ಉಳ್ಳಾಲ(ದಕ್ಷಿನ ಕನ್ನಡ): ದೇರಳಕಟ್ಟೆ ಎರಡು ಆಸ್ಪತ್ರೆಗಳ ನಡುವೆ ಇರುವ ಫ್ಲಾಟ್ ಒಂದರಲ್ಲಿ ಅಗ್ನಿ ಅವಘಢ ಸಂಭವಿಸಿದೆ. ಫ್ಲಾಟ್ನ ಮ್ಯಾನೇಜರ್ ಸಮಯ ಪ್ರಜ್ಞೆಯಿಂದ 100ಕ್ಕೂ ಅಧಿಕ ಮಂದಿಯಿರುವ 13 ಮಹಡಿಗಳ ಫ್ಲಾಟ್ನ ಅಗ್ನಿ ದುರಂತ ತಪ್ಪಿದೆ. ದೇರಳಕಟ್ಟೆ ಕ್ಷೇಮ ಆಸ್ಪತ್ರೆ ಬಳಿಯಿರುವ ಫ್ಲಾಮ ನೆಸ್ಟ್ ಫ್ಲಾಟ್ನಲ್ಲಿ ಅಗ್ನಿ ಅವಘಢ ಸಂಭವಿಸಿರುವುದು.
ಘಟನೆ ವಿವರ: ಫ್ಲಾಟ್ನ 202ರ ರೂಮಿನಲ್ಲಿ ದಂತ ವೈದ್ಯಕೀಯ ಕಲಿಯುವ ಇಬ್ಬರು ವಿದ್ಯಾರ್ಥಿನಿಯರಿದ್ದು, ಡಿ.20ರ ಬೆಳಿಗ್ಗೆ ಕಾಲೇಜಿನಲ್ಲಿ ಕಾರ್ಯಾಗಾರ ಇದೆಯೆಂದು ಬೇಗನೇ ತೆರಳಿದ್ದರು. ಆದರೆ ಆತುರದಲ್ಲಿ ಬಟ್ಟೆಗಳಿಗೆ ಇಸ್ತ್ರಿ ಹಾಕಿರುವ ವಿದ್ಯಾರ್ಥಿನಿಯರು, ಸ್ವಿಚ್ ಆಫ್ ಮಾಡಿದರೂ, ಇಸ್ತ್ರಿ ಪೆಟ್ಟಿಗೆಯನ್ನು ಮಲಗುವ ಬೆಡ್ನಲ್ಲಿರಿಸಿ ಕಾಲೇಜಿಗೆ ತೆರಳಿದ್ದರು.
ಆದರೆ ಬೆಳಗಿನಿಂದ ಹೊಗೆಯ ವಾಸನೆ ಫ್ಲಾಟ್ ತುಂಬಾ ಬರುತ್ತಿರುವುದನ್ನು ಮ್ಯಾನೇಜರ್ ಮಹಮ್ಮದ್ ಶಾಹಿದ್ ಶಫೀಕ್ ಫ್ಲಾಟ್ಗಳನ್ನು ಪರೀಕ್ಷಿಸುವಾಗ 202ರಲ್ಲಿ ಹೊಗೆ ಬರುತ್ತಿರುವುದು ಗಮನಕ್ಕೆ ಬಂದಿದೆ. ತಕ್ಷಣ ವಿದ್ಯಾರ್ಥಿನಿಯರಿಗೆ ಕರೆ ಮಾಡಿ ವಾಪಸ್ ಬರುವಂತೆ ಹೇಳಿದ್ದಾರೆ. ಫ್ಲಾಟ್ ನತ್ತ ಬಂದ ವಿದ್ಯಾರ್ಥಿನಿಯರು ಬಾಗಿಲು ತೆರೆದಾಗ ರೂಮ್ ತುಂಬಾ ಹೊಗೆ ತುಂಬಿಕೊಂಡಿದೆ.
ಶಾಹಿದ್ ಶಫೀಕ್ ಒಳಗಡೆ ಹೋಗಿ ನೋಡಿದಾಗ ಬೆಡ್ಗೆ ಬೆಂಕಿ ತಗುಲಿರುವುದ ಬೆಳಕಿಗೆ ಬಂದಿದೆ. ವಾಚ್ಮ್ಯಾನ್ ಲೋಕೇಶ್ ಅವರೊಂದಿಗೆ ಸೇರಿ ಬೆಡ್ ಹೊರಹಾಕಿ ಅಗ್ನಿ ಅವಘಡವನ್ನು ತಪ್ಪಿಸಿದ್ದಾರೆ.
ಇದನ್ನೂ ಓದಿ: ಫಿಫಾ ಫೈನಲ್ನೊಂದಿಗೆ ಎಣ್ಣೆ ಕಿಕ್.. ಒಂದೇ ದಿನ ಮದ್ಯ ಮಾರಾಟದಿಂದ ತುಂಬಿತು ಕೇರಳದ ಖಜಾನೆ