದಿರುವುದು ಅತ್ಯಂತ ನೋವಿನ ಹಾಗೂ ಖಂಡನೀಯ ಎಂದರು.

ದೇಶದ ಜನರು ಕೋವಿಡ್ ವಿಷಯದಲ್ಲಿ ಜಾಗೃತರಿದ್ದು ನಿಯಮ ಮೀರಿ ವರ್ತಿಸುವುದಿಲ್ಲ ಅನ್ನುವುದು ತಮಗೆ ಗೊತ್ತಿದ್ದರೂ ಕೋವಿಡ್ ನೆಪಕ್ಕೆ ಪರಂಪರೆ, ಧಾರ್ಮಿಕ ಭಾವನೆ, ಶ್ರದ್ಧೆ ಯನ್ನು ಘಾಸಿಗೊಳಿಸಿದಂತಾಗುತ್ತದೆ.
ಈ ಹಿಂದೆ ದೇಶದಲ್ಲಿ ತುರ್ತು ಪರಿಸ್ಥಿತಿ ಬಂದಾಗಲೂ ಈ ರೀತಿ ನಿಯಮಗಳು ಜಾರಿ ಮಾಡಿರಲಿಲ್ಲ. ಅಲ್ಲದೇ ಪಕ್ಕದ ಮಹಾರಾಷ್ಟ್ರ ರಾಜ್ಯದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಯಾವುದೇ ನಿರ್ಭಂದವಿಲ್ಲ ಎಂದರು.

ರಾಜ್ಯದಲ್ಲಿ ಬಾರ್ ಗಳು, ಮಹಲ್, ಸಾರಿಗೆ, ದೇವಸ್ಥಾನ, ಚರ್ಚ್, ವ್ಯಾಯಾಮ ಶಾಲೆಗಳಿಗೆ ಅನುಮತಿ ನೀಡಿದ್ದು ಗಣೇಶನ ಉತ್ಸವಕ್ಕೆ ಈ ರೀತಿಯ ಸರ್ಕಾರದ ನಿರ್ಭಂದವೇಕೆ ಎಂದರು.

ಈ ಬೆಳವಣಿಗೆಯನ್ನು ನೋಡಿದರೆ ದೇಶದಲ್ಲಿನ ಹಿಂದೂ ಧರ್ಮಗಳ ಹಬ್ಬಗಳನ್ನು ಹಂತ ಹಂತವಾಗಿ ನಿಲ್ಲಿಸುವ ಸಂಚು ಎದ್ದು ಕಾಣುತ್ತಿದೆ. ಹಿಂದೂ ಧರ್ಮದ ಭಾವನೆಗಳಿಗೆ ಧಕ್ಕೆ ತರುವ ಸರ್ಕಾರದ ಈ ನಿರ್ಧಾರವನ್ನು ಹಿಂದಕ್ಕೆ ಪಡೆಯಬೇಕು ಎಂದು ಹಿಂದೂ ಜಾಗರಣ ವೇದಿಕೆ ಆಗ್ರಹಿಸಿದ್ದಾರೆ.

ಈ ವೇಳೆ ಮಂಜುನಾಥ್ ರಟ್ಟಿಹಳ್ಳಿ, ದಿನೇಶ್ ಅರ್ಜುನ್, ಬಿ.ಟಿ ಚೇತನ್, ಭರತ್ ಶೆಟ್ಟಿ, ಚಂದನ್, ಪ್ರವೀಣ್ ಹನಗವಾಡಿ ಹಾಗೂ ಇತರೆ ಸದಸ್ಯರು ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.