ETV Bharat / state

ಕೋವಿಡ್ ನೆಗೆಟಿವ್ ವರದಿ ನೀಡಿದರೂ ದುಬೈ ಪ್ರಯಾಣಕ್ಕೆ ಮಹಿಳೆ ವಂಚಿತೆ: ಮೊಹರಿನ ಗೊಂದಲದಿಂದ ಅವಾಂತರ ಸೃಷ್ಟಿ

author img

By

Published : Nov 22, 2020, 4:02 PM IST

ತಪಾಸಣಾ ವರದಿಯಲ್ಲಿ ಆಸ್ಪತ್ರೆಯ ಮೊಹರು, ಸಹಿ ಇದ್ದರೂ ಶಿವಮೊಗ್ಗ ಮತ್ತು ಶಿಮೊಗ್ಗ ಎಂಬ ಪದದ ದೋಷದಿಂದ ವರದಿ ಅಧಿಕೃತ ಅಲ್ಲ ಎಂದು ಮಹಿಳೆಗೆ ದುಬೈ ಪ್ರಯಾಣಕ್ಕೆ ನಿರಾಕರಿಸಲಾಗಿದೆ.

Spice jet flight news
ಸ್ಪೈಸ್ ಜೆಟ್ ವಿಮಾನ ಸಂಸ್ಥೆ

ಮಂಗಳೂರು: ಮಹಿಳೆಯೋರ್ವರು ಕೋವಿಡ್ ನೆಗೆಟಿವ್ ವರದಿ ನೀಡಿದ್ದರೂ ಸ್ಪೈಸ್ ಜೆಟ್ ವಿಮಾನ ಸಂಸ್ಥೆ ಅಧಿಕಾರಿಗಳು ಮಂಗಳೂರು ವಿಮಾನ ನಿಲ್ದಾಣದಿಂದ ದುಬೈ ಪ್ರಯಾಣಕ್ಕೆ ಅವಕಾಶ ನಿರಾಕರಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಇದರಿಂದ ಅವರು ಮತ್ತೆ ಕೋವಿಡ್ ತಪಾಸಣೆಗೊಳಗಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಶಿವಮೊಗ್ಗ ನಿವಾಸಿ ಚಾಂದ್ ಬೇಗಂ(47) ಎಂಬವರು ದುಬೈಗೆ ತೆರಳಲಿದ್ದು, ಹಾಗಾಗಿ ಕೋವಿಡ್ ತಪಾಸಣೆಯನ್ನು ಶಿವಮೊಗ್ಗದ ಇನ್​ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್​ನಲ್ಲಿ ನಡೆಸಿದ್ದರು‌. ನೆಗೆಟಿವ್ ವರದಿ ಬಂದಿರುವ ಹಿನ್ನೆಲೆಯಲ್ಲಿ ಅವರು, ನ. 20ರಂದು ರಾತ್ರಿ 11.30ಕ್ಕೆ ದುಬೈಗೆ ತೆರಳಲೆಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಸ್ಪೈಸ್ ಜೆಟ್ ವಿಮಾನ ಮೂಲಕ ದುಬೈಗೆ ಪ್ರಯಾಣಿಸಬೇಕಿತ್ತು. ಆದರೆ ತಪಾಸಣಾ ವರದಿಯಲ್ಲಿ ಆಸ್ಪತ್ರೆಯ ಮೊಹರು, ಸಹಿ ಇದ್ದರೂ ಶಿವಮೊಗ್ಗ ಮತ್ತು ಶಿಮೊಗ್ಗ ಎಂಬ ಪದದ ದೋಷದಿಂದ ವರದಿ ಅಧಿಕೃತ ಅಲ್ಲ ಎಂದು ಮಹಿಳೆಗೆ ದುಬೈ ಪ್ರಯಾಣಕ್ಕೆ ನಿರಾಕರಿಸಲಾಗಿದೆ.

ತಡರಾತ್ರಿ 3 ಗಂಟೆಯವರೆಗೆ ವಿಮಾನ ಸಂಸ್ಥೆಯ ಅಧಿಕಾರಿಗಳಲ್ಲಿ ಎಷ್ಟು ಗೋಗೆರೆದರೂ ಅಧಿಕಾರಿಗಳ ಮನಕರಗದೆ ಚಾಂದ್ ಬೇಗಂ ದುಬೈ ಪ್ರಯಾಣ ಮಾಡಲಾಗದೆ ಹಿಂದುರುಗಿ ಮನೆಗೆ ಪ್ರಯಾಣ ಬೆಳೆಸಬೇಕಾಯಿತು.

ಈ ಬಗ್ಗೆ ಸ್ಪೈಸ್ ಜೆಟ್ ಮಂಗಳೂರು ಸಾರ್ವಜನಿಕ ಸಂಪರ್ಕಾಧಿಕಾರಿ ಸಂತೋಷ್ ಮಾತನಾಡಿ, ಇದು ಉದ್ದೇಶ ಪೂರ್ವಕವಾಗಿ ನಡೆದಿರೋದಲ್ಲ. ಕೋವಿಡ್ ತಪಾಸಣಾ ವರದಿಯಲ್ಲಿ ಆಸ್ಪತ್ರೆಯ ಮೊಹರಿನ ಬದಲಾಗಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಮೊಹರು ಹಾಕಲಾಗಿದೆ. ಅದರಲ್ಲಿನ ಎಸ್ಆರ್​ಎಸ್ಎಲ್ ಕೋಡ್ ಅನ್ನು ಪರಿಶೀಲನೆ ನಡೆಸಿದಾಗ ಮಾಹಿತಿ ಲಭ್ಯವಾಗದ ಹಿನ್ನೆಲೆಯಲ್ಲಿ ಅಧಿಕೃತ ವರದಿ ತರಲು ಹೇಳಲಾಗಿದೆ. ಶನಿವಾರ ಅವರಿಗೆ ಸ್ಪೈಸ್ ಜೆಟ್ ಸಂಸ್ಥೆಯ ವತಿಯಿಂದಲೇ ಪ್ರಯಾಣದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

ಮಂಗಳೂರು: ಮಹಿಳೆಯೋರ್ವರು ಕೋವಿಡ್ ನೆಗೆಟಿವ್ ವರದಿ ನೀಡಿದ್ದರೂ ಸ್ಪೈಸ್ ಜೆಟ್ ವಿಮಾನ ಸಂಸ್ಥೆ ಅಧಿಕಾರಿಗಳು ಮಂಗಳೂರು ವಿಮಾನ ನಿಲ್ದಾಣದಿಂದ ದುಬೈ ಪ್ರಯಾಣಕ್ಕೆ ಅವಕಾಶ ನಿರಾಕರಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಇದರಿಂದ ಅವರು ಮತ್ತೆ ಕೋವಿಡ್ ತಪಾಸಣೆಗೊಳಗಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಶಿವಮೊಗ್ಗ ನಿವಾಸಿ ಚಾಂದ್ ಬೇಗಂ(47) ಎಂಬವರು ದುಬೈಗೆ ತೆರಳಲಿದ್ದು, ಹಾಗಾಗಿ ಕೋವಿಡ್ ತಪಾಸಣೆಯನ್ನು ಶಿವಮೊಗ್ಗದ ಇನ್​ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್​ನಲ್ಲಿ ನಡೆಸಿದ್ದರು‌. ನೆಗೆಟಿವ್ ವರದಿ ಬಂದಿರುವ ಹಿನ್ನೆಲೆಯಲ್ಲಿ ಅವರು, ನ. 20ರಂದು ರಾತ್ರಿ 11.30ಕ್ಕೆ ದುಬೈಗೆ ತೆರಳಲೆಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಸ್ಪೈಸ್ ಜೆಟ್ ವಿಮಾನ ಮೂಲಕ ದುಬೈಗೆ ಪ್ರಯಾಣಿಸಬೇಕಿತ್ತು. ಆದರೆ ತಪಾಸಣಾ ವರದಿಯಲ್ಲಿ ಆಸ್ಪತ್ರೆಯ ಮೊಹರು, ಸಹಿ ಇದ್ದರೂ ಶಿವಮೊಗ್ಗ ಮತ್ತು ಶಿಮೊಗ್ಗ ಎಂಬ ಪದದ ದೋಷದಿಂದ ವರದಿ ಅಧಿಕೃತ ಅಲ್ಲ ಎಂದು ಮಹಿಳೆಗೆ ದುಬೈ ಪ್ರಯಾಣಕ್ಕೆ ನಿರಾಕರಿಸಲಾಗಿದೆ.

ತಡರಾತ್ರಿ 3 ಗಂಟೆಯವರೆಗೆ ವಿಮಾನ ಸಂಸ್ಥೆಯ ಅಧಿಕಾರಿಗಳಲ್ಲಿ ಎಷ್ಟು ಗೋಗೆರೆದರೂ ಅಧಿಕಾರಿಗಳ ಮನಕರಗದೆ ಚಾಂದ್ ಬೇಗಂ ದುಬೈ ಪ್ರಯಾಣ ಮಾಡಲಾಗದೆ ಹಿಂದುರುಗಿ ಮನೆಗೆ ಪ್ರಯಾಣ ಬೆಳೆಸಬೇಕಾಯಿತು.

ಈ ಬಗ್ಗೆ ಸ್ಪೈಸ್ ಜೆಟ್ ಮಂಗಳೂರು ಸಾರ್ವಜನಿಕ ಸಂಪರ್ಕಾಧಿಕಾರಿ ಸಂತೋಷ್ ಮಾತನಾಡಿ, ಇದು ಉದ್ದೇಶ ಪೂರ್ವಕವಾಗಿ ನಡೆದಿರೋದಲ್ಲ. ಕೋವಿಡ್ ತಪಾಸಣಾ ವರದಿಯಲ್ಲಿ ಆಸ್ಪತ್ರೆಯ ಮೊಹರಿನ ಬದಲಾಗಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಮೊಹರು ಹಾಕಲಾಗಿದೆ. ಅದರಲ್ಲಿನ ಎಸ್ಆರ್​ಎಸ್ಎಲ್ ಕೋಡ್ ಅನ್ನು ಪರಿಶೀಲನೆ ನಡೆಸಿದಾಗ ಮಾಹಿತಿ ಲಭ್ಯವಾಗದ ಹಿನ್ನೆಲೆಯಲ್ಲಿ ಅಧಿಕೃತ ವರದಿ ತರಲು ಹೇಳಲಾಗಿದೆ. ಶನಿವಾರ ಅವರಿಗೆ ಸ್ಪೈಸ್ ಜೆಟ್ ಸಂಸ್ಥೆಯ ವತಿಯಿಂದಲೇ ಪ್ರಯಾಣದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.