ಮಂಗಳೂರು: ದಕ್ಷಿಣ ರೈಲ್ವೆಯ ಕುಲಶೇಖರ- ಪಡೀಲ್ ರೈಲು ಸುರಂಗ ಮಾರ್ಗದ ಬಳಿ ಭೂ ಕುಸಿತ ಉಂಟಾದ ಪರಿಣಾಮ ರೈಲು ಮಾರ್ಗ ಬದಲಾವಣೆ ಎರಡನೇ ದಿನವೂ ಮುಂದುವರಿದಿದ್ದು, ಕೆಲವು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.
ಆ.25ರಂದು ಹೊರಡಬೇಕಿದ್ದ ತಿರುವನಂತಪುರಂ- ಮುಂಬೈ ಲೋಕಮಾನ್ಯ ತಿಲಕ್ ನೇತ್ರಾವತಿ ಎಕ್ಸ್ಪ್ರೆಸ್ ಶೋರ್ನೂರ್- ಮೇಲಪ್ಪಕ್ಕಂ- ರೇಣಿಗುಂಟ- ವಾಡಿ- ಪುಣೆ- ಲೋನಾವಾಲ-ಕಲ್ಯಾಣ್ ಮಾರ್ಗವಾಗಿ ಚಲಿಸಲಿದೆ.ಎರ್ನಾಕುಲಂ- ನಿಝಾಮುದ್ದೀನ್ ಮಂಗಳ ಲಕ್ಷದ್ವೀಪ ಎಕ್ಸ್ಪ್ರೆಸ್ ಶೋರ್ನೂರ್- ಪೊದನೂರ್- ಈ ರೋಡ್-ಜೋಳಾರ್ಪೇಟೈ- ಅರಂಕೋಣಂ-ಪೆರಂಬೂರು- ಗುಡೂರ್-ನಾಗಪುರ- ಭೂಪಾಲ್- ಜಾನ್ಸಿ- ಆಗ್ರ - ಮಥುರಾ ಆಗಿ ಚಲಿಸಲಿದೆ. ಕೊಂಕಣ ರೈಲ್ವೆಗೆ ಸೇರಿದ ಮಡಗಾಂವ್-ಮಂಗಳೂರು ಪ್ಯಾಸೆಂಜರ್ ರೈಲು ಹಾಗೂ ಷುಡಗಾಂವ್- ಮಂಗಳೂರು ಇಂಟರ್ಸಿಟಿ ಎಕ್ಸ್ಪ್ರೆಸ್ ರೈಲು ರದ್ದುಗೊಂಡಿದೆ.
ತಿರುವನಂತಪುರದಿಂದ ಲೋಕಮಾನ್ಯ ತಿಲಕ್ ಟರ್ಮಿನಲ್ಗೆ ಸಂಚರಿಸಬೇಕಿದ್ದ ನೇತ್ರಾವತಿ ಎಕ್ಸ್ಪ್ರೆಸ್ ಭಾಗಶಃ ರದ್ದುಗೊಂಡಿದೆ. ನಾಗರಕೊಯಿಲ್- ಸಿಎಸ್ಎಂಟಿ ಎಕ್ಸ್ಪ್ರೆಸ್, ಮಂಗಳೂರು- ಮಡ್ಗಾಂವ್ ಪ್ಯಾಸೆಂಜರ್ ರೈಲು ಮಂಗಳೂರು ಜಂಕ್ಷನ್- ಮಡಗಾಂವ್ ಮಧ್ಯೆ ಭಾಗಶಃ ರದ್ದುಗೊಂಡಿದೆ. ಮಂಗಳೂರು- ಮಡ್ಗಾಂವ್ ಇಂಟರ್ಸಿಟಿ ಎಕ್ಸ್ಪ್ರೆಸ್ ರೈಲು, ಮಡ್ಗಾಂವ್- ಮಂಗಳೂರು ಡೆಮು ರೈಲು ತೋಕೂರು ಮತ್ತು ಮಂಗಳೂರು ಸೆಂಟ್ರಲ್ ನಡುವೆ ಸಹ ಭಾಗಶಃ ರದ್ದುಗೊಂಡಿದೆ. ಮಂಗಳೂರು- ಮಡ್ಗಾಂವ್ ಡೆಮು ರೈಲು, ಮಂಗಳೂರು- ಕುರ್ಲ ಮತ್ಸ್ಯಗಂಧ ಎಕ್ಸ್ಪ್ರೆಸ್ (12620) ರೈಲು ಮಂಗಳೂರಿನಿಂದ ಸುರತ್ಕಲ್ ಮಧ್ಯೆ ಭಾಗಶಃ ರದ್ದುಗೊಂಡಿದೆ. ಸಿಎಸ್ಎಂಟಿ- ಮಂಗಳೂರು ಜಂಕ್ಷನ್ ಎಕ್ಸ್ಪ್ರೆಸ್ ರೈಲು ಸುರತ್ಕಲ್- ಮಂಗಳೂರು ಜಂಕ್ಷನ್ ಮಧ್ಯೆ ಭಾಗಶ:,ಸಿಎಸ್ಎಂಟಿ- ಮಂಗಳೂರು ಜಂಕ್ಷನ್ ಎಕ್ಸ್ಪ್ರೆಸ್ ಭಾಗಶಃ ರದ್ದುಗೊಂಡಿದೆ.