ETV Bharat / state

ದಾವಣಗೆರೆ ದಕ್ಷಿಣ ಮತಕ್ಷೇತ್ರದಲ್ಲಿ ಕಾಂಗ್ರೆಸ್​ ಟಿಕೆಟ್​ ಮೇಲೆ ಮುಸ್ಲಿಂ ನಾಯಕರ ಕಣ್ಣು: ಬಿಜೆಪಿ ರಣತಂತ್ರವೇನು?

author img

By

Published : Mar 14, 2023, 5:44 PM IST

Updated : Mar 15, 2023, 2:28 PM IST

ಕರ್ನಾಟಕ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದೆ. ರಾಜ್ಯದ ಪ್ರಮುಖ ಕ್ಷೇತ್ರದಲ್ಲಿ ದಾವಣಗೆರೆ ದಕ್ಷಿಣ ಮತಕ್ಷೇತ್ರ ಕೂಡ ಒಂದಾಗಿದ್ದು, ಈ ಕ್ಷೇತ್ರವನ್ನು ಕಾಂಗ್ರೆಸ್​ನ ಪ್ರಭಾವಿ ನಾಯಕ ಶಾಮನೂರು ಶಿವಶಂಕರಪ್ಪ ಪ್ರತಿನಿಧಿಸುತ್ತಿದ್ದಾರೆ. ಈ ಬಾರಿ ಕ್ಷೇತ್ರದಲ್ಲಿ ಲೆಕ್ಕಾಚಾರ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

assembly-election-2013-davanagere-south-constituency-congress-bjp-jds-battle
ದಾವಣಗೆರೆ ದಕ್ಷಿಣ ಮತಕ್ಷೇತ್ರದಲ್ಲಿ ಕಾಂಗ್ರೆಸ್​ ಟಿಕೆಟ್​ ಮೇಲೆ ಮುಸ್ಲಿಂ ನಾಯಕರ ಕಣ್ಣು: ಬಿಜೆಪಿ ರಣತಂತ್ರವೇನು?

ದಾವಣಗೆರೆ: ಬೆಣ್ಣೆನಗರಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆ. ಕ್ಷೇತ್ರ ಪುನರ್​ ವಿಂಗಡಣೆಯಾದ ನಂತರ ನಡೆದ ಮೂರೂ ಚುನಾವಣೆಗಳಲ್ಲೂ ಕಾಂಗ್ರೆಸ್​ನ ಪ್ರಭಾವಿ ನಾಯಕ, ವೀರಶೈವ ಲಿಂಗಾಯಿತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರೂ ಆದ ಶಾಮನೂರು ಶಿವಶಂಕರಪ್ಪ ಸತತವಾಗಿ ಗೆಲುವು ಸಾಧಿಸುವ ಮೂಲಕ ಹ್ಯಾಟ್ರಿಕ್​ ಬಾರಿಸಿದ್ದಾರೆ. ಹೀಗಾಗಿ ಬಿಜೆಪಿಗೆ ಈ ಮತ ಕ್ಷೇತ್ರವು ಕಬ್ಬಿಣದ ಕಡಲೆಯಾಗಿ ಪರಿಣಿಮಿಸಿದೆ. ಆದರೆ, ಈ ಬಾರಿ ಕಾಂಗ್ರೆಸ್​ನಲ್ಲೇ ಭಿನ್ನಮತ ಸ್ಫೋಟಗೊಂಡಿದ್ದು, ಟಿಕೆಟ್​ ಆಕಾಂಕ್ಷಿಗಳು ಪಟ್ಟಿ ಬೆಳೆದಿದೆ.

2008ರಲ್ಲಿ ಕ್ಷೇತ್ರ ಕ್ಷೇತ್ರ ಪುನರ್​ ವಿಂಗಡಣೆಯಿಂದ ದಾವಣಗೆರೆ ವಿಧಾನಸಭಾ ಕ್ಷೇತ್ರವು ದಕ್ಷಿಣ ಮತ್ತು ಉತ್ತರ ಕ್ಷೇತ್ರಗಳೆಂದು ವಿಭಜನೆಯಾಗಿದೆ. ಆದರೆ, ಮೂಲ ದಾವಣಗೆರೆ ಅಂದರೆ ಹಳೆ ದಾವಣಗೆರೆಯ ಭಾಗವಾಗಿದ್ದು, ಇದೀಗ ಅದು ದಕ್ಷಿಣ ವಿಧಾನಸಭಾ ಕ್ಷೇತ್ರವಾಗಿ ಜಾರಿಗೆ ಬಂದಿದೆ. ಇಲ್ಲಿ ಕಾಂಗ್ರೆಸ್​ ಪಕ್ಷ ತನ್ನ ಹಿಡಿತ ಸಾಧಿಸುತ್ತಲೇ ಬಂದಿದೆ. ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಪ್ರತಿನಿಧಿಸುತ್ತಿದ್ದಾರೆ. 2008ರಿಂದ ಅವರು ನಿರಂತರವಾಗಿ ಗೆಲುವು ಸಾಧಿಸುತ್ತಾ ಬಂದಿದ್ದರಿಂದ ಕಾಂಗ್ರೆಸ್​ನ ಭದ್ರಕೋಟೆಯಾಗಿ ಮಾರ್ಪಟ್ಟಿದೆ.

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಮಾಹಿತಿ
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಮಾಹಿತಿ

ಮೂರು ಚುನಾವಣೆಗಳ ಇತಿಹಾಸ: 2008ರ ಚುನಾವಣೆಯಲ್ಲಿ ಈ ಕ್ಷೇತ್ರ ಕಾಂಗ್ರೆಸ್​ ವಶವಾಯಿತು. ಈ ಚುನಾವಣೆಯಲ್ಲಿ ಶಾಮನೂರು ಶಿವಶಂಕರಪ್ಪ 6,358 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಆಗ ಅವರು 41,675 ಮತಗಳನ್ನು ಪಡೆದಿದ್ದರು. ಬಿಜೆಪಿಯಿಂದ ಸ್ಪರ್ಧಿಸಿದ್ದ ಯಶವಂತರಾವ್ ಜಾಧವ್ 35,317 ಮತಗಳನ್ನು ಪಡೆದು ಪ್ರಬಲ ಪೈಪೋಟಿ ನೀಡಿದ್ದರು. ಈ ಚುನಾವಣೆಯಲ್ಲಿ ಜೆಡಿಎಸ್​ ಕಣದಲ್ಲಿ ಇರಲಿಲ್ಲ.

2013ರ ಚುನಾವಣೆಯಲ್ಲೂ ಕಾಂಗ್ರೆಸ್​ನಿಂದ ಸ್ಪರ್ಧಿಸಿದ್ದ ಶಾಮನೂರು ಶಿವಶಂಕರಪ್ಪ 66,320 ಮತಗಳನ್ನು ಪಡೆದು ಎರಡನೇ ಬಾರಿಗೂ ಜಯ ಸಾಧಿಸಿದ್ದರು. ಜೆಡಿಎಸ್​​ನಿಂದ ಕಣಕ್ಕಿಳಿದಿದ್ದ ಕರೆಕಟ್ಟೆ ಸೈಯದ್ ಸೈಫುಲ್ಲಾ 26,162 ಮತಗಳ ಪಡೆದು ಗಮನ ಸೆಳೆದಿದ್ದರು. ಬಿಜೆಪಿಯ ಬಿ. ಲೋಕೇಶ್​ ಅತಿ ಕಡಿಮೆ ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ಕುಸಿದಿದ್ದರು.

2018ರಲ್ಲಿ ಮೂರನೇ ಬಾರಿಗೆ ಶಾಮನೂರು ಗೆಲುವು ಸಾಧಿಸಿ ತಮ್ಮ ಪ್ರಾಬಲ್ಯ ತೋರಿದ್ದರು. ಅಲ್ಲದೇ, ಕಳೆದ ಎರಡು ಚುನಾವಣೆಗಳಿಂತ ಹೆಚ್ಚಿನ ಎಂದರೆ 71,369 ಮತಗಳು ಪಡೆದು ಹ್ಯಾಟ್ರಿಕ್​ ಬಾರಿಸಿದ್ದರು. ಬಿಜೆಪಿಯಿಂದ ಮತ್ತೊಮ್ಮೆ ಅಗ್ನಿ ಪರೀಕ್ಷೆಗೆ ಇಳಿದಿದ್ದ ಯಶವಂತರಾವ್​ ಜಾಧವ್ 55,485 ಮತಗಳು ಪಡೆದು ಸೋತಿದ್ದರು. ಜೆಡಿಎಸ್ ಅಭ್ಯರ್ಥಿಯಾಗಿದ್ದ ಅಮಾನುಲ್ಲಾ ಖಾನ್ ಠೇವಣಿ ಕಳೆದುಕೊಂಡಿದ್ದರು.

ಕಾಂಗ್ರೆಸ್​ನಲ್ಲಿ ಹೆಚ್ಚಿದ ಟಿಕೆಟ್ ಆಕಾಂಕ್ಷಿಗಳು: ಕ್ಷೇತ್ರದಲ್ಲಿ ಸತತವಾಗಿ ಮೂರು ಬಾರಿ ಗೆಲುವು ಸಾಧಿಸಿರುವ ಲಿಂಗಾಯಿತ ಪ್ರಬಲ ನಾಯಕರಾದ ಶಾಮನೂರು ಶಿವಶಂಕರಪ್ಪ ಮತ್ತೊಮ್ಮೆ ಸ್ಪರ್ಧಿಸುವ ಇಚ್ಛೆ ಹೊಂದಿದ್ದಾರೆ. ಮುಸ್ಲಿಂ ಮತ್ತು ಲಿಂಗಾಯಿತ ಮತಗಳು ಹೆಚ್ಚಿದ್ದು, ಎರಡನ್ನೂ ಕ್ರೂಢೀಕರಣ ಮಾಡಲು ಸಫಲರಾಗುತ್ತಿದ್ದಾರೆ. ಆದರೆ, 83 ಸಾವಿರ ಮುಸ್ಲಿಂ ಮತದಾರರಿದ್ದು, ಕಾಂಗ್ರೆಸ್​ ಗೆಲುವಿಗೆ ನಿರ್ಣಾಯಕ ಪಾತ್ರ ವಹಿಸುತ್ತಿದ್ದಾರೆ. ಮುಸ್ಲಿಂ ಮತದಾರರೇ ಇಲ್ಲಿ ಶಿವಶಂಕರಪ್ಪ ಅವರ ಕೈ ಹಿಡಿಯುತ್ತಾ ಬರುತ್ತಿದ್ದಾರೆ ಎಂಬುವುದು ಸುಳ್ಳಲ್ಲ. ಆದರೆ, ಈ ಬಾರಿ ಮುಸ್ಲಿಂ ಮುಖಂಡರು ಪಕ್ಷದ ಟಿಕೆಟ್​ ಮೇಲೆ ಕಣ್ಣಿಟ್ಟಿದ್ದಾರೆ.

ಕ್ಷೇತ್ರದಲ್ಲಿ ಮುಸ್ಲಿಮರ ಪ್ರಾಬಲ್ಯ ಹೆಚ್ಚಿದ್ದರೂ ಕೂಡ ಸಮುದಾಯದ ವ್ಯಕ್ತಿಗೆ ಟಿಕೆಟ್ ಕೊಡದೇ ಕಾಂಗ್ರೆಸ್​ ವಂಚಿಸುತ್ತಿದೆ ಎಂಬ ಆರೋಪವನ್ನು ಮುಸ್ಲಿಂ ಮುಖಂಡರು ಮಾಡುತ್ತಿದ್ದಾರೆ. ಅಲ್ಲದೇ, ಸಾಧಿಕ್ ಫೈಲ್ವಾನ್, ಸೈಯದ್ ಸೈಪುಲ್ಲಾ, ಮಹಮ್ಮದ್ ಇಕ್ಬಾಲ್, ಸೈಯದ್ ಖಾಲಿದ್ ಅಹ್ಮದ್, ಇಬ್ರಾಹಿಂ ಖಲೀವುಲ್ಲಾ ಟಿಕೆಟ್​ ಬಯಸಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದಾರೆ. ಹಾಲಿ ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ಬಿ.ವೀರಣ್ಣ ಕೂಡ ಟಿಕೆಟ್​ಗಾಗಿ ಅರ್ಜಿ ಸಲ್ಲಿಸಿದ್ದು, ಒಟ್ಟಾರೆ ಕಾಂಗ್ರೆಸ್​​ನಲ್ಲಿ ಏಳು ಜನರು ಆಕಾಂಕ್ಷಿಗಳಿದ್ದಾರೆ.

ಮತ್ತೊಂದೆಡೆ, ಈಗಾಗಲೇ ಜೆಡಿಎಸ್ ಪಕ್ಷದಿಂದ ಮುಸ್ಲಿಂ ಸಮುದಾಯದ ಅಮಾನುಲ್ಲಾ ಖಾನ್​ ಅವರನ್ನು ಅಭ್ಯರ್ಥಿ ಎಂದು ಘೋಷಿಸಲಾಗಿದೆ. ಇದು ಕಾಂಗ್ರೆಸ್​ಗೆ ತಲೆಬಿಸಿ ಆಗುವಂತೆ ಆಗಿದೆ. ಬಿಜೆಪಿಯಿಂದ ಪರಾಜಿತ ಅಭ್ಯರ್ಥಿಯಾದ ಯಶವಂತರಾವ್ ಜಾಧವ್ ಮತ್ತೊಮ್ಮೆ ಟಿಕೆಟ್​ ಆಕಾಂಕ್ಷಿಯಾಗಿದ್ದಾರೆ. ಅಲ್ಲದೇ, ಮಾಜಿ ಮೇಯರ್ ಅಜಯ್ ಕುಮಾರ್, ಬಿಎಂ ಸತೀಶ್, ಶ್ರೀನಿವಾಸ್ ದಾಸಕರಿಯಪ್ಪ, ರಾಜನಹಳ್ಳಿ ಶಿವಕುಮಾರ್, ಆನಂದಪ್ಪ, ಹೆಚ್​.ಎಸ್​.ನಾಗರಾಜ್ ಸೇರಿ ಎಂಟು ಜನ ಟಿಕೆಟ್​ ಆಕಾಂಕ್ಷಿಗಳಿದ್ದಾರೆ.

ಅದರಲ್ಲೂ, ಬಿಜೆಪಿಯಲ್ಲಿ ಈ ಬಾರಿ ಅಜಯ್​ ಕುಮಾರ್​ ಟಿಕೆಟ್​ನ ಪ್ರಬಲ ಆಕಾಂಕ್ಷಿ. ಮೇಯರ್ ಆಗಿದ್ದ ಸಂದರ್ಭದಲ್ಲಿ ಮುಸ್ಲಿಂ ಕಾಲೋನಿಗಳಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದರಿಂದ ಕೆಲ ಮುಸ್ಲಿಂ ಮತಗಳು ಕೈಹಿಡಿಯುವ ಸಾಧ್ಯತೆ ಇದೆ ಎನ್ನುವ ಲೆಕ್ಕಾಚಾರ ಇದೆ. ಒಟ್ಟಾರೆ, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿಯಾದರೂ ಗೆಲುವು ಸಾಧಿಸಬೇಕೆಂಬ ನಿಟ್ಟಿನಲ್ಲಿ ಬಿಜೆಪಿ ರಣತಂತ್ರ ರೂಪಿಸುತ್ತಿದೆ. ಕಾಂಗ್ರೆಸ್​ ತನ್ನ ಕ್ಷೇತ್ರ ಉಳಿಸಿಕೊಳ್ಳಲು ಯಾವ ಪ್ರತಿತಂತ್ರ ರೂಪಿಸಲಿದೆ ಎನ್ನುವ ಕೆಲ ದಿನಗಳಲ್ಲಿ ಗೊತ್ತಾಗಲಿದೆ.

ದಾವಣಗೆರೆ ದಕ್ಷಿಣ ಕ್ಷೇತ್ರದ ಜಾತಿವಾರು ಮತದಾರರು

ಮುಸ್ಲಿಂ 83,000
ಲಿಂಗಾಯಿತ 50,000
ಎಸ್​ಸಿ26,000
ಕುರುಬ22,000
ಮರಾಠ18,000
ಎಸ್​​ಟಿ 16,000
ಇತರ30,000

ಇದನ್ನೂ ಓದಿ: ದಕ್ಷಿಣ ಕನ್ನಡದ ಕುತೂಹಲದ ಕ್ಷೇತ್ರ ಬಂಟ್ವಾಳ: ಮಾಜಿ ಸಚಿವ-ಹಾಲಿ ಶಾಸಕರ ಮಧ್ಯೆ ಬಿಗ್ ಫೈಟ್

ದಾವಣಗೆರೆ: ಬೆಣ್ಣೆನಗರಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆ. ಕ್ಷೇತ್ರ ಪುನರ್​ ವಿಂಗಡಣೆಯಾದ ನಂತರ ನಡೆದ ಮೂರೂ ಚುನಾವಣೆಗಳಲ್ಲೂ ಕಾಂಗ್ರೆಸ್​ನ ಪ್ರಭಾವಿ ನಾಯಕ, ವೀರಶೈವ ಲಿಂಗಾಯಿತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರೂ ಆದ ಶಾಮನೂರು ಶಿವಶಂಕರಪ್ಪ ಸತತವಾಗಿ ಗೆಲುವು ಸಾಧಿಸುವ ಮೂಲಕ ಹ್ಯಾಟ್ರಿಕ್​ ಬಾರಿಸಿದ್ದಾರೆ. ಹೀಗಾಗಿ ಬಿಜೆಪಿಗೆ ಈ ಮತ ಕ್ಷೇತ್ರವು ಕಬ್ಬಿಣದ ಕಡಲೆಯಾಗಿ ಪರಿಣಿಮಿಸಿದೆ. ಆದರೆ, ಈ ಬಾರಿ ಕಾಂಗ್ರೆಸ್​ನಲ್ಲೇ ಭಿನ್ನಮತ ಸ್ಫೋಟಗೊಂಡಿದ್ದು, ಟಿಕೆಟ್​ ಆಕಾಂಕ್ಷಿಗಳು ಪಟ್ಟಿ ಬೆಳೆದಿದೆ.

2008ರಲ್ಲಿ ಕ್ಷೇತ್ರ ಕ್ಷೇತ್ರ ಪುನರ್​ ವಿಂಗಡಣೆಯಿಂದ ದಾವಣಗೆರೆ ವಿಧಾನಸಭಾ ಕ್ಷೇತ್ರವು ದಕ್ಷಿಣ ಮತ್ತು ಉತ್ತರ ಕ್ಷೇತ್ರಗಳೆಂದು ವಿಭಜನೆಯಾಗಿದೆ. ಆದರೆ, ಮೂಲ ದಾವಣಗೆರೆ ಅಂದರೆ ಹಳೆ ದಾವಣಗೆರೆಯ ಭಾಗವಾಗಿದ್ದು, ಇದೀಗ ಅದು ದಕ್ಷಿಣ ವಿಧಾನಸಭಾ ಕ್ಷೇತ್ರವಾಗಿ ಜಾರಿಗೆ ಬಂದಿದೆ. ಇಲ್ಲಿ ಕಾಂಗ್ರೆಸ್​ ಪಕ್ಷ ತನ್ನ ಹಿಡಿತ ಸಾಧಿಸುತ್ತಲೇ ಬಂದಿದೆ. ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಪ್ರತಿನಿಧಿಸುತ್ತಿದ್ದಾರೆ. 2008ರಿಂದ ಅವರು ನಿರಂತರವಾಗಿ ಗೆಲುವು ಸಾಧಿಸುತ್ತಾ ಬಂದಿದ್ದರಿಂದ ಕಾಂಗ್ರೆಸ್​ನ ಭದ್ರಕೋಟೆಯಾಗಿ ಮಾರ್ಪಟ್ಟಿದೆ.

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಮಾಹಿತಿ
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಮಾಹಿತಿ

ಮೂರು ಚುನಾವಣೆಗಳ ಇತಿಹಾಸ: 2008ರ ಚುನಾವಣೆಯಲ್ಲಿ ಈ ಕ್ಷೇತ್ರ ಕಾಂಗ್ರೆಸ್​ ವಶವಾಯಿತು. ಈ ಚುನಾವಣೆಯಲ್ಲಿ ಶಾಮನೂರು ಶಿವಶಂಕರಪ್ಪ 6,358 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಆಗ ಅವರು 41,675 ಮತಗಳನ್ನು ಪಡೆದಿದ್ದರು. ಬಿಜೆಪಿಯಿಂದ ಸ್ಪರ್ಧಿಸಿದ್ದ ಯಶವಂತರಾವ್ ಜಾಧವ್ 35,317 ಮತಗಳನ್ನು ಪಡೆದು ಪ್ರಬಲ ಪೈಪೋಟಿ ನೀಡಿದ್ದರು. ಈ ಚುನಾವಣೆಯಲ್ಲಿ ಜೆಡಿಎಸ್​ ಕಣದಲ್ಲಿ ಇರಲಿಲ್ಲ.

2013ರ ಚುನಾವಣೆಯಲ್ಲೂ ಕಾಂಗ್ರೆಸ್​ನಿಂದ ಸ್ಪರ್ಧಿಸಿದ್ದ ಶಾಮನೂರು ಶಿವಶಂಕರಪ್ಪ 66,320 ಮತಗಳನ್ನು ಪಡೆದು ಎರಡನೇ ಬಾರಿಗೂ ಜಯ ಸಾಧಿಸಿದ್ದರು. ಜೆಡಿಎಸ್​​ನಿಂದ ಕಣಕ್ಕಿಳಿದಿದ್ದ ಕರೆಕಟ್ಟೆ ಸೈಯದ್ ಸೈಫುಲ್ಲಾ 26,162 ಮತಗಳ ಪಡೆದು ಗಮನ ಸೆಳೆದಿದ್ದರು. ಬಿಜೆಪಿಯ ಬಿ. ಲೋಕೇಶ್​ ಅತಿ ಕಡಿಮೆ ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ಕುಸಿದಿದ್ದರು.

2018ರಲ್ಲಿ ಮೂರನೇ ಬಾರಿಗೆ ಶಾಮನೂರು ಗೆಲುವು ಸಾಧಿಸಿ ತಮ್ಮ ಪ್ರಾಬಲ್ಯ ತೋರಿದ್ದರು. ಅಲ್ಲದೇ, ಕಳೆದ ಎರಡು ಚುನಾವಣೆಗಳಿಂತ ಹೆಚ್ಚಿನ ಎಂದರೆ 71,369 ಮತಗಳು ಪಡೆದು ಹ್ಯಾಟ್ರಿಕ್​ ಬಾರಿಸಿದ್ದರು. ಬಿಜೆಪಿಯಿಂದ ಮತ್ತೊಮ್ಮೆ ಅಗ್ನಿ ಪರೀಕ್ಷೆಗೆ ಇಳಿದಿದ್ದ ಯಶವಂತರಾವ್​ ಜಾಧವ್ 55,485 ಮತಗಳು ಪಡೆದು ಸೋತಿದ್ದರು. ಜೆಡಿಎಸ್ ಅಭ್ಯರ್ಥಿಯಾಗಿದ್ದ ಅಮಾನುಲ್ಲಾ ಖಾನ್ ಠೇವಣಿ ಕಳೆದುಕೊಂಡಿದ್ದರು.

ಕಾಂಗ್ರೆಸ್​ನಲ್ಲಿ ಹೆಚ್ಚಿದ ಟಿಕೆಟ್ ಆಕಾಂಕ್ಷಿಗಳು: ಕ್ಷೇತ್ರದಲ್ಲಿ ಸತತವಾಗಿ ಮೂರು ಬಾರಿ ಗೆಲುವು ಸಾಧಿಸಿರುವ ಲಿಂಗಾಯಿತ ಪ್ರಬಲ ನಾಯಕರಾದ ಶಾಮನೂರು ಶಿವಶಂಕರಪ್ಪ ಮತ್ತೊಮ್ಮೆ ಸ್ಪರ್ಧಿಸುವ ಇಚ್ಛೆ ಹೊಂದಿದ್ದಾರೆ. ಮುಸ್ಲಿಂ ಮತ್ತು ಲಿಂಗಾಯಿತ ಮತಗಳು ಹೆಚ್ಚಿದ್ದು, ಎರಡನ್ನೂ ಕ್ರೂಢೀಕರಣ ಮಾಡಲು ಸಫಲರಾಗುತ್ತಿದ್ದಾರೆ. ಆದರೆ, 83 ಸಾವಿರ ಮುಸ್ಲಿಂ ಮತದಾರರಿದ್ದು, ಕಾಂಗ್ರೆಸ್​ ಗೆಲುವಿಗೆ ನಿರ್ಣಾಯಕ ಪಾತ್ರ ವಹಿಸುತ್ತಿದ್ದಾರೆ. ಮುಸ್ಲಿಂ ಮತದಾರರೇ ಇಲ್ಲಿ ಶಿವಶಂಕರಪ್ಪ ಅವರ ಕೈ ಹಿಡಿಯುತ್ತಾ ಬರುತ್ತಿದ್ದಾರೆ ಎಂಬುವುದು ಸುಳ್ಳಲ್ಲ. ಆದರೆ, ಈ ಬಾರಿ ಮುಸ್ಲಿಂ ಮುಖಂಡರು ಪಕ್ಷದ ಟಿಕೆಟ್​ ಮೇಲೆ ಕಣ್ಣಿಟ್ಟಿದ್ದಾರೆ.

ಕ್ಷೇತ್ರದಲ್ಲಿ ಮುಸ್ಲಿಮರ ಪ್ರಾಬಲ್ಯ ಹೆಚ್ಚಿದ್ದರೂ ಕೂಡ ಸಮುದಾಯದ ವ್ಯಕ್ತಿಗೆ ಟಿಕೆಟ್ ಕೊಡದೇ ಕಾಂಗ್ರೆಸ್​ ವಂಚಿಸುತ್ತಿದೆ ಎಂಬ ಆರೋಪವನ್ನು ಮುಸ್ಲಿಂ ಮುಖಂಡರು ಮಾಡುತ್ತಿದ್ದಾರೆ. ಅಲ್ಲದೇ, ಸಾಧಿಕ್ ಫೈಲ್ವಾನ್, ಸೈಯದ್ ಸೈಪುಲ್ಲಾ, ಮಹಮ್ಮದ್ ಇಕ್ಬಾಲ್, ಸೈಯದ್ ಖಾಲಿದ್ ಅಹ್ಮದ್, ಇಬ್ರಾಹಿಂ ಖಲೀವುಲ್ಲಾ ಟಿಕೆಟ್​ ಬಯಸಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದಾರೆ. ಹಾಲಿ ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ಬಿ.ವೀರಣ್ಣ ಕೂಡ ಟಿಕೆಟ್​ಗಾಗಿ ಅರ್ಜಿ ಸಲ್ಲಿಸಿದ್ದು, ಒಟ್ಟಾರೆ ಕಾಂಗ್ರೆಸ್​​ನಲ್ಲಿ ಏಳು ಜನರು ಆಕಾಂಕ್ಷಿಗಳಿದ್ದಾರೆ.

ಮತ್ತೊಂದೆಡೆ, ಈಗಾಗಲೇ ಜೆಡಿಎಸ್ ಪಕ್ಷದಿಂದ ಮುಸ್ಲಿಂ ಸಮುದಾಯದ ಅಮಾನುಲ್ಲಾ ಖಾನ್​ ಅವರನ್ನು ಅಭ್ಯರ್ಥಿ ಎಂದು ಘೋಷಿಸಲಾಗಿದೆ. ಇದು ಕಾಂಗ್ರೆಸ್​ಗೆ ತಲೆಬಿಸಿ ಆಗುವಂತೆ ಆಗಿದೆ. ಬಿಜೆಪಿಯಿಂದ ಪರಾಜಿತ ಅಭ್ಯರ್ಥಿಯಾದ ಯಶವಂತರಾವ್ ಜಾಧವ್ ಮತ್ತೊಮ್ಮೆ ಟಿಕೆಟ್​ ಆಕಾಂಕ್ಷಿಯಾಗಿದ್ದಾರೆ. ಅಲ್ಲದೇ, ಮಾಜಿ ಮೇಯರ್ ಅಜಯ್ ಕುಮಾರ್, ಬಿಎಂ ಸತೀಶ್, ಶ್ರೀನಿವಾಸ್ ದಾಸಕರಿಯಪ್ಪ, ರಾಜನಹಳ್ಳಿ ಶಿವಕುಮಾರ್, ಆನಂದಪ್ಪ, ಹೆಚ್​.ಎಸ್​.ನಾಗರಾಜ್ ಸೇರಿ ಎಂಟು ಜನ ಟಿಕೆಟ್​ ಆಕಾಂಕ್ಷಿಗಳಿದ್ದಾರೆ.

ಅದರಲ್ಲೂ, ಬಿಜೆಪಿಯಲ್ಲಿ ಈ ಬಾರಿ ಅಜಯ್​ ಕುಮಾರ್​ ಟಿಕೆಟ್​ನ ಪ್ರಬಲ ಆಕಾಂಕ್ಷಿ. ಮೇಯರ್ ಆಗಿದ್ದ ಸಂದರ್ಭದಲ್ಲಿ ಮುಸ್ಲಿಂ ಕಾಲೋನಿಗಳಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದರಿಂದ ಕೆಲ ಮುಸ್ಲಿಂ ಮತಗಳು ಕೈಹಿಡಿಯುವ ಸಾಧ್ಯತೆ ಇದೆ ಎನ್ನುವ ಲೆಕ್ಕಾಚಾರ ಇದೆ. ಒಟ್ಟಾರೆ, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿಯಾದರೂ ಗೆಲುವು ಸಾಧಿಸಬೇಕೆಂಬ ನಿಟ್ಟಿನಲ್ಲಿ ಬಿಜೆಪಿ ರಣತಂತ್ರ ರೂಪಿಸುತ್ತಿದೆ. ಕಾಂಗ್ರೆಸ್​ ತನ್ನ ಕ್ಷೇತ್ರ ಉಳಿಸಿಕೊಳ್ಳಲು ಯಾವ ಪ್ರತಿತಂತ್ರ ರೂಪಿಸಲಿದೆ ಎನ್ನುವ ಕೆಲ ದಿನಗಳಲ್ಲಿ ಗೊತ್ತಾಗಲಿದೆ.

ದಾವಣಗೆರೆ ದಕ್ಷಿಣ ಕ್ಷೇತ್ರದ ಜಾತಿವಾರು ಮತದಾರರು

ಮುಸ್ಲಿಂ 83,000
ಲಿಂಗಾಯಿತ 50,000
ಎಸ್​ಸಿ26,000
ಕುರುಬ22,000
ಮರಾಠ18,000
ಎಸ್​​ಟಿ 16,000
ಇತರ30,000

ಇದನ್ನೂ ಓದಿ: ದಕ್ಷಿಣ ಕನ್ನಡದ ಕುತೂಹಲದ ಕ್ಷೇತ್ರ ಬಂಟ್ವಾಳ: ಮಾಜಿ ಸಚಿವ-ಹಾಲಿ ಶಾಸಕರ ಮಧ್ಯೆ ಬಿಗ್ ಫೈಟ್

Last Updated : Mar 15, 2023, 2:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.