ETV Bharat / state

ಚಿತ್ರದುರ್ಗದಲ್ಲಿ ಮುಂದುವರೆದ ಸಿಎಎ ವಿರುದ್ಧದ ಪ್ರತಿಭಟನೆ - ಚಿತ್ರದುರ್ಗ ಪೌರತ್ವ ಪ್ರತಿಭಟನೆ

ಚಿತ್ರದುರ್ಗದ ವಿವಿಧ ಮಸೀದಿಗಳ ಬಳಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸಿಎಎ, ಎನ್ಆರ್​ಸಿ ವಿರುದ್ಧ ಮುಸ್ಲಿಂರು ಮೌನ ಪ್ರತಿಭಟನೆ ನಡೆಸಿದರು.

muslim-minorities-protest-against-citizenship-amendment-bill
ಚಿತ್ರದುರ್ಗದಲ್ಲಿ ಮುಂದುವರೆದ ಪೌರತ್ವ ಪ್ರತಿಭಟನೆ
author img

By

Published : Feb 7, 2020, 8:34 PM IST

ಚಿತ್ರದುರ್ಗ : ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ನಗರದಲ್ಲಿ ಪ್ರತಿಭಟನೆ ಮುಂದುವರೆದಿದೆ.

ನಗರದ ಹೊರಪೇಟೆಯ ವಿವಿಧ ಮಸೀದಿಗಳ ಬಳಿ ಸಿಎಎ, ಎನ್ಆರ್​ಸಿ, ಎನ್ ಪಿ ಆರ್, ಕಾಯ್ದೆಗಳ ವಿರುದ್ಧ ಅಲ್ಪಸಂಖ್ಯಾತರು ಮೌನ ಧರಣಿ ನಡೆಸಿದರು. ಮಧ್ಯಾಹ್ನದ ನಮಾಜು (ಪ್ರಾರ್ಥನೆ) ಸಲ್ಲಿಸಿದ ಬಳಿಕ ಮಸೀದಿ ಬಳಿ ಮೌನ ಪ್ರತಿಭಟನೆ ನಡೆಸಿ ಕಾಯ್ದೆಯನ್ನು ರದ್ದುಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಲಾಯಿತು.

ಚಿತ್ರದುರ್ಗದಲ್ಲಿ ಮುಂದುವರೆದ ಪೌರತ್ವ ಪ್ರತಿಭಟನೆ

ಚಿತ್ರದುರ್ಗದ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಆರ್. ಕೆ. ಸರ್ದಾರ್ ನೇತೃತ್ವದಲ್ಲಿ ತ್ರಿವರ್ಣ ಧ್ವಜ ಹಿಡಿದು ಘೋಷಣೆಗಳ ಹಾಕುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಚಿತ್ರದುರ್ಗ : ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ನಗರದಲ್ಲಿ ಪ್ರತಿಭಟನೆ ಮುಂದುವರೆದಿದೆ.

ನಗರದ ಹೊರಪೇಟೆಯ ವಿವಿಧ ಮಸೀದಿಗಳ ಬಳಿ ಸಿಎಎ, ಎನ್ಆರ್​ಸಿ, ಎನ್ ಪಿ ಆರ್, ಕಾಯ್ದೆಗಳ ವಿರುದ್ಧ ಅಲ್ಪಸಂಖ್ಯಾತರು ಮೌನ ಧರಣಿ ನಡೆಸಿದರು. ಮಧ್ಯಾಹ್ನದ ನಮಾಜು (ಪ್ರಾರ್ಥನೆ) ಸಲ್ಲಿಸಿದ ಬಳಿಕ ಮಸೀದಿ ಬಳಿ ಮೌನ ಪ್ರತಿಭಟನೆ ನಡೆಸಿ ಕಾಯ್ದೆಯನ್ನು ರದ್ದುಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಲಾಯಿತು.

ಚಿತ್ರದುರ್ಗದಲ್ಲಿ ಮುಂದುವರೆದ ಪೌರತ್ವ ಪ್ರತಿಭಟನೆ

ಚಿತ್ರದುರ್ಗದ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಆರ್. ಕೆ. ಸರ್ದಾರ್ ನೇತೃತ್ವದಲ್ಲಿ ತ್ರಿವರ್ಣ ಧ್ವಜ ಹಿಡಿದು ಘೋಷಣೆಗಳ ಹಾಕುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.