ETV Bharat / state

ಸುಮಾರು 1ಗಂಟೆ ಕಾದು ನಿಂತು ಕುಮಾರಸ್ವಾಮಿ ಭೇಟಿಯಾದ ಮಂಗಳೂರು ಪೊಲೀಸ್​ ಕಮಿಷನರ್​​ - ಸುಮಾರು ಒಂದು ಗಂಟೆಗೂ ಅಧಿಕ ಕಾಲ ಕಾದು ಮಾಜಿ ಸಿಎಂ ಕುಮಾರಸ್ವಾಮಿಯವರನ್ನು ಭೇಟಿ

ಮಂಗಳೂರು ಹಿಂಸಾಚಾರ ಪ್ರಕರಣದಿಂದ ಹಿಡಿದು ಸೋಮವಾರ ಏರ್​ಪೋರ್ಟ್​ನಲ್ಲಿ ಸಜೀವ ಬಾಂಬ್​ ಪತ್ತೆ ಪ್ರಕರಣದವರೆಗೆ ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್. ಹರ್ಷ ಅವರ ವಿರುದ್ಧ ಕುಮಾರಸ್ವಾಮಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆದ್ರೆ ನಗರಕ್ಕೆ ಆಗಮಿಸಿದ್ದ ಕುಮಾರಸ್ವಾಮಿ ಅವರನ್ನು ಸ್ವತಃ ಕಮಿಷನರ್​ ಹರ್ಷ ಅವರೇ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಕಾದು ನಂತರ ಭೇಟಿ ಮಾಡಿದ್ರು.

ಕಮಿಷನರ್​​
ಕಮಿಷನರ್​​
author img

By

Published : Jan 21, 2020, 9:36 PM IST

ಮಂಗಳೂರು: ಮಾಜಿ ಸಿಎಂ ಕುಮಾರಸ್ವಾಮಿಯವರು ಮಂಗಳೂರಿಗೆ ಭೇಟಿ ನೀಡಿದ ಹಿನ್ನೆಲೆ, ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ. ಪಿ.ಎಸ್. ಹರ್ಷ ಅವರು ಸುಮಾರು ಒಂದು ಗಂಟೆಗೂ ಅಧಿಕ ಕಾಲ ಕಾದು ನಂತರ ಅವರನ್ನು ಭೇಟಿಯಾದರು.

ಉಳ್ಳಾಲದಲ್ಲಿರುವ ವಿಧಾನ ಪರಿಷತ್ ಸದಸ್ಯ ಬಿ.ಎಂ. ಫಾರೂಕ್ ಮನೆಯಲ್ಲಿ ಕುಮಾರಸ್ವಾಮಿಯವರನ್ನು ಭೇಟಿ ಮಾಡಿದ ಡಾ. ಪಿ.ಎಸ್. ಹರ್ಷ ಹೆಚ್​ಡಿಕೆ ಅವರೊಂದಿಗೆ ಮಾತುಕತೆ ನಡೆಸಿದರು. ಮಂಗಳೂರು ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ, ಕುಮಾರಸ್ವಾಮಿಯವರು ನಗರ ಪೊಲೀಸ್ ಆಯುಕ್ತರನ್ನು ಅಮಾನತುಗೊಳಿಸಬೇಕೆಂದು ಆಗ್ರಹಿಸಿದ್ದರು. ಆದರೆ, ಅಚ್ಚರಿಯ ಬೆಳವಣಿಗೆಯಲ್ಲಿ ಹರ್ಷ ಅವರೇ ಹೆಚ್​ಡಿಕೆ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಸುಮಾರು 1 ಗಂಟೆ ಕಾದು ನಿಂತು ಹೆಚ್​ಡಿಕೆ ಅವರನ್ನ ಭೇಟಿಯಾದ ಮಂಗಳೂರು ಕಮಿಷನರ್​​ ಹರ್ಷ

ತಮ್ಮ ಭೇಟಿಗೆ ಯಾವುದೇ ಬಣ್ಣ ಕಲ್ಪಿಸಬೇಡಿ ಎಂದು ಹರ್ಷ ಟ್ವಿಟ್​ರ್​​ನಲ್ಲಿ ಬರೆದುಕೊಂಡಿದ್ದಾರೆ. ಅದೇ ರೀತಿ ಮಾಜಿ ಮುಖ್ಯಮಂತ್ರಿ ಹೆಚ್​ಡಿಕೆ ಕೂಡ, ಮಂಗಳೂರು ಪೊಲೀಸ್​ ಕಮಿಷನರ್ ಜೊತೆಗೆ ಮಾತುಕತೆ ನಡೆಸಿದ್ದು ನಿಜ. ಇಲ್ಲಿನ ಕೆಲವೊಂದು ಘಟನೆಗಳ ಕುರಿತು ಅವರು ನನ್ನ ಬಳಿ ಪ್ರಸ್ತಾವನೆ ಮಾಡಿದ್ದಾರೆ. ಕೆಲವು ಮಾಹಿತಿಗಳನ್ನು ಸಹ ನನ್ನ ಗಮನಕ್ಕೆ ತಂದಿದ್ದಾರೆ. ನೋಡೋಣ ಸತ್ಯಾಸತ್ಯತೆ ಏನು ಹೊರಗಡೆ ಬರುತ್ತದೆ‌‌. ಈ ಬಗ್ಗೆ ಯಾವುದನ್ನು ಬಹಿರಂಗ ಪಡಿಸಲು ಆಗುವುದಿಲ್ಲ ಎಂದು ಹೇಳಿದ್ದಾರೆ.

ಮಂಗಳೂರು: ಮಾಜಿ ಸಿಎಂ ಕುಮಾರಸ್ವಾಮಿಯವರು ಮಂಗಳೂರಿಗೆ ಭೇಟಿ ನೀಡಿದ ಹಿನ್ನೆಲೆ, ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ. ಪಿ.ಎಸ್. ಹರ್ಷ ಅವರು ಸುಮಾರು ಒಂದು ಗಂಟೆಗೂ ಅಧಿಕ ಕಾಲ ಕಾದು ನಂತರ ಅವರನ್ನು ಭೇಟಿಯಾದರು.

ಉಳ್ಳಾಲದಲ್ಲಿರುವ ವಿಧಾನ ಪರಿಷತ್ ಸದಸ್ಯ ಬಿ.ಎಂ. ಫಾರೂಕ್ ಮನೆಯಲ್ಲಿ ಕುಮಾರಸ್ವಾಮಿಯವರನ್ನು ಭೇಟಿ ಮಾಡಿದ ಡಾ. ಪಿ.ಎಸ್. ಹರ್ಷ ಹೆಚ್​ಡಿಕೆ ಅವರೊಂದಿಗೆ ಮಾತುಕತೆ ನಡೆಸಿದರು. ಮಂಗಳೂರು ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ, ಕುಮಾರಸ್ವಾಮಿಯವರು ನಗರ ಪೊಲೀಸ್ ಆಯುಕ್ತರನ್ನು ಅಮಾನತುಗೊಳಿಸಬೇಕೆಂದು ಆಗ್ರಹಿಸಿದ್ದರು. ಆದರೆ, ಅಚ್ಚರಿಯ ಬೆಳವಣಿಗೆಯಲ್ಲಿ ಹರ್ಷ ಅವರೇ ಹೆಚ್​ಡಿಕೆ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಸುಮಾರು 1 ಗಂಟೆ ಕಾದು ನಿಂತು ಹೆಚ್​ಡಿಕೆ ಅವರನ್ನ ಭೇಟಿಯಾದ ಮಂಗಳೂರು ಕಮಿಷನರ್​​ ಹರ್ಷ

ತಮ್ಮ ಭೇಟಿಗೆ ಯಾವುದೇ ಬಣ್ಣ ಕಲ್ಪಿಸಬೇಡಿ ಎಂದು ಹರ್ಷ ಟ್ವಿಟ್​ರ್​​ನಲ್ಲಿ ಬರೆದುಕೊಂಡಿದ್ದಾರೆ. ಅದೇ ರೀತಿ ಮಾಜಿ ಮುಖ್ಯಮಂತ್ರಿ ಹೆಚ್​ಡಿಕೆ ಕೂಡ, ಮಂಗಳೂರು ಪೊಲೀಸ್​ ಕಮಿಷನರ್ ಜೊತೆಗೆ ಮಾತುಕತೆ ನಡೆಸಿದ್ದು ನಿಜ. ಇಲ್ಲಿನ ಕೆಲವೊಂದು ಘಟನೆಗಳ ಕುರಿತು ಅವರು ನನ್ನ ಬಳಿ ಪ್ರಸ್ತಾವನೆ ಮಾಡಿದ್ದಾರೆ. ಕೆಲವು ಮಾಹಿತಿಗಳನ್ನು ಸಹ ನನ್ನ ಗಮನಕ್ಕೆ ತಂದಿದ್ದಾರೆ. ನೋಡೋಣ ಸತ್ಯಾಸತ್ಯತೆ ಏನು ಹೊರಗಡೆ ಬರುತ್ತದೆ‌‌. ಈ ಬಗ್ಗೆ ಯಾವುದನ್ನು ಬಹಿರಂಗ ಪಡಿಸಲು ಆಗುವುದಿಲ್ಲ ಎಂದು ಹೇಳಿದ್ದಾರೆ.

Intro:ಮಂಗಳೂರು: ಮಾಜಿ ಸಿಎಂ ಕುಮಾರಸ್ವಾಮಿಯವರ ಮಂಗಳೂರು ಭೇಟಿಯ ಹಿನ್ನೆಲೆಯಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ಅವರು ಸುಮಾರು ಒಂದು ಗಂಟೆಗೂ ಅಧಿಕ ಕಾಲ ಕಾದು ಅವರನ್ನು ಭೇಟಿಯಾದರು.

ಉಳ್ಳಾಲದಲ್ಲಿರುವ ವಿಧಾನ ಪರಿಷತ್ ಸದಸ್ಯ ಬಿ.ಎಂ.ಫಾರೂಕ್ ಮನೆಯಲ್ಲಿ ಕುಮಾರಸ್ವಾಮಿಯವರನ್ನು ಭೇಟಿ ಮಾಡಿದ ಡಾ.ಪಿ.ಎಸ್.ಹರ್ಷ ಅವರು ಮಾತುಕತೆ ನಡೆಸಿದ್ದಾರೆ.

ಮಂಗಳೂರು ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿ, ಕುಮಾರಸ್ವಾಮಿಯವರು ಮಂಗಳೂರು ನಗರ ಪೊಲೀಸ್ ಆಯುಕ್ತರನ್ನು ಅಮಾನತುಗೊಳಿಸಬೇಕೆಂದು ಆಗ್ರಹಿಸಿದ್ದರು. ಆದರೆ ಅಚ್ಚರಿಯ ಬೆಳವಣಿಗೆಯಲ್ಲಿ ಎಚ್‍ಡಿಕೆಯನ್ನು ಹರ್ಷ ಅವರು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

Body:ತಮ್ಮ ಭೇಟಿಗೆ ಯಾವುದೇ ಬಣ್ಣ ಕಲ್ಪಿಸಬೇಡಿ ಎಂದು ಹರ್ಷ ಅವರು ಟ್ವಿಟ್ ಮೂಲಕ‌ ಹೇಳಿದ್ದರು. ಅದೇ ರೀತಿ ಮಾಜಿ ಮುಖ್ಯಮಂತ್ರಿ ಎಚ್ ಡಿಕೆಯವರು, ಮಂಗಳೂರು ಕಮಿಷನರ್ ನನ್ನ ಜೊತೆಗೆ ಮಾತುಕತೆ ನಡೆಸಿದ್ದು ನಿಜ. ಇಲ್ಲಿನ ಕೆಲವೊಂದು ನಡವಳಿಕೆ ಬಗ್ಗೆ ನನ್ನ ಬಳಿ ಪ್ರಸ್ತಾವನೆ ಮಾಡಿದ್ದಾರೆ. ಕೆಲವು ಮಾಹಿತಿಗಳನ್ನು ನನ್ನ ಗಮನಕ್ಕೆ ತಂದಿದ್ದಾರೆ. ನೋಡೊಣ ಸತ್ಯಾಸತ್ಯತೆ ಏನು
ಹೊರಗಡೆ ಬರುತ್ತದೆ‌‌. ಈ ಬಗ್ಗೆ ಯಾವುದನ್ನು ಬಹಿರಂಗ ಪಡಿಸಲು ಆಗುವುದಿಲ್ಲ ಎಂದು ಹೇಳಿದ್ದರು.

Reporter_Vishwanath PanjimogaruConclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.