ETV Bharat / state

ಬೋಟ್ ದುರಂತ: ಮತ್ತೊಬ್ಬ ಮೀನುಗಾರನಿಗಾಗಿ ಮುಂದುವರಿದ ಶೋಧ

author img

By

Published : Dec 3, 2020, 9:25 AM IST

ಮಂಗಳೂರಿನಲ್ಲಿ ಸಂಭವಿಸಿದ ಬೋಟ್​ ದುರಂತದಲ್ಲಿ ನಾಪತ್ತೆಯಾಗಿರುವ ಮತ್ತೊಬ್ಬ ಮೀನುಗಾರನ ಮೃತದೇಹಕ್ಕಾಗಿ ಶೋಧ ಮುಂದುವರೆದಿದೆ.

dsd
ಮತ್ತೊಬ್ಬ ಮೀನುಗಾರನಿಗಾಗಿ ಮುಂದುವರೆದ ಶೋಧ

ಮಂಗಳೂರು: ಸಮುದ್ರದಲ್ಲಿ ಸಂಭವಿಸಿದ ಬೋಟ್ ದುರಂತದಲ್ಲಿ ನಾಪತ್ತೆಯಾದ ಆರು ಮಂದಿಯ ಪೈಕಿ ಐವರ ಮೃತದೇಹ ಪತ್ತೆಯಾಗಿದೆ. ಇನ್ನೂ ಓರ್ವನ ಮೃತದೇಹಕ್ಕಾಗಿ ಶೋಧ ಕಾರ್ಯ ಮುಂದುವರೆದಿದೆ.

ನಿನ್ನೆ ಅನ್ಸಾರ್ ಎಂಬ ಮೀನುಗಾರನ ಮೃತದೇಹ ಸಿಕ್ಕಿದೆಯಾದರೂ ಸಮುದ್ರದಾಳದಿಂದ ಶವ ಮೇಲೆ ತರುವ ವೇಳೆ ಕೈಜಾರಿ ಕೆಳಗೆ ಬಿದ್ದಿದೆ. ಕತ್ತಲು ಕವಿಯುವವರೆಗೂ ಶೋಧ ನಡೆಸಲಾಯಿತಾದರೂ ಮತ್ತೆ ಮೃತದೇಹ ಪತ್ತೆ ಮಾಡಲು ಸಾಧ್ಯವಾಗಿರಲಿಲ್ಲ.

ಓದಿ: ಮಂಗಳೂರು ಬೋಟ್ ದುರಂತ: ಐದನೇ ಮೃತದೇಹ ಪತ್ತೆ, ಕೈಜಾರಿದ ಆರನೇ ಮೃತದೇಹ

ಇಂದು ಮುಂಜಾನೆಯಿಂದ ಮತ್ತೆ ಹುಡುಕಾಟ ಮುಂದುವರಿದಿದೆ. ಕೋಸ್ಟ್ ಗಾರ್ಡ್ ಸಿಬ್ಬಂದಿ, ಮುಳುಗು ತಜ್ಞರು ಹಾಗು ಮೀನುಗಾರರು ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ.

ಮಂಗಳೂರು: ಸಮುದ್ರದಲ್ಲಿ ಸಂಭವಿಸಿದ ಬೋಟ್ ದುರಂತದಲ್ಲಿ ನಾಪತ್ತೆಯಾದ ಆರು ಮಂದಿಯ ಪೈಕಿ ಐವರ ಮೃತದೇಹ ಪತ್ತೆಯಾಗಿದೆ. ಇನ್ನೂ ಓರ್ವನ ಮೃತದೇಹಕ್ಕಾಗಿ ಶೋಧ ಕಾರ್ಯ ಮುಂದುವರೆದಿದೆ.

ನಿನ್ನೆ ಅನ್ಸಾರ್ ಎಂಬ ಮೀನುಗಾರನ ಮೃತದೇಹ ಸಿಕ್ಕಿದೆಯಾದರೂ ಸಮುದ್ರದಾಳದಿಂದ ಶವ ಮೇಲೆ ತರುವ ವೇಳೆ ಕೈಜಾರಿ ಕೆಳಗೆ ಬಿದ್ದಿದೆ. ಕತ್ತಲು ಕವಿಯುವವರೆಗೂ ಶೋಧ ನಡೆಸಲಾಯಿತಾದರೂ ಮತ್ತೆ ಮೃತದೇಹ ಪತ್ತೆ ಮಾಡಲು ಸಾಧ್ಯವಾಗಿರಲಿಲ್ಲ.

ಓದಿ: ಮಂಗಳೂರು ಬೋಟ್ ದುರಂತ: ಐದನೇ ಮೃತದೇಹ ಪತ್ತೆ, ಕೈಜಾರಿದ ಆರನೇ ಮೃತದೇಹ

ಇಂದು ಮುಂಜಾನೆಯಿಂದ ಮತ್ತೆ ಹುಡುಕಾಟ ಮುಂದುವರಿದಿದೆ. ಕೋಸ್ಟ್ ಗಾರ್ಡ್ ಸಿಬ್ಬಂದಿ, ಮುಳುಗು ತಜ್ಞರು ಹಾಗು ಮೀನುಗಾರರು ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.