ETV Bharat / state

ಸುಬ್ರಹ್ಮಣ್ಯದ ನೀರಿನ ಘಟಕದಲ್ಲಿ ಕ್ಲೋರಿನ್ ಸೋರಿಕೆ: ಅಧಿಕಾರಿಗಳಿಂದ ಆತಂಕ ನಿವಾರಣೆ - bad smell due to chlorine leakage

ಸುಬ್ರಹ್ಮಣ್ಯ ಕಲ್ಲಪಣೆಯಲ್ಲಿರುವ ಕುಡಿಯುವ ನೀರು ಶುದ್ಧೀಕರಣ ಘಟಕದಿಂದ ಕ್ಲೋರಿನ್ ಸೋರಿಕೆಯಾಗಿದ್ದು, ಸುತ್ತಮುತ್ತಲಿನ ಪರಿಸರದಲ್ಲಿ ದುರ್ವಾಸನೆ ಪಸರಿಸಿ ಸ್ಥಳೀಯ ಪ್ರದೇಶದಲ್ಲಿ ಸ್ವಲ್ಪ ಸಮಯ ಆತಂಕದ ವಾತಾವರಣ ಸೃಷ್ಟಿಯಾದ ಘಟನೆ ನಿನ್ನೆ ತಡರಾತ್ರಿ ಸುಬ್ರಹ್ಮಣ್ಯದಲ್ಲಿ ನಡೆದಿದೆ.

kukke
author img

By

Published : Oct 29, 2019, 7:14 PM IST

ಕುಕ್ಕೆ ಸುಬ್ರಹ್ಮಣ್ಯ: ಕಲ್ಲಪಣೆ ಎಂಬಲ್ಲಿನ ಕುಡಿಯುವ ನೀರಿನ ಶುದ್ಧೀಕರಣ ಘಟಕದಲ್ಲಿ ಸೋಮವಾರ ತಡರಾತ್ರಿ ಏಕಾಏಕಿ ದುರ್ವಾಸನೆ ಹೊರಬಂದಿತ್ತು. ಪರಿಣಾಮವಾಗಿ ಅನಿಲ ಸೋರಿಕೆಯಾಗಿರಬಹುದೆಂಬ ಸಂಶಯದಿಂದ ಸುತ್ತಮುತ್ತಲಿನ ಪರಿಸರದ ಮನೆಯವರು ತಡರಾತ್ರಿ ಮನೆಗಳಿಂದ ಹೊರ ಬಂದಿದ್ದಾರೆ. ರಾತ್ರಿ ಒಂದು ಗಂಟೆ ವೇಳೆಗೆ ಘಟಕದ ಸುತ್ತಲಿನ ವ್ಯಾಪ್ತಿಯಲ್ಲಿ ದುರ್ವಾಸನೆ ಬರಲಾರಂಭಿಸಿದೆ. ಇದರ ತೀವ್ರತೆಗೆ ಆಸುಪಾಸಿನಲ್ಲಿ ವಾಸಿಸುವ ಕುಟುಂಬಗಳ ಮನೆಯವರಿಗೆ ಉಸಿರಾಡಲು ಸಾಧ್ಯವಾಗುತ್ತಿರಲಿಲ್ಲ ಎನ್ನಲಾಗಿದೆ.

ನೀರು ಶುದ್ಧೀಕರಣ ಘಟಕದ ಹೊರಗಡೆ ಇದ್ದ ಗ್ಯಾಸ್ ಸಿಲಿಂಡರ್​ನಿಂದ ಸ್ವಲ್ಪ ಪ್ರಮಾಣದಲ್ಲಿ ಕ್ಲೋರಿನ್ ಗ್ಯಾಸ್ ಸೋರಿಕೆಯಾದದ್ದು ಈ ಅವಾಂತರಗಳಿಗೆ ಕಾರಣ. ಬಳಿಕ ದೇವಸ್ಥಾನ ಆಡಳಿತ ಮಂಡಳಿಗೆ ಹಾಗೂ ಪೋಲೀಸರಿಗೆ ವಿಷಯ ತಿಳಿಸಲಾಯಿತು. ಈ ಬಗ್ಗೆ ಭಯಭೀತರಾದ ನಿವಾಸಿಗಳನ್ನು ಬೇರೆಡೆಗೆ ತೆರಳಲು ಸೂಚಿಸಲಾಯಿತು. ಅನೇಕರು ಸ್ವಲ್ಪ ದೂರದಲ್ಲಿರುವ ತಮ್ಮ ಬಂಧುಗಳ ಹಾಗೂ ಪರಿಚಯಸ್ಥರ ಮನೆಗಳಲ್ಲಿ ಆಶ್ರಯ ಪಡೆದರು. ಬಳಿಕ ಸುಳ್ಯದಿಂದ ಅಗ್ನಿಶಾಮಕ ದಳದವರು ಬಂದು ಪರಿಶೀಲನೆ ನಡೆಸಿದ್ದಾರೆ.

ಸುಬ್ರಹ್ಮಣ್ಯದ ನೀರಿನ ಘಟಕದಲ್ಲಿ ಕ್ಲೋರಿನ್ ಸೋರಿಕೆ

ಈ ಸಮಯದಲ್ಲಿ ಶುದ್ಧೀಕರಣ ಘಟಕದಿಂದ ಕ್ಲೋರಿನ್ ಸೋರಿಕೆಯಾಗಿರುವುದು ಕಂಡುಬಂದಿದ್ದು, ಬಳಿಕ ದುರಸ್ತಿಗೊಳಿಸಲಾಯಿತು. ಮನೆ ಬಿಟ್ಟ ಕಲ್ಲಪಣೆ ಪರಿಸರ ವಾಸಿಗಳು ಮತ್ತೆ ತಮ್ಮ ಮನೆಗಳಿಗೆ ತೆರಳಿದರು.

ಈ ಬಗ್ಗೆ ಈಟಿವಿ ಜೊತೆಗೆ ಮಾತನಾಡಿದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಉಪ ಕಾರ್ಯನಿರ್ವಾಹಣಾಧಿಕಾರಿ ಚಂದ್ರಶೇಖರ್ ಪೆರಾಳ್, "ಶುದ್ದೀಕರಣ ಘಟಕದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಗ್ಯಾಸ್ ಸೋರಿಕೆಯಾದದ್ದು ನಿಜ. ಆದರೆ ಕೂಡಲೇ ಸುಳ್ಯದಿಂದ ಅಗ್ನಿಶಾಮಕ ದಳದವರನ್ನು ಕರೆಸಿ ಎಲ್ಲಾ ಸರಿಪಡಿಸಲಾಗಿದೆ. ಯಾವುದೇ ಕಾರಣಕ್ಕೂ ಆತಂಕ ಪಡುವ ಅಗತ್ಯವೇ ಇಲ್ಲ" ಎಂಬುದಾಗಿ ತಿಳಿಸಿ ಆತಂಕ ನಿವಾರಣೆ ಮಾಡಿದ್ದಾರೆ.

ಕುಕ್ಕೆ ಸುಬ್ರಹ್ಮಣ್ಯ: ಕಲ್ಲಪಣೆ ಎಂಬಲ್ಲಿನ ಕುಡಿಯುವ ನೀರಿನ ಶುದ್ಧೀಕರಣ ಘಟಕದಲ್ಲಿ ಸೋಮವಾರ ತಡರಾತ್ರಿ ಏಕಾಏಕಿ ದುರ್ವಾಸನೆ ಹೊರಬಂದಿತ್ತು. ಪರಿಣಾಮವಾಗಿ ಅನಿಲ ಸೋರಿಕೆಯಾಗಿರಬಹುದೆಂಬ ಸಂಶಯದಿಂದ ಸುತ್ತಮುತ್ತಲಿನ ಪರಿಸರದ ಮನೆಯವರು ತಡರಾತ್ರಿ ಮನೆಗಳಿಂದ ಹೊರ ಬಂದಿದ್ದಾರೆ. ರಾತ್ರಿ ಒಂದು ಗಂಟೆ ವೇಳೆಗೆ ಘಟಕದ ಸುತ್ತಲಿನ ವ್ಯಾಪ್ತಿಯಲ್ಲಿ ದುರ್ವಾಸನೆ ಬರಲಾರಂಭಿಸಿದೆ. ಇದರ ತೀವ್ರತೆಗೆ ಆಸುಪಾಸಿನಲ್ಲಿ ವಾಸಿಸುವ ಕುಟುಂಬಗಳ ಮನೆಯವರಿಗೆ ಉಸಿರಾಡಲು ಸಾಧ್ಯವಾಗುತ್ತಿರಲಿಲ್ಲ ಎನ್ನಲಾಗಿದೆ.

ನೀರು ಶುದ್ಧೀಕರಣ ಘಟಕದ ಹೊರಗಡೆ ಇದ್ದ ಗ್ಯಾಸ್ ಸಿಲಿಂಡರ್​ನಿಂದ ಸ್ವಲ್ಪ ಪ್ರಮಾಣದಲ್ಲಿ ಕ್ಲೋರಿನ್ ಗ್ಯಾಸ್ ಸೋರಿಕೆಯಾದದ್ದು ಈ ಅವಾಂತರಗಳಿಗೆ ಕಾರಣ. ಬಳಿಕ ದೇವಸ್ಥಾನ ಆಡಳಿತ ಮಂಡಳಿಗೆ ಹಾಗೂ ಪೋಲೀಸರಿಗೆ ವಿಷಯ ತಿಳಿಸಲಾಯಿತು. ಈ ಬಗ್ಗೆ ಭಯಭೀತರಾದ ನಿವಾಸಿಗಳನ್ನು ಬೇರೆಡೆಗೆ ತೆರಳಲು ಸೂಚಿಸಲಾಯಿತು. ಅನೇಕರು ಸ್ವಲ್ಪ ದೂರದಲ್ಲಿರುವ ತಮ್ಮ ಬಂಧುಗಳ ಹಾಗೂ ಪರಿಚಯಸ್ಥರ ಮನೆಗಳಲ್ಲಿ ಆಶ್ರಯ ಪಡೆದರು. ಬಳಿಕ ಸುಳ್ಯದಿಂದ ಅಗ್ನಿಶಾಮಕ ದಳದವರು ಬಂದು ಪರಿಶೀಲನೆ ನಡೆಸಿದ್ದಾರೆ.

ಸುಬ್ರಹ್ಮಣ್ಯದ ನೀರಿನ ಘಟಕದಲ್ಲಿ ಕ್ಲೋರಿನ್ ಸೋರಿಕೆ

ಈ ಸಮಯದಲ್ಲಿ ಶುದ್ಧೀಕರಣ ಘಟಕದಿಂದ ಕ್ಲೋರಿನ್ ಸೋರಿಕೆಯಾಗಿರುವುದು ಕಂಡುಬಂದಿದ್ದು, ಬಳಿಕ ದುರಸ್ತಿಗೊಳಿಸಲಾಯಿತು. ಮನೆ ಬಿಟ್ಟ ಕಲ್ಲಪಣೆ ಪರಿಸರ ವಾಸಿಗಳು ಮತ್ತೆ ತಮ್ಮ ಮನೆಗಳಿಗೆ ತೆರಳಿದರು.

ಈ ಬಗ್ಗೆ ಈಟಿವಿ ಜೊತೆಗೆ ಮಾತನಾಡಿದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಉಪ ಕಾರ್ಯನಿರ್ವಾಹಣಾಧಿಕಾರಿ ಚಂದ್ರಶೇಖರ್ ಪೆರಾಳ್, "ಶುದ್ದೀಕರಣ ಘಟಕದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಗ್ಯಾಸ್ ಸೋರಿಕೆಯಾದದ್ದು ನಿಜ. ಆದರೆ ಕೂಡಲೇ ಸುಳ್ಯದಿಂದ ಅಗ್ನಿಶಾಮಕ ದಳದವರನ್ನು ಕರೆಸಿ ಎಲ್ಲಾ ಸರಿಪಡಿಸಲಾಗಿದೆ. ಯಾವುದೇ ಕಾರಣಕ್ಕೂ ಆತಂಕ ಪಡುವ ಅಗತ್ಯವೇ ಇಲ್ಲ" ಎಂಬುದಾಗಿ ತಿಳಿಸಿ ಆತಂಕ ನಿವಾರಣೆ ಮಾಡಿದ್ದಾರೆ.

Intro:Location ಸುಬ್ರಹ್ಮಣ್ಯ

Slug: ಸುಬ್ರಹ್ಮಣ್ಯ ಕಲ್ಲಪಣೆಯಲ್ಲಿರುವ ಕುಡಿಯುವ ನೀರು ಶುದ್ಧೀಕರಣ ಘಟಕದಿಂದ ಕ್ಲೋರಿನ್ ಸೋರಿಕೆಯಾಗಿದ್ದು, ಪರಿಸರದಲ್ಲಿ ದುರ್ವಾಸನೆ ಪಸರಿಸಿ ಸ್ಥಳೀಯ ಪ್ರದೇಶದಲ್ಲಿ ಸ್ವಲ್ಪ ಸಮಯ ಆತಂಕದ ವಾತಾವರಣ ಸೃಷ್ಟಿಯಾದ ಘಟನೆ ಕುಕ್ಕೆ ನಿನ್ನೆ ತಡರಾತ್ರಿ ಸುಬ್ರಹ್ಮಣ್ಯದಲ್ಲಿ ನಡೆದಿದೆ.

ವಾ/ಓ:- ಕುಕ್ಕೆಸುಬ್ರಹ್ಮಣ್ಯ ಕಲ್ಲಪಣೆ ಎಂಬಲ್ಲಿನ ಕುಡಿಯುವ ನೀರಿನ ಶುದ್ಧೀಕರಣ ಘಟಕದಲ್ಲಿ ಸೋಮವಾರ ತಡರಾತ್ರಿ ಏಕಾಏಕಿ ದುರ್ವಾಸನೆ ಹೊರಬಂದಿತ್ತು.
ಪರಿಣಾಮ ಗ್ಯಾಸ್ ಸೋರಿಕೆಯಾಗಿರಬಹುದೆಂಬ ಸಂಶಯದಿಂದ ಪರಿಸರದ ಮನೆಯವರು ತಡರಾತ್ರಿ ಮನೆಗಳಿಂದ ಹೊರ ಬಂದಿದ್ದಾರೆ. ರಾತ್ರಿ ಒಂದು ಗಂಟೆ ವೇಳೆಗೆ ಘಟಕದ ಸುತ್ತಲಿನ ವ್ಯಾಪ್ತಿಯಲ್ಲಿ ದುರ್ವಾಸನೆ ಆರಂಭಗೊಂಡಿತು. ತೀವ್ರತೆಗೆ ಆಸುಪಾಸಿನಲ್ಲಿ ವಾಸಿಸುವ ಕುಟುಂಬಗಳ ಮನೆಯವರಿಗೆ ಉಸಿರಾಡಲು ಸಾಧ್ಯವಾಗುತ್ತಿರಲಿಲ್ಲ ಎನ್ನಲಾಗಿದೆ.

ನೀರು ಶುದ್ಧೀಕರಣ ಘಟಕದ ಹೊರಗಡೆ ಇದ್ದ ಗ್ಯಾಸ್ ಸಿಲಿಂಡರ್ ನಿಂದ ಸ್ವಲ್ಪ ಪ್ರಮಾಣದಲ್ಲಿ ಕ್ಲೋರಿನ್ ಗ್ಯಾಸ್ ಸೋರಿಕೆಯಾದದ್ದು ಈ ಅವಾಂತರಗಳಿಗೆ ಕಾರಣ.ಬಳಿಕ ದೇವಸ್ಥಾನ ಆಡಳಿತ ಮಂಡಳಿಗೆ, ಪೋಲೀಸರಿಗೆ ವಿಷಯ ತಿಳಿಸಲಾಯಿತು. ಭಯಭೀತ ನಿವಾಸಿಗಳನ್ನು ಬೇರೆಡೆಗೆ ಕಡೆ ತೆರಳಲು ಸೂಚಿಸಲಾಯಿತು. ಅನೇಕರು ಸ್ವಲ್ಪ ದೂರದಲ್ಲಿರುವ ತಮ್ಮ ಬಂಧುಗಳ ಹಾಗೂ ಪರಿಚಯಸ್ಥರ ಮನೆಗಳಲ್ಲಿ ಆಶ್ರಯ ಪಡೆದರು. ಬಳಿಕ ಸುಳ್ಯದಿಂದ ಅಗ್ನಿಶಾಮಕದವರು ಬಂದು ಪರಿಶೀಲನೆ ನಡೆಸಿದ್ದಾರೆ.

ಈ ಸಮಯದಲ್ಲಿ ಶುದ್ಧೀಕರಣ ಘಟಕದಿಂದ ಕ್ಲೋರಿನ್ ಸೋರಿಕೆಯಾಗಿರುವುದು ಕಂಡುಬಂತು. ಬಳಿಕ ದುರಸ್ತಿಗೊಳಿಸಲಾಯಿತು. ಬಳಿಕ ಮನೆ ಬಿಟ್ಟ ಕಲ್ಲಪಣೆ ಪರಿಸರ ವಾಸಿಗಳು ಮತ್ತೆ ತಮ್ಮ ಮನೆಗಳಿಗೆ ತೆರಳಿದರು.

ಈ ಬಗ್ಗೆ ಈಟಿವಿ ಜೊತೆಗೆ ಮಾತನಾಡಿದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಉಪ ಕಾರ್ಯನಿರ್ವಾಹಣಾಧಿಕಾರಿ ಚಂದ್ರಶೇಖರ್ ಪೆರಾಳ್ ರವರು ಶುದ್ದೀಕರಣ ಘಟಕದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಗ್ಯಾಸ್ ಸೋರಿಕೆಯಾದದ್ದು ನಿಜ. ಆದರೆ ಕೂಡಲೇ ಸುಳ್ಯದಿಂದ ಅಗ್ನಿಶಾಮಕ ದಳದವರನ್ನು ಕರೆಸಿ ಎಲ್ಲಾ ಸರಿಪಡಿಸಲಾಗಿದೆ. ಯಾವುದೇ ಕಾರಣಕ್ಕೂ ಆತಂಕ ಪಡುವ ಅಗತ್ಯವೇ ಇಲ್ಲ ಎಂಬುದಾಗಿ ತಿಳಿಸಿದ್ದಾರೆ.

ಬೈಟ್:- ಚಂದ್ರಶೇಖ್ ಪೆರಾಳ್, ಉಪ ಕಾರ್ಯನಿರ್ವಾಹಣಾಧಿಕಾರಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ
Flow:-Body:ವೀಡಿಯೊ:- ಹಾಕಲಾಗಿದೆ.Conclusion:ಪ್ರಕಾಶ್ ಕಡಬ, ಸುಳ್ಯ/ಮಂಗಳೂರು
ETV Bharat Logo

Copyright © 2025 Ushodaya Enterprises Pvt. Ltd., All Rights Reserved.