ETV Bharat / state

ದಕ್ಷಿಣ ಕನ್ನಡದಲ್ಲಿ ಕರ್ತವ್ಯ ನಿರತ ಪವರ್ ಮ್ಯಾನ್​ಗಳ ಮೇಲೆ ಹಲ್ಲೆ

author img

By

Published : May 15, 2020, 12:03 PM IST

ಕರ್ತವ್ಯ ನಿರತ ಪವರ್ ಮ್ಯಾನ್​​ಗಳ ಮೇಲೆ ಸ್ಥಳೀಯ ವ್ಯಕ್ತಿಯೊಬ್ಬ ಹಲ್ಲೆ ಮಾಡಿರುವ ಘಟನೆ, ಇಚ್ಲಂಪ್ಪಾಡಿಯ ಸುಳ್ಯಮಜಲು ಎಂಬಲ್ಲಿ ನಡೆದಿದೆ.

Attack on powermen in Dakshina Kannada
ದಕ್ಷಿಣ ಕನ್ನಡದಲ್ಲಿ ಕರ್ತವ್ಯ ನಿರತ ಪವರ್ ಮ್ಯಾನ್​ಗಳ ಮೇಲೆ ಹಲ್ಲೆ

ದಕ್ಷಿಣ ಕನ್ನಡ: ನೆಲ್ಯಾಡಿ ಮೆಸ್ಕಾಂ ವ್ಯಾಪ್ತಿಯಲ್ಲಿ ಬರುವ ಇಚ್ಲಂಪ್ಪಾಡಿಯಲ್ಲಿ ಕರ್ತವ್ಯ ನಿರತ ಪವರ್ ಮ್ಯಾನ್​​ಗಳ ಮೇಲೆ ಸ್ಥಳೀಯ ವ್ಯಕ್ತಿಯೊಬ್ಬ ಹಲ್ಲೆ ಮಾಡಿರುವ ಘಟನೆ ನಡೆದಿದೆ. ನಿನ್ನೆ ಇಚ್ಲಂಪ್ಪಾಡಿಯ ಸುಳ್ಯಮಜಲು ಎಂಬಲ್ಲಿ ಪವರ್ ಮ್ಯಾನ್​​​​​ಗಳಾದ ಶರಣಪ್ಪ ಚಲವಾದಿ ಮತ್ತು ಆನಂದ್ ಲಮಾಣಿ ಎಂಬವರು ಕರ್ತವ್ಯ ನಿರ್ವಹಿಸುತ್ತಿದ್ದಾಗ, ಸ್ಥಳೀಯ ಶಿಬು ವರ್ಗೀಸ್ ಎಂಬ ವ್ಯಕ್ತಿ ಪವರ್ ಮ್ಯಾನ್ ಗಳ ಮೇಲೆ ಹಲ್ಲೆ ನಡೆಸಿದ್ದಾರೆ.

ದಕ್ಷಿಣ ಕನ್ನಡದಲ್ಲಿ ಕರ್ತವ್ಯ ನಿರತ ಪವರ್ ಮ್ಯಾನ್​ಗಳ ಮೇಲೆ ಹಲ್ಲೆ

ಗಾಯಾಳು ಪವರ್ ಮ್ಯಾನ್ ಶರಣಪ್ಪ ಚಲವಾದಿಯವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ರಾತ್ರಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು‌.ಇದೀಗ ಮತ್ತೆ ನೋವು ಕಾಣಿಸಿಕೊಂಡ ಹಿನ್ನಲೆ ನೆಲ್ಯಾಡಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಕ್ಷಿಣ ಕನ್ನಡ: ನೆಲ್ಯಾಡಿ ಮೆಸ್ಕಾಂ ವ್ಯಾಪ್ತಿಯಲ್ಲಿ ಬರುವ ಇಚ್ಲಂಪ್ಪಾಡಿಯಲ್ಲಿ ಕರ್ತವ್ಯ ನಿರತ ಪವರ್ ಮ್ಯಾನ್​​ಗಳ ಮೇಲೆ ಸ್ಥಳೀಯ ವ್ಯಕ್ತಿಯೊಬ್ಬ ಹಲ್ಲೆ ಮಾಡಿರುವ ಘಟನೆ ನಡೆದಿದೆ. ನಿನ್ನೆ ಇಚ್ಲಂಪ್ಪಾಡಿಯ ಸುಳ್ಯಮಜಲು ಎಂಬಲ್ಲಿ ಪವರ್ ಮ್ಯಾನ್​​​​​ಗಳಾದ ಶರಣಪ್ಪ ಚಲವಾದಿ ಮತ್ತು ಆನಂದ್ ಲಮಾಣಿ ಎಂಬವರು ಕರ್ತವ್ಯ ನಿರ್ವಹಿಸುತ್ತಿದ್ದಾಗ, ಸ್ಥಳೀಯ ಶಿಬು ವರ್ಗೀಸ್ ಎಂಬ ವ್ಯಕ್ತಿ ಪವರ್ ಮ್ಯಾನ್ ಗಳ ಮೇಲೆ ಹಲ್ಲೆ ನಡೆಸಿದ್ದಾರೆ.

ದಕ್ಷಿಣ ಕನ್ನಡದಲ್ಲಿ ಕರ್ತವ್ಯ ನಿರತ ಪವರ್ ಮ್ಯಾನ್​ಗಳ ಮೇಲೆ ಹಲ್ಲೆ

ಗಾಯಾಳು ಪವರ್ ಮ್ಯಾನ್ ಶರಣಪ್ಪ ಚಲವಾದಿಯವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ರಾತ್ರಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು‌.ಇದೀಗ ಮತ್ತೆ ನೋವು ಕಾಣಿಸಿಕೊಂಡ ಹಿನ್ನಲೆ ನೆಲ್ಯಾಡಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.