ETV Bharat / state

ಅಕ್ರಮ ಗೋಸಾಗಣೆ: ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ರಸ್ತೆ ತಡೆ

author img

By

Published : Oct 4, 2020, 11:12 AM IST

ವಿಶ್ವ ಹಿಂದೂ ಪರಿಷತ್ - ಬಜರಂಗದಳದ ಕಾರ್ಯಕರ್ತರು ಇಂದು ಬೆಳ್ಳಂಬೆಳಗ್ಗೆ 5 ಗಂಟೆಗೆ ಅಕ್ರಮ ಗೋಸಾಗಣೆ ವಿರುದ್ಧ ಪ್ರತಿಭಟನೆ ನಡೆಸಿದರು. ಮಣ್ಣಗುಡ್ಡ ಗುರ್ಜಿ ಬಳಿ ಎರಡು ಕರುಗಳನ್ನು ಕಟ್ಟಿ ರಸ್ತೆ ತಡೆ ನಡೆಸಿ, ತಕ್ಷಣ 407 ವಾಹನ ಸಹಿತ ಗೋಕಳ್ಳರನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.

Vishwa Hindu Parishad - Bajrang Dal activists protest In Mangalore
ಗೋಕಳ್ಳರನ್ನು ಬಂಧಿಸಲು ಆಗ್ರಹಿಸಿ ರಸ್ತೆ ತಡೆ ನಡೆಸಿ ಪ್ರತಿಭಟನೆ

ಮಂಗಳೂರು: ಅಕ್ರಮವಾಗಿ ದನದ ಕರುಗಳನ್ನು ಸಾಗಿಸುತ್ತಿರುವುದನ್ನು ಖಂಡಿಸಿ ಬೆಳ್ಳಂಬೆಳಗ್ಗೆ ನಗರದ ಮಣ್ಣಗುಡ್ಡ ಗುರ್ಜಿ ಬಳಿ ವಿಶ್ವ ಹಿಂದೂ ಪರಿಷತ್ - ಬಜರಂಗದಳದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ನೇತ್ರಾವತಿ ಎಂಬ ಹೆಸರಿನ 407 ವಾಹನವೊಂದರಲ್ಲಿ ನಸುಕಿನ ಜಾವದಲ್ಲಿ 30-35 ದನದ ಕರುಗಳನ್ನು ಅಮಾನವೀಯವಾಗಿ ತುಂಬಿಸಿ ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಕೆಎಸ್ಆರ್ ಟಿಸಿ ಬಳಿ ಹಂಪ್ಸ್ ನಲ್ಲಿ ವಾಹನದಿಂದ 2 ದನದ ಕರುಗಳು ಬಿದ್ದಿವೆ. ಇದನ್ನು ಕಂಡು ಸ್ಥಳೀಯರು ವಿಶ್ವ ಹಿಂದೂ ಪರಿಷತ್ - ಬಜರಂಗದಳದ ಕಾರ್ಯಕರ್ತರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ವಾಹನವನ್ನು ವಿಹಿಂಪ-ಬಜರಂಗದಳದ ಕಾರ್ಯಕರ್ತರು ಬೆನ್ನಟ್ಟಿದ್ದಾರೆ. ಈ ಸಂದರ್ಭ ವಾಹನದಿಂದ ಎ.ಜೆ. ಆಸ್ಪತ್ರೆಯ ಬಳಿ, ಉರ್ವಸ್ಟೋರ್, ಮಣ್ಣಗುಡ್ಡ ಗುರ್ಜಿ ಬಳಿ ಹಂಪ್ಸ್ ನಲ್ಲಿ ಕರುಗಳು ಬಿದ್ದಿವೆ.

ಗೋಕಳ್ಳರನ್ನು ಬಂಧಿಸಲು ಆಗ್ರಹಿಸಿ ರಸ್ತೆ ತಡೆ ನಡೆಸಿ ಪ್ರತಿಭಟನೆ

ಇದರಿಂದ ಆಕ್ರೋಶಗೊಂಡ ವಿಶ್ವ ಹಿಂದೂ ಪರಿಷತ್ - ಬಜರಂಗದಳದ ಕಾರ್ಯಕರ್ತರು ಬೆಳ್ಳಂಬೆಳಗ್ಗೆ 5 ಗಂಟೆಗೆ ಮಣ್ಣಗುಡ್ಡ ಗುರ್ಜಿ ಬಳಿ ಎರಡು ದನದ ಕರುಗಳನ್ನು ಕಟ್ಟಿ ರಸ್ತೆ ತಡೆ ನಡೆಸಿ ತಕ್ಷಣ 407 ವಾಹನ ಸಹಿತ ಗೋಕಳ್ಳರನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರು ರಸ್ತೆ ತಡೆ ನಡೆಸದಂತೆ ಎಷ್ಟೇ ಮನವಿ ಮಾಡಿದರೂ ಕಾರ್ಯಕರ್ತರು ಮಳೆಯನ್ನೂ ಲೆಕ್ಕಿಸದೆ ಪ್ರತಿಭಟನೆ ಮುಂದುವರಿಸಿದರು.

ಪೊಲೀಸರು ದನದ ಕರುಗಳನ್ನು ಅಲ್ಲಿಂದ ಠಾಣೆಗೆ ಟೆಂಪೊದಲ್ಲಿ ಕೊಂಡೊಯ್ಯಲು ಯತ್ನಿಸಿದಾಗ ವಿಶ್ವ ಹಿಂದೂ ಪರಿಷತ್ - ಬಜರಂಗದಳದ ಕಾರ್ಯಕರ್ತರು ಆಕ್ರೋಶಿತರಾಗಿ, ಟೆಂಪೊವನ್ನು ಹಿಂದೆ ಕಳುಹಿಸಿದ್ದಾರೆ. ಬಳಿಕ ಪೊಲೀಸರು ಕಾರ್ಯಕರ್ತರನ್ನು ಮನವೊಲಿಸಿದಾಗ 7.30 ಸುಮಾರಿಗೆ ದನದ ಕರುಗಳ ಸಹಿತ ಬರ್ಕೆ ಪೊಲೀಸ್ ಠಾಣೆಗೆ ತೆರಳಿದ್ದಾರೆ.

ಮಂಗಳೂರು: ಅಕ್ರಮವಾಗಿ ದನದ ಕರುಗಳನ್ನು ಸಾಗಿಸುತ್ತಿರುವುದನ್ನು ಖಂಡಿಸಿ ಬೆಳ್ಳಂಬೆಳಗ್ಗೆ ನಗರದ ಮಣ್ಣಗುಡ್ಡ ಗುರ್ಜಿ ಬಳಿ ವಿಶ್ವ ಹಿಂದೂ ಪರಿಷತ್ - ಬಜರಂಗದಳದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ನೇತ್ರಾವತಿ ಎಂಬ ಹೆಸರಿನ 407 ವಾಹನವೊಂದರಲ್ಲಿ ನಸುಕಿನ ಜಾವದಲ್ಲಿ 30-35 ದನದ ಕರುಗಳನ್ನು ಅಮಾನವೀಯವಾಗಿ ತುಂಬಿಸಿ ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಕೆಎಸ್ಆರ್ ಟಿಸಿ ಬಳಿ ಹಂಪ್ಸ್ ನಲ್ಲಿ ವಾಹನದಿಂದ 2 ದನದ ಕರುಗಳು ಬಿದ್ದಿವೆ. ಇದನ್ನು ಕಂಡು ಸ್ಥಳೀಯರು ವಿಶ್ವ ಹಿಂದೂ ಪರಿಷತ್ - ಬಜರಂಗದಳದ ಕಾರ್ಯಕರ್ತರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ವಾಹನವನ್ನು ವಿಹಿಂಪ-ಬಜರಂಗದಳದ ಕಾರ್ಯಕರ್ತರು ಬೆನ್ನಟ್ಟಿದ್ದಾರೆ. ಈ ಸಂದರ್ಭ ವಾಹನದಿಂದ ಎ.ಜೆ. ಆಸ್ಪತ್ರೆಯ ಬಳಿ, ಉರ್ವಸ್ಟೋರ್, ಮಣ್ಣಗುಡ್ಡ ಗುರ್ಜಿ ಬಳಿ ಹಂಪ್ಸ್ ನಲ್ಲಿ ಕರುಗಳು ಬಿದ್ದಿವೆ.

ಗೋಕಳ್ಳರನ್ನು ಬಂಧಿಸಲು ಆಗ್ರಹಿಸಿ ರಸ್ತೆ ತಡೆ ನಡೆಸಿ ಪ್ರತಿಭಟನೆ

ಇದರಿಂದ ಆಕ್ರೋಶಗೊಂಡ ವಿಶ್ವ ಹಿಂದೂ ಪರಿಷತ್ - ಬಜರಂಗದಳದ ಕಾರ್ಯಕರ್ತರು ಬೆಳ್ಳಂಬೆಳಗ್ಗೆ 5 ಗಂಟೆಗೆ ಮಣ್ಣಗುಡ್ಡ ಗುರ್ಜಿ ಬಳಿ ಎರಡು ದನದ ಕರುಗಳನ್ನು ಕಟ್ಟಿ ರಸ್ತೆ ತಡೆ ನಡೆಸಿ ತಕ್ಷಣ 407 ವಾಹನ ಸಹಿತ ಗೋಕಳ್ಳರನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರು ರಸ್ತೆ ತಡೆ ನಡೆಸದಂತೆ ಎಷ್ಟೇ ಮನವಿ ಮಾಡಿದರೂ ಕಾರ್ಯಕರ್ತರು ಮಳೆಯನ್ನೂ ಲೆಕ್ಕಿಸದೆ ಪ್ರತಿಭಟನೆ ಮುಂದುವರಿಸಿದರು.

ಪೊಲೀಸರು ದನದ ಕರುಗಳನ್ನು ಅಲ್ಲಿಂದ ಠಾಣೆಗೆ ಟೆಂಪೊದಲ್ಲಿ ಕೊಂಡೊಯ್ಯಲು ಯತ್ನಿಸಿದಾಗ ವಿಶ್ವ ಹಿಂದೂ ಪರಿಷತ್ - ಬಜರಂಗದಳದ ಕಾರ್ಯಕರ್ತರು ಆಕ್ರೋಶಿತರಾಗಿ, ಟೆಂಪೊವನ್ನು ಹಿಂದೆ ಕಳುಹಿಸಿದ್ದಾರೆ. ಬಳಿಕ ಪೊಲೀಸರು ಕಾರ್ಯಕರ್ತರನ್ನು ಮನವೊಲಿಸಿದಾಗ 7.30 ಸುಮಾರಿಗೆ ದನದ ಕರುಗಳ ಸಹಿತ ಬರ್ಕೆ ಪೊಲೀಸ್ ಠಾಣೆಗೆ ತೆರಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.