ETV Bharat / state

ಗೋಲಿಬಾರ್​​​​​ ಪ್ರಕರಣ: ಮಂಗಳೂರಿಗೆ ಸಿಐಡಿ ತಂಡ ಭೇಟಿ

ಮಂಗಳೂರಿನ ಗೋಲಿಬಾರ್​ ಪ್ರಕರಣ ತನಿಖೆಗೆ ಎಸ್‌ಪಿ ರಾಹುಲ್ ಕುಮಾರ್ ಶಹಾಪುರವಾಡ್ ನೇತೃತ್ವದ ಸಿಐಡಿ ತಂಡ ಮಂಗಳೂರಿಗೆ ಭೇಟಿ ನೀಡಿದೆ ಮಾಹಿತಿ ಕಲೆಹಾಕುತ್ತಿದೆ ಎಂದು ತಿಳಿದು ಬಂದಿದೆ.

author img

By

Published : Dec 27, 2019, 11:14 PM IST

CID team to investigate Mangalore Golibar case
ಮಂಗಳೂರು ಗೋಲಿಬಾರ್​ ಪ್ರಕರಣ

ಮಂಗಳೂರು: ನಗರದಲ್ಲಿ ನಡೆದ ಗೋಲಿಬಾರ್ ಪ್ರಕರಣದ ಬಗ್ಗೆ ತನಿಖೆ ನಡೆಸಲು ಎಸ್‌ಪಿ ರಾಹುಲ್ ಕುಮಾರ್ ಶಹಾಪುರವಾಡ್ ನೇತೃತ್ವದ ಸಿಐಡಿ ಪೊಲೀಸರ ತಂಡವು ಮಾಹಿತಿ ಸಂಗ್ರಹಣ ಕಾರ್ಯದಲ್ಲಿ ತೊಡಗಿದೆ ಎಂದು ತಿಳಿದು ಬಂದಿದೆ.

CID team to investigate Mangalore Golibar case
ಮಂಗಳೂರು ಗೋಲಿಬಾರ್​ ಪ್ರಕರಣದ ಮಾಹಿತಿ ಕಲೆಹಾಕಲು ಮುಂದಾದ ಸಿಐಡಿ

ಸಿಐಡಿ ಅಧಿಕಾರಿಗಳ ಒಂದು ತಂಡವು ನಿನ್ನೆ (ಡಿ. 26) ಮಂಗಳೂರಿಗೆ ಭೇಟಿ ನೀಡಿದ್ದು, ಗಲಭೆ ಹಾಗೂ ಗೋಲಿಬಾರ್ ನಡೆದ ಸ್ಥಳಗಳ ಮಾಹಿತಿ ಸಂಗ್ರಹ ಪರಿಶೀಲನೆ ಕಾರ್ಯದಲ್ಲಿ ತೊಡಗಿದೆ. ಆದರೆ, ಅಧಿಕೃತ ಆದೇಶ ಹೊರಬಿದ್ದ ಬಳಿಕವಷ್ಟೇ ನ್ಯಾಯಾಲಯದ ಮೂಲಕ ಪ್ರಕರಣದ ತನಿಖೆ ವಹಿಸಿಕೊಳ್ಳಲು ಈ ತಂಡ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ಮೂಲಗಳು ತಿಳಿಸಿವೆ.

ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಾಪುರ್‌ವಾಡ್ ನೇತೃತ್ವದ ತಂಡವು ಶುಕ್ರವಾರ ಸ್ಟೇಟ್‌ ಬ್ಯಾಂಕ್, ಬಂದರ್ ಸೇರಿದಂತೆ ನಗರದ ವಿವಿಧೆಡೆ ಭೇಟಿ ನೀಡಿ ಪ್ರಾಥಮಿಕ ಮಾಹಿತಿ ಕಲೆಹಾಕಿದೆ. ನಿಷೇಧಾಜ್ಞೆ ಉಲ್ಲಂಘನೆ, ಗಲಭೆ ಪ್ರಕರಣ, ಲಾಠಿಚಾರ್ಜ್, ಕಲ್ಲು ತೂರಾಟ ಸೇರಿದಂತೆ ಗೋಲಿಬಾರ್​ ಘಟನೆ ನಡೆದಿರುವ ಸ್ಥಳಗಳನ್ನು ಸಿಐಡಿ ತಂಡ ಪರಿಶೀಲನೆ ನಡೆಸಿದೆ ಎಂದು ತಿಳಿದು ಬಂದಿದೆ.

ಸಿಐಡಿ ಎಸ್ಪಿ ರಾಹುಲ್ ಕುಮಾರ್ ಶಹಾಪುರ್‌ವಾಡ್ ನೇತೃತ್ವದ ತಂಡದಲ್ಲಿ ಐದು ಮಂದಿ ಸಿಐಡಿ ಅಧಿಕಾರಿಗಳಿದ್ದಾರೆ.

ಮಂಗಳೂರು: ನಗರದಲ್ಲಿ ನಡೆದ ಗೋಲಿಬಾರ್ ಪ್ರಕರಣದ ಬಗ್ಗೆ ತನಿಖೆ ನಡೆಸಲು ಎಸ್‌ಪಿ ರಾಹುಲ್ ಕುಮಾರ್ ಶಹಾಪುರವಾಡ್ ನೇತೃತ್ವದ ಸಿಐಡಿ ಪೊಲೀಸರ ತಂಡವು ಮಾಹಿತಿ ಸಂಗ್ರಹಣ ಕಾರ್ಯದಲ್ಲಿ ತೊಡಗಿದೆ ಎಂದು ತಿಳಿದು ಬಂದಿದೆ.

CID team to investigate Mangalore Golibar case
ಮಂಗಳೂರು ಗೋಲಿಬಾರ್​ ಪ್ರಕರಣದ ಮಾಹಿತಿ ಕಲೆಹಾಕಲು ಮುಂದಾದ ಸಿಐಡಿ

ಸಿಐಡಿ ಅಧಿಕಾರಿಗಳ ಒಂದು ತಂಡವು ನಿನ್ನೆ (ಡಿ. 26) ಮಂಗಳೂರಿಗೆ ಭೇಟಿ ನೀಡಿದ್ದು, ಗಲಭೆ ಹಾಗೂ ಗೋಲಿಬಾರ್ ನಡೆದ ಸ್ಥಳಗಳ ಮಾಹಿತಿ ಸಂಗ್ರಹ ಪರಿಶೀಲನೆ ಕಾರ್ಯದಲ್ಲಿ ತೊಡಗಿದೆ. ಆದರೆ, ಅಧಿಕೃತ ಆದೇಶ ಹೊರಬಿದ್ದ ಬಳಿಕವಷ್ಟೇ ನ್ಯಾಯಾಲಯದ ಮೂಲಕ ಪ್ರಕರಣದ ತನಿಖೆ ವಹಿಸಿಕೊಳ್ಳಲು ಈ ತಂಡ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ಮೂಲಗಳು ತಿಳಿಸಿವೆ.

ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಾಪುರ್‌ವಾಡ್ ನೇತೃತ್ವದ ತಂಡವು ಶುಕ್ರವಾರ ಸ್ಟೇಟ್‌ ಬ್ಯಾಂಕ್, ಬಂದರ್ ಸೇರಿದಂತೆ ನಗರದ ವಿವಿಧೆಡೆ ಭೇಟಿ ನೀಡಿ ಪ್ರಾಥಮಿಕ ಮಾಹಿತಿ ಕಲೆಹಾಕಿದೆ. ನಿಷೇಧಾಜ್ಞೆ ಉಲ್ಲಂಘನೆ, ಗಲಭೆ ಪ್ರಕರಣ, ಲಾಠಿಚಾರ್ಜ್, ಕಲ್ಲು ತೂರಾಟ ಸೇರಿದಂತೆ ಗೋಲಿಬಾರ್​ ಘಟನೆ ನಡೆದಿರುವ ಸ್ಥಳಗಳನ್ನು ಸಿಐಡಿ ತಂಡ ಪರಿಶೀಲನೆ ನಡೆಸಿದೆ ಎಂದು ತಿಳಿದು ಬಂದಿದೆ.

ಸಿಐಡಿ ಎಸ್ಪಿ ರಾಹುಲ್ ಕುಮಾರ್ ಶಹಾಪುರ್‌ವಾಡ್ ನೇತೃತ್ವದ ತಂಡದಲ್ಲಿ ಐದು ಮಂದಿ ಸಿಐಡಿ ಅಧಿಕಾರಿಗಳಿದ್ದಾರೆ.

Intro:ಮಂಗಳೂರು: ನಗರದಲ್ಲಿ ನಡೆದ ಗೋಲಿಬಾರ್ ಪ್ರಕರಣದ ಬಗ್ಗೆ ತನಿಖೆ ನಡೆಸಲು ಸಿಐಡಿ ಎಸ್‌ಪಿ ರಾಹುಲ್ ಕುಮಾರ್ ಶಹಾಪುರವಾಡ್ ನೇತೃತ್ವದ ಸಿಐಡಿ ಪೊಲೀಸರ ತಂಡವು ಮಾಹಿತಿ ಸಂಗ್ರಹಣ ಕಾರ್ಯದಲ್ಲಿ ತೊಡಗಿದೆ.

ಸಿಐಡಿ ಅಧಿಕಾರಿಗಳ ಒಂದು ತಂಡವು ನಿನ್ನೆ ಮಂಗಳೂರಿಗೆ ಬಂದಿದ್ದು, ಗಲಭೆ ಹಾಗೂ ಗೋಲಿಬಾರ್ ನಡೆದ ಸ್ಥಳಗಳಿಗೂ ಭೇಟಿ ನೀಡಿದೆ ಮಾಹಿತಿ ಸಂಗ್ರಹ ಕಾರ್ಯದಲ್ಲಿ ತೊಡಗಿದೆ. ಆದರೆ ಅಧಿಕೃತ ಆದೇಶ ಹೊರಬಿದ್ದ ಬಳಿಕವಷ್ಟೇ ನ್ಯಾಯಾಲಯದ ಮೂಲಕ ಪ್ರಕರಣದ ತನಿಖೆ ವಹಿಸಿಕೊಳ್ಳಲು ಈ ತಂಡ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ಮೂಲಗಳು ತಿಳಿಸಿವೆ.
Body:
ಸಿಐಡಿ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಷಹಾಪುರ್‌ವಾಡ್ ನೇತೃತ್ವದ ತಂಡವು ಶುಕ್ರವಾರ ಸ್ಟೇಟ್‌ಬ್ಯಾಂಕ್, ಬಂದರ್ ಸೇರಿದಂತೆ ನಗರದ ವಿವಿಧೆಡೆ ಸ್ಥಳಗಳಿಗೆ ಭೇಟಿ ನೀಡಿ ಪ್ರಾಥಮಿಕ ಮಾಹಿತಿ ಕಲೆಹಾಕಿದೆ. ನಿಷೇಧಾಜ್ಞೆಯಿಂದ ತೊಡಗಿ, ಗಲಭೆ, ಲಾಠಿಚಾರ್ಜ್, ಕಲ್ಲುತೂರಾಟ, ಗೋಲಿಬಾರ್ ನಿಂದ ಇಬ್ಬರ ಮರಣ ಈ ಎಲ್ಲಾ ಘಟನೆಗಳು ನಡೆದಿರುವ ಸ್ಥಳಗಳನ್ನು ಸಿಐಡಿ ತಂಡವು ಪರಿಶೀಲನೆ ನಡೆಸಿ ಪ್ರಾಥಮಿಕ ಮಾಹಿತಿ ಪಡೆದಿದೆ.

ಸಿಐಡಿ ಎಸ್ಪಿ ರಾಹುಲ್ ಕುಮಾರ್ ಷಹಾಪುರ್‌ವಾಡ್ ನೇತೃತ್ವದ ತಂಡದಲ್ಲಿ ಐದು ಮಂದಿ ಸಿಐಡಿ ಅಧಿಕಾರಿಗಳಿದ್ದಾರೆ.

Reporter_Vishwanath PanjimogaruConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.