ETV Bharat / state

ಕೊಲೆ ಯತ್ನ ಪ್ರಕರಣ: ಬಂಟ್ವಾಳದಲ್ಲಿ ಇಬ್ಬರು ಆರೋಪಿಗಳ ಬಂಧನ

author img

By

Published : Sep 16, 2020, 8:52 PM IST

ಬಂಟ್ವಾಳದ ಪುದು ಗ್ರಾಮದ ಕಲ್ಲತಡಮೆ ಎಂಬಲ್ಲಿ ಕಾರೊಂದನ್ನು ಜಖಂಗೊಳಿಸಿ ವ್ಯಕ್ತಿಯೊಬ್ಬರ ಕೊಲೆಗೆ ಯತ್ನಿಸಿದ ಆರೋಪದಲ್ಲಿ ಇಬ್ಬರನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. 

Bantvala
Bantvala

ಬಂಟ್ವಾಳ: ಪುದು ಗ್ರಾಮದ ಕಲ್ಲತಡಮೆ ಎಂಬಲ್ಲಿ ಕಾರೊಂದನ್ನು ಜಖಂಗೊಳಿಸಿ ವ್ಯಕ್ತಿಯೊಬ್ಬರ ಕೊಲೆಗೆ ಯತ್ನಿಸಿದ ಆರೋಪದಲ್ಲಿ ಇಬ್ಬರನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಕುಂಪನಮಜಲು ನಿವಾಸಿ ಮೊಹಮ್ಮದ್ ಹಿದಾಯತ್ (25) ಮತ್ತು ಮೊಹಮ್ಮದ್ ಅಶ್ರಫ್ (27) ಬಂಧಿತ ಆರೋಪಿಗಳು. ಇನ್ನುಳಿದ ಆರೋಪಿಗಳ ಪತ್ತೆಯ ಬಗ್ಗೆ ವಿಶೇಷ ತಂಡವನ್ನು ರಚಿಸಲಾಗಿದ್ದು, ತನಿಖೆ ಮುಂದುವರಿದಿದೆ.

ಕಲ್ಲತಡಮೆ ನಿವಾಸಿ ಧನ್ ರಾಜ್ ಶೆಟ್ಟಿ ನೀಡಿರುವ ದೂರಿನ ಮೇಲೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

ಆರೋಪಿಗಳ ಪತ್ತೆಯ ಬಗ್ಗೆ ಬಂಟ್ವಾಳ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ವೇಲೆಂಟೈನ್ ಡಿಸೋಜಾ ನಿರ್ದೇಶನದಲ್ಲಿ ಬಂಟ್ವಾಳ ವೃತ್ತದ ಪೊಲೀಸ್ ವೃತ್ತ ನಿರೀಕ್ಷಕರಾದ ಟಿ.ಡಿ ನಾಗರಾಜ್ ಮಾರ್ಗದರ್ಶನದಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಅಫರಾದ ವಿಭಾಗದ ಪಿ.ಎಸ್.ಐ. ಸಂಜೀವ ಹಾಗೂ ಸಿಬ್ಬಂದಿಯ ವಿಶೇಷ ತಂಡವನ್ನು ರಚಿಸಲಾಗಿತ್ತು.

ಬಂಟ್ವಾಳ: ಪುದು ಗ್ರಾಮದ ಕಲ್ಲತಡಮೆ ಎಂಬಲ್ಲಿ ಕಾರೊಂದನ್ನು ಜಖಂಗೊಳಿಸಿ ವ್ಯಕ್ತಿಯೊಬ್ಬರ ಕೊಲೆಗೆ ಯತ್ನಿಸಿದ ಆರೋಪದಲ್ಲಿ ಇಬ್ಬರನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಕುಂಪನಮಜಲು ನಿವಾಸಿ ಮೊಹಮ್ಮದ್ ಹಿದಾಯತ್ (25) ಮತ್ತು ಮೊಹಮ್ಮದ್ ಅಶ್ರಫ್ (27) ಬಂಧಿತ ಆರೋಪಿಗಳು. ಇನ್ನುಳಿದ ಆರೋಪಿಗಳ ಪತ್ತೆಯ ಬಗ್ಗೆ ವಿಶೇಷ ತಂಡವನ್ನು ರಚಿಸಲಾಗಿದ್ದು, ತನಿಖೆ ಮುಂದುವರಿದಿದೆ.

ಕಲ್ಲತಡಮೆ ನಿವಾಸಿ ಧನ್ ರಾಜ್ ಶೆಟ್ಟಿ ನೀಡಿರುವ ದೂರಿನ ಮೇಲೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

ಆರೋಪಿಗಳ ಪತ್ತೆಯ ಬಗ್ಗೆ ಬಂಟ್ವಾಳ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ವೇಲೆಂಟೈನ್ ಡಿಸೋಜಾ ನಿರ್ದೇಶನದಲ್ಲಿ ಬಂಟ್ವಾಳ ವೃತ್ತದ ಪೊಲೀಸ್ ವೃತ್ತ ನಿರೀಕ್ಷಕರಾದ ಟಿ.ಡಿ ನಾಗರಾಜ್ ಮಾರ್ಗದರ್ಶನದಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಅಫರಾದ ವಿಭಾಗದ ಪಿ.ಎಸ್.ಐ. ಸಂಜೀವ ಹಾಗೂ ಸಿಬ್ಬಂದಿಯ ವಿಶೇಷ ತಂಡವನ್ನು ರಚಿಸಲಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.