ಮಂಗಳೂರು: ನಗರದಲ್ಲಿ ರಸ್ತೆ ಗುಂಡಿಗಳಿಗೆ ಮಣ್ಣು ಹಾಕಿ ಮುಚ್ಚಿದ ಟ್ರಾಫಿಕ್ ಪೊಲೀಸ್ಗೆ ನಗರ ಪೊಲೀಸ್ ಆಯುಕ್ತರು ಅಭಿನಂದಿಸಿದ್ದಾರೆ.
ಟ್ರಾಫಿಕ್ ಪೊಲೀಸ್ ಪುಟ್ಟರಾಮ ಅವರು ಲಾರಿಯಲ್ಲಿ ಮಣ್ಣು ತರಿಸಿ ನಗರದ ರಸ್ತೆ ಗುಂಡಿಗಳನ್ನು ತಾವೇ ಮುಚ್ಚಿದ್ದರು. ಸ್ವತಃ ಕೈಗೆ ಸಲಿಕೆ ಹಿಡಿದು ರಸ್ತೆ ಗುಂಡಿಗೆ ಮಣ್ಣು ಹಾಕುತ್ತಿದ್ದ ವಿಡಿಯೋ ವೈರಲ್ ಆಗಿತ್ತು.