ETV Bharat / state

ಬೋಟ್ ತಪಾಸಣೆಗೆ ಬಂದ ಕೇರಳ ಪೊಲೀಸರನ್ನೇ ಅಪಹರಿಸಿದ ಮಂಗಳೂರಿನ ಮೀನುಗಾರರು! - Kerala police kidnapped news

ಮಂಗಳೂರಿನ ಮೀನುಗಾರಿಕಾ ಬೋಟ್ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ತಪಾಸಣೆಗೆ ಮುಂದಾದ ಕರಾವಳಿ ಕಾವಲು ಪಡೆ ಪೊಲೀಸರನ್ನು ಮೀನುಗಾರರೇ ಅಪಹರಿಸಿರುವ ಘಟನೆ ಬೆಳಕಿಗೆ ಬಂದಿದೆ.

kerala police kidnapped by mangalore fisherman
ಬೋಟ್ ತಪಾಸಣೆಗೆ ಬಂದ ಕೇರಳ ಪೊಲೀಸರನ್ನೇ ಅಪಹರಿಸಿದ ಮಂಗಳೂರು ಮೀನುಗಾರರು!
author img

By

Published : Dec 21, 2020, 10:58 PM IST

ಮಂಗಳೂರು: ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಮಂಗಳೂರು ಮೀನುಗಾರರು ಕೇರಳ ವ್ಯಾಪ್ತಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ತಪಾಸಣೆಗೆ ಬಂದ ಅಲ್ಲಿನ ಪೊಲೀಸರನ್ನೇ ಅಪಹರಿಸಿಕೊಂಡು ಬಂದಿದ್ದಾರೆ.

19 ಮೀನುಗಾರರಿದ್ದ ಮಂಗಳೂರಿನ ಮೀನುಗಾರಿಕಾ ಬೋಟ್ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯಲ್ಲಿ ಮೀನುಗಾರಿಕೆ ನಡೆಸುತ್ತಿತ್ತು. ಈ ವೇಳೆ, ಸಮುದ್ರದಲ್ಲಿ ಗಸ್ತು ತಿರುಗುತ್ತಿದ್ದ ಕರಾವಳಿ ಕಾವಲು ಪಡೆಯ ಪೊಲೀಸರು ಈ ಬೋಟ್​ ಅಡ್ಡಗಟ್ಟಿದ್ದರು. ಸಿಬ್ಬಂದಿಗಳಾದ ರಘು ಮತ್ತು ಸುಧೀಶ್ ಎಂಬುವರು ಬೋಟ್ ಗೆ ಪ್ರವೇಶಿಸಿದ್ದರು.

ಓದಿ: ರಾಜ್ಯದಲ್ಲಿ 26 ಸಾವಿರ ಕೋಟಿ ರೂ. ಹೂಡಿಕೆಗೆ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿ ಅನುಮೋದನೆ

ಬೋಟ್​ನಲ್ಲಿ ಸರಿಯಾದ ದಾಖಲೆ ಇಲ್ಲದ ಕಾರಣ ಬೋಟ್​ ವಶಪಡಿಸಿಕೊಳ್ಳಬಹುದೆಂಬ ಭೀತಿಯಲ್ಲಿ ಮೀನುಗಾರರು ಕೇರಳ ಪೊಲೀಸರಿಗೆ ದಿಗ್ಬಂಧನ ವಿಧಿಸಿ ಮಂಗಳೂರಿಗೆ ಅಪಹರಿಸಿಕೊಂಡು ಬಂದಿದ್ದಾರೆ. ನಂತರ ಇಬ್ಬರನ್ನೂ ಬಿಡುಗಡೆಗೊಳಿಸಿದ್ದಾರೆ. ಮಾಹಿತಿ ತಿಳಿದ ಕೇರಳದ ಪೊಲೀಸರು ನಗರದಲ್ಲಿದ್ದ ಕರಾವಳಿ ಕಾವಲು ಪಡೆಯ ಪೊಲೀಸರನ್ನು ಕರೆದುಕೊಂಡು ಹೋಗಿದ್ದಾರೆ. ಕಾಸರಗೋಡು ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿದ್ದಾರೆ.

ಮಂಗಳೂರು: ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಮಂಗಳೂರು ಮೀನುಗಾರರು ಕೇರಳ ವ್ಯಾಪ್ತಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ತಪಾಸಣೆಗೆ ಬಂದ ಅಲ್ಲಿನ ಪೊಲೀಸರನ್ನೇ ಅಪಹರಿಸಿಕೊಂಡು ಬಂದಿದ್ದಾರೆ.

19 ಮೀನುಗಾರರಿದ್ದ ಮಂಗಳೂರಿನ ಮೀನುಗಾರಿಕಾ ಬೋಟ್ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯಲ್ಲಿ ಮೀನುಗಾರಿಕೆ ನಡೆಸುತ್ತಿತ್ತು. ಈ ವೇಳೆ, ಸಮುದ್ರದಲ್ಲಿ ಗಸ್ತು ತಿರುಗುತ್ತಿದ್ದ ಕರಾವಳಿ ಕಾವಲು ಪಡೆಯ ಪೊಲೀಸರು ಈ ಬೋಟ್​ ಅಡ್ಡಗಟ್ಟಿದ್ದರು. ಸಿಬ್ಬಂದಿಗಳಾದ ರಘು ಮತ್ತು ಸುಧೀಶ್ ಎಂಬುವರು ಬೋಟ್ ಗೆ ಪ್ರವೇಶಿಸಿದ್ದರು.

ಓದಿ: ರಾಜ್ಯದಲ್ಲಿ 26 ಸಾವಿರ ಕೋಟಿ ರೂ. ಹೂಡಿಕೆಗೆ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿ ಅನುಮೋದನೆ

ಬೋಟ್​ನಲ್ಲಿ ಸರಿಯಾದ ದಾಖಲೆ ಇಲ್ಲದ ಕಾರಣ ಬೋಟ್​ ವಶಪಡಿಸಿಕೊಳ್ಳಬಹುದೆಂಬ ಭೀತಿಯಲ್ಲಿ ಮೀನುಗಾರರು ಕೇರಳ ಪೊಲೀಸರಿಗೆ ದಿಗ್ಬಂಧನ ವಿಧಿಸಿ ಮಂಗಳೂರಿಗೆ ಅಪಹರಿಸಿಕೊಂಡು ಬಂದಿದ್ದಾರೆ. ನಂತರ ಇಬ್ಬರನ್ನೂ ಬಿಡುಗಡೆಗೊಳಿಸಿದ್ದಾರೆ. ಮಾಹಿತಿ ತಿಳಿದ ಕೇರಳದ ಪೊಲೀಸರು ನಗರದಲ್ಲಿದ್ದ ಕರಾವಳಿ ಕಾವಲು ಪಡೆಯ ಪೊಲೀಸರನ್ನು ಕರೆದುಕೊಂಡು ಹೋಗಿದ್ದಾರೆ. ಕಾಸರಗೋಡು ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿದ್ದಾರೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.