ETV Bharat / state

ಲಂಚ ಪಡೆಯುತ್ತಿದ್ದಾಗ ರೆಡ್​ ಹ್ಯಾಂಡಾಗಿ ಎಸಿಬಿ ಬಲೆಗೆ ಬಿದ್ದ ಕಂದಾಯ ನಿರೀಕ್ಷಕ

ಚಿತ್ರದುರ್ಗ ತಾಲೂಕು ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಈ ವೇಳೆ ಲಂಚ ಪಡೆಯುತ್ತಿದ್ದ ಕಂದಾಯ ನಿರೀಕ್ಷಕ ರೆಡ್​​ ಹ್ಯಾಂಡ್​ ಆಗಿ ಎಸಿಬಿಗೆ ಸಿಲುಕಿ ಬಿದ್ದಿದ್ದಾರೆ.

ಲಂಚ ಪಡೆಯುವ ವೇಳೆ ಕಂದಾಯ ನಿರೀಕ್ಷಕ ಎಸಿಬಿ ಬಲೆಗೆ
author img

By

Published : Jun 12, 2019, 7:31 PM IST

ಚಿತ್ರದುರ್ಗ: ಇಲ್ಲಿನ ತಾಲೂಕು ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಚಿತ್ರದುರ್ಗ ಕಸಬ ಹೋಬಳಿ ಕಂದಾಯ ನಿರೀಕ್ಷಕ ಪ್ರಾಣೇಶ್ ಲಂಚ ಪಡೆಯುವ ವೇಳೆ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಲಂಚ ಪಡೆಯುವ ವೇಳೆ ಕಂದಾಯ ನಿರೀಕ್ಷಕ ಎಸಿಬಿ ಬಲೆಗೆ

ಈ ಕುರಿತು ಪರಿಶೀಲನೆ ನಡೆದಿದ್ದು, ಕಂದಾಯ ನಿರೀಕ್ಷನ ವಿಚಾರಣೆ ಮುಂದುವರಿದಿದೆ. ರೈತ ಲೋಕೇಶ್ ಎಂಬುವರಿಂದ ಜಮೀನು ಖಾತೆ ಬದಲಾವಣೆಗೆ ಲಂಚ ಪಡೆಯುವ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ರೆಡ್ ಹ್ಯಾಂಡ್ ಆಗಿ ಅಧಿಕಾರಿಯನ್ನು ಹಿಡಿಯುವಲ್ಲಿ ಎಸಿಬಿ ಯಶಸ್ವಿಯಾಗಿದೆ. ರೈತ ಲೋಕೇಶ್ ಅವರಿಂದ ಖಾತೆ ಬದಲಾವಣೆಗೆ 10 ಸಾವಿರ ರೂಪಾಯಿಗೆ ಲಂಚಕ್ಕೆ ಬೇಡಿಕೆ ಇಟ್ಟು, 5 ಸಾವಿರ ರೂಪಾಯಿ ಮುಂಗಡವಾಗಿ ಸ್ವೀಕರಿಸುವ ವೇಳೆ ಸಿಕ್ಕಿಬಿದ್ದಿರುವುದಾಗಿ ಎಸಿಬಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಎಸಿಬಿ ಡಿಎಸ್ಪಿ ಹೆಚ್.ಎಸ್ ಪರಮೇಶ್ವರಪ್ಪ, ಪಿಐ ಶ್ರೀಪಾದ್ ಡಿ ಜಲ್ದೆ ಹಾಗೂ ಪಿಐ ಬಿಬಿ ಪ್ರಕಾಶ್ ನೇತೃತ್ವದಲ್ಲಿ ದಾಳಿ ನಡೆದಿದೆ. ದಾಳಿ ನಡೆಸಿದ ಅಧಿಕಾರಿಗಳು ಪರಿಶೀಲನೆ ಮುಂದುವರಿಸಿದ್ದು, ಅಗತ್ಯ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಚಿತ್ರದುರ್ಗ: ಇಲ್ಲಿನ ತಾಲೂಕು ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಚಿತ್ರದುರ್ಗ ಕಸಬ ಹೋಬಳಿ ಕಂದಾಯ ನಿರೀಕ್ಷಕ ಪ್ರಾಣೇಶ್ ಲಂಚ ಪಡೆಯುವ ವೇಳೆ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಲಂಚ ಪಡೆಯುವ ವೇಳೆ ಕಂದಾಯ ನಿರೀಕ್ಷಕ ಎಸಿಬಿ ಬಲೆಗೆ

ಈ ಕುರಿತು ಪರಿಶೀಲನೆ ನಡೆದಿದ್ದು, ಕಂದಾಯ ನಿರೀಕ್ಷನ ವಿಚಾರಣೆ ಮುಂದುವರಿದಿದೆ. ರೈತ ಲೋಕೇಶ್ ಎಂಬುವರಿಂದ ಜಮೀನು ಖಾತೆ ಬದಲಾವಣೆಗೆ ಲಂಚ ಪಡೆಯುವ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ರೆಡ್ ಹ್ಯಾಂಡ್ ಆಗಿ ಅಧಿಕಾರಿಯನ್ನು ಹಿಡಿಯುವಲ್ಲಿ ಎಸಿಬಿ ಯಶಸ್ವಿಯಾಗಿದೆ. ರೈತ ಲೋಕೇಶ್ ಅವರಿಂದ ಖಾತೆ ಬದಲಾವಣೆಗೆ 10 ಸಾವಿರ ರೂಪಾಯಿಗೆ ಲಂಚಕ್ಕೆ ಬೇಡಿಕೆ ಇಟ್ಟು, 5 ಸಾವಿರ ರೂಪಾಯಿ ಮುಂಗಡವಾಗಿ ಸ್ವೀಕರಿಸುವ ವೇಳೆ ಸಿಕ್ಕಿಬಿದ್ದಿರುವುದಾಗಿ ಎಸಿಬಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಎಸಿಬಿ ಡಿಎಸ್ಪಿ ಹೆಚ್.ಎಸ್ ಪರಮೇಶ್ವರಪ್ಪ, ಪಿಐ ಶ್ರೀಪಾದ್ ಡಿ ಜಲ್ದೆ ಹಾಗೂ ಪಿಐ ಬಿಬಿ ಪ್ರಕಾಶ್ ನೇತೃತ್ವದಲ್ಲಿ ದಾಳಿ ನಡೆದಿದೆ. ದಾಳಿ ನಡೆಸಿದ ಅಧಿಕಾರಿಗಳು ಪರಿಶೀಲನೆ ಮುಂದುವರಿಸಿದ್ದು, ಅಗತ್ಯ ಮಾಹಿತಿ ಕಲೆ ಹಾಕುತ್ತಿದ್ದಾರೆ.

Intro:ಚಿತ್ರದುರ್ಗದಲ್ಲಿ ಮತ್ತೇ ಎಸಿಬಿ ದಾಳಿ : ಲಂಚಾ ಪಡೆಯುತ್ತಿದ್ದ ಕಂದಾಯ ನಿರೀಕ್ಷಕ ಎಸಿಬಿ ಬಲೆಗೆ

ಆ್ಯಂಕರ್:- ಚಿತ್ರದುರ್ಗ ತಾಲೂಕು ಕಛೇರಿ ಮೇಲೆ ಎಸಿಬಿ ಅಧಿಕಾರಿಗಳು ಧಾಳಿ ನಡೆಸಿದ್ದಾರೆ. ಚಿತ್ರದುರ್ಗ ಕಸಬ ಹೋಬಳಿ ಕಂದಾಯ ನಿರೀಕ್ಷಕ ಪ್ರಾಣೇಶ್ ಲಂಚಾ ಪಡೆಯುವ ವೇಳೆ ಎಸಿಬಿ ಬಲೆಗೆ ಬಿದ್ದಿದ್ದು, ಪರಿಶೀಲನೆ ನಡೆಸುವ ಮೂಲಕ ವಿಚಾರಣೆ ನಡೆಸಲಾಗುತ್ತಿದೆ. ರೈತ ಲೋಕೆಶ್ ಎಂಬುವರಿಂದ
ಜಮೀನು ಖಾತೆ ಬದಲಾವಣೆಗೆ ಲಂಚಾ ಪಡೆಯುವ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ರೆಡ್ ಹ್ಯಾಡ್ ಆಗಿ ಅಧಿಕಾರಿಯನ್ನು ಕೆಡವಿದ್ದಾರೆ. ರೈತ ಲೋಕೆಶ್ ರವರಿಂದ ಖಾತೆ ಬದಲಾವಣೆಗೆ ೧೦ ಸಾವಿರ ಲಂಚಾಕ್ಕೆ ಬೇಡಿಕೆ ಇಟ್ಟು, ೫ ಸಾವಿರ ಲಂಚಾ ಸ್ವೀಕರಿಸುವ ವೇಳೆ ಸಿಕ್ಕಿಹಾಕಿಕೊಂಡಿರುವುದಾಗಿ ಎಸಿಬಿ ಅಧಿಕಾರಿಗಳು ಮಾಹಿತಿ ನೀಡಿದರು. ಡಿಎಸ್ಪಿ ಹೆಚ್ ಎಸ್ ಪರಮೇಶ್ವರಪ್ಪ, ಪಿಐ ಶ್ರೀ ಪಾದ್ ಡಿ ಜಲ್ದೆ ಹಾಗೂ ಪಿಐ ಬಿಬಿ ಪ್ರಕಾಶ್ ನೇತೃತ್ವದಲ್ಲಿ ದಾಳಿ ನಡೆದಿದ್ದು, ದಾಳಿ ನಡೆಸಿ ಅಧಿಕಾರಿಗಳು ಪರಿಶೀಲನೆ ನಡೆಸುವ ಮೂಲಕ ಮಾಹಿತಿ ಕಲೆಹಾಕುತ್ತಿದ್ದಾರೆ.

ಫ್ಲೋ....Body:AcbConclusion:Dhali

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.